ಬೆಂಗಳೂರು | ಲೆಕ್ಕಕ್ಕಾಗಿ ಮರಗಳ ಸುತ್ತ ಬೈಂಡಿಂಗ್ ವೈರ್‌ ಬಿಗಿದ ಬಿಎಂಆರ್‌ಸಿಎಲ್

Date:

  • ಎರಡು ವರ್ಷಗಳ ಹಿಂದೆ ಮೆಟ್ರೋ ಮಾರ್ಗಕ್ಕಾಗಿ ಮರಗಳನ್ನು ಕತ್ತರಿಸಿದ ಬಿಎಂಆರ್‌ಸಿಎಲ್‌
  • ಆಕ್ಷನ್ ಏಡ್ ಸಂಸ್ಥೆಯಿಂದ ಮರಗಳ ಸಮೀಕ್ಷೆ; ಅಧ್ಯಯನಕ್ಕಾಗಿ ಮೂರು ಕೆರೆಗಳ ಆಯ್ಕೆ

ಮೆಟ್ರೋಗಾಗಿ ಮರಗಳನ್ನು ಕತ್ತರಿಸಿದ ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್)ವು ಮರಗಳ ನಾಶಕ್ಕೆ ಪರಿಹಾರವಾಗಿ ಬೇರೆಡೆ ಮರ, ಗಿಡ ಹಾಗೂ ಸಸಿಗಳನ್ನು ಪೋಷಿಸುತ್ತಿರುವ ಬಗ್ಗೆ ‘ಆಕ್ಷನ್ ಏಡ್ ಸಂಸ್ಥೆ’ ಸಮೀಕ್ಷೆ ನಡೆಸಿದೆ. ಮರದ ಸಂಖ್ಯೆಗಳ ಲೆಕ್ಕಕ್ಕಾಗಿ ನಿಗಮವು ಮರಗಳ ಸುತ್ತ ಬೈಂಡಿಂಗ್ ವೈರ್ ಮೂಲಕ ಬಿಗಿದು ಬೋರ್ಡ್ ಹಾಕಿದೆ. ಇದು ಒಳ್ಳೆಯ ಕ್ರಮವಲ್ಲ ಎಂದು ಕೆರೆ ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಎರಡು ವರ್ಷಗಳ ಹಿಂದೆ ಮೆಟ್ರೋ ಮಾರ್ಗಗಳಿಗಾಗಿ ಬಿಎಂಆರ್‌ಸಿಎಲ್‌ನಿಂದ ಹಲವಾರು ಮರಗಳನ್ನು ಕತ್ತರಿಸಲಾಗಿತ್ತು ಹಾಗೂ ಸ್ಥಳಾಂತರಿಸಲಾಗಿತ್ತು. ಅವುಗಳಿಗೆ ಬದಲಿಯಾಗಿ, ನಿಗಮವು ನೆಟ್ಟ ಸಸಿಗಳ ಮೇಲೆ ಆಕ್ಷನ್ ಏಡ್ ಸಂಸ್ಥೆಯೂ ಅಧ್ಯಯನ ನಡೆಸಿದೆ. ವೀರಸಾಗರ ಕೆರೆಯಲ್ಲಿ 120 ಸಸಿಗಳು, ಸಾರಕ್ಕಿ ಕೆರೆಯಲ್ಲಿ 621 ಸಸಿಗಳು, ಗೊಟ್ಟಿಗೆರೆ ಕೆರೆಯಲ್ಲಿ 160 ಸಸಿಗಳನ್ನು ನೆಡಲಾಗಿದೆ ಎಂದು ಸಮೀಕ್ಷೆಯಲ್ಲಿ ಕಂಡುಬಂದಿದೆ. ಅಧ್ಯಯನಕ್ಕಾಗಿ ಮೂರು ಕೆರೆಗಳನ್ನು ಅನುಕೂಲತೆಯ ಆಧಾರದ ಮೇಲೆ ಆಯ್ಕೆ ಮಾಡಲಾಗಿದೆ ಎಂದು ಏಡ್ ಸಂಸ್ಥೆ ಹೇಳಿದೆ.

ಅರಣ್ಯೀಕರಣದ ಅಡಿಯಲ್ಲಿ ನಿಗಮವು ನಗರದ ಮೂರು ಕೆರೆಗಳ ಬಳಿ ಮರಗಳನ್ನು ಪೊಷಿಸುವ ಹೊಣೆ ಹೊತ್ತಿದೆ. ಆದರೆ, ಈಗಾಗಲೇ ನೆಟ್ಟಿರುವ ಮರ ಹಾಗೂ ಗಿಡಗಳ ಪೈಕಿ ಸುಮಾರು 25% ಸಸಿಗಳು ಸತ್ತಿವೆ. ಇನ್ನು ಕೆಲವು ಸಾಯುವ ಅಂಚಿನಲ್ಲಿವೆ ಎಂದು ಆಕ್ಷನ್ ಏಡ್ ಸಂಸ್ಥೆ ಹೇಳಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಮೂರು ಕೆರೆಗಳ ಬಳಿ ನೆಡಲಾಗಿದ್ದ ಒಟ್ಟು 901 ಗಿಡಗಳ ಪೈಕಿ, 211 ಸಸಿಗಳು ಕಂದು ಬಣ್ಣಕ್ಕೆ ತಿರುಗಿವೆ. ಕೆಲವು ಗಿಡಗಳು ಎಲೆಗಳಿಲ್ಲದೆ ಬೋಳು ಬೋಳಾಗಿವೆ. ಇನ್ನು ಕೆಲವು ಗಿಡಗಳು ಸತ್ತಿವೆ ಎಂದು ತಿಳಿಸಿದೆ.

ಈ ಬಗ್ಗೆ ಈ ದಿನ.ಕಾಮ್ ಜತೆಗೆ ಮಾತನಾಡಿದ ಆಕ್ಷನ್ ಏಡ್ ಅಸೋಸಿಯೇಷನ್‌ನ ರಾಘವೇಂದ್ರ ಬಿ ಪಚ್ಚಾಪುರ, “ನಿಗಮದಿಂದ ನೆಡಲಾದ ಸಸಿಗಳ ಆರೋಗ್ಯದ ಸ್ಥಿತಿಯನ್ನು ಅರ್ಥಮಾಡಿಕೊಳ್ಳಲು ಅಧ್ಯಯನವನ್ನು ನಡೆಸಿದ್ದೇವೆ. ಅಧ್ಯಯನ ಮಾಡಿದ ಒಟ್ಟು ಸಸಿಗಳಲ್ಲಿ 16.5% ನೀರಿನ ಒತ್ತಡದಿಂದ ಕೂಡಿದೆ. ಸುಮಾರು 4% ಮರಗಳು ಸತ್ತಂತೆ ತೋರುತ್ತಿವೆ. ಈ ಸಮೀಕ್ಷೆಯೂ ಸಸಿಗಳಿಗೆ ಮಾರಕವಾಗಬಹುದಾದ ಸಮಸ್ಯೆಯನ್ನು ತೋರಿಸಿದೆ” ಎಂದು ಹೇಳಿದರು.

“ತಜ್ಞರು ಮತ್ತು ಕಾಲೇಜು ವಿದ್ಯಾರ್ಥಿಗಳು ಜಂಟಿಯಾಗಿ ಸಮೀಕ್ಷೆಯನ್ನು ನಡೆಸಲಾಗಿದೆ. ಬಹುತೇಕ ಸಸಿಗಳಿಗೆ ಯಾವುದೇ ರಕ್ಷಣೆಯನ್ನೂ ನೀಡಿಲ್ಲ. ಇದರಿಂದ ಅವು ದುರ್ಬಲವಾಗಿವೆ. ವೀರಸಾಗರ, ಸಾರಕ್ಕಿ ಮತ್ತು ಗೊಟ್ಟಿಗೆರೆ ಕೆರೆಗಳಲ್ಲಿ ಮರಗಳಿಗೆ ಯಾವುದೇ ರಕ್ಷಣೆ ನೀಡಿಲ್ಲ” ಎಂದರು.

“ವೀರಸಂದ್ರ ಕೆರೆಯಲ್ಲಿ 113 ಸಸಿಗಳಿಗೆ ಮರದ ಸಂಖ್ಯೆಗಳ ಫಲಕವನ್ನು ಕಂಡುಹಿಡಿಯಲು ಬೈಂಡಿಂಗ್ ತಂತಿಯಿಂದ ಬೋರ್ಡ್‌ಗಳನ್ನು ಕಟ್ಟಿದ್ದಾರೆ. ಬೋರ್ಡ್‌ಗಳನ್ನು ಕಟ್ಟಲು ಬೈಂಡಿಂಗ್ ವೈರ್ ಬಳಸುವುದು ಅಪಾಯಕಾರಿ. ಮರಗಳ ಬೆಳವಣಿಗೆಗೆ ಅಡ್ಡಿಯಾಗುತ್ತದೆ” ಎಂದರು.

ಈ ಸುದ್ದಿ ಓದಿದ್ದೀರಾ? ಬೆಂಗಳೂರು | 80 ವರ್ಷ ಮೇಲ್ಪಟ್ಟವರಿಗಾಗಿ ಪೋಸ್ಟಲ್ ಬ್ಯಾಲೆಟ್ ವ್ಯವಸ್ಥೆ : ತುಷಾರ್ ಗಿರಿನಾಥ್

“ಕೆರೆಗಳಿಗೆ ಸೂಕ್ತವಾಗಿ ಬೇಲಿ ಹಾಕಲಾಗಿದೆಯೇ? ಎಲ್ಲ ಸಸಿಗಳಿಗೆ ಟ್ರೀ ಗಾರ್ಡ್‌ಗಳನ್ನು ಅಳವಡಿಸಲಾಗಿದೆಯೇ? ಸಸಿಗಳನ್ನು ಕಟ್ಟುವ ತಂತಿಯಿಂದ ಮುಕ್ತಗೊಳಿಸಲಾಗಿದೆ ಎಂಬ ಬಗ್ಗೆ ನಿಗಮ ಖಚಿತಪಡಿಸಿಕೊಳ್ಳಬೇಕು. ಎಲ್ಲ ಗುತ್ತಿಗೆದಾರರಿಗೆ ಆರೋಗ್ಯಕರ ರೀತಿಯಲ್ಲಿ ಮರಗಳಿಗೆ ನೇತಾಡುವ ಬೋರ್ಡ್‌ಗಳನ್ನು ಬಳಸಲು ನಿಗಮವು ಮಾರ್ಗಸೂಚಿಯನ್ನು ನೀಡಬೇಕು” ಎಂದು ತಿಳಿಸಿದರು.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಎಸ್‌ಐಆರ್ ವಿರುದ್ಧದ ಹೋರಾಟದಲ್ಲಿ ದೇಶಕ್ಕೆ ಕರ್ನಾಟಕ ದಿಕ್ಸೂಚಿಯಾಗಬೇಕು: ಪ್ರೊ. ಯೋಗೇಂದ್ರ ಯಾದವ್

ಕರ್ನಾಟಕವು ಹಲವು ವಿಷಯಗಳಲ್ಲಿ ದೇಶಕ್ಕೆ ದಿಕ್ಸೂಚಿಯಾಗಿದೆ. ಎಸ್‌ಐಆರ್‍‌ ವಿರುದ್ಧದ ಹೋರಾಟದಲ್ಲಿಯೂ ದೇಶಕ್ಕೆ...

ಶಾಲಾ ಶಿಕ್ಷಣದಲ್ಲಿ ಕಡ್ಡಾಯವಾಗಿ ‘ಹಿಂದಿ’ ತೆಗೆಯಬೇಕು: ಹಿಂದಿ ವಿರೋಧಿ ಕರ್ನಾಟಕ

ಕರ್ನಾಟಕದಲ್ಲಿ ಶೈಕ್ಷಣಿಕವಾಗಿ ಪ್ರತಿ ವರ್ಷ ನಡೆಯುವ ಎಸ್ ಎಸ್ ಎಲ್ ಸಿ...

ಬೇಲಿಯೇ ಎದ್ದು ಹೊಲ ಮೇಯ್ದಂತೆ ಮಾಡಿದ ಮಾಹಿತಿ ಆಯೋಗ; ಕಾಯ್ದೆಯ ವಾರ್ಷಿಕ ವರದಿ ನೀಡಲು ‘ಗೌಪ್ಯತೆ’ಯ ನೆಪ

ಮಾಹಿತಿ ಹಕ್ಕು ಕಾಯ್ದೆ-2005ರಡಿ ಸಾರ್ವಜನಿಕ ಪ್ರಾಧಿಕಾರಗಳು ಪಾರದರ್ಶಕವಾಗಿ ಕೆಲಸ ಮಾಡುತ್ತಿವೆಯೇ ಎಂಬುದನ್ನು...

ಒಳಮೀಸಲಾತಿ: 56,000 ಹುದ್ದೆಗಳ ನೇಮಕಾತಿಗೆ ಹೊರಡಿಸಿದ ಅಧಿಸೂಚನೆ ರದ್ದತಿಗೆ ಸರ್ಕಾರ ಒಪ್ಪಿಗೆ

ಇತ್ತೀಚೆಗೆ 56,432 ಹುದ್ದೆಗಳನ್ನು ಭರ್ತಿ ಮಾಡಲು ಸರ್ಕಾರ ಹೊರಡಿಸಿದ್ದ ಆದೇಶವನ್ನು ಹಿಂಪಡೆಯಲು...