ಕೇಂದ್ರ ಸರ್ಕಾರ ಕೋಟ್ಯಂತರ ಜನ ಮಾತನಾಡುವ ಭಾಷೆಗಳನ್ನು ತುಳಿದು ಸಂಸ್ಕೃತವನ್ನು ಪೋಷಿಸುತ್ತಿದೆ: ಹಂಪನಾ

Date:

“ನಮ್ಮದು ವೈವಿಧ್ಯತೆಯ ದೇಶ. ಆದರೆ ಈಗ ಒಂದು ದೇಶ, ಒಂದು ಭಾಷೆ, ಒಂದು ಚುನಾವಣೆ ಎಂದು ಹೇಳಲಾಗುತ್ತಿದೆ. ಸಂಸ್ಕೃತ ಭಾಷೆಯನ್ನು ಸ್ಥಾಪಿಸುವ ನಿಟ್ಟಿನಲ್ಲಿ ಉಳಿದ ಭಾಷೆಗಳನ್ನು ಕಡೆಗಣಿಸಲಾಗುತ್ತಿದೆ. ಕೇಂದ್ರ ಸರ್ಕಾರವು ಕೋಟ್ಯಂತರ ಜನರು ಮಾತನಾಡುವ ಭಾಷೆಗಳನ್ನು ತುಳಿದು ಸಂಸ್ಕೃತವನ್ನು ಪೋಷಿಸುತ್ತಿದೆ ಎಂದು ಸಾಹಿತಿ ಹಂ.ಪ.ನಾಗರಾಜಯ್ಯನವರು(ಹಂಪನಾ) ಆರೋಪಿಸಿದರು.

ಶನಿವಾರ ಬೆಂಗಳೂರು ನಗರದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಆವರಣದಲ್ಲಿ ನಡೆದ ʼಸಮಾಜಮುಖಿ ಸಾಹಿತ್ಯ ಸಮ್ಮೇಳನʼವನ್ನು ಉದ್ಘಾಟಿಸಿ ಮಾತನಾಡಿದ ಅವರು, “ನಮ್ಮದು ಬಹುಭಾಷೆಗಳ ದೇಶ. ಆದರೆ ಕೇಂದ್ರಕ್ಕೆ ದಕ್ಷಿಣ ರಾಜ್ಯಗಳ ಭಾಷೆಗಳ ಮೇಲೆ ಕೆಂಗಣ್ಣು. ನೆಲದ ಭಾಷೆಗಳನ್ನು ಬಿಟ್ಟು ಸಂಸ್ಕೃತವನ್ನು ಮೇಲೆತ್ತುವ ಕೆಲಸವನ್ನು ವ್ಯಾಪಕವಾಗಿ ನಡೆಸಲಾಗುತ್ತಿದೆ. ಹಳೆಗನ್ನಡಗಳನ್ನು ಸಂಸ್ಕೃತಕ್ಕೆ ಬದಲಾಯಿಸಿಕೊಂಡು ಕಾಳಿದಾಸ, ವ್ಯಾಸರಿಗೆ ಅಪಚಾರ ಮಾಡಲಾಗಿದೆ” ಎಂದರು.

ಇದನ್ನು ಓದಿದ್ದೀರಾ? EXCLUSIVE | ವಿ.ಸೋಮಣ್ಣಗೆ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ? ಪ್ರಭಾವಿ ಮಠಾಧೀಶರೊಂದಿಗೆ ಪ್ರಸ್ತಾಪ

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

“ಈಗಾಗಲೇ ಲಿಪಿ ಇಲ್ಲದ 22 ದ್ರಾವಿಡ ಭಾಷೆಗಳನ್ನು ನೆಲ ಕಚ್ಚಿಸಲಾಗಿದೆ. ಕೇಂದ್ರ ಸರ್ಕಾರವು ಸಂಸ್ಕೃತ, ಹಿಂದಿಗೆ ಹೆಚ್ಚು ಅನುಕೂಲ ಕಲ್ಪಿಸುತ್ತಿದೆ. ನೆಲದ ಭಾಷೆಯನ್ನು ಬಿಟ್ಟು ಸಂಸ್ಕೃತವನ್ನು ಮೇಲೆತ್ತುವ ಕೆಲಸ ವ್ಯಾಪಕವಾಗಿ ನಡೆದಿದೆ. ನಾವು ಸಂಸ್ಕೃತದ ಶತ್ರುಗಳಲ್ಲ, ಆದರೆ ಅದಕ್ಕೂ ಪ್ರಾಚೀನವಾದ ಪ್ರಾಕೃತ ಮತ್ತು ಪಾಲಿ ಭಾಷೆಯನ್ನು ಕಡೆಗಣಿಸುವುದು ಸರಿಯಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದರು.

“ಸಂಸ್ಕತಕ್ಕೆ 30 ಪ್ರಶಸ್ತಿಗಳನ್ನು ಸ್ಥಾಪಿಸಲಾಗಿದೆ. ಆದರೆ ಉಳಿದ ಭಾಷೆಗಳಿಗೆ ಒಂದೆರಡು ಪ್ರಶಸ್ತಿಗಳಿವೆ. ದೇಶದ ಬೊಕ್ಕಸದ ಒಂದು ಭಾಗವನ್ನು ಸಂಸ್ಕೃತ ಭಾಷೆಗಾಗಿ ಖರ್ಚು ಮಾಡಲಾಗುತ್ತಿದೆ. ಕಳೆದ 11 ವರ್ಷದಲ್ಲಿ 2,532 ಕೋಟಿ ರೂ. ಹಣವನ್ನು ಸಂಸ್ಕೃತ ಭಾಷೆಗಾಗಿ ನೀಡಿದರೆ, ಕನ್ನಡ, ತಮಿಳು, ತೆಲುಗು, ಮಲಯಾಳಂ ಸೇರಿದಂತೆ ನಾಲ್ಕು ಭಾಷೆಗಳಿಗಾಗಿ ಬರೀ 142 ಕೋಟಿ ರೂಪಾಯಿಯನ್ನು ಕೇಂದ್ರ ಸರ್ಕಾರ ನೀಡಿದೆ. ಕೇಂದ್ರದ ನೀತಿ ಬೆಂಬಲಿಸಿಲ್ಲವೆಂದು ಅನುದಾನ ಕಡಿಮೆ ಮಾಡುವುದು ತಪ್ಪು. ಇಂತಹ ಸಂದರ್ಭದಲ್ಲಿ ನಾವು ಕೃಷ್ಣನ ಕುಹಕವ ನೋಡಲ್ಲಿ ಎಂದ ಕುವೆಂಪು ಅವರನ್ನು ನೆನೆದು, ಕೇಂದ್ರದ ಕುಹಕವ ನೋಡಲ್ಲಿ ಎನ್ನಬಹುದು” ಎಂದು ವ್ಯಂಗ್ಯವಾಡಿದರು.

ಇನ್ನು ಬರಹಗಾರ, ಸಾಹಿತಿ ಬರಗೂರು ರಾಮಚಂದ್ರಪ್ಪ ಮಾತನಾಡಿ, “ಪ್ರಸ್ತುತ ಸಾಹಿತ್ಯ ಸಮ್ಮೇಳನಗಳು ಸಾಹಿತ್ಯಕ್ಕಾಗಿ ಉಳಿದಿಲ್ಲ, ವೈಚಾರಿಕ ಕೇಂದ್ರವಾಗಿಲ್ಲ. ಬದಲಾಗಿಲ್ಲ ‘ಸೆಲೆಬ್ರೆಟಿಗಳ ಶೋ’ ಆಗಿದೆ. ಎಷ್ಟು ಹೆಸರಾಂತ ಸಾಹಿತಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಾರೆ ಎಂಬುದು ಮುಖ್ಯವಾಗುತ್ತದೆ” ಎಂದು ವಿಷಾದ ವ್ಯಕ್ತಪಡಿಸಿದರು.

“ಸದ್ಯ ಏಕತೆ ಇನ್ನುವುದು ವೈವಿಧ್ಯತೆಯಲ್ಲಿ ಏಕತೆಯಾಗಿ ಉಳಿದಿಲ್ಲ. ನನ್ನ ಧರ್ಮದ ಏಕತೆಯಾಗಿದೆ. ಭಾವೈಕ್ಯತೆಯೂ ಒಂದು ಧರ್ಮಕ್ಕೆ ಸೀಮಿತವಾಗಿದೆ. ಸಮಾಜಮುಖಿ ಎಂಬುದು ಸಮಾಜದ ಪರವಾಗಿಲ್ಲ. ಬದಲಾಗಿ ಅವರ ಜಾತಿ, ಅವರ ಧರ್ಮಕ್ಕೆ ಸಮಾಜಮುಖಿಯಾಗಿದೆ. ಸದ್ಯ ಟೀಕೆ ಎಂಬುದು ಟೀಕೆಯಾಗಿ ಉಳಿಯದೆ ಬೈಗುಳವಾಗಿ ಉಳಿದಿದೆ. ಪ್ರಜಾಪ್ರಭುತ್ವವೂ ತಾಂತ್ರಿಕವಾಗಿದೆ” ಎಂದರು.

“ಮಾತು ತನ್ನ ಧ್ವನಿ ಕಳೆದುಕೊಂಡಿದ್ದು, ವಿಧಾನಸೌಧದಲ್ಲಿರಬೇಕಾದ ರಾಜಕೀಯ ಸಾಹಿತ್ಯ ಕ್ಷೇತ್ರದಲ್ಲಿ ಹೆಚ್ಚಾಗಿದೆ. ಕೂತು ಮಾತನಾಡುವ, ಸಂವಾದ ನಡೆಸುವ ಪ್ರಜಾಪ್ರಭುತ್ವವೇ ಇಲ್ಲದಾಗಿದೆ. ರಾಜನ ಆಸ್ಥಾನದಲ್ಲಿದ್ದ ಪಂಪ, ಬಸವಣ್ಣರು ರಾಜನನ್ನು ಟೀಕಿಸಿ ಸಾಹಿತ್ಯ ಬರೆದರು. ಆದರೆ ಈಗ ಹಾಗಿಲ್ಲ. ಕಾಲ ನಮ್ಮನ್ನು ಕಟ್ಟಿಹಾಕಿಕೊಳ್ಳುತ್ತಿದೆ” ಎಂದು ಅಭಿಪ್ರಾಯಿಸಿದರು.

“ಮಹಾತ್ಮ ಗಾಂಧಿ ಅವರು ಎಂದಿಗೂ ರಾಮನನ್ನು ಹೋರಾಟಕ್ಕೆ ಬಳಸಿಕೊಂಡಿಲ್ಲ. ಚರಕ, ಖಾದಿ, ಉಪ್ಪು ಎಂಬ ಜಾತ್ಯತೀತ ಸಂಕೇತಗಳನ್ನು ತಮ್ಮ ಸ್ವಾತಂತ್ರ್ಯ ಹೋರಾಟದಲ್ಲಿ ಬಳಸಿಕೊಂಡರು. ಅಂಬೇಡ್ಕರ್ ಅವರ ಮಹಾಡ್ ಸತ್ಯಾಗ್ರಹದ ಬೊಗಸೆ ನೀರು ಮತ್ತು ಗಾಂಧಿಜಿ ಅವರ ಉಪ್ಪಿನ ಸತ್ಯಾಗ್ರಹದ ಒಂದು ಹಿಡಿ ಉಪ್ಪು ಭಾರತದ ದೊಡ್ಡ ಸಂಕೇತ” ಎಂದರು.

“ಅಂಬೇಡ್ಕರ್ ಅವರು ಹಿಂದೂ ಧರ್ಮ ನಂಬಿದವರಲ್ಲ, ಡಿ. ರಾಧಾಕೃಷ್ಣನ್ ಅವರು ಹಿಂದೂ ಧರ್ಮ ಪಾಲಿಸುತ್ತಿದ್ದವರು. ಇಬ್ಬರೂ ಸಂವಿಧಾನ ಸಭೆಯಲ್ಲಿ ಧಾರ್ಮಿಕ ಹಕ್ಕಿನ ಬಗ್ಗೆ ಮಾತನಾಡಿದರು. ಎಲ್ಲಾ ಧರ್ಮಕ್ಕೆ ಸಮಾನ ಹಕ್ಕಿದೆ ಎಂದು ಹೇಳಿದವರು. ಸಾವಿತ್ರಿ ಬಾಯಿ ಫುಲೆ ಮತ್ತು ಫಾತಿಮಾ ಶೇಖ್ ಅವರು ವಿರೋಧಗಳನ್ನು ಮೆಟ್ಟಿ ನಿಂತು ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡಿದ ಮೊದಲ ಶಿಕ್ಷಕಿಯರು” ಎಂದು ನೆನೆದರು.

“ಸದ್ಯ ದೇಶ ಧರ್ಮ, ಜಾತಿ ವಿಚಾರದಲ್ಲಿ ವಿಭಜನೆಯಾಗಿದೆ. ವಿಭಜನೆ ಮಾಡುತ್ತಲೇ ನಮ್ಮದು ಒಂದೇ ದೇಶ ಒಂದೇ ಭಾಷೆ ಎನ್ನಲಾಗುತ್ತಿದೆ. ಇಂತಹ ಸಂದರ್ಭದಲ್ಲಿ ಸಾಹಿತ್ಯದ, ಸಾಹಿತಿಗಳ ಜವಾಬ್ದಾರಿ ದೊಡ್ಡದು. ನಾವು ಸತ್ಯ ಹೇಳುವುದು ಮುಖ್ಯ. ಇದು ಎಲ್ಲಾ ಮರ್ಯಾದಸ್ಥ ಮನುಷ್ಯರ ಜವಾಬ್ದಾರಿ. ನಾವು ಮರ್ಯಾದಸ್ಥ ಮನುಷ್ಯರಾಗೋಣ” ಎಂದು ಕರೆ ನೀಡಿದರು.

ಇನ್ನು ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿದ್ದ ಹಿರಿಯ ಸಾಹಿತಿ ಹೆಚ್ ಎಸ್ ಶಿವಪ್ರಕಾಶ್ ಅವರು ಮಾತನಾಡಿ ‘ಹಲವು ವ್ಯಕ್ತಿಗಳು ತಮ್ಮ ಆದಾಯದಿಂದ ತೆರಿಗೆ ಪಾವತಿಸುತ್ತಾರೆ. ಅದೆ ರೀತಿ ಬೇರೆ ಬೇರೆ ಅಧಿಕಾರಿಗಳಿದ್ದಾರೆ. ಅವರ ಬಳಿ ಅಧಿಕಾರವಿದೆಯೇ ವಿನಃ ಸಂಸ್ಕೃತಿ ಚಿಂತನೆ ಇಲ್ಲ. ಆದ್ದರಿಂದ ಈ ಸಾಹಿತ್ಯ ಕಾರ್ಯಕ್ರಮವನ್ನು ಆಯೋಜನೆ ಮಾಡಿದ ಸಮಾಜಮುಖಿ ಬಳಗಕ್ಕೆ ಅಭಿನಂದನೆಗಳನ್ನು ತಿಳಿಸಿದರು’.

‘ಉತ್ತರ ಭಾರತವು ಕೂಡ ಭಾಷೆಯಲ್ಲಿ ವೈವಿದ್ಯ ಪೂರ್ಣವಾದದ್ದು. ಸರ್ಕಾರವು ಅಧಿಕೃತವಾಗಿ ಗುರುತಿಸಿದ ಭಾಷೆಗಳು ಬಿಟ್ಟು ಇತರ ಭಾಷೆಗಳನ್ನು ಗುರುತಿಸುವುದು ಮುಖ್ಯ. ಸಾಹಿತ್ಯ ಎನ್ನುವುದು ಯಾವುದೇ ದರ್ಶನದ ತಾತ್ಪರ್ಯವಲ್ಲ. ಅದು ಲೌಕಿಕವಲ್ಲ. ಅದು ಲೋಕೋತ್ತರವು ಅಲ್ಲ. ಸಾಹಿತ್ಯವು ಅಲೌಕಿಕಿ, ಒಂದು ಸುಂದರವಾದ ಸೃಷ್ಟಿ. ಉದಾಹರಣೆಗೆ ನಮಗೆ ಕಣ್ಣಿಗೆ ಕಾಣುವ ಜೋಗಜಲಪಾತದ ರೀತಿಯಲ್ಲಿ’ ಎಂದರು.

‘ಸನಾತನ ಧರ್ಮದಕ್ಕೆ ಮೊದಲ ಉಲ್ಲೇಖ ಸಿಗುವುದು ಬುದ್ದನ ಧಮ್ಮದಲ್ಲಿ‌. ಇಂದು ಕುಬ್ಜ ಮಾನವಿಯತೆ ದೇಶವನ್ನು ಆಳುತ್ತಿದೆ. ದೇಶದ ಎಲ್ಲ ಪ್ರದೇಶವನ್ನು, ಎಲ್ಲ ಜನರನ್ನು ಒಳಗೊಳ್ಳುವ ಮಾನವಿಯತೆ ಬರಬೇಕು’ ಎಂದರು.

‘ಸಾಹಿತ್ಯ ಎನ್ನುವುದು ಉದ್ಯಮಿಕರಣವಾಗುತ್ತಿದೆ. ಅದು ಇಂದಿನ ಅಪಾಯದಂತಿದೆ. ಇನ್ನು ಮುಂದಾದರು ನಾವು ಕಾರ್ಪೋರೆಟ್ ಸಾಹಿತೀಕರಣವನ್ನು ಧಿಕ್ಕರಿಸಿಬೇಕು. ನಾನು ಸಹ ಧಿಕ್ಕರಿಸುತ್ತೇನೆ ಎಂದು ಘೋಷಿಸುತ್ತೇನೆ’ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಜ್ಯೋತಿ, ಶಶಿಧರ್ ಭಾರಿಘಾಟ್, ಹೆಚ್.ಆರ್.ಸುಜಾತ ಉಪಸ್ಥಿತರಿದ್ದರು.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ಸಮರ್ಥ್‌ ನಾಮಪತ್ರ ಸಲ್ಲಿಕೆ; ದೂರ ಉಳಿದ ರಾಜ್ಯ ಮುಸ್ಲಿಂ ಮುಖಂಡರು

ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ದಾವಣಗೆರೆ ಮುಸ್ಲಿಂ ಕಾಂಗ್ರೆಸ್‌ ಟಿಕೆಟ್...

ರಾಜ್ಯದಲ್ಲಿ ʼಎಸ್‌ಐಆರ್ʼ ಪ್ರಕ್ರಿಯೆಯನ್ನು ತರಾತುರಿಯಲ್ಲಿ ನಡೆಸಬೇಡಿ- ಪ್ರಗತಿಪರ ಸಂಘಟನೆ, ಜಾತ್ಯತೀತ ಪಕ್ಷಗಳ ಆಗ್ರಹ

ಕೇಂದ್ರ ಚುನಾವಣಾ ಆಯೋಗ ನಡೆಸುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಎಂಬುದು...