“ಕನ್ನಡ ಸಂಸ್ಕೃತಿ ಹಾಳಾಗುತ್ತಿದೆ. ಅದನ್ನು ಸರಿಪಡಿಸುವ ದಾರಿಗಳು ಯಾವುವು ಎನ್ನುವುದು ಸಮಕಾಲೀನ ಪ್ರಶ್ನೆಯಾಗಿದೆ. ಇದನ್ನು ಬಹುಸಂಸ್ಕೃತಿಯ ನೆಲೆಯಲ್ಲಿ ಚರ್ಚಿಸುವುದು, ವಿಶ್ಲೇಷಿಸುವುದು ನಿಜವಾದ ಸಾಹಿತ್ಯವಾಗಿದೆ. ತಮಿಳುನಾಡು, ಕೇರಳ ಮಹಾರಾಷ್ಟ್ರಗಳಿಂದ ಕನ್ನಡಿಗರು ಕನ್ನಡ ಭಾಷೆ ಸಾಹಿತ್ಯವನ್ನು ಹೇಗೆ ಸಂರಕ್ಷಿಸಬೇಕೆಂಬುದನ್ನು ಕಲಿಯಬೇಕಿದೆ” ಎಂದರು.
ಕನ್ನಡ ವಿಶ್ವವಿದ್ಯಾಲಯದ ಕನ್ನಡ ಸಾಹಿತ್ಯ ಅಧ್ಯಯನ ವಿಭಾಗ, ಅಭಿನವ ಮತ್ತು ಸೈಂಟ್ ಜೋಸೆಫ್ಸ್ ವಿಶ್ವವಿದ್ಯಾನಿಲಯದ ಕನ್ನಡ ಭಾಷೆ ಮತ್ತು ಸಂಸ್ಕೃತಿ ಅಧ್ಯಯನ ಕೇಂದ್ರ ಜತೆಗೂಡಿ ಆಯೋಜಿಸಿದ್ದ ‘ಆನು ಒಲಿದಂತೆ ಹಾಡುವೆ’ ಸರಣಿಯ ಕನ್ನಡ ಮನಸ್ಸಿನೊಂದಿಗೆ ಒಂದು ದಿನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಇದನ್ನು ಓದಿದ್ದೀರಾ? ಕಾಶ್ಮೀರದಿಂದ 178 ಕನ್ನಡಿಗರು ಇಂದು ರಾಜ್ಯಕ್ಕೆ ವಾಪಸ್
“ಸಾಹಿತ್ಯ ಶ್ರೀಸಾಮಾನ್ಯನದು. ಆದರೆ ಮುಖ್ಯವಾಹಿನಿಯ ಸಾಹಿತ್ಯ ಚರಿತ್ರೆಯಲ್ಲಿ ಶ್ರೀಸಾಮಾನ್ಯನಿಗೆ ಸ್ಥಾನವಿಲ್ಲ ಮಹಿಳೆಗೆ ಪ್ರಾತಿನಿಧ್ಯವಿಲ್ಲ, ಮೂಕ ಸಮುದಾಯಗಳಿಲ್ಲ, ಶೋಷಿತ ಧ್ವನಿಗಳಿಲ್ಲ. ಮುಖ್ಯವಾಹಿನಿ ಸಾಹಿತ್ಯದೊಳಗೆ ತರುವ ಅಗತ್ಯವಿದೆ” ಎಂದು ಪ್ರೊ. ಕೆ.ಜಿ. ನಾಗರಾಜಪ್ಪ ಹೇಳಿದರು.
ಇನ್ನು ಕಾರ್ಯಕ್ರಮಕ್ಕೆ ಚಾಲನೆ ನೀಡುತ್ತಾ ಮಾತನಾಡಿದ ಕನ್ನಡ ವಿಶ್ವವಿದ್ಯಾಲಯ ಹಂಪಿಯ ಕುಲಪತಿ ಡಾ. ಡಿ.ವಿ. ಪರಮಶಿವಮೂರ್ತಿ, “ಕೆ.ಜಿ.ಎನ್ರಂತಹ ವಿದ್ವಾಂಸರು ಹೊಸ ತಲೆಮಾರಿಗೆ ಒಂದು ಮಾದರಿ. ಅವರ ಸಂಸ್ಕೃತಿ ಚಿಂತನೆ ಮರುಚಿಂತನೆಯ ರೂಪದಲ್ಲಿ ವ್ಯಕ್ತಗೊಂಡಿದೆ” ಎಂದರು.
“ಕೆ.ಜಿ.ಎನ್. ಗುಪ್ತ ಸಮಾಜ, ಗುಪ್ತಭಕ್ತಿಯ ಧಾರೆಗಳನ್ನು ಕನ್ನಡಕ್ಕೆ ಪರಿಚಯಿಸಿದವರು. ನಿಜವಾದ ಸಾಹಿತ್ಯ ಇರುವುದು ತಂತ್ರ ಮತ್ತು ಯೋಗದಲ್ಲಿ. ಕನ್ನಡ ಸಾಹಿತ್ಯ ಅವುಗಳನ್ನು ಇದುವರೆಗೂ ಅಧ್ಯಯನ ಮಾಡಿಲ್ಲ. ಮಾಡುವ ಮಾದರಿಗಳನ್ನು ಕೆ.ಜಿ.ಎನ್. ನಮಗೆ ಕೊಟ್ಟಿದ್ದಾರೆ” ಎಂದು ಕನ್ನಡ ವಿಶ್ವವಿದ್ಯಾಲಯದ ಕನ್ನಡ ಸಾಹಿತ್ಯ ಅಧ್ಯಯನ ವಿಭಾಗದ ಮುಖ್ಯಸ್ಥರಾದ ಡಾ. ವೆಂಕಟಗಿರಿ ದಳವಾಯಿ ನುಡಿದರು.
ಇದನ್ನು ಓದಿದ್ದೀರಾ? ಎಲ್ಲಾ ಉದ್ಯೋಗಗಳು ಪರರಾಜ್ಯದವರ ಪಾಲಾದರೆ ಕನ್ನಡಿಗರು ಏನು ಮಾಡಬೇಕು? Kannadiga | Jobs
“ಕನ್ನಡ ಸಂಸ್ಕೃತಿಯನ್ನು ಬೆಳೆಸುವಲ್ಲಿ ನಮ್ಮ ವಿಶ್ವವಿದ್ಯಾನಿಲಯವು ಅನೇಕ ಕನಸುಗಳನ್ನು ಕಂಡಿದೆ. ಕನ್ನಡ ಸಾಹಿತ್ಯವನ್ನು ಬೆಳೆಸುವಲ್ಲಿ ನಮ್ಮ ವಿಭಾಗವು ಅನೇಕ ಯೋಜನೆಗಳನ್ನು ಹಾಕಿಕೊಂಡಿದೆ. ಅದಕ್ಕಾಗಿ ನಾವು ಕನ್ನಡ ಭಾಷೆ ಮತ್ತು ಸಂಸ್ಕೃತಿ ಅಧ್ಯಯನ ಕೇಂದ್ರವನ್ನು ಸ್ಥಾಪಿಸಿದ್ದೇವೆ” ಎಂದು ಸೈಂಟ್ ಜೋಸೆಫ್ಸ್ ವಿಶ್ವವಿದ್ಯಾನಿಲಯದ ಕುಲಪತಿಗಳಾದ ರೆವರೆಂಡ್ ಡಾ. ವಿಕ್ಟರ್ ಲೋಬೊ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಆನಂದ ಪ್ರಾರ್ಥನಾ ಗೀತೆ ಹಾಡಿದರು. ಸೈಂಟ್ ಜೋಸೆಫ್ಸ್ ವಿಶ್ವವಿದ್ಯಾಲಯದ ಕನ್ನಡ ಭಾಷೆ ಮತ್ತು ಸಂಸ್ಕೃತಿ ಅಧ್ಯಯನ ಕೇಂದ್ರದ ಸಂಚಾಲಕರಾದ ಡಾ. ಕುಮಾರಸ್ವಾಮಿ ಬೆಜ್ಜೆಹಳ್ಳಿ ವಂದಿಸಿ, ಅಕ್ಷತಾ ಟಿ. ನಿರೂಸಿದರು. ಹಿರಿಯ ವಿದ್ವಾಂಸರಾದ ಸಿ ವೀರಣ್ಣ, ಪತ್ರಕರ್ತೆ ಆರ್ ಪೂರ್ಣಿಮಾ ಇತಿಹಾಸ ಅಕಾಡೆಮಿ ಕಾರ್ಯದರ್ಶಿ ಕೆ ಎಲ್ ರಾಜಶೇಖರ ಲೇಖಕಿ ಪಿ ಚಂದ್ರಿಕ ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಸುಮಿತ್ರಾ ಮುಂತಾದವರು ಪಾಲ್ಗೊಂಡರು.





