ಕಳೆದ ಕೆಲ ವರ್ಷಗಳಿಂದಲೂ ಅಲೆಮಾರಿ ಕುರಿಗಾಹಿಗಳು ಮಾಡಿಕೊಂಡು ಬಂದಿರುವ ಹೋರಾಟದ ಫಲವಾಗಿ ರಾಜ್ಯ ಸರ್ಕಾರ ʼಕರ್ನಾಟಕ ಸಾಂಪ್ರದಾಯಿಕ ಅಲೆಮಾರಿ ಕುರಿಗಾಹಿಗಳ (ಕ್ಷೇಮಾಭಿವೃದ್ಧಿ ಕ್ರಮಗಳು ಮತ್ತು ದೌರ್ಜನ್ಯಗಳ ವಿರುದ್ಧ ರಕ್ಷಣೆ) ಅಧಿನಿಯಮ 2025 ಅನ್ನು ರೂಪಿಸಲಾಯಿತು. ಅದರ ಫಲವಾಗಿ ಮಂಗಳವಾರ ಕುರಿಗಾಹಿಗಳು ಮುಖ್ಯಮಂತ್ರಿ ನಿವಾಸವಾದ ಕುಮಾರಕೃಪದಲ್ಲಿ ಸಿದ್ದರಾಮಯ್ಯರವರನ್ನು ಭೇಟಿ ಮಾಡಿ ಮನವಿ ಸಲ್ಲಿಸುವ ಸಲುವಾಗಿ ಬಂದಿದ್ದರು.
ಮನವಿಯ ವಿವರ: ಕರ್ನಾಟಕ ಸಾಂಪ್ರದಾಯಿಕ ಅಲೆಮಾರಿ ಕುರಿಗಾಹಿಗಳ ಅಧಿನಿಯಮ 2025ರ ಸಮಗ್ರ ಅನುಷ್ಠಾನಕ್ಕಾಗಿ ಅಧಿನಿಯಮದಲ್ಲಿ ಉಲ್ಲೇಖಿಸಿದಂತೆ ಕರ್ನಾಟಕ ಸಾಂಪ್ರದಾಯಿಕ ಅಲೆಮಾರಿ ಕ್ಷೇಮಾಭಿವೃದ್ಧಿ ನಿಧಿ ಮತ್ತು ಮಂಡಳಿ ಹಾಗೂ 2026-27ನೇ ಸಾಲಿನ ಆಯವ್ಯಯದಲ್ಲಿ ಕುರಿಗಾಯಿಗಳ ಶ್ರೇಯೋಭಿವೃದ್ಧಿಗೆ ಹೆಚ್ಚಿನ ಅನುದಾನ ಒದಗಿಸುವ ಕುರಿತು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ರಾಜ್ಯದಲ್ಲಿರುವ ಅನೇಕ ಶೋಷಿತ ಸಮುದಾಯಗಳು ತಲೆಮಾರುಗಳಿಂದ ಸಾಂಪ್ರದಾಯಿಕವಾಗಿ ಕುರಿಗಾಹಿ ವೃತ್ತಿಯನ್ನು ಅವಲಂಬಿಸಿಕೊಂಡು ಬದುಕು ನಡೆಸುತ್ತಿವೆ. ಬದಲಾದ ಕಾಲಮಾನದಲ್ಲಿ ಕುರಿಗಾಹಿಗಳ ಮೇಲೆ ದೌರ್ಜನ್ಯ, ಕೊಲೆ, ಅತ್ಯಾಚಾರ ಮತ್ತು ಕಳ್ಳತನ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕುರಿಗಾರಿಗಳ ರಕ್ಷಣೆಗೆ ವಿಶೇಷ ಕಾನೂನು ಜಾರಿಗೆ ತರಬೇಕೆಂಬ ಕುರಿಗಾಯಗಳ ದೀರ್ಘಕಾಲದ ಹೋರಾಟಕ್ಕೆ ಸ್ಪಂದಿಸಿ ಗಳ ಅಧಿನಿಯಮ 2025 ಅನ್ನು ಜಾರಿಗೊಳಿಸುವುದು ಪ್ರಸಂಶನೀಯ.
ಅಲೆಮಾರಿಗಳ ಮೇಲೆ ನಡೆಯುವ ದೌರ್ಜನ್ಯ ಪ್ರಕರಣಗಳ ದೂರುಗಳ ಸ್ವೀಕಾರ ಮತ್ತು ಕಾನೂನಿನ ಪರಿಹಾರತ್ಮಕ ಕ್ರಮಗಳನ್ನು ಕೈಗೊಳ್ಳುವ ಅಧಿಕಾರಿಗಳಿಗೆ ಸೂಚನೆ ಹೋರಡಿಸಬೇಕು ಮತ್ತು ಕುರಿಗಾಹಿಗಳಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸಿ ಕೊಡಬೇಕೆಂದು ಮುಖ್ಯಮಂತ್ರಿಗಳಿಗೆ ವರದಿ ಸಲ್ಲಿಸಲಾಯಿತು.
ಇದನ್ನೂ ಓದಿ: ಬೆಂಗಳೂರು | ಸಾರಿಗೆ ನೌಕರರ ಮುಷ್ಕರ: ಬೇಡಿಕೆಗಳು ಈಡೇರದಿದ್ದರೆ ಹೋರಾಟ ಮುನ್ನಡೆಸುವ ಎಚ್ಚರಿಕೆ
ವರದಿ ಸಲ್ಲಿಸುವ ಸಮಯದಲ್ಲಿ, ಈ ಹೋರಾಟದ ಮುಂಚೂಣಿ ನಾಯಕರಾದ ಮುಧೋಳ ಯಲ್ಲಪ್ಪ ಹೆಗಡೆ, ಕುರಿಗಾಯಿಗಳಾದ ಬಾಗಲಕೋಟೆ ಮಂಜಪ್ಪ ಗುರುರಪ್ಪ ಸೂರಣ್ಣರ್, ಮಾಳಪ್ಪ ತಿಪ್ಪಣ್ಣ ದಾವಣೆ, ಬೆಳಗಾವಿ ಲಕ್ಷ್ಮಣ ಫಕೀರಪ್ಪ ಕಟ್ಟಿಕಾರ, ಹಾವೇರಿ ಜಿಲ್ಲೆಯ ಮಂಜುನಾಥ ಅಪ್ಪಣ್ಣ ಹಿರುವೆ ದ್ರಾವಿಡ ಕನ್ನಡಿಗರು ಚಳುವಳಿಯ ಮಂಡ್ಯ ಅಭಿ ಒಕ್ಕಲಿಗ, ಕಾನೂನು ವಿದ್ಯಾರ್ಥಿ ಸಚಿನ್ ಮುಂತಾದವರು ಉಪಸ್ಥಿತರಿದ್ದರು.
ವರದಿ: ದರ್ಶನ್ ಕುರುಬಾಸ್
ಸ್ನಾತಕೋತ್ತರ ಪತ್ರಿಕೋದ್ಯಮ ವಿದ್ಯಾರ್ಥಿ





