ಮದೀನಾ ಅಗ್ನಿ ದುರಂತದಲ್ಲಿ ಮೃತಪಟ್ಟ ಹುಬ್ಬಳ್ಳಿ ಮೂಲದ ಅಬ್ದುಲ್ ಗನಿ ಶಿರಹಟ್ಟಿ ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆ ನಡೆಸುವ ಸಲುವಾಗಿ ಕುಟುಂಬ ಸದಸ್ಯರಿಗೆ ಮದೀನಾಗೆ ತೆರಳಲು ಸಚಿವ ಜಮೀರ್ ಅಹಮದ್ ಖಾನ್ ನೆರವು ನೀಡಿದ್ದಾರೆ.
ಅಬ್ದುಲ್ ಗನಿ ಅವರ ಕುಟುಂಬ ಸದಸ್ಯರಾದ ಉಮರ್ ಸಾಬ್, ಮೌಲಾ ಅಲಿ, ಮೈನುದ್ದಿನ್ ಮಖಂದರ್ ಅವರು ಮಂಗಳವಾರ ಬೆಂಗಳೂರಿಂದ ಮದೀನಾ ಗೆ ತೆರಳಿದರು. ಅಂತ್ಯಕ್ರಿಯೆ ನಂತರ ಮೂವರು ಉಮ್ರಾ ಯಾತ್ರೆ ಮಾಡಿ ವಾಪಸ್ ಬರಲು ಸಚಿವರು ವ್ಯವಸ್ಥೆ ಮಾಡಿಕೊಟ್ಟಿದ್ದಾರೆ. ವೀಸಾ ಸೇರಿದಂತೆ ವಿಮಾನ ಟಿಕೆಟ್, ಅಲ್ಲಿ ಉಳಿದುಕೊಳ್ಳಲು ಹೋಟೆಲ್ ಹಾಗೂ ಇತರೆ ವ್ಯವಸ್ಥೆ, ಮಾರ್ಗ ಮಧ್ಯೆ ವೆಚ್ಚಕ್ಕೆ ಆರ್ಥಿಕ ಸಹಾಯ ಮಾಡಿದ್ದಾರೆ.
ಅಬ್ದುಲ್ ಗನಿ ಕುಟುಂಬ ಸದಸ್ಯರು ಮದೀನಾಗೆ ತೆರಳಲು ಸಂಕಷ್ಟ ಎದುರಿಸುತ್ತಿರುವ ಬಗ್ಗೆ ಮಾಹಿತಿ ಪಡೆದ ಸಚಿವರು ಖುದ್ದು ಬೆಂಗಳೂರಿಗೆ ಕರೆಸಿಕೊಂಡು ಈ ವ್ಯವಸ್ಥೆ ಮಾಡಿದರು. ಗನಿ ಕುಟುಂಬಕ್ಕೆ ಬೇಕಾದ ಎಲ್ಲ ರೀತಿಯ ನೆರವು ಕಲ್ಪಿಸುವಂತೆ ಹಜ್ ಸಮಿತಿ ಕಾರ್ಯ ನಿರ್ವಹಣಾಧಿಕಾರಿ ಸಾರ್ಫಾರಾಜ್ ಖಾನ್ ಅವರಿಗೆ ಸೂಚನೆ ನೀಡಿದರು.
ಮದೀನಾ ಅಗ್ನಿ ದುರಂತ | ಅಬ್ದುಲ್ ಗನಿ ಕುಟುಂಬಕ್ಕೆ ನೆರವಾದ ಸಚಿವ ಜಮೀರ್
ಪೋಸ್ಟ್ ಹಂಚಿಕೊಳ್ಳಿ:




