ಮೌಲಾನ ಡಾ ಇಮ್ರಾನ್ ಮಸೂದ್ ಭೇಟಿ ಮಾಡಿದ ಕರವೇ; ಮಸೀದಿಗಳಲ್ಲಿ ಕನ್ನಡ ಬಳಕೆಗೆ ಮನವಿ

Date:

ಬೆಂಗಳೂರಿನ ಹೃದಯ ಭಾಗದಲ್ಲಿರುವ ಜಾಮಿಯಾ ಮಸೀದಿಗೆ ಭೇಟಿ ನೀಡಿದ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರಾದ ನಾರಾಯಣಗೌಡ ಮಸೀದಿಗಳಲ್ಲಿ ಕನ್ನಡಪರ ವಾತಾವರಣ ನಿರ್ಮಿಸುವ ಬಗ್ಗೆ ಮೌಲಾನ ಡಾ.ಇಮ್ರಾನ್ ಮಸೂದ್ ಅವರ ಜೊತಗೆ ಸುದೀರ್ಘ ಸಮಾಲೋಚನೆ ನಡೆಸಿದರು.

ಮಸೀದಿಗಳ ಪ್ರವಚನಗಳಲ್ಲಿ ಕನ್ನಡದ ಬಳಕೆ ಆಗಬೇಕು. ಈ ಬಳಕೆಯ ಮೂಲಕ ಭಾಷೆ ಅಷ್ಟೇ ಅಲ್ಲ ಬದುಕು ಬೆಳಗುತ್ತದೆ. ಹಾಗೆ ಧರ್ಮದ ಸಂದೇಶಗಳು ಹೆಚ್ಚು ಅರ್ಥ ಪಡೆಯುತ್ತವೆ. ಧರ್ಮವನ್ನು, ಉಪದೇಶಗಳನ್ನು, ಪ್ರವಚನಗಳನ್ನು ಹೆಚ್ಚು ಜನ ಅರ್ಥ ಮಾಡಿಕೊಳ್ಳಲು ಅನುಕೂಲವಾಗುತ್ತದೆ. ಮುಸ್ಲಿಂ ಸಮುದಾಯ ಮುಖ್ಯ ವಾಹಿನಿಗೆ ಬರುವ ಅಗತ್ಯವಿದೆ ಎಂದು ಟಿ.ಎ.ನಾರಾಯಣಗೌಡರು ಮನವಿ ಮಾಡಿದರು. ಇಲ್ಲಿ ಒತ್ತಾಯ, ಆಗ್ರಹದ ಪ್ರಶ್ನೆ ಇಲ್ಲ. ಹಂತ ಹಂತವಾಗಿ ನಿಧಾನವಾಗಿ ಕನ್ನಡ ಬಳಕೆ ಆರಂಭವಾಗಲಿ ಎಂದು ಹೇಳಿದರು.

ಅತ್ಯಂತ ಸೌಹಾರ್ದಯುತ, ಆಶಾದಾಯಕ ವಾತಾವರಣದಲ್ಲಿ ನಡೆದ ಸಭೆಯಲ್ಲಿ ಗೌಡರು ಕನ್ನಡ ಸುಪ್ರಸಿದ್ದ ಬರಹಗಾರರಾದ ಡಾ.ಎಸ್ಕೆ ಕರೀಂ ಖಾನ್, ನಿಸಾರ್ ಅಹಮದ್, ಏ ಜಾಸುದ್ದೀನ್, ರಮಜಾನ್ ದರ್ಗಾ, ಕನ್ನಡದ ಕಟ್ಟಾಳು ರೆಹಮಾನ್ ಖಾನ್, ಕರ್ನಾಟಕ ಏಕೀಕರಣದ ಹುತಾತ್ಮ ರಂಜಾನ್ ಖಾನ್ ಎಲ್ಲರನ್ನು ಸ್ಮರಿಸಿ, ಈ ನಾಡು ಕಟ್ಟುವಲ್ಲಿ, ಭಾಷೆ ಬೆಳಗುವಲ್ಲಿ ಅಲ್ಪಸಂಖ್ಯಾತರ ಕೊಡುಗೆ ದೊಡ್ದದು ಎಂದು ಬಣ್ಣಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ನಾರಾಯಣಗೌಡರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಧರ್ಮಗುರು ಮೌಲಾನಾ ಇಮ್ರಾನ್ ಮಸೂದ್, ಎಲ್ಲ ಹಂತದಲ್ಲಿ ಕನ್ನಡ ಜಾರಿಗೆ ತಾವೂ ಬದ್ಧ ಎಂದು ಘೋಷಿಸಿದರು. ಸರಕಾರ ಆನ್ ಲೈನ್ ಕನ್ನಡ ಕಲಿಕೆ ಜಾರಿಗೆ ತರಲಿ. ಆಫ್ ಲೈನ್ ಕನ್ನಡ ಕಲಿಕೆಯನ್ನೂ ತರಲಿ ಎಂದು ವಿನಂತಿಸಿದರು. ಆಫ್ ಲೈನ್ ಕನ್ನಡ ಕಲಿಕೆಗೂ ತಾವು ಸಿದ್ಧರಿದ್ದು, ಎಲ್ಲ ಮಸೀದಿ, ಮದ್ರಸಾಗಳಲ್ಲಿ ಕನ್ನಡ ಕಲಿಸುವ ನಿಟ್ಟಿನಲ್ಲಿ ತಾವೇ ಮುಂದೆ ನಿಂತು ವ್ಯವಸ್ಥೆ ಕಲ್ಪಿಸಿಕೊಡುವುದಾಗಿ ಮೌಲಾನ ಘೋಷಿಸಿದರು.

ಅಖಿಲ ಕರ್ನಾಟಕ ಮಹಮದೀಯರ ಕನ್ನಡ ವೇದಿಕೆ ರಾಜ್ಯಾಧ್ಯಕ್ಷರಾದ ಸಮೀವುಲ್ಲಾ ಖಾನ್ ಈ ಸಂದರ್ಭದಲ್ಲಿ ಕನ್ನಡದ ಸೇನಾನಿ ಹುತಾತ್ಮ ರಂಜಾನ್ ಸಾಬ್ ಹೆಸರಲ್ಲಿ ಸರಕಾರವೇ ಪ್ರಶಸ್ತಿ ಘೋಷಿಸಬೇಕು. ನಾಡಿಗಾಗಿ ದುಡಿಯುವ ಹೋರಾಟಗಾರರನ್ನು, ಬರಹಗಾರರನ್ನು ಗುರುತಿಸಿ ಈ ಪ್ರಶಸ್ತಿ ಕೊಡಬೇಕು. ಇದನ್ನು ದೊಡ್ಡ ಪ್ರಶಸ್ತಿಯಾಗಿ ಪ್ರಕಟಿಸಿ, ನೆಲಜಲಕ್ಕೆ ಕೊಡುಗೆ ನೀಡಿದ ಅಲ್ಪಸಂಖ್ಯಾತರನ್ನು ಗೌರವಿಸಬೇಕು ಎಂದು ಮನವಿ ಮಾಡಿದರು.

ಮೌಲಾನಾ ಮತ್ತು ಸಮೀವುಲ್ಲಾ ಖಾನ್ ಅವರ ಮನವಿಯನ್ನು ಸರಕಾರದ ಮಟ್ಟದಲ್ಲಿ ಚರ್ಚಿಸಿ, ಇದನ್ನು ಜಾರಿಗೆ ತರುವ ನಿಟ್ಟಿನಲ್ಲಿ ಒತ್ತಡ ಹೇರುವುದಾಗಿ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ನಾರಾಯಣಗೌಡರು ಭರವಸೆ ಕೊಟ್ಟರು.

ಮಸೀದಿಗಳ ಪ್ರವಚನಗಳಲ್ಲಿ, ಮದ್ರಸಾಗಳಲ್ಲಿ, ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳಲ್ಲಿ ಕನ್ನಡ ಪರ ವಾತಾವರಣವನ್ನು ನಿರ್ಮಿಸುವ ನಿಟ್ಟಿನಲ್ಲಿ ವ್ಯಕ್ತಿಗತವಾಗಿ ಖುದ್ದು ಆಸಕ್ತಿಯನ್ನು ಧರ್ಮಗುರುಗಳು ಪ್ರಕಟಿಸಿದ್ದು ಇಂದಿನ ಮತ್ತೊಂದು ವಿಶೇಷ. ಹಿರಿಯ ಪತ್ರಕರ್ತರಾದ ಬೆಳಗೂರು ಸಮಿಯುಲ್ಲಾ ಉಪಸ್ಥಿತರಿದ್ದು ಕರ್ನಾಟಕದ ಸೌಹಾರ್ದ ಪರಂಪರೆಯನ್ನು ನೆನಪಿಸಿದರು.

ಕರ್ನಾಟಕ ರಕ್ಷಣಾ ವೇದಿಕೆ ಬೆಂಗಳೂರು ನಗರ ಘಟಕದ ಅಧ್ಯಕ್ಷ ಟಿ.ಎ.ಧರ್ಮರಾಜ್ ಗೌಡ, ರಾಜ್ಯ ಸಂಘಟನಾ ಕಾರ್ಯದರ್ಶಿ ಹಯಾತ್ ಕಾರ್ಗಲ್, ರಾಜ್ಯ ಪ್ರಧಾನ ಸಂಚಾಲಕ ಮೋಹನ್ ಗೌಡ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ್ ಸೇರಿದಂತೆ ಪ್ರಮುಖ ನಾಯಕರು ಉಪಸ್ಥಿತರಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ಸಮರ್ಥ್‌ ನಾಮಪತ್ರ ಸಲ್ಲಿಕೆ; ದೂರ ಉಳಿದ ರಾಜ್ಯ ಮುಸ್ಲಿಂ ಮುಖಂಡರು

ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ದಾವಣಗೆರೆ ಮುಸ್ಲಿಂ ಕಾಂಗ್ರೆಸ್‌ ಟಿಕೆಟ್...

ರಾಜ್ಯದಲ್ಲಿ ʼಎಸ್‌ಐಆರ್ʼ ಪ್ರಕ್ರಿಯೆಯನ್ನು ತರಾತುರಿಯಲ್ಲಿ ನಡೆಸಬೇಡಿ- ಪ್ರಗತಿಪರ ಸಂಘಟನೆ, ಜಾತ್ಯತೀತ ಪಕ್ಷಗಳ ಆಗ್ರಹ

ಕೇಂದ್ರ ಚುನಾವಣಾ ಆಯೋಗ ನಡೆಸುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಎಂಬುದು...