ಕನ್ನಡದಲ್ಲಿ ಬರೆದ ಕಾರಣಕ್ಕೆ ಕುವೆಂಪುಗೆ ನೋಬೆಲ್ ಪ್ರಶಸ್ತಿ ಬಂದಿಲ್ಲ: ಎಲ್ ಹನುಮಂತಯ್ಯ

Date:

ಕುವೆಂಪು ಈ ದೇಶದ ಮಹಾನ್ ಜ್ಞಾನಿ. ಕುವೆಂಪು ಅವರ ಒಂದೊಂದು ಸಾಲುಗಳು ಮಹಾಕಾವ್ಯಗಳಾಗಿದ್ದವು. ಕುವೆಂಪು ಅವರು ಕನ್ನಡದಲ್ಲಿ ಬರೆದ ಕಾರಣಕ್ಕಾಗಿ ಅವರಿಗೆ ನೋಬೆಲ್ ಪ್ರಶಸ್ತಿ ಬಂದಿಲ್ಲ. ನೋಬೆಲ್ ಪ್ರಶಸ್ತಿ ಪಡೆಯುವ ಎಲ್ಲ ಅರ್ಹತೆ ಕುವೆಂಪು ಅವರಲ್ಲಿತ್ತು ಎಂದು ರಾಜ್ಯಸಭಾ ಸದಸ್ಯ, ಕವಿ ಡಾ. ಎಲ್ ಹನುಮಂತಯ್ಯ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಕನ್ನಡ ಜಾಣಜಾಣೆಯರ ವೇದಿಕೆ ಆಯೋಜಿಸಿದ್ದ ‘ವಿಶ್ವಮಾನವೋತ್ಸವ – ಕಾಂತ್ರಿ ಕವಿಗೆ 120’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. “ಕುವೆಂಪು ಅವರು ಯಾವ ವಿಚಾರಗಳನ್ನು ಎದುರುಗೊಂಡರು ಎಂಬುದನ್ನು ನಾವು ನೋಡಬೇಕು. ಲೇಖಕ ತಾನು ಬರೆಯುವಾಗ ಯಾವ ವಿಷಯಗಳು, ಸಮಸ್ಯೆಗಳನ್ನ ಎದುರುಗೊಳ್ಳುತ್ತಾರೆ ಎಂಬುದು ಮುಖ್ಯ. ಆ ರೀತಿಯಲ್ಲಿ ವಿಭಿನ್ನವಾಗಿ ಹಲವು ವಿಚಾರಗಳನ್ನು ಎದುರುಗೊಂಡವರು ಕುವೆಂಪು” ಎಂದು ಹೇಳಿದರು.

“ಕುವೆಂಪು ಅವರ ಭಾಷಣ ಕೇಳಲು ನೂರಾರು ಕಿ.ಮೀ.ಗಳಿಂದ ಜನರು ಬರುತ್ತಿದ್ದರು. ಕುವೆಂಪು ಅವರಿಗೆ ನಮ್ಮ ಮುಂದೆ ಕುಳಿತಿರುವ ಜನರಿಗೆ ಯಾವ ವಿಚಾರಗಳನ್ನು ತಿಳಿಸಬೇಕೆಂಬುದು ಗೊತ್ತಿತ್ತು. ನೂರು ದೇವತೆಯ ನೂಕಾಚೆ ದೂರ, ಭಾರತಾಂಬೆಯ ಪೂಜಿಸುವ ಬಾರ’ ಎಂದಿದ್ದ ಕುವೆಂಪು, ದೇಶಕಟ್ಟುವುದೇ ನಿಜವಾದ ಪೂಜೆ ಎಂದಿದ್ದರು. ನೂರಾರು ದೇವರುಗಳನ್ನು ನಿರಾಕರಣೆ ಮಾಡಿ ಎಂದು ಕುವೆಂಪು ಹೇಳಿದ್ದರು. ಅಂತಹ ಹೇಳಿಕೆ ಕೊಡಲು ಭಾರೀ ಧೈರ್ಯಬೇಕು. ಕುವೆಂಪು ಅವರು ಹುಸಿ ಆಧ್ಯಾತ್ಮವನ್ನು ಎಂದೂ ನಂಬಿರಲಿಲ್ಲ. ಅವರಿಗೆ ಅನುಭವ, ಪ್ರಾಮಾಣಿಕತೆ, ವಿಚಾರವಾದವೇ ಭಕ್ತಿಯಾಗಿತ್ತು” ಎಂದು ತಿಳಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

“ಕುವೆಂಪು ಅವರು ಮಂತ್ರಮಾಂಗಲ್ಯವನ್ನು ಹುಟ್ಟು ಹಾಕಿದ್ದು, ಧರ್ಮ ನಿರಪೇಕ್ಷತೆಯಿಂದ. ಬಹುಸಂಖ್ಯಾತರು ಯಾವುದರಿಂದ ಬದುಕಲು ಸಾಧ್ಯ ಎಂದು ಕುವೆಂಪು ಚಿಂತಿಸುತ್ತಿದ್ದರು. ಎಲ್ಲರೂ ಸಮಸ್ಯದಿಂದ ಬದುಕುವ ಧರ್ಮ ಬೇಕು. ಹಿಂಸೆ ಹರಡುವ ದೇಶವಲ್ಲ ಎಂಬುದು ಅವರ ಚಿಂತನೆಯಾಗಿತ್ತು” ಎಂದು ತಿಳಿಸಿದರು.

“ಬುದ್ಧ ಕುವೆಂಪು ಅವರಷ್ಟು ಮಾತುಗಾರನಲ್ಲ. ದೇವರ ಬಗ್ಗೆ ಬುದ್ಧನನ್ನು ಕೇಳಿದಾಗ, ‘ನಾನು ನೋಡದವರ ಬಗ್ಗೆ ನಾನು ಮಾತನಾಡುವುದಿಲ್ಲ’ ಎಂದಿದ್ದರು. ಆದರೆ, ಕುವೆಂಪು, ‘ಆ ದೇವರನ್ನೆಲ್ಲ ತಿರಸ್ಕಾರ ಮಾಡಿ’ ಎಂದಿದ್ದರು.ಅಂಬೇಡ್ಕರ್ ಎಲ್ಲ ಧರ್ಮಗಳನ್ನು ಅಧ್ಯಯನ ಮಾಡಿ, ಭಾರತದಂತಹ ದೇಶದಲ್ಲಿ ಧರ್ಮ ಅನಿವಾರ್ಯ ಎಂದಿದ್ದರು. ಮಾರ್ಕ್ಸ್‌ ‘ಧರ್ಮ ಅಫೀಮು’ ಎಂದಿದ್ದರು. ಅದರೆ, ಮಾರ್ಕ್ಸ್‌ ಅನುಯಾಯಿಗಳಾದ ಕಾರ್ಮಿಕರ ಮುಖಂಡರು ಮನೆಯಲ್ಲಿ ದೇವರನ್ನು ಪೂಜಿಸುತ್ತಿದ್ದರು. ಅವರಿಗೆ ಮಾರ್ಕ್‌ ಹೇಳಿದ ಮಾತು ಅರ್ಥವೇ ಆಗಲಿಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದರು.

“ಮನುಷ್ಯಕುಲದ ದೊಡ್ಡ ಸಮುದಾಯವನ್ನ ಶೂದ್ರರು ಎನ್ನುತ್ತೇವೆ. ಈ ಶೂದ್ರರಲ್ಲಿ ದಲಿತರಿಲ್ಲ. ದಲಿತರು ಪಂಚಮರಾಗಿದ್ದರು. ಭಾರತದಲ್ಲಿ 60% ಶೂದ್ರರಿದ್ದಾರೆ. ಅವರು ಅತ್ತ ವೃತ್ತಿಯೂ ಕಾಣದೆ, ಇತ್ತ ಪಂಚಮರೂ ಆಗಲಾರದೆ ತ್ರಿಶಂಕು ಸ್ಥಿತಿಯಲ್ಲಿದ್ದರು. ಕುವೆಂಪು ಅವರಿಗೆ ತಾವು ಮಾಡುವ ಪ್ರತಿ ಹೇಳಿಕೆಯ ಬಗ್ಗೆ ಅರಿವಿತ್ತು. ಅಂತಹ ಹೇಳಿಕೆ ನೀಡಲು ಅವರಿಗೆ ಎಂಟೆದೆ ಬೇಕಿತ್ತು. ಅಂತಹ ಮಾತುಗಳನ್ನು ಕುವೆಂಪು ಹೇಳಿದ್ದಾರೆ” ಎಂದರು.

ಈ ಸುದ್ದಿ ಓದಿದ್ದೀರಾ? ಶಿವಮೊಗ್ಗ | ಜಾತಿ ದೌರ್ಜನ್ಯ: ದಲಿತ ಯುವತಿ ವಿವಾಹವಾದ ಯುವಕನ ಕುಟುಂಬಕ್ಕೆ ಬಹಿಷ್ಕಾರ

“ಧರ್ಮವನ್ನ ರಕ್ಷಿಸಿದರೆ, ಧರ್ಮ ನಿಮ್ಮನ್ನು ರಕ್ಷಿಸುತ್ತದೆ ಎನ್ನುತ್ತಾರೆ. ದಲಿತರು ಸಾವಿರಾರು ವರ್ಷಗಳಿಂದ ಧರ್ಮ ಪಾಲನೆ ಮಾಡಿದ್ದಾರೆ. ಆದರೆ, ಧರ್ಮ ಯಾವಾಗ ದಲಿತರನ್ನು ರಕ್ಷಿಸಿದೆ. ಸಾವಿರಾರು ವರ್ಷಗಳಿಂದ ದಲಿತರು ಯಾರಿಗೂ ಅನ್ಯಾಯ ಮಾಡಿಲ್ಲ. ಪ್ರಬಲ ಜಾತಿಯವರ ಜೀತ ಮಾಡಿದ್ದಾರೆ. ಆದರೆ, ದಲಿತರಿಗೆ ಏನು ಸಿಕ್ಕದೆ” ಎಂದ ಹನುಮಂತಯ್ಯ ಹೇಳಿದರು.

“ಈ ದೇಶದ ದೊಡ್ಡ ಕಮ್ಯುನಿಸ್ಟ್‌ ನೆಹರು. ಅವರು ಒಂದು ಅಣೆಕಟ್ಟು ಉದ್ಘಾಟಿಸಿ, ನೂರು ದೇವಾಲಯಗಳನ್ನು ತೆರೆದಷ್ಟು ಸಂತೋಷವಾಯಿತು ಎಂದಿದ್ದರು. ಅವರು ತಮ್ಮ ಆನಂದ ಭವನವನ್ನೇ ದೇಶಕ್ಕಾಗಿ ಸರ್ಕಾರಕ್ಕೆ ಕೊಟ್ಟರು. ಅವರನ್ನೇ ಏನು ಮಾಡಿದ್ದಾರೆ ಅಂತ ಕೆಲವರು ಪ್ರಶ್ನಿಸುತ್ತಿದ್ದಾರೆ. ಆ ರೀತಿ ಪ್ರಶ್ನಿಸುತ್ತಿರುವವರು ಯಾರು? ದೇಶಕ್ಕಾಗಿ ಏನು ಮಾಡದವರು. ಯಾವ ತ್ಯಾಗವನ್ನೂ ಮಾಡದವರು” ಎಂದು ಕಿಡಿಕಾರಿದರು.

ಗೋಡೆ ಇದ್ದಲ್ಲಿ ದೇವರ ಫೋಟೋ ಸಂಸ್ಕೃತಿ: ಎಚ್‌.ಆರ್ ಸ್ವಾಮಿ

ಕಾರ್ಯಕ್ರಮದಲ್ಲಿ ಮಾತನಾಡಿದ ಎಚ್.ಆರ್ ಸ್ವಾಮಿ, “ದಲಿತರು ಶೂದ್ರರು ಈಗ ಹೋಮ, ಹವನಗಳಲ್ಲಿ ಟ್ರ್ಯಾಪ್‌ಗೆ ಬಿದ್ದಿದ್ದಾರೆ. ಅವರಿಗಾಗಿ ನಾನಾ ರೀತಿಯ ಪೂಜೆಯ ಪ್ಯಾಕೇಜ್‌ಗಳನ್ನ ನೀಡಲಾಗುತ್ತಿದೆ. ಹಿಂದೆ ಇಂತಹ ಸಂಸ್ಕೃತಿ ಶೂದ್ರರಲ್ಲಿ ಇರಲಿಲ್ಲ. ದೇವರ ಫೋಟೋ ಬಗ್ಗೆ ಹೇಳಿದ್ದ ನಮ್ಮ ತಾತ ‘ನಮ್ಮನೆಗೆ ಗೋಡೆಯೇ ಇರಲಿಲ್ಲ. ಇನ್ನು ದೇವರ ಫೋಟೋ ಎಲ್ಲಿಂದ ತರೋದು’ ಅಂದಿದ್ದರು. ಗೋಡೆ ಇದ್ದಾಗ ಮಾತ್ರ ಫೋಟೋ ಸಂಸ್ಕೃತಿ ಬರುತ್ತದೆ” ಎಂದರು.

“ಕುವೆಂಪು ಅವರನ್ನು ನಾವು ಶಾಲಾ ಮಟ್ಟದಲ್ಲಿಯೇ ವಿದ್ಯಾರ್ಥಿಗಳಿಗೆ ಕಲಿಸಬೇಕು. ಆರ್‌ಎಸ್‌ಎಸ್‌ ಅವರು ಸಾವರ್ಕರ್‌ ಬಗ್ಗೆ ಚಿಕ್ಕಮಕ್ಕಳಲ್ಲೇ ತುಂಬಲು ಅರಂಭಿಸುತ್ತಾರೆ. ನಾವುಗಳು ಕುವೆಂಪು, ಪೆರಿಯಾರ್, ಅಂಬೇಡ್ಕರ್‌ ಅವರ ಬಗ್ಗೆ ಬಾಲ್ಯದಲ್ಲೇ ಮಕ್ಕಳಿಗೆ ತಿಳಿಸಬೇಕು” ಎಂದು ತಿಳಿಸಿದರು.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗುಂಡ್ಲುಪೇಟೆ | ಸಿಡಿಪಿಒ ವಿರುದ್ಧ ಜಾರಕಿಹೊಳಿ ಬ್ರಿಗೇಡ್ ಭ್ರಷ್ಟಾಚಾರ ಆರೋಪ; ದೂರು

ಚಾಮರಾಜನಗರ ಜಿಲ್ಲೆ, ಗುಂಡ್ಲುಪೇಟೆ ಸಿಡಿಪಿಓ ಹೇಮಾವತಿ ವಿರುದ್ದ ಜಾರಕಿಹೊಳಿ ಬ್ರಿಗೇಡ್ ಜಿಲ್ಲಾಧಿಕಾರಿಯವರಿಗೆ...

ಗದಗ | SC ST ಜನರ ನಡುವೆ ಗಲಾಟೆ; ಗಾಯಾಳುಗಳು ಆಸ್ಪತ್ರೆಗೆ ದಾಖಲು

ನೀರು ಕುಡಿದ ವಿಚಾರಕ್ಕೆ ಪರಿಶಿಷ್ಟ ಜಾತಿ(SC) ಪರಿಶಿಷ್ಟ(ST) ಜನಾಂಗದವರ ನಡುವೆ ಗಲಾಟೆ...

ದಾವಣಗೆರೆ | ರಾಜಕಾಲುವೆ ಚರಂಡಿ ಹಾಗೂ ತಡೆ ಗೋಡೆ ನಿರ್ಮಾಣ ಕಾಮಗಾರಿ ಸ್ಥಗಿತಕ್ಕೆ ತಹಶೀಲ್ದಾರ್ ಆದೇಶ

ರಾಜಕಾಲುವೆ ಭೂಮಾಪನ ಕಾರ್ಯ ಸಂಪೂರ್ಣಗೊಳ್ಳುವವರೆಗೆ ಹರಿಹರ ನಗರದ ರಾಜ ಕಾಲುವೆಯಲ್ಲಿ ಸಣ್ಣ...

ದಾವಣಗೆರೆ | ದಕ್ಷಿಣ ಕ್ಷೇತ್ರದ ಉಪಚುನಾವಣೆಗೆ ಎಸ್‌ಡಿಪಿಐ ಅಭ್ಯರ್ಥಿ ಅಫ್ಸರ್ ಕೊಡ್ಲಿಪೇಟೆ ಕಣಕ್ಕೆ

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್...