ಬ್ರ್ಯಾಂಡ್ ಬೆಂಗಳೂರು | ನಾಗರಿಕ ಸಮಾಜ ಸಂಸ್ಥೆಗಳಿಂದ ಹರಿದು ಬಂದ ಸಲಹೆ ಸೂಚನೆಗಳು

Date:

  • ಬ್ರ್ಯಾಂಡ್ ಬೆಂಗಳೂರು ಅಭಿಯಾನಕ್ಕೆ ಸಾರ್ವಜನಿಕರಿಂದ 20 ಸಾವಿರಕ್ಕೂ ಹೆಚ್ಚು ಸಲಹೆ
  • ಬೆಂಗಳೂರು ಅಭಿವೃದ್ಧಿಗಾಗಿ ಏಳು ವಿಚಾರಗಳ ಬಗ್ಗೆ ಸಲಹೆ ಸಂಗ್ರಹಿಸಲು ಮುಂದಾದ ರಾಜ್ಯ ಸರ್ಕಾರ

ರಾಜ್ಯ ರಾಜಧಾನಿ ಬೆಂಗಳೂರಿನ ಸಮಗ್ರ ಅಭಿವೃದ್ಧಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಆರಂಭಿಸಿರುವ ಬ್ರ್ಯಾಂಡ್ ಬೆಂಗಳೂರು ಅಭಿಯಾನಕ್ಕೆ ಸಾರ್ವಜನಿಕರಿಂದ ಈಗಾಗಲೇ 20 ಸಾವಿರಕ್ಕೂ ಹೆಚ್ಚು ಸಲಹೆಗಳು ಬಂದಿದ್ದು, ಇದೀಗ ಕ್ರೈಮೇಟ್‌ ರೈಸ್‌ ಅಲೈಯನ್ಸ್‌ ಸಂಸ್ಥೆ, ಸೆಂಟರ್ ಫಾರ್ ಸ್ಟಡಿ ಆಫ್ ಸೈನ್ಸ್, ಟೆಕ್ನಾಲಜಿ ಅಂಡ್ ಪಾಲಿಸಿ, ಸಾಕ್ರಟಿಸ್, ಸಾಹಸ್, ರೀಪ್ ಬೆನಿಫಿಟ್, ಜನಾಗ್ರಹ ಸೆಂಟರ್ ಫಾರ್ ಸಿಟಿಜನ್‌ಶಿಪ್ ಅಂಡ್ ಡೆಮಾಕ್ರಸಿ ಸೇರಿದಂತೆ ಅನೇಕ ಸಂಸ್ಥೆಗಳು ಸಲಹೆ ಸೂಚನೆ ನೀಡಿವೆ.

ಸಂಚಾರಯುಕ್ತ ಬೆಂಗಳೂರು, ಹಸಿರು ಬೆಂಗಳೂರು, ಸ್ವಚ್ಛ ಬೆಂಗಳೂರು, ಜನಹಿತ ಬೆಂಗಳೂರು, ಆರೋಗ್ಯಕರ ಬೆಂಗಳೂರು, ಟೆಕ್‌ ಬೆಂಗಳೂರು ಹಾಗೂ ಜಲಸುರಕ್ಷಾ ಬೆಂಗಳೂರು ಕುರಿತು ನಾಗರಿಕರಿಂದ ಬೆಂಗಳೂರಿನ ಅಭಿವೃದ್ಧಿಗಾಗಿ ಏಳು ವಿಚಾರಗಳ ಬಗ್ಗೆ ಅಭಿಪ್ರಾಯ ಮತ್ತು ಸಲಹೆ ಸಂಗ್ರಹಿಸಲು ರಾಜ್ಯ ಸರ್ಕಾರ ಮುಂದಾಗಿದೆ.

ಇದಕ್ಕೆ ಸಂಸ್ಥೆಗಳು ಹಲವಾರು ರೀತಿಯಲ್ಲಿ ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಪೋರ್ಟ್‌ಲ್, ಟ್ವೀಟರ್, ಫೇಸ್‌ಬುಕ್ ಹಾಗೂ ವಾಟ್ಸ್‌ಆಪ್‌ ಮೂಲಕ ತಮ್ಮ ಸಲಹೆಗಳನ್ನು ಸರ್ಕಾರಕ್ಕೆ ಕಳಿಸಿವೆ.  

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ರಾಜಧಾನಿ ಬೆಂಗಳೂರಿನಲ್ಲಿ ಕಳೆದ ವರ್ಷ ಸುರಿದ ಭಾರೀ ಮಳೆಗೆ ಪ್ರವಾಹ ಉಂಟಾಗಿತ್ತು. ಜನ ಜೀವನ ಸಂಪೂರ್ಣ ಅಸ್ತವ್ಯಸ್ತವಾಗಿತ್ತು. ಈ ಹಿನ್ನೆಲೆ, ಸಾರ್ವಜನಿಕರು ನೀರು ಮತ್ತ ಪ್ರವಾಹ ನಿರ್ವಹಣೆಗೆ ಕೆಲವು ಶಿಫಾರಸು ಮಾಡಿದ್ದಾರೆ.

  • ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಮತ್ತು ಬಿಡ್ಬ್ಲೂಎಸ್‌ಎಸ್‌ಬಿ ಬೆಂಬಲದೊಂದಿಗೆ ರಚನಾತ್ಮಕ ಮತ್ತು ರಚನಾತ್ಮಕವಲ್ಲದ ಕಾರ್ಯತಂತ್ರಗಳೊಂದಿಗೆ ಪ್ರವಾಹ ನಿರ್ವಹಣೆಯ ಯೋಜನೆಗಳನ್ನು ಸಿದ್ಧಪಡಿಸಬೇಕು.
  • ನಗರದಾದ್ಯಂತ ಪ್ರವಾಹ ಉಂಟಾಗುವ ಪ್ರದೇಶಗಳನ್ನು ನಕ್ಷೆ ಮಾಡಲು ಸಮಗ್ರ ಪ್ರಚಾರ ಕೈಗೊಳ್ಳುವುದು.
  • ‘ಸ್ಪಾಂಜ್ ಸಿಟಿ’ ವಿಧಾನವನ್ನು ಅಳವಡಿಸಿಕೊಳ್ಳುವುದು. ನೀರಿನ ಒಳನುಸುಳುವಿಕೆ, ಹರಿವಿನ ನಿಯಂತ್ರಣಕ್ಕಾಗಿ ಜೈವಿಕ-ಸ್ವೇಲ್ಸ್, ರೀಚಾರ್ಜ್ ಬಾವಿಗಳು, ಜೌಗು ಪ್ರದೇಶಗಳು ಮತ್ತು ಉದ್ಯಾನವನಗಳಂತಹ ಪ್ರಕೃತಿ ಆಧಾರಿತ ಪರಿಹಾರಗಳನ್ನು ಅನುಷ್ಠಾನಗೊಳಿಸುವುದು.
  • ತೃತೀಯ ಮಳೆನೀರಿನ ಚರಂಡಿಗಳ ನಿಯಮಿತ ಡಿ-ಸಿಲ್ಟಿಂಗ್ ಮತ್ತು ಹೂಳನ್ನು ಸಂಪೂರ್ಣವಾಗಿ ತೆಗೆಯುವುದು.

ನಾಗರಿಕರ ಪಾಲ್ಗೊಳ್ಳುವಿಕೆ ಮತ್ತು ಆಡಳಿತ

  • ಸಾರ್ವಜನಿಕರನ್ನು ಒಳಗೊಂಡಂತೆ ಸಮಸ್ಯೆ ಪರಿಹರಿಸಲು ವಾರ್ಡ್‌ ವಾರು ಡಿಜಿಟಲ್ ವೇದಿಕೆಗಳ ನಿರ್ಮಾಣ ಮಾಡುವುದು. ಹಾಗೂ ಬಿಬಿಎಂಪಿ ಕೌನ್ಸಿಲ್‌ನ ಒಳಗೊಳ್ಳುವಿಕೆ ಮತ್ತು ಪ್ರಮುಖ ಕಾಮಗಾರಿಗಳು, ವಾರ್ಡ್ ಮಟ್ಟದ ಯೋಜನೆಗಳಲ್ಲಿ ಜನರೊಂದಿಗೆ ಸಮಾಲೋಚನೆ ಮಾಡುವುದು.
  • ಸ್ಥಳೀಯ ನಾಯಕರ ಅಭಿವೃದ್ಧಿಗಾಗಿ ಯುವ ಸಮಿತಿ ರಚನೆ, ಅಂತರ್ಗತ ಭಾಗವಹಿಸುವಿಕೆಗಾಗಿ ಕ್ರಿಯಾತ್ಮಕ ವಾರ್ಡ್ ಸಮಿತಿಗಳ ರಚನೆ ಮಾಡುವುದು.
  • ಕಾರ್ಯಕ್ಷಮತೆಯನ್ನು ಅಳೆಯಲು ಮತ್ತು ಸಹಯೋಗದ ಸ್ಪರ್ಧೆಯನ್ನು ಪ್ರೋತ್ಸಾಹಿಸಲು ಸ್ಟೇಟ್-ಆಫ್-ವಾರ್ಡ್ ಮೆಟ್ರಿಕ್‌ನ ಅನುಷ್ಠಾನ ಮಾಡಬೇಕು.
  • ಹೊಂದಾಣಿಕೆ ಮತ್ತು ತಗ್ಗಿಸುವಿಕೆಯ ಕಾರ್ಯತಂತ್ರಗಳನ್ನು ಸಂಘಟಿಸಲು ಮತ್ತು ಬಲಪಡಿಸಲು ಮುನ್ಸಿಪಲ್ ಕಾರ್ಪೊರೇಶನ್‌ಗಳಲ್ಲಿ ಮೀಸಲಾದ ಪರಿಸರ ಕೋಶಗಳ ರಚನೆ ಮಾಡಬೇಕು.

ತ್ಯಾಜ್ಯ ನಿರ್ವಹಣೆ

  • ತೇವ/ತೋಟದ ತ್ಯಾಜ್ಯವನ್ನು ಗೊಬ್ಬರ ಮಾಡುವ ಕುರಿತು ನಾಗರಿಕರಿಗೆ ವಾರ್ಡ್ ಮಟ್ಟದ ತರಬೇತಿ; ಕಾಂಪೋಸ್ಟಿಂಗ್‌ಗೆ ಅಗತ್ಯವಿರುವ ವಸ್ತುಗಳಿಗೆ ಸಹಾಯಧನ ಮತ್ತು ಪ್ರೋತ್ಸಾಹಗಳನ್ನು ಒದಗಿಸುವುದು.
  • ತ್ಯಾಜ್ಯ ಕೆಲಸಗಾರರು ವಿಷಕಾರಿ ಅಂಶಗಳಿಗೆ ನೇರವಾಗಿ ಒಡ್ಡಿಕೊಳ್ಳುವುದನ್ನು ತಪ್ಪಿಸಲು ತ್ಯಾಜ್ಯ ನಿರ್ವಹಣೆಗೆ ಯಾಂತ್ರಿಕೃತ ಉಪಕರಣಗಳನ್ನು ಅಳವಡಿಸಿಕೊಳ್ಳುವುದು. ತ್ಯಾಜ್ಯ ನಿರ್ವಹಣೆಯಲ್ಲಿ ಕೆಲಸ ಮಾಡುವ ಎಲ್ಲ ಪೌರಕಾರ್ಮಿಕರಿಗೆ ಕಲ್ಯಾಣ ಪ್ರಯೋಜನಗಳನ್ನು ಒದಗಿಸುವುದು.
  • ಕ್ಷೇತ್ರ ಮಟ್ಟದಲ್ಲಿ ತೇವ ತ್ಯಾಜ್ಯವನ್ನು ಸಂಸ್ಕರಿಸಲು ಜೈವಿಕ-ಸಿಎನ್‌ಜಿ ಸ್ಥಾವರಗಳನ್ನು ಸ್ಥಾಪಿಸುವುದು.
  • ಸುಸಜ್ಜಿತ ಒಣ ತ್ಯಾಜ್ಯ ಸಂಗ್ರಹಣಾ ಕೇಂದ್ರದ ಲಭ್ಯತೆ, ಶೇ.100ರಷ್ಟು ಸಂಗ್ರಹಣೆಯನ್ನು ಖಚಿತಪಡಿಸಿಕೊಳ್ಳಲು ಸಾಕಷ್ಟು ವಾಹನಗಳನ್ನು ಬಳಸಿಕೊಳ್ಳುವುದು.
  • ತೆರೆದ ಮಲವಿಸರ್ಜನೆಯ ನಿದರ್ಶನಗಳನ್ನು ಪರಿಹರಿಸಲು ಮತ್ತು ಕಡಿತಗೊಳಿಸಲು ಪ್ರತಿ ವಾರ್ಡ್‌ನಲ್ಲಿ (ಕನಿಷ್ಠ 2) ಕೈಗೆಟುಕುವ ಮತ್ತು ಸ್ವಚ್ಛವಾದ ಸಾರ್ವಜನಿಕ ಶೌಚಾಲಯಗಳ ನಿರ್ಮಾಣ ಮಾಡುವುದು.

ಹಸಿರು ಸ್ಥಳಗಳು ಮತ್ತು ಮೂಲಸೌಕರ್ಯ

  • ಎಲ್ಲ ವಸತಿ ಮತ್ತು ವಾಣಿಜ್ಯ ಕಟ್ಟಡಗಳಲ್ಲಿ ಹಸಿರು ಬೆಳೆಸಲು ಆದೇಶ ಹೊರಡಿಸುವುದು.
  • ಮುನ್ಸಿಪಲ್ ಪ್ರಾಧಿಕಾರ/ಸ್ಮಾರ್ಟ್ ಸಿಟಿ ಮಿಷನ್/ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಅಭಿವೃದ್ಧಿಪಡಿಸಲಾದ ಸಿಟಿ ಕ್ಲೀನ್ ಏರ್ ಆಕ್ಷನ್ ಪ್ಲಾನ್ ಆಧರಿಸಿ ಬೃಹತ್ ಬೆಂಗಳೂರು ಪ್ರದೇಶಕ್ಕೆ ಕಾಂಕ್ರೀಟ್ ಕ್ಲೀನ್ ಏರ್ ಆಕ್ಷನ್ ಪ್ಲಾನ್ ರಚನೆ ಮಾಡುವುದು.

ಈ ಸುದ್ದಿ ಓದಿದ್ದೀರಾ? ಬೆಂಗಳೂರು | ವರ್ಷಾಂತ್ಯಕ್ಕೆ ರಸ್ತೆಗಿಳಿಯಲಿವೆ 1,900 ಬಿಎಂಟಿಸಿ ಬಸ್‌ಗಳು

ಚಲನಶೀಲತೆ

  • ಎಲ್ಲ ಸಾರಿಗೆ ಸಂಬಂಧಿತ ನಿರ್ಧಾರಗಳನ್ನು ಒಂದೇ ಘಟಕದಿಂದ ತೆಗೆದುಕೊಳ್ಳಲಾಗಿದೆ ಎಂದು ಖಚಿತಪಡಿಸಿಕೊಳ್ಳಲು ಬೆಂಗಳೂರು ಮಹಾನಗರ ಭೂ ಸಾರಿಗೆ ಪ್ರಾಧಿಕಾರದ ಬಲವರ್ಧಿತವಾಗಿ ಅನುಷ್ಠಾನ ಮಾಡುವುದು.
  • ಸಾರ್ವಜನಿಕ ಸಾರಿಗೆಯ ಸಾಮರ್ಥ್ಯವನ್ನು ಹೆಚ್ಚಿಸುವುದು.
  • ಪರಿಸರ, ಗಾಳಿಯ ಗುಣಮಟ್ಟ ಮತ್ತು ಪ್ರತಿಯಾಗಿ ಜನರ ಆರೋಗ್ಯದ ಮೇಲೆ ವೈಯಕ್ತಿಕ ವಾಹನಗಳ ಬಳಕೆಯ ಪರಿಣಾಮಗಳ ಕುರಿತು ಜಾಗೃತಿ ಅಭಿಯಾನ ನಡೆಸುವುದು.
  • ಸಾಂಸ್ಥಿಕ ಕಟ್ಟಡಗಳನ್ನು ಹೊರತುಪಡಿಸಿ ರಸ್ತೆಯಲ್ಲಿ ಪಾರ್ಕಿಂಗ್ ಮಾಡುವುದನ್ನು ತಡೆಯುವುದು. ಎಲ್ಲ ವಾಣಿಜ್ಯ ಪ್ರದೇಶದಲ್ಲಿ ಬಹು ಹಂತದ ಪಾರ್ಕಿಂಗ್ ಅಭಿವೃದ್ಧಿಪಡಿಸುವುದು.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಎಸ್‌ಐಆರ್ ವಿರುದ್ಧದ ಹೋರಾಟದಲ್ಲಿ ದೇಶಕ್ಕೆ ಕರ್ನಾಟಕ ದಿಕ್ಸೂಚಿಯಾಗಬೇಕು: ಪ್ರೊ. ಯೋಗೇಂದ್ರ ಯಾದವ್

ಕರ್ನಾಟಕವು ಹಲವು ವಿಷಯಗಳಲ್ಲಿ ದೇಶಕ್ಕೆ ದಿಕ್ಸೂಚಿಯಾಗಿದೆ. ಎಸ್‌ಐಆರ್‍‌ ವಿರುದ್ಧದ ಹೋರಾಟದಲ್ಲಿಯೂ ದೇಶಕ್ಕೆ...

ಶಾಲಾ ಶಿಕ್ಷಣದಲ್ಲಿ ಕಡ್ಡಾಯವಾಗಿ ‘ಹಿಂದಿ’ ತೆಗೆಯಬೇಕು: ಹಿಂದಿ ವಿರೋಧಿ ಕರ್ನಾಟಕ

ಕರ್ನಾಟಕದಲ್ಲಿ ಶೈಕ್ಷಣಿಕವಾಗಿ ಪ್ರತಿ ವರ್ಷ ನಡೆಯುವ ಎಸ್ ಎಸ್ ಎಲ್ ಸಿ...

ಬೇಲಿಯೇ ಎದ್ದು ಹೊಲ ಮೇಯ್ದಂತೆ ಮಾಡಿದ ಮಾಹಿತಿ ಆಯೋಗ; ಕಾಯ್ದೆಯ ವಾರ್ಷಿಕ ವರದಿ ನೀಡಲು ‘ಗೌಪ್ಯತೆ’ಯ ನೆಪ

ಮಾಹಿತಿ ಹಕ್ಕು ಕಾಯ್ದೆ-2005ರಡಿ ಸಾರ್ವಜನಿಕ ಪ್ರಾಧಿಕಾರಗಳು ಪಾರದರ್ಶಕವಾಗಿ ಕೆಲಸ ಮಾಡುತ್ತಿವೆಯೇ ಎಂಬುದನ್ನು...

ಒಳಮೀಸಲಾತಿ: 56,000 ಹುದ್ದೆಗಳ ನೇಮಕಾತಿಗೆ ಹೊರಡಿಸಿದ ಅಧಿಸೂಚನೆ ರದ್ದತಿಗೆ ಸರ್ಕಾರ ಒಪ್ಪಿಗೆ

ಇತ್ತೀಚೆಗೆ 56,432 ಹುದ್ದೆಗಳನ್ನು ಭರ್ತಿ ಮಾಡಲು ಸರ್ಕಾರ ಹೊರಡಿಸಿದ್ದ ಆದೇಶವನ್ನು ಹಿಂಪಡೆಯಲು...