25 ನಿಮಿಷ ಜಾಹೀರಾತು: ಬೆಂಗಳೂರಿನ ವ್ಯಕ್ತಿಯ ಸಮಯ ಪೋಲು ಮಾಡಿದ ಪಿವಿಆರ್‌ಗೆ 1.65 ಲಕ್ಷ ರೂ. ದಂಡ

Date:

ಇಪ್ಪತ್ತೈದು ನಿಮಿಷಗಳ ದೀರ್ಘಾವಧಿ ಸಮಯದ ವಾಣಿಜ್ಯ ಜಾಹೀರಾತು ಪ್ರದರ್ಶಿಸುವ ಮೂಲಕ ಬೆಂಗಳೂರು ವ್ಯಕ್ತಿಯ ಸಮಯ ಪೋಲು ಮಾಡಿ ಮಾನಸಿಕ ಸಂಕಟ ಉಂಟು ಮಾಡಿದ ಪಿವಿಆರ್‌, ಐನಾಕ್ಸ್‌ಗೆ ಬೆಂಗಲೂರಿನ ಗ್ರಾಹಕರ ನ್ಯಾಯಾಲಯ 65 ಸಾವಿರ ರೂ. ದಂಡ ವಿಧಿಸಿ ಪರಿಹಾರದ ಹಣವನ್ನು ವ್ಯಕ್ತಿಗೆ ನೀಡಲು ಆದೇಶಿಸಿದೆ.

ಅಬಿಷೇಕ್‌ ಎಂ ಆರ್‌ ಎಂಬುವವರು 2023ರಲ್ಲಿ ಬುಕ್‌ ಮೈ ಶೋ ಮೂಲಕ ‘ ಸಾಮ್‌ ಬಹದ್ದೂರ್‌’ ಸಿನಿಮಾ ನೋಡಲು ಬುಕ್‌ ಮೈಶೋ ಮೂಲಕ ಸಂಜೆ 4 ಪ್ರದರ್ಶನದ ಮೂರು ಟಿಕೆಟ್‌ ಖರೀದಿಸಿದ್ದರು. ಸಿನಿಮಾ 6.30ಕ್ಕೆ ಮುಗಿಸಿ ಅವರು ಬೇರೆ ಕೆಲಸಗಳಿಗೆ ಕೆಲಸಕ್ಕೆ ತೆರಳಬೇಕಿತ್ತು. ಆದರೆ ಸಿನಿಮಾ ಜಾಹೀರಾತು, ಟ್ರೈಲರ್‌ಗಳ ಮೂಲಕ ಸಂಜೆ 4.30 ಕ್ಕೆ ಆರಂಭವಾಗಿ ಸುಮಾರು 30 ನಿಮಿಷಗಳ ಕಾಲ ಸಮಯ ವ್ಯರ್ಥವಾಯಿತು.

ಸಮಯ ಅಮೂಲ್ಯವಾದುದು, ಕಂಪನಿಯವರು ತಮ್ಮ ಲಾಭವನ್ನು ಪಡೆಯುವುದಕ್ಕಾಗಿ ಅನಗತ್ಯ ಜಾಹೀರಾತುಗಳನ್ನು ಪ್ರದರ್ಶಿಸುವುದು ಸ್ಪಷ್ಟವಾಗಿದೆ. ಅರ್ಧ ಗಂಟೆ ಸಮಯ ವ್ಯರ್ಥವಾದ ಕಾರಣ ದೂರುದಾರರು ತಮ್ಮ ಕಾರ್ಯಕ್ರಮಗಳು ಹಾಗೂ ಪೂರ್ವನಿಗದಿ ಯೋಜನೆಗಳಿಗೆ ತೆರಳಲು ಸಾಧ್ಯವಾಗಿರಲಿಲ್ಲ. ಇದರಿಂದ ತಮಗೆ ನಷ್ಟವಾಗಿದ್ದು, ಪರಿಹಾರ ದೊರಕಿಸಿಕೊಡಬೇಕೆಂದು ಅಭಿಷೇಕ್‌ ಅವರು ತಮ್ಮ ದೂರಿನಲ್ಲಿ ತಿಳಿಸಿದ್ದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಬಂತು ಬೇಸಿಗೆ, ತತ್ವಾರ ತಂತು ನೀರಿಗೆ, ಅನುಕೂಲ ಅವಕಾಶವಾದಿಗಳಿಗೆ!

“ಸಮಯವು ಹಣಕ್ಕಿಂತ ಅಮೂಲ್ಯವಾದದು, ಆದ ಕಾರಣ ದೂರುದಾರರಿಗೆ ಪಿವಿಆರ್‌ ಹಾಗೂ ಐನಾಕ್ಸ್ ನಷ್ಟವನ್ನು ತುಂಬಿಕೊಡಬೇಕು. ಅನಗತ್ಯ ವಾಣಿಜ್ಯ ಜಾಹೀರಾತು ಪ್ರಕಟಿಸಿ ಸಮಯ ಹಾಳು ಮಾಡಿದ್ದಕ್ಕಾಗಿ ಪಿವಿಆರ್‌ ಹಾಗೂ ಐನಾಕ್ಸ್ 50 ಸಾವಿರ ದಂಡ ವಿಧಿಸಲಾಗಿದೆ. ಮಾನಸಿಕ ಸಂಕಟಕ್ಕಾಗಿ 5 ಸಾವಿರ ಹಾಗೂ ಉಳಿದ 10 ಸಾವಿರವನ್ನು ದೂರುದಾರರ ವೆಚ್ಚ ಹಾಗೂ ಇತರ ಪರಿಹಾರಕ್ಕೆ ನೀಡಬೇಕು. ಹಾಗೆಯೇ ಪಿವಿಆರ್‌ ಐನಾಕ್ಸ್‌ಗೆ 1 ಲಕ್ಷ ರೂ. ದಂಡ ವಿಧಿಸಲಾಗಿದೆ” ಎಂದು ಕೋರ್ಟ್‌ ತಿಳಿಸಿತು.

ದಂಡದ ಹಣವನ್ನು ಗ್ರಾಹಕ ಕ್ಷೇಮಾಭಿವೃದ್ಧಿ ನಿಧಿಗೆ ನೀಡಬೇಕೆಂದು ಕೋರ್ಟ್ ನಿರ್ದೇಶಿಸಿತು. ಒಂದು ತಿಂಗಳ ಒಳಗಾಗಿ ಎಲ್ಲ ದಂಡದ ಹಣವನ್ನು ಪಾವತಿಸಬೇಕೆಂದು ಕೋರ್ಟ್ ಆದೇಶಿಸಿತು. ಟಿಕೆಟ್ ಬುಕ್ಕಿಂಗ್‌ ವೇದಿಕೆ ಬುಕ್‌ ಬೈ ಶೋ ಅವರ ಪಾತ್ರ ಇರದಿದ್ದ ಕಾರಣ ಅವರನ್ನು ಹೊಣೆಗಾರರನ್ನಾಗಿ ಮಾಡದಿರಲು ಕೋರ್ಟ್ ನಿರ್ಧರಿಸಿತು.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ಸಮರ್ಥ್‌ ನಾಮಪತ್ರ ಸಲ್ಲಿಕೆ; ದೂರ ಉಳಿದ ರಾಜ್ಯ ಮುಸ್ಲಿಂ ಮುಖಂಡರು

ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ದಾವಣಗೆರೆ ಮುಸ್ಲಿಂ ಕಾಂಗ್ರೆಸ್‌ ಟಿಕೆಟ್...

ರಾಜ್ಯದಲ್ಲಿ ʼಎಸ್‌ಐಆರ್ʼ ಪ್ರಕ್ರಿಯೆಯನ್ನು ತರಾತುರಿಯಲ್ಲಿ ನಡೆಸಬೇಡಿ- ಪ್ರಗತಿಪರ ಸಂಘಟನೆ, ಜಾತ್ಯತೀತ ಪಕ್ಷಗಳ ಆಗ್ರಹ

ಕೇಂದ್ರ ಚುನಾವಣಾ ಆಯೋಗ ನಡೆಸುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಎಂಬುದು...