ಬೆಂಗಳೂರಿನ 40 ಖಾಸಗಿ ಶಾಲೆಗಳಿಗೆ ಬಾಂಬ್ ಬೆದರಿಗೆ ಬಂದಿದ್ದು, ಸ್ಥಳಕ್ಕೆ ಪೊಲೀಸರು ದೌಡಾಯಿಸಿದ್ದಾರೆ. ಇಂದು ಬೆಳಿಗ್ಗೆ ಇಮೇಲ್ ಮೂಲಕ ಬಾಂಬ್ ಬೆದರಿಕೆ ಬಂದಿದೆ ಎನ್ನಲಾಗಿದೆ.
ರಾಜರಾಜೇಶ್ವರಿ ನಗರ, ಕೆಂಗೇರಿ ಒಳಗೊಂಡು ಹಲವಾರು ಪ್ರದೇಶಗಳ ಶಾಲೆಗಳಿಗೆ ಅಪರಿಚಿತ ಸಂದೇಶದ ಮೂಲಕ ಬಾಂಬ್ ಬೆದರಿಕೆ ಬಂದಿದೆ. ಬಾಂಬ್ ಬೆದರಿಕೆ ಬಂದಿರುವ ಹಿನ್ನೆಲೆಯಲ್ಲಿ ಬೆಂಗಳೂರು ನಗರ ಪೊಲೀಸರ ಹಲವು ತಂಡಗಳನ್ನು ಶಾಲೆಗಳ ಬಳಿ ನಿಯೋಜಿಸಲಾಗಿದೆ. ಬಾಂಬ್ ನಿಸ್ಕ್ರಿಯ ದಳ ಕೂಡ ಸ್ಥಳಕ್ಕೆ ತೆರಳಿ ಶಾಲಾ ಆವರಣಗಳಲ್ಲಿ ಸಮಗ್ರವಾಗಿ ಪತ್ತೆ ಕಾರ್ಯದಲ್ಲಿ ತೊಡಗಿದೆ. ಸುರಕ್ಷತಾ ದೃಷ್ಟಿಯಿಂದ ಮಕ್ಕಳು ಹಾಗೂ ಸಿಬ್ಬಂದಿಯನ್ನು ಶಾಲಾ ಆವರಣದಿಂದ ಹೊರಗೆ ಕಳುಹಿಸಲಾಗಿದೆ.
roadkill 333@atomicmail.io. ಎಂಬ ಮೇಲ್ನಿಂದ “BOMBS INSIDE THE SCHOOL” ಎಂಬ ಶೀರ್ಷಿಕೆಯೊಂದಿಗೆ ಆಂಗ್ಲ ಸಂದೇಶದಲ್ಲಿ ಬೆದರಿಕೆ ಕಳುಹಿಸಲಾಗಿದೆ.
ಸ್ಫೋಟಕಗಳನ್ನು ಕಪ್ಪು ಪ್ಲಾಸ್ಟಿಕ್ ಚೀಲಗಳಲ್ಲಿ ಗೊತ್ತಾಗದಂತೆ ಮರೆಮಾಡಲಾಗಿದೆ. ನಿಮ್ಮಲ್ಲಿ ಪ್ರತಿಯೊಬ್ಬರನ್ನೂ ನಾನು ಈ ಪ್ರಪಂಚದಿಂದ ಅಳಿಸಿಹಾಕುತ್ತೇನೆ. ಒಂದೇ ಒಂದು ಆತ್ಮವೂ ಬದುಕುಳಿಯುವುದಿಲ್ಲ. ನಾನು ಸುದ್ದಿ ನೋಡಿದಾಗ ಸಂತೋಷದಿಂದ ನಗುತ್ತೇನೆ, ಆದರೆ ಪೋಷಕರು ಶಾಲೆಯಲ್ಲಿ ಕಾಣಿಸಿಕೊಳ್ಳುವುದನ್ನು ಮತ್ತು ಅವರ ಮಕ್ಕಳ ಛಿದ್ರಗೊಂಡ ದೇಹಗಳಿಂದ ಸ್ವಾಗತಿಸಲ್ಪಡುವುದನ್ನು ಮಾತ್ರ ನೋಡುತ್ತೇನೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ತುಳಿದಷ್ಟು ಪುಟಿದೇಳುವ ರಾಹುಲ್ ಎಂಬ ಜನನಾಯಕ
“ನೀವೆಲ್ಲರೂ ತೊಂದರೆಪಡಲು ಅರ್ಹರು. ನನಗೆ ನನ್ನ ಜೀವನ ನಿಜಕ್ಕೂ ಇಷ್ಟವಿಲ್ಲ, ಸುದ್ದಿ ಬಂದ ನಂತರ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ. ನಾನು ನನ್ನ ಗಂಟಲು ಕತ್ತರಿಸಿಕೊಂಡು ಮಣಿಕಟ್ಟುಗಳನ್ನು ಕತ್ತರಿಸುತ್ತೇನೆ. ಮನೋವೈದ್ಯರು, ಮನಶ್ಶಾಸ್ತ್ರಜ್ಞರಿಂದ ನನಗೆ ನಿಜವಾಗಿಯೂ ಸಹಾಯವಾಗಲಿಲ್ಲ, ಯಾರೂ ಕಾಳಜಿ ವಹಿಸಿಲ್ಲ. ನೀವು ಅಸಹಾಯಕ ಮತ್ತು ಸುಳಿವು ಇಲ್ಲದ ಮನುಷ್ಯರಿಗೆ ಔಷಧಿ ನೀಡುವುದರ ಬಗ್ಗೆ ಮಾತ್ರ ಕಾಳಜಿ ವಹಿಸುತ್ತೀರಿ… ದಯವಿಟ್ಟು ಸಂದೇಶದ ಪ್ರತಿಯನ್ನು ಪತ್ರಿಕಾ/ಮಾಧ್ಯಮಕ್ಕೆ ನೀಡಿ.” ಎಂಬುದಾಗಿ ಇಮೇಲ್ನಲ್ಲಿ ತಿಳಿಸಲಾಗಿದೆ.
ಬೆದರಿಕೆ ಇಮೇಲ್ಗಳು ಎಲ್ಲಿಂದ ಬಂದಿದೆ ಎಂಬುದನ್ನು ಪತ್ತೆ ಹಚ್ಚಲು ತನಿಖಾ ತಂಡಗಳು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿವೆ





