ಮಾನವ ಬಂಧುತ್ವ ವೇದಿಕೆಯಂತಹ ಸಂಘಟನೆಗಳು ತರಗತಿಯ ಹೊರಗೆ ನಿಜ ಶಿಕ್ಷಣ ನೀಡುತ್ತಿವೆ: ದಿನೇಶ್ ಅಮೀನ್ ಮಟ್ಟು

Date:

ಬಹಳಷ್ಟು ವಿದ್ಯಾವಂತರಲ್ಲೂ ಸಹ ಮೂಢನಂಬಿಕೆ ಅಧಿಕವಾಗಿದೆ. ಅದು ನಮ್ಮ‌ ಶಿಕ್ಷಣದ ವೈಪಲ್ಯವಾಗಿರಬಹುದು.‌ಶಿಕ್ಷಿತರಲ್ಲಿ ಇರುವಷ್ಟು ಮೂಢರು ,ಭ್ರಷ್ಟರು ಅವಿದ್ಯಾವಂತರಲ್ಲಿ ಇಲ್ಲ. ಈಗ ಕೇವಲ ಸರ್ಟಿಫಿಕೇಟ್‌ಗಾಗಿ ಕೊಡುವ ಶಿಕ್ಷಣವಾಗಿದೆ. ಹಾಗಾಗಿ ತರಗತಿಗಳ ಹೊರಗೆ ಮಾನವ ಬಂಧುತ್ವ ವೇದಿಕೆಯಂತಹ ಸಂಘಟನೆಗಳು ನೀಡುವ ಶಿಕ್ಷಣ ದೊಡ್ಡದು ಎಂದು ದಿನೇಶ್ ಅಮೀನ್ ಮಟ್ಟು ಹೇಳಿದರು.

ಮಾನವ ಬಂಧುತ್ವ ವೇದಿಕೆ ಪ್ರಾರಂಭವಾಗಿ ಹತ್ತು ವರ್ಷಗಳಾಗಿದ್ದು ಇದೆ ಫೆಬ್ರವರಿ 2ರಂದು ದಶಮಾನೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಈ ಪ್ರಯುಕ್ತ ಬೆಂಗಳೂರು ನಗರ ಹಾಗೂ ಸುತ್ತಲಿನ ಜಿಲ್ಲೆಗಳ ಪ್ರಗತಿಪರ ಸಂಘಟನೆಗಳ ಮುಖಂಡರ ಸಭೆ ಕರೆಯಲಾಗಿತ್ತು. ಈ ಸಭೆಯಲ್ಲಿ ದಿನೇಶ್ ಅಮಿನ್ ಮಟ್ಟು ಅವರು ಮುಖ್ಯ ಅತಿಥಿಗಳಾಗಿ ಭಾಗವಹಸಿ ಮಾತಾನಾಡುತ್ತಾ ಸತೀಶ್ ಜಾರಕಿಹೊಳಿಯವರು ಕೇವಲ ಭಾಷಣಗಳನ್ನು ಮಾಡದೆ ನುಡಿದಂತೆ ನಡೆಯುತ್ತಾ ಹೋಗುತ್ತಿದ್ದಾರೆ. ನಾನು ರಾಜಕಾರಣಿಗಳು ಮತದಾರರಿಗಿಂತ ಮೂಢಮತಿಗಳಾಗಿ ಇರುವುದನ್ನು ನೋಡಿದ್ದೇನೆ, ಜಾರಕಿಹೊಳಿಯವರು ತಾವೆ ಸ್ಮಶಾನದಲ್ಲಿ ಕುಳಿತು ಮೂಢ ನಂಬಿಕೆಗಳ ವಿರುದ್ಧ ಹೋರಾಟ ಮಾಡಿದ್ದಾರೆ. ಹೆಚ್ಚು ಹಳ್ಳಿಗಾಡಿನವರು, ಶೋಷಿತರು ಹೆಚ್ಚು ಹೆಚ್ಚು ಮಾನವ ಬಂಧುತ್ವ ವೇದಿಕೆಯಲ್ಲಿ ಇರುವುದರಿಂದ ನನ್ನವರು ಮುನ್ನೆಡೆಸುತ್ತಿದ್ದಾರೆ ಎಂಬ ಭಾವನೆ ಬರುತ್ತದೆ. ಹಾಗಾಗಿ ನಾನು ಹೆಚ್ಚು ಮಾನವ ಬಂಧುತ್ವ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದೇನೆ. ಸಂವಿಧಾನದಿಂದ ಎಲ್ಲವನ್ನೂ ಪಡೆದವರು ಇಂದು ಸಂವಿಧಾನದ ವಿರುದ್ಧ ದ್ರಾಷ್ಟ್ಯದಿಂದ ಮಾತನಾಡುತ್ತಿದ್ದಾರೆ ಎಂದರೆ ಅದು ನಮ್ಮಂತಹವರ ವೈಫಲ್ಯ ಎಂದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಮಾನವ ಬಂಧುತ್ವ ವೇದಿಕೆಯ ಮುಖಂಡರಾದ ಅನಂತ್ ನಾಯ್ಕ್ ಮಾತನಾಡಿ ಸಂವಿಧಾನದ ಆಶಯಗಳಿಗೆ ಪೂರಕವಾಗಿ ಸಂಘಟನೆ ನಡೆದುಕೊಂಡು ಬಂದಿದ್ದೇವೆ ಹಾಗಾಗಿಯೇ ದಶಮಾನೋತ್ಸವವನ್ನು ಸಂವಿಧಾನ ಸಂಕಲ್ಪ ದಿನ ಎಂದು ಕರೆದಿದ್ದೇವೆ. ಈ ಕಾರ್ಯಕ್ರಮದ ಪೂರ್ವಭಾವಿಯಾಗಿ 6 ವಿಭಾಗಿಯ ಸಭೆಗಳು ನಡೆಯಲಿವೆ ಹಾಗೂ ಎಲ್ಲಾ ಜಿಲ್ಲೆಗಳಲ್ಲೂ ಪೂರ್ವಭಾವಿ ಸಭೆ ನಡೆಯಲಿದೆ. ಲಕ್ಷಾಂತರ ಜನ ಕಾರ್ಯಕ್ರಮಕ್ಕೆ ಬರುವ ನಿರೀಕ್ಷೆ ಇದೆ. ಎಂದರು. ಕಾರ್ಯಕ್ರಮ ವಿನೂತನವಾಗಿ ಇರಲಿದ್ದು ಸಂವಿಧಾನ ಪಥಸಂಚಲನ ನಡೆಯಲಿದೆ. ವೈಜ್ಞಾನಿಕ ಮನೋಬಾವ ಬೆಳೆಸುವ ಕಲೆ, ಸಾಂಸ್ಕೃತಿಕ ಪ್ರದರ್ಶನಗಳು ಇರಲಿವೆ.

ಮಾನವ ಬಂಧುತ್ವ ವೇದಿಕೆ ಸತೀಶ್ ಜಾರಕಿಹೊಳಿಯವರ ನೇತ್ರತ್ವದಲ್ಲಿ ಈಗಾಗಲೇ 5 ಯುವಜನರ ತರಬೇತಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಇಲ್ಲಿಂದ ಸಾವಿರಾರು ಮಂದಿ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ತರಬೇತಿ ಪಡೆದಿದ್ದಾರೆ. ನಾಗರಪಂಚಮಿಯನ್ನು ಬಸವ ಪಂಚಮಿಯಾಗಿಸಿ ಬಡಜನರಿಗೆ ಹಾಲು ಹಂಚುವ ಕೆಲಸ ಈಗ ದೊಡ್ಡ ಪ್ರಮಾಣದಲ್ಲಿ ವಿಸ್ತರಿಸಿದೆ. ಸಾವಿತ್ರಿ ಬಾ ಫುಲೆ ಜನುಜಯಂತಿಯನ್ನು ನೂರಾರು ಹಳ್ಳಿಗಳಲ್ಲಿ ಮಾಡಲಾಗುತ್ತಿದೆ. ಮೂಡನಂಬಿಕೆ ವಿರೋಧಿ ಆಂದೋಲನ , ಹಾಗೂ ಜನಪರ ಸಂಘಟನೆಗಳಿಗೆ ಬೆಂಬಲವಾಗಿ ಕೆಲಸ ಮಾಡುತ್ತಿದ್ದೇವೆ ಎಂದರು.

ಪೂರ್ವಭಾವಿ ಸಭೆಯ ಅಧ್ಯಕ್ಷತೆಯನ್ನು ಮೈಸೂರು ವಿಭಾಗಿಯ ಸಂಚಾಲಕಿ ಲೀಲಾಸಂಪಿಗೆ ವಹಿಸಿದ್ದರು. ಮುಖಂಡರಾದ ರುದ್ರಪ್ಪ ಹನಗವಾಡಿ, ಡಾ.ರಾಜಾನಾಯಕ, ಬಸವರಾಜ್ ಈ, ಕರುಣಾಕರ್, ವೀರಣ್ಣ, ಜನಾರ್ಧನ್ ಕೆಸರಗದ್ದೆ, ರವೀಂದ್ರನಾಯ್ಕ, ಶಿವರಾಜ್ ಅಲ್ಬೂರ್ ,ಕರಿಯನಿಷಾದ ಉಪಸ್ಥಿತರಿದ್ದರು. ಪ್ರಾರಂಭದಲ್ಲಿ ಸಂವಿಧಾನ ಪೀಠಿಕೆಯ‌ನ್ನು ಓದಲಾಯಿತು. ಹಾಗೂ ಇತ್ತಿಚಿಗೆ ಅಗಲಿದ ಹಿರಿಯರಾದ ಮುಜಾಫರ್ ಅಸ್ಸಾದಿ, ಬಯ್ಯಾರೆಡ್ಡಿ, ನಾ.ಡಿಸೋಜಾ ಅವರಿಗೆ ಗೌರವ ನಮನಗಳನ್ನು ಸಲ್ಲಿಸಲಾಯಿತು.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಒಳಮೀಸಲಾತಿ ಜಾರಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬಿಡುತ್ತಿಲ್ಲ: ಮಂದಕೃಷ್ಣ ಮಾದಿಗ ಆರೋಪ

ಒಳಮೀಸಲಾತಿ ಜಾರಿಗೆ ತರುತ್ತೇವೆಂದು ಹೇಳಿದ್ದ ಕಾಂಗ್ರೆಸ್‌, ಈಗ ಒಳಮೀಸಲಾತಿ ಅನುಷ್ಠಾನದಲ್ಲಿ ಮೀನಾಮೇಷ...

ಒಳಮೀಸಲಾತಿ ಹೋರಾಟ | ಸಿಎಂ ಸಿದ್ದರಾಮಯ್ಯ ನುಡಿದಂತೆ ನಡೆದಿಲ್ಲ: ಮಾರಸಂದ್ರ ಮುನಿಯಪ್ಪ

ಸಿದ್ದರಾಮಯ್ಯ ಅವರು ಸಮಾಜವಾದದ ಬಗ್ಗೆ ಮಾತನಾಡುತ್ತಾರೆ. ನುಡಿದಂತೆ ನಡೆದಂತೆ ಸರ್ಕಾರವೆಂದು ಹೇಳುತ್ತಾರೆ....

ಫ್ರೀಡಂ ಪಾರ್ಕ್‌ನಿಂದ ವಿಧಾನಸೌಧಕ್ಕೆ ಬರಲಿದೆ ಒಳಮೀಸಲಾತಿ ಹೋರಾಟ: ಸರ್ಕಾರಕ್ಕೆ ಮಾದರ ಚೆನ್ನಯ್ಯ ಸ್ವಾಮೀಜಿ ಎಚ್ಚರಿಕೆ

ಕಳೆದ 35 ವರ್ಷಗಳಿಂದ ಹಲವಾರು ಹೋರಾಟಗಾರರು ತಮ್ಮ ಜೀವ-ಜೀವನವನ್ನು ಅರ್ಪಿಸಿ, ಮನೆ-ಮಠವನ್ನು...

ಬೆಂಗಳೂರು | ನೇಮಕಾತಿಯಲ್ಲಿ ಒಳಮೀಸಲಾತಿಗೆ ಆಗ್ರಹಿಸಿ ಮೊಳಗುತ್ತಿದೆ ಘೋಷ

ಸರ್ಕಾರವು ಒಳಮೀಸಲಾತಿಯನ್ನು ತಪ್ಪಿಸುವ ಹುನ್ನಾರದಿಂದ ತರಾತುರಿಯಲ್ಲಿ 56,432 ಹುದ್ದೆಗಳ ನೇಮಕಾತಿಗೆ ಆದೇಶ...