ಬೆಂಗಳೂರಿಗೆ ಅಗತ್ಯವಿದೆ 658 ಕಿ.ಮೀ ಒಳಚರಂಡಿ

Date:

  • ಕಾರ್ಯನಿರ್ವಾಹಕ ನಿರ್ದೇಶಕ ಶಾಂತನು ಮಜುಂದಾರ್ ಅವರಿಂದ ವರದಿ ಬಿಡುಗಡೆ
  • ಬಿಬಿಎಂಪಿ ಮಿತಿಯಲ್ಲಿ 633 ಮಳೆನೀರು ಚರಂಡಿಗಳಿದ್ದು, 842 ಕಿ.ಮೀಟರ್ ಉದ್ದವಿದೆ

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮಳೆಗಾಲದ ಸಮಯದಲ್ಲಿ ಪ್ರವಾಹ ಉಂಟಾಗುತ್ತಿದ್ದು, ನಗರದಲ್ಲಿ ಉಂಟಾಗುತ್ತಿರುವ ಈ ಭಾರೀ ಪ್ರವಾಹವನ್ನು ತಡೆಯಲು ನಗರದ ಜನಸಂಖ್ಯೆ ಹಾಗೂ ವಿಸ್ತರಣೆಗೆ ಅನುಗುಣವಾಗಿ ಸರಿಸುಮಾರು 658 ಕಿ.ಮೀ ಒಳಚರಂಡಿ ನಿರ್ಮಾಣ ಮಾಡುವ ಅಗತ್ಯವಿದೆ ಎಂದು ‘ಪ್ರಾಪರ್ಟಿ ಕನ್ಸಲ್ಟೆನ್ಸಿ ನೈಟ್ ಫ್ರಾಂಕ್ ಇಂಡಿಯಾ’ದ ವರದಿ ತಿಳಿಸಿದೆ.

ಬುಧವಾರ ಪ್ರಾಪರ್ಟಿ ಕನ್ಸಲ್ಟೆನ್ಸಿ ನೈಟ್ ಫ್ರಾಂಕ್ ಇಂಡಿಯಾದ ಮುಖ್ಯ ಕಚೇರಿಯಲ್ಲಿ ಕಾರ್ಯನಿರ್ವಾಹಕ ನಿರ್ದೇಶಕ ಶಾಂತನು ಮಜುಂದಾರ್ ಈ ವರದಿಯನ್ನು ಬಿಡುಗಡೆ ಮಾಡಿದರು.

ವರದಿಯಲ್ಲೇನಿದೆ?

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಯೋಜಿತವಲ್ಲದ ಅಭಿವೃದ್ಧಿ, ಜನಸಂಖ್ಯೆಯ ಒಳಹರಿವು ಮತ್ತು ಹವಾಮಾನ ಬದಲಾವಣೆಯು ಬೆಂಗಳೂರಿನಲ್ಲಿ ಅಸ್ತಿತ್ವದಲ್ಲಿರುವ ಒಳಚರಂಡಿ ವ್ಯವಸ್ಥೆಯ ಮೇಲೆ ತೀವ್ರ ಒತ್ತಡವನ್ನು ಉಂಟುಮಾಡುತ್ತಿದೆ. ಇದರ ಪರಿಣಾಮವಾಗಿ ಸಂಪರ್ಕಿತ ಒಳಚರಂಡಿ ವ್ಯವಸ್ಥೆಯು ಹದಗೆಟ್ಟಿದೆ. 1900ರ ದಶಕದಿಂದಲೂ ಉದ್ದವನ್ನು ಅರ್ಧದಷ್ಟು ಕಡಿಮೆಗೊಳಿಸಿದೆ. ಈಗ ಒಳಚರಂಡಿಯ ನವೀಕರಣದ ಅಗತ್ಯವಿದೆ.

ಸಿಎಜಿ(CAG) 2021ರ ಅಂಕಿಅಂಶಗಳನ್ನು ಉಲ್ಲೇಖಿಸಿ, ಬಿಬಿಎಂಪಿ ಮಿತಿಯಲ್ಲಿ 633 ಮಳೆನೀರು ಚರಂಡಿಗಳಿವೆ. ಇದು ಕೇವಲ 842 ಕಿಲೋಮೀಟರ್ ಒಟ್ಟು ಉದ್ದವಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ 1995ರಲ್ಲಿ 226 ಚದರ ಕಿಲೋಮೀಟರ್‌ನಿಂದ 2011ರಲ್ಲಿ 741 ಚದರ ಕಿಲೋಮೀಟರ್‌ಗೆ ನಗರದ ಪ್ರಾದೇಶಿಕ ವಿಸ್ತರಣೆಯಿಂದಾಗಿ, ನಗರದಲ್ಲಿ ಹೆಚ್ಚುವರಿ 658 ಕಿಲೋಮೀಟರ್ ಪ್ರಮುಖ ಚರಂಡಿಗಳನ್ನು ನಿರ್ಮಿಸಲು ಮೂಲಸೌಕರ್ಯಗಳನ್ನು ಮರುರೂಪಿಸಬೇಕು. ನೈಟ್ ಫ್ರಾಂಕ್ ಅಂದಾಜಿನ ಪ್ರಕಾರ ಅಸ್ತಿತ್ವದಲ್ಲಿರುವ ಡ್ರೈನ್‌ಗಳ ನಿರ್ಮಾಣ, ಪುನರುಜ್ಜೀವನ ಮತ್ತು ನಿರ್ವಹಣೆಗೆ ಅಂದಾಜು 2,800 ಕೋಟಿ ರೂ ವ್ಯಯವಾಗಲಿದೆ ಎಂದು ತಿಳಿಸಿದೆ.

ಮಳೆನೀರಿನ ಚರಂಡಿಗಳಲ್ಲಿ ನೀರಿನ ಮುಕ್ತ ಹರಿವನ್ನು ಖಾತ್ರಿಪಡಿಸುವಲ್ಲಿ ಅಸ್ತಿತ್ವದಲ್ಲಿರುವ ಮೂಲಸೌಕರ್ಯಗಳು ಹೇಗೆ ಕಡಿಮೆಯಾಗುತ್ತವೆ. ನಗರದಲ್ಲಿ ಮಳೆನೀರು ಚರಂಡಿಗಳ ನಿರ್ಮಾಣ ಮತ್ತು ಪುನರುಜ್ಜೀವನಕ್ಕಾಗಿ ತಜ್ಞರನ್ನು ಒಳಗೊಂಡಿರುವ ಒಂದು ಯೋಜನೆಯೊಂದಿಗೆ ಈ ಸಮಸ್ಯೆ ನಿಭಾಯಿಸಲು ಸರ್ಕಾರ ತುರ್ತಾಗಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದೆ.

ನೈಟ್ ಫ್ರಾಂಕ್ ಇಂಡಿಯಾದ ಸರ್ಕಾರಿ ಮತ್ತು ಮೂಲಸೌಕರ್ಯ ಸಲಹಾ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ರಾಜೀವ್ ವಿಜಯ್ ಮಾತನಾಡಿ, “ಮಾಸ್ಟರ್ ಪ್ಲಾನ್‌ನ ಈ ಅಭಿವೃದ್ಧಿಗೆ ಸರಿಸುಮಾರು ಆರರಿಂದ ಒಂಬತ್ತು ತಿಂಗಳು ತೆಗೆದುಕೊಳ್ಳುತ್ತದೆ. ಯೋಜನೆಯ ತಯಾರಿಗಾಗಿ ಒಂದರಿಂದ ಒಂದೂವರೆ ವರ್ಷಗಳು ಮತ್ತು ಅನುಷ್ಠಾನಕ್ಕೆ ಇನ್ನೆರಡು ವರ್ಷಗಳು ತೆಗೆದುಕೊಳ್ಳುತ್ತದೆ” ಎಂದು ಹೇಳಿದರು.

“ಡ್ರೈನ್ ಉದ್ದದ ವಿಸ್ತರಣೆಯ ಜೊತೆಗೆ, ಪ್ರವಾಹ ನಿರ್ವಹಣೆಗಾಗಿ ಚೀನಾದ ಸ್ಪಾಂಜ್ ಸಿಟಿ ಮಾದರಿಯನ್ನು ಹಸಿರು ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸಲು ಸರ್ಕಾರ ಗಮನಹರಿಸಬೇಕಿದೆ. ಮಳೆಯ ಜಲಾನಯನ ಪ್ರದೇಶಗಳನ್ನು ಸೃಷ್ಟಿಸುವ ಮತ್ತು ಪ್ರವಾಹವನ್ನು ತಪ್ಪಿಸುವ ಈ ಕ್ರಮವನ್ನು ಅಮೃತ್ (ಅಟಲ್ ಮಿಷನ್ ಫಾರ್ ರಿಜುವೆನೇಶನ್ ಮತ್ತು ಅರ್ಬನ್ ಟ್ರಾನ್ಸ್‌ಫರ್ಮೇಷನ್) ಕಾರ್ಯಕ್ರಮದ ಮೂಲಕ ತಲುಪಿಸಬಹುದು” ಎಂದರು.

ಈ ಸುದ್ದಿ ಓದಿದ್ದೀರಾ? ನೀರುಗಾಲುವೆ ಕಾಮಗಾರಿ ಸ್ಥಳದಲ್ಲಿ ಅನಾಹುತ ಜರುಗದಂತೆ ಎಚ್ಚರ ವಹಿಸಿ: ಜಯರಾಮ್ ರಾಯ್‌ಪುರ

ಆದಾಯ ಉತ್ಪಾದನೆಯು ಅಡ್ಡಿಪಡಿಸುವ ಅಂಶವಲ್ಲ, ವ್ಯಾಲ್ಯೂ ಕ್ಯಾಪ್ಚರ್ ಫೈನಾನ್ಸಿಂಗ್ (VCF) ಅನ್ನು ಅಳವಡಿಸಿಕೊಳ್ಳುವಂತೆ ಸೂಚಿಸಿದೆ. ಆದ್ದರಿಂದ ಪಾಲಿಕೆಯೂ ಮಳೆನೀರು ಚರಂಡಿ ನಿರ್ವಹಣೆಗೆ ಆದಾಯವನ್ನು ಸಂಗ್ರಹಿಸಲು ರಿಯಲ್ ಎಸ್ಟೇಟ್‌ಗೆ ಟ್ಯಾಪ್ ಮಾಡಬಹುದು. ಸಾಕಷ್ಟು ಆದಾಯ ಸಂಗ್ರಹವಿದೆ ಮತ್ತು ಇದು ಸಮಸ್ಯೆಯಲ್ಲ. ಆದರೆ, ಬಜೆಟ್ ಮತ್ತು ಖರ್ಚಿಗೆ ಆದ್ಯತೆಯ ಅಗತ್ಯವಿದೆ ಮತ್ತು ಆನ್-ಗ್ರೌಂಡ್ ಕ್ರಿಯೆಯ ಅಗತ್ಯವಿದೆ” ಎಂದು ವರದಿಯಲ್ಲಿ ಹೇಳಲಾಗಿದೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಎಸ್‌ಐಆರ್ ವಿರುದ್ಧದ ಹೋರಾಟದಲ್ಲಿ ದೇಶಕ್ಕೆ ಕರ್ನಾಟಕ ದಿಕ್ಸೂಚಿಯಾಗಬೇಕು: ಪ್ರೊ. ಯೋಗೇಂದ್ರ ಯಾದವ್

ಕರ್ನಾಟಕವು ಹಲವು ವಿಷಯಗಳಲ್ಲಿ ದೇಶಕ್ಕೆ ದಿಕ್ಸೂಚಿಯಾಗಿದೆ. ಎಸ್‌ಐಆರ್‍‌ ವಿರುದ್ಧದ ಹೋರಾಟದಲ್ಲಿಯೂ ದೇಶಕ್ಕೆ...

ಶಾಲಾ ಶಿಕ್ಷಣದಲ್ಲಿ ಕಡ್ಡಾಯವಾಗಿ ‘ಹಿಂದಿ’ ತೆಗೆಯಬೇಕು: ಹಿಂದಿ ವಿರೋಧಿ ಕರ್ನಾಟಕ

ಕರ್ನಾಟಕದಲ್ಲಿ ಶೈಕ್ಷಣಿಕವಾಗಿ ಪ್ರತಿ ವರ್ಷ ನಡೆಯುವ ಎಸ್ ಎಸ್ ಎಲ್ ಸಿ...

ಬೇಲಿಯೇ ಎದ್ದು ಹೊಲ ಮೇಯ್ದಂತೆ ಮಾಡಿದ ಮಾಹಿತಿ ಆಯೋಗ; ಕಾಯ್ದೆಯ ವಾರ್ಷಿಕ ವರದಿ ನೀಡಲು ‘ಗೌಪ್ಯತೆ’ಯ ನೆಪ

ಮಾಹಿತಿ ಹಕ್ಕು ಕಾಯ್ದೆ-2005ರಡಿ ಸಾರ್ವಜನಿಕ ಪ್ರಾಧಿಕಾರಗಳು ಪಾರದರ್ಶಕವಾಗಿ ಕೆಲಸ ಮಾಡುತ್ತಿವೆಯೇ ಎಂಬುದನ್ನು...

ಒಳಮೀಸಲಾತಿ: 56,000 ಹುದ್ದೆಗಳ ನೇಮಕಾತಿಗೆ ಹೊರಡಿಸಿದ ಅಧಿಸೂಚನೆ ರದ್ದತಿಗೆ ಸರ್ಕಾರ ಒಪ್ಪಿಗೆ

ಇತ್ತೀಚೆಗೆ 56,432 ಹುದ್ದೆಗಳನ್ನು ಭರ್ತಿ ಮಾಡಲು ಸರ್ಕಾರ ಹೊರಡಿಸಿದ್ದ ಆದೇಶವನ್ನು ಹಿಂಪಡೆಯಲು...