ಮೋಹನ್‌ದಾಸ್‌ ಪೈ ನೀಡಿದ ಸಂಚಾರಿ ಉಲ್ಲಂಘನೆ ಸಮಸ್ಯೆಯ ಸಲಹೆಗೆ ನೆಟ್ಟಿಗರು ಏನಂದ್ರು?

Date:

ಇನ್ಫೋಸಿಸ್‌ನ ಮಾಜಿ ಸಿಎಫ್‌ಒ ಮೋಹನ್‌ದಾಸ್‌ ಪೈ ಇತ್ತೀಚಿಗೆ ಬೆಂಗಳೂರಿನ ಸಂಚಾರಿ ಉಲ್ಲಂಘನೆಗೆ ನಗರ ಪೊಲೀಸರಿಗೆ ಒಂದು ಸಲಹೆಯನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದರು. ವಿಚಿತ್ರವಾದ ಸಲಹೆಗೆ ನೆಟ್ಟಿಗರು ವಿವಿಧ ರೀತಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

“ಬೆಂಗಳೂರು ಪೊಲೀಸರು ಸಂಚಾರಿ ಉಲ್ಲಂಘನೆ ತಡೆಗೆ ವಿಯೆಟ್ನಾಂ ದೇಶದ ಹೊಸ ಪದ್ಧತಿ ಅಳವಡಿಸಿಕೊಳ್ಳಬೇಕು. ಸಂಚಾರಿ ಉಲ್ಲಂಘನೆಯನ್ನು ವರದಿ ಮಾಡುವ ನಾಗರಿಕರಿಗೆ ಬಹುಮಾನವನ್ನು ನೀಡಬೇಕು. ಸಂಚಾರಿ ಉಲ್ಲಂಘನೆ ಮಾಡುವ ಸವಾರರು ಪಾವತಿಸುವ ದಂಡದಲ್ಲಿ ಶೇ. 10ರಷ್ಟು ಹಣವನ್ನು ಉಲ್ಲಂಘನೆಯ ಮಾಹಿತಿ ನೀಡುವವರಿಗೆ ಬಹುಮಾನವಾಗಿ ನೀಡಬೇಕು ಎಂದಿದ್ದರು. ನಗರದಲ್ಲಿ ಇಂತಹ ನಿಯಮಗಳು ಅತ್ಯಗತ್ಯವಿದೆ” ಎಂದು ಮೋಹನ್‌ದಾಸ್‌ ಅವರು ಪೋಸ್ಟ್‌ ಮಾಡಿ ಗೃಹ ಸಚಿವ ಜಿ ಪರಮೇಶ್ವರ್‌ ಅವರಿಗೂ ಟ್ಯಾಗ್‌ ಮಾಡಿದ್ದರು.

ಮೋಹನ್‌ದಾಸ್‌ ಟ್ವೀಟ್‌ಗೆ ಕೆಲವು ನೆಟ್ಟಿಗರು ಗಂಭೀರ ಪ್ರತಿಕ್ರಿಯೆ ನೀಡಿದರೆ, ಇನ್ನೂ ಕೆಲವರು ತಮಾಷೆಯ ಉತ್ತರ ನೀಡಿದ್ದಾರೆ. ಮೋಹನ್‌ದಾಸ್‌ ಅವರ ಸಲಹೆ ಹೊರ ರಾಜ್ಯಗಳ ಸವಾರರನ್ನು ನೇರವಾಗಿ ಗುರಿ ಮಾಡುತ್ತದೆ. ಬಹುತೇಕ ಅವರುಗಳೆ ಸಂಚಾರಿ ನಿಯಮಗಳನ್ನು ಉಲ್ಲಂಘಿಸುತ್ತಾರೆ ಎಂದು ಒಂದಷ್ಟು ಮಂದಿ ಪ್ರತಿಕ್ರಿಯಿಸಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಕ್ರಿಕೆಟ್ ಕೇಸರಿಕರಣ, ಪರಿಶುದ್ಧ ಆಟ ಅಂತರ್ಧಾನ

“ಹೌದು, ನಮ್ಮಲ್ಲಿ ಅನೇಕ ನಿರುದ್ಯೋಗಿ ಯುವಕರಿದ್ದಾರೆ. ಈ ನೂತನ ಯೋಜನೆಯಿಂದ ಒಂದಷ್ಟು ಅನುಕೂಲವಾಗಲಿದೆ” ಎಂದಿದ್ದಾರೆ. “ಉಲ್ಲಂಘನೆ ವಿಷಯ ತಿಳಿಸುವ ವ್ಯಕ್ತಿ ಅಪರಿಚಿತನಾಗಿರಬೇಕು. ಆತನ ಹೆಸರನ್ನು ಗೌಪ್ಯವಾಗಿಡಬೇಕು” ಎಂದು ಪೋಸ್ಟ್‌ ಮಾಡಿದ್ದಾರೆ.

“ನಮಗೆ ಇಂತಹ ನಿಯಮಗಳ ಅಗತ್ಯವಿದೆ. ಟ್ರಾಫಿಕ್‌ ಸಿಗ್ನಲ್‌ಗಳಲ್ಲಿ, ಜೀಬ್ರಾ ಕ್ರಾಸಿಂಗ್‌ಗಳಲ್ಲಿ ಹಾಗೂ ಮುಂತಾದ ಪ್ರಮುಖ ಸ್ಥಳಗಳಲ್ಲಿ” ಈ ನಿಯಮಗಳನ್ನು ಜಾರಿಗೊಳಿಸಬೇಕು ಎಂದು ಕೆಲವು ಟ್ವಿಟ್ಟಿಗರು ಪೋಸ್ಟ್‌ ಮಾಡಿದ್ದಾರೆ.

“ನಾವು ಹಲವು ಆಪ್‌ಗಳಿಂದ ಸಾಕಷ್ಟು ಗಣ ಗಳಿಸುತ್ತಿದ್ದೇವೆ. ಇಂತಹ ಯೋಜನೆಗಳಿಂದ ನಮ್ಮ ಜೇಬನ್ನು ಮತ್ತಷ್ಟು ಭರ್ತಿ ಮಾಡಿಕೊಳ್ಳುತ್ತೇವೆ. ಹಣ ಗಳಿಸುವ ಇಂತಹ ಹಲವು ನಿಯಮಗಳು ನಗರದ ಯುವಕರಿಗೆ ಅಗತ್ಯವಿದೆ” ಎಂದು ತಮಾಷೆ ರೀತಿಯಲ್ಲಿ ಉತ್ತರ ನೀಡಿದ್ದಾರೆ.

ವಿಯೆಟ್ನಾಂನಲ್ಲಿ ಟ್ರಾಫಿಕ್ ಉಲ್ಲಂಘನೆ ನಿಯಂತ್ರಿಸಲು, ನಿಯಮ ಪಾಲಿಸುವಂತೆ ಮಾಡಲು ಸ್ನಿಚ್ ನಿಯಮ ಜಾರಿಗೆ ತರಲಾಗಿದೆ. ಹೊಸ ವರ್ಷದ ಆರಂಭದಿಂದ ಹೊಸ ನಿಯಮ ಜಾರಿಗೆ ತರಲಾಗಿದೆ. ರಸ್ತೆ ಸುರಕ್ಷತೆ, ನಿಯಮ ಪಾಲನೆ, ಟ್ರಾಫಿಕ್ ನಿಯಮ ಉಲ್ಲಂಘನೆಗಳ ಸಮಸ್ಯೆಗೆ ಮುಕ್ತಿ ಹಾಡಲು ವಿಯೆಟ್ನಾಂ ಸ್ನಿಚ್ ಲಾ ಜಾರಿಗೆ ತಂದಿದೆ. ಈ ನಿಯಮದಲ್ಲಿ ಪ್ರತಿಯೊಬ್ಬರು ಹಣ ಗೆಲ್ಲುವ ಅವಕಾಶ ಪಡೆಯುತ್ತಾರೆ. ಈ ಟ್ರಾಫಿಕ್ ನಿಯಮ ಉಲ್ಲಂಘನೆ ಸೂಚನೆ ನೀಡಿದವರಿಗೆ 200 ಅಮೆರಿಕನ್ ಡಾಲರ್‌ವರೆಗೂ ಬಹುಮಾನದ ಹಣ ನೀಡಲಾಗುತ್ತದೆ.

ಜನವರಿ 1, 2025ರಿಂದ ಈ ಹೊಸ ನಿಯಮ ಜಾರಿಗೆ ಬಂದಿದೆ. ವಿಯೆಟ್ನಾಂನಲ್ಲಿ ಜಾರಿಗೊಳಿಸಿರುವ ನೂತನ ನಿಯಮದಿಂದ ಸಂಚಾರಿ ಸಮಸ್ಯೆ ಪರಿಹಾರವಾಗಿರುವ ಬಗ್ಗೆ ಹೆಚ್ಚಿನ ಮಾಹಿತಿ ಸಿಕ್ಕಿಲ್ಲ.

WhatsApp Image 2025 11 17 at 3.21.38 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಒಳಮೀಸಲಾತಿ ಜಾರಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬಿಡುತ್ತಿಲ್ಲ: ಮಂದಕೃಷ್ಣ ಮಾದಿಗ ಆರೋಪ

ಒಳಮೀಸಲಾತಿ ಜಾರಿಗೆ ತರುತ್ತೇವೆಂದು ಹೇಳಿದ್ದ ಕಾಂಗ್ರೆಸ್‌, ಈಗ ಒಳಮೀಸಲಾತಿ ಅನುಷ್ಠಾನದಲ್ಲಿ ಮೀನಾಮೇಷ...

ಒಳಮೀಸಲಾತಿ ಹೋರಾಟ | ಸಿಎಂ ಸಿದ್ದರಾಮಯ್ಯ ನುಡಿದಂತೆ ನಡೆದಿಲ್ಲ: ಮಾರಸಂದ್ರ ಮುನಿಯಪ್ಪ

ಸಿದ್ದರಾಮಯ್ಯ ಅವರು ಸಮಾಜವಾದದ ಬಗ್ಗೆ ಮಾತನಾಡುತ್ತಾರೆ. ನುಡಿದಂತೆ ನಡೆದಂತೆ ಸರ್ಕಾರವೆಂದು ಹೇಳುತ್ತಾರೆ....

ಫ್ರೀಡಂ ಪಾರ್ಕ್‌ನಿಂದ ವಿಧಾನಸೌಧಕ್ಕೆ ಬರಲಿದೆ ಒಳಮೀಸಲಾತಿ ಹೋರಾಟ: ಸರ್ಕಾರಕ್ಕೆ ಮಾದರ ಚೆನ್ನಯ್ಯ ಸ್ವಾಮೀಜಿ ಎಚ್ಚರಿಕೆ

ಕಳೆದ 35 ವರ್ಷಗಳಿಂದ ಹಲವಾರು ಹೋರಾಟಗಾರರು ತಮ್ಮ ಜೀವ-ಜೀವನವನ್ನು ಅರ್ಪಿಸಿ, ಮನೆ-ಮಠವನ್ನು...

ಬೆಂಗಳೂರು | ನೇಮಕಾತಿಯಲ್ಲಿ ಒಳಮೀಸಲಾತಿಗೆ ಆಗ್ರಹಿಸಿ ಮೊಳಗುತ್ತಿದೆ ಘೋಷ

ಸರ್ಕಾರವು ಒಳಮೀಸಲಾತಿಯನ್ನು ತಪ್ಪಿಸುವ ಹುನ್ನಾರದಿಂದ ತರಾತುರಿಯಲ್ಲಿ 56,432 ಹುದ್ದೆಗಳ ನೇಮಕಾತಿಗೆ ಆದೇಶ...