ದಲಿತ ಸಾಹಿತಿಗಳು ಮಹಿಳಾ ಬರಹಗಾರರಿಗೆ ಬೆಂಬಲ ನೀಡುವುದು ಅಗತ್ಯ: ದು ಸರಸ್ವತಿ

Date:

“ದಲಿತ ಮಹಿಳೆಯರು ಬರೆಯಲು ಬರದವರೇನಲ್ಲ. ಆದರೆ ಅಭಿವ್ಯಕ್ತಿಯ ತೊಡಕುಗಳಿವೆ. ನಾನೂ ಆ ತೊಡಕುಗಳನ್ನು ಅನುಭವಿಸಿದಳು. ದಲಿತ ಸಾಹಿತಿಗಳು ದಲಿತ ಮಹಿಳೆಯರ ಸಾಹಿತ್ಯಕ್ಕೆ ಬೆಂಬಲ ನೀಡಿಲ್ಲ. ಎಂಬುದನ್ನು ನೇರ, ನಿಷ್ಠುರವಾಗಿ ಹೇಳಬಹುದು. ಬೆಂಬಲದ ಅನಿವಾರ್ಯತೆಯಿದೆ” ಎಂದು ಲೇಖಕಿ, ರಂಗಕರ್ಮಿ ಮತ್ತು ದಲಿತ ಚಳುವಳಿಯ ಹೋರಾಟಗಾರ್ತಿ ದು. ಸರಸ್ವತಿ ಹೇಳಿದರು.

ಶನಿವಾರ ಬೆಂಗಳೂರು ನಗರದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಆವರಣದಲ್ಲಿ ನಡೆದ ಸಮಾಜಮುಖಿ ಸಾಹಿತ್ಯ ಸಮ್ಮೇಳನದ ಸೃಜನಶೀಲ(ಸಮಕಾಲೀನ) ಗೋಷ್ಠಿಯಲ್ಲಿ ‘ದಮನಿತರ ಸಾಹಿತ್ಯ- ಮುಖ್ಯಧಾರೆಗೆ ವಿಲೀನವಾಗಿದೆಯೇ..?’ ಎಂಬ ವಿಚಾರದ ಬಗ್ಗೆ ಮಾತನಾಡಿದ ಅವರು, “ದಲಿತ ಸಾಹಿತ್ಯವನ್ನು ಕನ್ನಡ ಸಾಹಿತ್ಯ ಒಪ್ಪಿಕೊಂಡಿದೆ. ಆದರೆ ದಲಿತ ಸಾಹಿತ್ಯದಲ್ಲಿ ಮಹಿಳಾ ಸಾಹಿತಿಗಳನ್ನು ಹುಡುಕುವುದು ಕಷ್ಟ” ಎಂದರು.

ಇದನ್ನು ಓದಿದ್ದೀರಾ? ಕೇಂದ್ರ ಸರ್ಕಾರ ಕೋಟ್ಯಂತರ ಜನ ಮಾತನಾಡುವ ಭಾಷೆಗಳನ್ನು ತುಳಿದು ಸಂಸ್ಕೃತವನ್ನು ಪೋಷಿಸುತ್ತಿದೆ: ಹಂಪನಾ

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

“ಅಷ್ಟಕ್ಕೂ ದಲಿತ ಮಹಿಳೆಯರಿಗೆ ಬರವಣಿಗೆ ಬರುವುದಿಲ್ಲ ಎಂದಲ್ಲ. ಬರೆಯುವ ಆಸೆಯಿದೆ, ಅದೆಷ್ಟೋ ಮಹಿಳೆಯರು ಬರೆದು ಅದನ್ನು ತಮ್ಮಲ್ಲೇ ಬಚ್ಚಿಟ್ಟುಕೊಳ್ಳುತ್ತಿದ್ದಾರೆ, ಪ್ರಕಟಿಸುತ್ತಿಲ್ಲ. ನಮ್ಮ ಬದುಕು ಕನ್ನಡ ವರ್ಣಮಾಲೆಗೆ ಒಗ್ಗದು ಎಂಬ ಭಾವನೆ ದಲಿತ ಹೆಣ್ಣು ಮಕ್ಕಳದ್ದು. ತಮ್ಮ ಸಾಮರ್ಥ್ಯವನ್ನು ತಾವೇ ನಂಬದ ಸ್ಥಿತಿಯಲ್ಲಿ ದಲಿತ ಹೆಣ್ಣು ಮಕ್ಕಳು ಇದ್ದಾರೆ. ಆದರೆ ಹೆಣ್ಣು ಮಕ್ಕಳು ಬರೆದಾಗ ತಳಪಾಯ ಅಲುಗಾಡುತ್ತದೆ, ಯಜಮಾನ್ಯದ ತಳಪಾಯ ಅಲುಗಾಡಬೇಕು” ಎಂದು ಅಭಿಪ್ರಾಯಿಸಿದರು.

ಈ ಗೋಷ್ಠಿಯಲ್ಲೇ ಧಾರ್ಮಿಕ ಅಲ್ಪಸಂಖ್ಯಾತ ಸಾಹಿತಿಗಳ ಬಗ್ಗೆ ಮಾತನಾಡಿದ ಲೇಖಕಿ, ಕವಯತ್ರಿ ಸಬಿಹಾ ಭೂಮಿಗೌಡ, “ಕ್ರೈಸ್ತ ಸಮುದಾಯ ಸಾಹಿತ್ಯಕ್ಕೆ ನೀಡಿದ ಕೊಡುಗೆಗಳನ್ನು ನಾವು ನೋಡುವಾಗ ಕ್ರೈಸ್ತ ಮಿಷನರಿಗಳತ್ತ ಗಮನಹರಿಯುತ್ತದೆ. ಕ್ರೈಸ್ತ ಸಾಹಿತಿಗಳು ಕನ್ನಡ ಮತ್ತು ಕೊಂಕಣಿ ಭಾಷಾ ಸಾಹಿತ್ಯದ ನಡುವೆ ಸೇತುವೆಯಾಗಿ ಕೆಲಸ ಮಾಡಿದವರು” ಎಂದು ಶ್ಲಾಘಿಷಿಸಿದರು.

“ಅದೆಷ್ಟೋ ಕ್ರೈಸ್ತರು ತಮ್ಮ ಹೆಸರಿನಲ್ಲಿ ಬರೆಯುವುದಿಲ್ಲ. ಕಾವ್ಯನಾಮ ಬದಲಾಯಿಸುತ್ತಾರೆ. ಈ ಬಗ್ಗೆ ನಾನು ಸಾಹಿತಿಗಳ ಬಳಿ ಪ್ರಶ್ನಿಸಿದಾಗ ‘ನಮ್ಮ ಹೆಸರಲ್ಲಿದ್ದರೆ ಪತ್ರಿಕೆಗಳು ಲೇಖನ ಪ್ರಕಟಿಸುವುದಿಲ್ಲ’ ಎಂದು ಹೇಳಿದ್ದಾರೆ. ಹೆಣ್ಣು ಮಕ್ಕಳ ಸ್ಥಿತಿಯೂ ಹೀಗೆಯೇ ಆಗಿದೆ. ಈ ವೇಳೆ ಕಾವ್ಯ ನಾಮದ ಅಗತ್ಯ ಯಾಕೆ ಬಂತು ಎಂಬ ಪ್ರಶ್ನೆಯನ್ನು ನಮಗೆ ನಾವು ಹಾಕಿಕೊಳ್ಳಬೇಕಾಗುತ್ತದೆ” ಎಂದು ಹೇಳಿದರು.

“ದಮನಿತರ ಸಾಹಿತ್ಯ ಎಂದು ಹೇಳುವಾಗ ನಾವು ಯಾರ ಸಾಹಿತ್ಯವನ್ನು ದಮನಿತರ ಸಾಹಿತ್ಯ ಎಂದು ಪರಿಗಣಿಸುವುದು ಎಂಬ ಪ್ರಶ್ನೆ ಹುಟ್ಟುತ್ತದೆ. ಕುವೆಂಪು ಅವರ ಸಾಹಿತ್ಯವನ್ನೇ? ಅಥವಾ ಮಾದರ ಚೆನ್ನಯ್ಯರ ಸಾಹಿತ್ಯವನ್ನೇ? ಇಲ್ಲಿ ಜಾತಿ ಬರದು. ಸಾಹಿತ್ಯ ಮುಖ್ಯವಾಗುತ್ತದೆ” ಎಂದರು. “ಜಾಗತಿಕ ಮಟ್ಟದಲ್ಲಿ ದಮನಿತರ ಸಾಹಿತ್ಯವಿದೆ. ಇಲ್ಲಿ ದಮನಿತರ ಸಾಹಿತ್ಯ ಮುಖ್ಯಧಾರೆಗೆ ವಿಲೀನವಾಗುವ ಪ್ರಶ್ನೆಯಿಲ್ಲ. ದಮನಿತರ ಸಾಹಿತ್ಯವೇ ಮುಖ್ಯಧಾರೆ” ಎಂದು ಕವಯತ್ರಿ, ವಿಮರ್ಶಕಿ ಎನ್‌ ಕೆ ಲೋಲಾಕ್ಷಿ ಅಭಿಪ್ರಾಯಿಸಿದರು.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ಸಮರ್ಥ್‌ ನಾಮಪತ್ರ ಸಲ್ಲಿಕೆ; ದೂರ ಉಳಿದ ರಾಜ್ಯ ಮುಸ್ಲಿಂ ಮುಖಂಡರು

ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ದಾವಣಗೆರೆ ಮುಸ್ಲಿಂ ಕಾಂಗ್ರೆಸ್‌ ಟಿಕೆಟ್...

ರಾಜ್ಯದಲ್ಲಿ ʼಎಸ್‌ಐಆರ್ʼ ಪ್ರಕ್ರಿಯೆಯನ್ನು ತರಾತುರಿಯಲ್ಲಿ ನಡೆಸಬೇಡಿ- ಪ್ರಗತಿಪರ ಸಂಘಟನೆ, ಜಾತ್ಯತೀತ ಪಕ್ಷಗಳ ಆಗ್ರಹ

ಕೇಂದ್ರ ಚುನಾವಣಾ ಆಯೋಗ ನಡೆಸುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಎಂಬುದು...