Monopsony Capitalism ಕುರಿತಂತೆ ಬರಹಗಾರ ಅಶೋಕ್ ಕುಮಾರ್ ಅವರು ಬರೆದು ಲೇಖಕರಾದ ನಾ ದಿವಾಕರ್ ಅನುವಾದಿಸಿರುವ ‘ಏಕಸ್ವಮ್ಯ ಖರೀದಿ ಬಂಡವಾಳಶಾಹಿ’ ಹಾಗೂ ಅಶೋಕ್ ಕುಮಾರ್ ಅವರು ಬರೆದು ಡಾ. ಮಂಜುನಾಥ್ ಬಿ. ಆರ್ ನಿರೂಪಿಸಿರುವ “ಏಕಸ್ವಾಮ್ಯ ಖರೀದಿ ಬಂಡವಾಳ” ಒಂದು ಮರು ನಿರೂಪಣೆ ಎಂಬ ಎರಡು ಬಹು ಮುಖ್ಯ ಕೃತಿಗಳು ಜುಲೈ 12(ನಾಳೆ)ರಂದು ಸಂಜೆ 5 ಗಂಟೆಗೆ ಬೆಂಗಳೂರಿನ ಕುಮಾರ ಪಾರ್ಕ್ನ ಚಿತ್ರಕಲಾ ಪರಿಷತ್ನ ದೇವರಾಜು ಅರಸು ಗ್ಯಾಲರಿಯಲ್ಲಿ ಬಿಡುಗಡೆಯಾಗಲಿದೆ.
ಪುಕಸ್ತಗಳ ಬಿಡುಗಡೆಯನ್ನು ಚಿಂತಕರು ಹಾಗೂ ಸಾಮಾಜಿಕ ಹೋರಾಟಗಾರರಾದ ದೊಡ್ಡಿಪಾಳ್ಯ ನರಸಿಂಹಮೂರ್ತಿ ಅವರು ಬಿಡುಗಡೆಗೊಳಿಸಲಿದ್ದಾರೆ. ಪುಸ್ತಕಗಳ ಕುರಿತು ಚಿಂತಕರು ಹಾಗೂ ಬರಹಗಾರಾದ ಶಿವಸುಂದರ್ ಮಾತನಾಡಲಿದ್ದಾರೆ. ಚಿಂತಕರು ಹಾಗೂ ಬರಹಗಾರರಾದ ವಿ ಎಸ್ ಎಸ್ ಶಾಸ್ತ್ರಿ, ಅಮೆರಿಕದ ವೈದ್ಯರಾಗಿರುವ ಡಾ. ಮಂಗಳ, ನಟ ಹಾಗೂ ಸಾಮಾಜಿಕ ಕಾರ್ಯಕರ್ತರಾದ ಚೇತನ್ ಅಹಿಂಸ ಕಾರ್ಯಕ್ರಮದಲ್ಲಿ ಭಾಗವಹಿಲಿದ್ದಾರೆ.
ಆಕೃತಿ ಪುಸ್ತಕ ಹಾಗೂ ಜೀರುಂಡೆ ಪುಸ್ತಕ ಇವರು ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ 9886694580 ಹಾಗೂ 9742225779 ಕರೆ ಮಾಡಿ ಮಾಹಿತಿ ಪಡೆದುಕೊಳ್ಳಬಹುದು.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ದಾಖಲೆ ಬರೆದ ಶಕ್ತಿ ಯೋಜನೆ: ಆಡಿದ್ದನ್ನು ಮಾಡಿ ತೋರಿಸಿದ ಸರ್ಕಾರ





