ಬೆಂಗಳೂರು | ಬಿಬಿಎಂಪಿಯಿಂದ ಮರಗಳ ಸುತ್ತ ಕಾಂಕ್ರೀಟ್‌; ಕೆರೆ ಹೋರಾಟಗಾರರ ಆಕ್ರೋಶ

Date:

  • ಮರದ ಪಕ್ಕ ತೆಗೆದ ಗುಂಡಿಗಳನ್ನು ಸಿಮೆಂಟ್‌ನಿಂದ ಮುಚ್ಚುತ್ತಿದ್ದಾರೆ
  • ಬೇರುಗಳು ಹಾನಿಗೊಳಗಾದರೆ ಮರವು ಯಾವಾಗ ಬೇಕಾದರೂ ಬೀಳಬಹುದು

ರಾಜ್ಯ ರಾಜಧಾನಿ ಬೆಂಗಳೂರು ನಗರೀಕರಣದತ್ತ ದಾಪುಗಾಲಿಡುತ್ತಾ ಸಾಗುತ್ತಿದೆ. ಉದ್ಯಾನನಗರಿಯಾಗಿದ್ದ ನಗರ ಇದೀಗ ಕಾಂಕ್ರೀಟ್ ನಗರವಾಗಿ ಬದಲಾಗಿದೆ. ಅದರಂತೆಯೇ ನಗರದಲ್ಲಿರುವ ಮರಗಳ ಸುತ್ತ ಇದೀಗ ಕಾಂಕ್ರೀಟ್‌ ರಾರಾಜಿಸುತ್ತಿದೆ. ಬಿಬಿಎಂಪಿಯು ನಗರದ ಹಲವೆಡೆ ಮರಗಳ ಸುತ್ತ ಗುಂಡಿ ತೆಗೆದು ಬಳಿಕ ಆ ಗುಂಡಿಯನ್ನು ಕಾಂಕ್ರೀಟ್‌ ಹಾಕಿ ಮುಚ್ಚುತ್ತಿದೆ. ಗುಂಡಿ ತೆಗೆಯುವ ವೇಳೆ ನಿರ್ದಾಕ್ಷಿಣ್ಯವಾಗಿ ಮರದ ಬೇರುಗಳನ್ನು ಕತ್ತರಿಸಲಾಗುತ್ತಿದೆ ಎಂದು ಕೆರೆ ರಕ್ಷಣಾ ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಈ ದಿನ.ಕಾಮ್‌ ಜತೆಗೆ ಮಾತನಾಡಿದ ಕೆರೆ ಹೋರಾಟಗಾರ ರಾಘವೇಂದ್ರ ಪಶ್ಚಾಪೂರ, “ಬೆಂಗಳೂರಿನ ಪಾದಚಾರಿ ರಸ್ತೆಗಳನ್ನು ಹಲವಾರು ಸರ್ಕಾರಿ ಇಲಾಖೆಗಳು ತನ್ನದೆ ಎಂದು ತಮಗಿಷ್ಟ ಬಂದಂತೆ ಬಳಸುತ್ತಿವೆ. ಈ ಬಳಕೆಯಲ್ಲಿ ಪ್ರತಿಸಲವೂ ಒಂದು ಉದ್ದನೆಯ ಪೋಲನ್ನು ಅಳವಡಿಸುತ್ತಿದ್ದಾರೆ. ಇದಕ್ಕಾಗಿ 2 ರಿಂದ 3 ಅಡಿ ನೆಲ ಅಗೆಯುತ್ತಾರೆ. ನಗರದಲ್ಲಿ ಪಾದಚಾರಿ ರಸ್ತೆಗಳು ಕಿರಿದಾಗಿವೆ. ಅದರಲ್ಲಿ ನಾನಾ ಇಲಾಖೆಗಳು ಈ ರೀತಿಯಲ್ಲಿ ಫುಟ್‌ಪಾತ್‌ಗಳನ್ನು ಅತಿಕ್ರಮಿಸಿಕೊಂಡರೇ ಜನಸಾಮಾನ್ಯರು ನಡೆಯಲು ಜಾಗವಿಲ್ಲದಂತಾಗುತ್ತದೆ. ಅನಿವಾರ್ಯವಾಗಿ ರಸ್ತೆಯ ಮೇಲೆ ಹೆಜ್ಜೆ ಹಾಕಬೇಕಾಗುತ್ತದೆ. ಇದರಿಂದ ಅಪಘಾತಗಳು ಸಂಭವಿಸುವ ಸಾಧ್ಯತೆ ಹೆಚ್ಚಾಗಿ ಇರುತ್ತದೆ” ಎಂದರು.

“ಇದಲ್ಲದೇ, ನಗರದ ಫುಟ್‌ಪಾತ್‌ಗಳಲ್ಲಿ ಹಾಗೂ ರಸ್ತೆಯ ಬದಿಯಲ್ಲಿ ಬಿಬಿಎಂಪಿಯು ಮರಗಳ ಪಕ್ಕದಲ್ಲಿ ಗುಂಡಿಗಳನ್ನು ಅಗೆಯುತ್ತಿದ್ದು, ಅಲ್ಲಿ ವಿದ್ಯುತ್ ಕಂಬಗಳನ್ನು ನೆಡುತ್ತಿದ್ದಾರೆ. ತೆಗೆದ ಗುಂಡಿಗಳನ್ನು ಸಿಮೆಂಟ್‌ನಿಂದ ಮುಚ್ಚುತ್ತಿದ್ದಾರೆ. ಇದು ಕ್ರೌರ್ಯತೆಯ ಪರಮಾವಧಿ” ಎಂದು ತಿಳಿಸಿದರು.ಮರಗಳು

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

“ಮರಗಳ ಹತ್ತಿರದಲ್ಲೇ ಗುಂಡಿಗಳನ್ನು ತೋಡಿ, ಮುಚ್ಚುತ್ತಿರುವುದರಿಂದ ಇದು ಮರಗಳಿಗೆ ಕೊಡಲಿ ಏಟು ನೀಡಿದಂತಾಗುತ್ತಿದೆ. ಸಿಮೆಂಟ್‌ಯುಕ್ತ ಈ ಗುಂಡಿಗಳು ಹೊಸ ಬೇರುಗಳು ಬೆಳೆಯಲು ಅವಕಾಶ ಮಾಡಿಕೊಡುವುದಿಲ್ಲ. ಇದರಿಂದ ಮರಗಳ ಬೆಳವಣಿಗೆಗೆ ಅಡ್ಡಿಯುಂಟಾಗುತ್ತಿದೆ” ಎಂದು ಹೇಳಿದರು.

“ಒಂದು ಮರದ ಬೇರನ್ನೇ ನಾಶ ಮಾಡಿದರೇ ಮರಗಳು ಹೇಗೆ ಜೀವಿಸಬೇಕು. ಮರಗಳು ಬೆಳೆಯಲು ಬೇರುಗಳು ವಿಶಾಲವಾಗಿ ಹರಡಿಕೊಳ್ಳಲು ಮರಗಳಿಗೆ ಮಣ್ಣು ಬೇಕೇ ವಿನಃ ಕಾಂಕ್ರೀಟ್‌ ಅಲ್ಲ. ಮಾನವೀಯತೆ ಇಲ್ಲದೆ ಇಲಾಖೆ ಅಧಿಕಾರಿಗಳು ಮರಗಳಿಗೆ ಸಿಮೆಂಟ್‌ ಮೆತ್ತಿ ಮುಚ್ಚುತ್ತಿದ್ದಾರೆ. ಮರಗಳು ಇದ್ದರೇ ನಾವು. ಮೊದಲಿಗೆ ನಾವು ಮನುಷ್ಯರಾಗಿ ಕೆಲಸ ಮಾಡಬೇಕು. ಈ ರೀತಿ ಮೃಗಗಳಾಗಿ ವರ್ತಿಸುವುದು ಸರಿ ಅಲ್ಲ” ಎಂದರು.

ಈ ಸುದ್ದಿ ಓದಿದ್ದೀರಾ? ಕಾಂಗ್ರೆಸ್‌ ಆನಂದ್‌ ಕುಮಾರ್‌ ಆಸ್ತಿ ವಿವರದಲ್ಲಿ ವಿಪರೀತ ಸುಳ್ಳು ಮಾಹಿತಿ : ಮೋಹನ್‌ ದಾಸರಿ ಆರೋಪ

“ಬೇರುಗಳಿಗೆ ಅತ್ಯಂತ ಸಮೀಪದಲ್ಲಿ ಸಿಮೆಂಟ್ ಹಾಕುವುದರಿಂದ, ನೀರು ಬೇರುಗಳಿಗೆ ಸೇರಲು ಸಾಧ್ಯವಾಗದಂತೆ ಮಾಡುತ್ತದೆ. ಆಳವಾದ ಬೇರುಗಳಿದ್ದರೂ, ಕೊಂಬೆಗಳಿಗೆ ನೀರು ತಲುಪಲು ಸಹಾಯ ಮಾಡುವಲ್ಲಿ ಅಕ್ಕಪಕ್ಕದ ಬೇರುಗಳು ಪ್ರಮುಖ ಪಾತ್ರವಹಿಸುತ್ತವೆ. ಬೇರುಗಳು ಅರೋಗ್ಯಕರವಾಗಿರುವಂತೆ ಮಾಡಲು ಈ ಅಕ್ಕಪಕ್ಕದ ಬೇರುಗಳು ನಿರ್ಣಾಯಕವಾಗಿವೆ. ಬೇರುಗಳು ಹಾನಿಗೊಳಗಾದರೆ ಮರವು ಯಾವಾಗ ಬೇಕಾದರೂ ಬೀಳಬಹುದು ಮತ್ತು ಮರಗಳು ಮುಖ್ಯ ರಸ್ತೆಗಳಲ್ಲಿ ಇರುವುದರಿಂದ ಪಾದಚಾರಿಗಳಿಗೆ ಅಪಾಯ ಎದುರಾಗುತ್ತವೆ” ಎಂದು ಹೇಳಿದರು.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಎಸ್‌ಐಆರ್ ವಿರುದ್ಧದ ಹೋರಾಟದಲ್ಲಿ ದೇಶಕ್ಕೆ ಕರ್ನಾಟಕ ದಿಕ್ಸೂಚಿಯಾಗಬೇಕು: ಪ್ರೊ. ಯೋಗೇಂದ್ರ ಯಾದವ್

ಕರ್ನಾಟಕವು ಹಲವು ವಿಷಯಗಳಲ್ಲಿ ದೇಶಕ್ಕೆ ದಿಕ್ಸೂಚಿಯಾಗಿದೆ. ಎಸ್‌ಐಆರ್‍‌ ವಿರುದ್ಧದ ಹೋರಾಟದಲ್ಲಿಯೂ ದೇಶಕ್ಕೆ...

ಶಾಲಾ ಶಿಕ್ಷಣದಲ್ಲಿ ಕಡ್ಡಾಯವಾಗಿ ‘ಹಿಂದಿ’ ತೆಗೆಯಬೇಕು: ಹಿಂದಿ ವಿರೋಧಿ ಕರ್ನಾಟಕ

ಕರ್ನಾಟಕದಲ್ಲಿ ಶೈಕ್ಷಣಿಕವಾಗಿ ಪ್ರತಿ ವರ್ಷ ನಡೆಯುವ ಎಸ್ ಎಸ್ ಎಲ್ ಸಿ...

ಬೇಲಿಯೇ ಎದ್ದು ಹೊಲ ಮೇಯ್ದಂತೆ ಮಾಡಿದ ಮಾಹಿತಿ ಆಯೋಗ; ಕಾಯ್ದೆಯ ವಾರ್ಷಿಕ ವರದಿ ನೀಡಲು ‘ಗೌಪ್ಯತೆ’ಯ ನೆಪ

ಮಾಹಿತಿ ಹಕ್ಕು ಕಾಯ್ದೆ-2005ರಡಿ ಸಾರ್ವಜನಿಕ ಪ್ರಾಧಿಕಾರಗಳು ಪಾರದರ್ಶಕವಾಗಿ ಕೆಲಸ ಮಾಡುತ್ತಿವೆಯೇ ಎಂಬುದನ್ನು...

ಒಳಮೀಸಲಾತಿ: 56,000 ಹುದ್ದೆಗಳ ನೇಮಕಾತಿಗೆ ಹೊರಡಿಸಿದ ಅಧಿಸೂಚನೆ ರದ್ದತಿಗೆ ಸರ್ಕಾರ ಒಪ್ಪಿಗೆ

ಇತ್ತೀಚೆಗೆ 56,432 ಹುದ್ದೆಗಳನ್ನು ಭರ್ತಿ ಮಾಡಲು ಸರ್ಕಾರ ಹೊರಡಿಸಿದ್ದ ಆದೇಶವನ್ನು ಹಿಂಪಡೆಯಲು...