ಸುತ್ತಾಟ | ಕೊಡಗಿನ ತಡಿಯಂಡಮೋಲ್ ಬೆಟ್ಟದಲ್ಲೊಂದು ಪ್ರಶ್ನೆ: ನಾನು ಚಾರಣ ಮಾಡುವುದೇಕೆ?

Date:

ತಡಿಯಂಡಮೋಲ್ ಚಾರಣವು ಪ್ರಕೃತಿ ಪ್ರೇಮಿಗಳಿಗೆ ಮರೆಯಲಾಗದ ನೆನಪುಗಳನ್ನು ನೀಡುವುದರಲ್ಲಿ ಸಂದೇಹವೇ ಇಲ್ಲ. ಹಚ್ಚ ಹಸಿರಿನ ಕಾಡಿನ ಹಾದಿಗಳು, ಮಂಜಿನ ದೃಶ್ಯಾವಳಿಗಳು ನವ ಚಾರಣ ಮತ್ತು ಅನುಭವಿ ಚಾರಣ ಉತ್ಸಾಹಿಗಳಿಗೆ ಖುಷಿ ಕೊಡುವುದಂತೂ ನಿಜ. ಇದು ದಟ್ಟವಾದ ಕಾಡುಗಳು, ಸ್ಫಟಿಕ ಸ್ಪಷ್ಟ ಹೊಳೆಗಳು ಮತ್ತು ಹುಲ್ಲುಗಾವಲುಗಳ ಬಯಲಿನ ಮೂಲಕ ಹಾದುಹೋಗುತ್ತದೆ, ಇದು ದಕ್ಷಿಣ ಭಾರತದ ಅತ್ಯಂತ ಸುಂದರವಾದ ಚಾರಣ ಮಾರ್ಗಗಳಲ್ಲಿ ಒಂದಾಗಿದೆ ಎಂದರೂ ಉತ್ಪ್ರೇಕ್ಷೆಯೇನಲ್ಲ.

ನಾನು ಚಾರಣ ಮಾಡುವುದೇಕೆ? ಈ ಪ್ರಶ್ನೆಗೆ ಉತ್ತರ ಇನ್ನೂ ಹುಡುಕುತ್ತಿದ್ದೇನೆ. ಇದು ಪ್ರತಿಯೊಬ್ಬ ವ್ಯಕ್ತಿಯ ಅನುಭವ ಮತ್ತು ಭಾವನೆಗಳ ಮೇಲೆ ಅವಲಂಬಿತವಾಗಿದೆ. ಕೆಲವೊಮ್ಮೆ, ಚಾರಣದ ಕಠಿಣ ಹಂತದಲ್ಲಿ, “ನಾನು ಯಾಕಾದರೂ ಇಲ್ಲಿಗೆ ಬಂದೆ?” ಎಂಬ ಪ್ರಶ್ನೆ ಮನಸ್ಸಿನಲ್ಲಿ ಮೂಡತ್ತೆ. ಅದು ಕ್ಷಣಿಕ. ಮತ್ತೊಮ್ಮೆ ಆ ಕಠಿಣ ಕ್ಷಣಗಳು ಮನಸಿನಲ್ಲಿ ನೆನಪಾಗುವಾಗ, ಅವು ಜೀವನದ ಅಪರೂಪದ ಸೌಂದರ್ಯವನ್ನು ಹೊತ್ತ ಅಮೂಲ್ಯ ಅನುಭವಗಳಾಗಿದ್ದವು ಎಂಬುದನ್ನು ಮನಸಾರೆ ಒಪ್ಪಿಕೊಂಡದ್ದೂ ಇದೆ. ಶುರು ಶುರುವಿಗೆ ಮಗುವೊಂದು ಶಾಲೆಗೆ ಹೋಗಲು ಹೇಳಿದಾಗ ಅಳು ಶುರು ಮಾಡಿದ ಹಾಗೆ, ಇದ್ದ ಮನೆಯಿಂದ ಹೊಸ ಮನೆಗೆ ಹೋದ ಹಾಗೆ. ಆ ಕ್ಷಣಕ್ಕೆ ಅದು ಸಂಕಷ್ಟ ಎಂದೆನಿಸಿದರೂ, ಮತ್ತೆ ಆ ನೆನಪುಗಳು ಮರುಕಳಿಸಿದಾಗ, ಓಹ್, ಎಷ್ಟು ಸುಂದರವಾಗಿದ್ದವು ಆ ನೆನಪುಗಳು ಎಂದು ಅನಿಸದೆ ಇರದು.

ನಾನು ಚಾರಣ ಶುರು ಮಾಡಿದ್ದು ಒಂದಿಷ್ಟು ದೈಹಿಕ ಫಿಟ್ನೆಸ್ ಬರಬೇಕು ಎಂದು. ಆದರೆ ಬರಬರುತ್ತ, ಈ ಬೆಟ್ಟ, ಗುಡ್ಡ, ಹಸಿರು, ಕಾಡು, ವನರಾಶಿ, ದಿಣ್ಣೆ, ಬೀಸುವ ಗಾಳಿ, ಸುರಿವ ಮಳೆ, ತೇಲಾಡುವ ಮೋಡಗಳು, ಇವೆಲ್ಲವೂ ಒಂದು ಅಡಿಕ್ಷನ್ ಆಗಿ ಬಿಟ್ಟಿದ್ದವು. ಒಳ್ಳೆಯ ಅಡಿಕ್ಷನ್ ಕೂಡ. ಈಗೀಗ, ಯಾವುದೇ ಜಾಗಕ್ಕೆ, ದೇಶಕ್ಕೆ, ಊರಿಗೆ ಹೋದರೂ, ಅಲ್ಲಿರುವ ಸುಂದರ ಬೆಟ್ಟ ಗುಡ್ಡಗಳನ್ನು ಸುತ್ತಿ ಬರುವುದು ಅಭ್ಯಾಸವಾಗಿ ಬಿಟ್ಟಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ನನ್ನ ಜೀವನದ ಮೂರನೇ ಚಾರಣ ಕೊಡಗಿನ ಬಹು ಸುಂದರ ತಡಿಯಂಡಮೋಲ್ ಬೆಟ್ಟ. ಕರ್ನಾಟಕ ಬಹು ಸುಂದರ ಸಂಪದ್ಭರಿತ ಪ್ರಕೃತಿಯ ರಾಜ್ಯ. ಇನ್ನು ನಮ್ಮ ಕರ್ನಾಟಕದ ಕೊಡಗು, ಪ್ರಾಕೃತಿಕ ಸೌಂದರ್ಯದ ಆದರ್ಶ ಪ್ರತಿರೂಪವಾಗಿ “ಭಾರತದ ಸ್ಕಾಟ್ಲೆಂಡ್” ಎಂದೇ ಖ್ಯಾತಿ ಪಡೆದ ಸ್ಥಳ. ಭಾರತದ ನೈಋತ್ಯದಲ್ಲಿರುವ ಈ ಸುಂದರ ಗಿರಿಧಾಮವು ಮಂಜು ಮುಸುಕಿದ ಪರ್ವತಶ್ರೇಣಿಗಳು, ಹಚ್ಚಹಸಿರು ಕಾಫಿ ತೋಟಗಳು, ಹಾಗೂ ವರುಷವಿಡೀ ತಂಪಾದ ಸಮಶೀತೋಷ್ಣ ಹವಾಮಾನದಿಂದ ಪ್ರವಾಸಿಗರ, ಚಾರಣಿಗರ, ಪ್ರಕೃತಿ ಪ್ರೇಮಿಗಳ ಅಚ್ಚುಮೆಚ್ಚಿನ ಜಾಗ. ಕೊಡಗಿನ ಮೋಹಕ ಭೂದೃಶ್ಯ ಮತ್ತು ವಿಶಿಷ್ಟ ಹವಾಮಾನ ಕೊಡಗನ್ನು ಅದ್ವಿತೀಯ ಪ್ರವಾಸಿ ತಾಣವಾಗಿ ಮಾಡಿವೆ.

ಕೊಡಗಿನ ಅತಿ ಎತ್ತರದ ಬೆಟ್ಟ ಮತ್ತು ಕರ್ನಾಟಕದ ಮೂರನೇ ಅತಿ ಎತ್ತರದ ಬೆಟ್ಟವಾದ (ಮೊದಲೆನೆಯದ್ದು ಕುಮಾರ ಪರ್ವತ, ಎರಡನೆಯದ್ದು ಕುದುರೆಮುಖ) ತಡಿಯೆಂಡಮೋಲ್ ಚಾರಣಿಗರ ಸ್ವರ್ಗವಾಗಿದೆ. 1,748 ಮೀಟರ್ ಎತ್ತರದಲ್ಲಿರುವ ಈ ಸ್ಥಳವು, ಸೌಮ್ಯವಾದ ಇಳಿಜಾರು ಮತ್ತು ಹುಲ್ಲಿನ ಭೂಪ್ರದೇಶದೊಂದಿಗೆ ತಮ್ಮ ರಮಣೀಯ ಮತ್ತು ಪ್ರಶಾಂತ ವಾತಾವರಣದಿಂದ ನಿಮ್ಮನ್ನು ಆಕರ್ಷಿಸುತ್ತದೆ. ಇಲ್ಲಿನ ಇನ್ನೊಂದು ಪ್ರಮುಖ ಆಕರ್ಷಣೆಯೆಂದರೆ ಹತ್ತಿರದಲ್ಲೇ ಇರುವ ಅಬ್ಬೆ ಫಾಲ್ಸ್ ಮತ್ತು ಚಲ್ವರ ಫಾಲ್ಸ್.

ಕೊಡವ ನಾಡಿನ ಸೌಂದರ್ಯ ಅದ್ಭುತ! ಕೊಡವ ಭಾಷೆ ಮತ್ತು ಸಂಸ್ಕೃತಿಯನ್ನು ವೈಭವಕ್ಕೇರಿಸಿಬಿಡುವ ಈ ನಾಡು, ಕಾಫಿ ತೋಟಗಳ ನಡುವೆ ಹರಡಿರುವ ತಾಜಾ ಘಮವನ್ನು ನಿಮ್ಮ ಮುಂದಿಡುತ್ತದೆ. ಕಾಫಿ ಮೊಗ್ಗುಗಳ ಸುಗಂಧ, ಬಲಿತ ಕಾಫಿ ಬೀಜಗಳ ಪರಿಮಳ, ಅಲ್ಲಲ್ಲಿ ಒಣಗಲು ಹಾಸಿರುವ ಕಾಫಿ ಬೀಜಗಳ ಇನ್ನೊಂದು ತೆರನಾದ ದೃಶ್ಯ ಸೌಂದರ್ಯ, ಉದ್ದುದ್ದನೇ ಸಿಲ್ವರ್ ಮರಗಳಿಗೆ ಬೀಳು ಬಿಟ್ಟಿರುವ ಹಚ್ಚ ಹಸಿರಿನ ಕರಿ ಮೆಣಸಿನ ಬಳ್ಳಿ, ಹಾಗೂ ಹಕ್ಕಿಗಳ ಇಂಚರಿಸುವ ಕಲರವ—all combine to create an enchanting atmosphere (ಎಲ್ಲವೂ ಸೇರಿ ನೋಡುಗರನ್ನು ಮೋಡಿ ಮಾಡುವುದರಲ್ಲಿ ಸಂಶಯವೇ ಇಲ್ಲ). ಶುಭ್ರ ನೀಲಿ ಬಣ್ಣದ ಆಕಾಶ, ಚುಮುಚುಮು ಚಳಿ, ಕೊಡಗಿನ ಕಾಫಿ, ರುಚಿಕರ ಆಹಾರ, ಮತ್ತು ಪ್ರಕೃತಿಯ ಹಸಿರು ಹೊದಿಕೆ ಕೊಡಗಿಗೆ ಅದ್ವಿತೀಯ ಆಕರ್ಷಣೆಯನ್ನು ನೀಡುತ್ತವೆ. ಕರ್ನಾಟಕದ ಭಾಗವಾಗಿದ್ದರೂ, ಕೊಡಗು ತನ್ನದೇ ಆದ ವಿಶಿಷ್ಟ ಸೊಬಗು ಮತ್ತು ಸೊಗಡನ್ನು ಮೆರೆಯುವ ರಮಣೀಯ ನೆಲೆ.

WhatsApp Image 2025 03 14 at 11.00.23 PM

ತಡಿಯಂಡಮೋಲ್ ಚಾರಣವು ಪ್ರಕೃತಿ ಪ್ರೇಮಿಗಳಿಗೆ ಮರೆಯಲಾಗದ ನೆನಪುಗಳನ್ನು ನೀಡುವುದರಲ್ಲಿ ಸಂದೇಹವೇ ಇಲ್ಲ. ಹಚ್ಚ ಹಸಿರಿನ ಕಾಡಿನ ಹಾದಿಗಳು, ಮಂಜಿನ ದೃಶ್ಯಾವಳಿಗಳು ನವ ಚಾರಣ ಮತ್ತು ಅನುಭವಿ ಚಾರಣ ಉತ್ಸಾಹಿಗಳಿಗೆ ಖುಷಿ ಕೊಡುವುದಂತೂ ನಿಜ. ಇದು ದಟ್ಟವಾದ ಕಾಡುಗಳು, ಸ್ಫಟಿಕ ಸ್ಪಷ್ಟ ಹೊಳೆಗಳು ಮತ್ತು ಹುಲ್ಲುಗಾವಲುಗಳ ಬಯಲಿನ ಮೂಲಕ ಹಾದುಹೋಗುತ್ತದೆ, ಇದು ದಕ್ಷಿಣ ಭಾರತದ ಅತ್ಯಂತ ಸುಂದರವಾದ ಚಾರಣ ಮಾರ್ಗಗಳಲ್ಲಿ ಒಂದಾಗಿದೆ ಎಂದರೂ ಉತ್ಪ್ರೇಕ್ಷೆಯೇನಲ್ಲ.

ಈ ಚಾರಣ ಮಾಡಲು ಒಂದು ದಿನವಂತೂ ಬೇಕೇ ಬೇಕು. ಚಾರಣ ಕಕ್ಕಬೆ ಎಂಬ ಸುಂದರ ಹಳ್ಳಿಯಿಂದ ಆರಂಭವಾಗುವುದು. ಬೆಂಗಳೂರಿನಿಂದ ಬರುವವರು ಹಿಂದಿನ ದಿನ ಟೆಂಪೋ ಟ್ರಾವೆಲ್ಲರ್ ನಲ್ಲಿ ಅಥವಾ ಬಸ್ಸಿನಲ್ಲಿ ಸಂಜೆಯ ಹೊತ್ತಿಗೆ ಬಂದಿಳಿದು ಮಡಿಕೇರಿ, ಕಕ್ಕಬೆ ಅಥವಾ ಕಕ್ಕಬೆಗೆ ಹತ್ತಿರದ ಸ್ಥಳದಲ್ಲಿ ಹೋಮ್ -ಸ್ಟೇಯಲ್ಲಿ ಉಳಿದುಕೊಂಡು, ಮರುದಿನ ಇಲ್ಲಿಂದ, ಚಾರಣ ಆರಂಭಿಸಿದರೆ ಚಾರಣ ಸುಗಮವಾಗುತ್ತೆ. ರಾತ್ರಿ ಬಸ್ಸಿನಲ್ಲಿ ಬಂದು ಬೆಳಗಾತ ತಲುಪಿ ಅವತ್ತೇ ಚಾರಣ ಮಾಡುವವರೂ ಇದ್ದಾರೆ, ಆದರೆ ಅದು ಸ್ವಲ್ಪ ಆಯಾಸಕರ.

ಬೆಳಗ್ಗೆ ಕಕ್ಕಬೆಯಿಂದ/ಅಥವಾ ನೀವು ಉಳಿದು ಕೊಂಡಿರುವ ಜಾಗದಿಂದ ನಿಮ್ಮದೇ ಸ್ವಂತ ವಾಹನದಲ್ಲಿ ಅಥವಾ ಸ್ಥಳೀಯ ಜೀಪ್/ಆಟೋ ಬಳಸಿಕೊಂಡು ನಾಲ್ಕುನಾಡು ಅರಮನೆಯವರೆಗೆ ಹೋಗಬಹುದು. ಇಲ್ಲಿ ನಿಮ್ಮ ವಾಹನ, ಬೈಕ್, ಜೀಪ್ ಪಾರ್ಕಿಂಗ್ ಮಾಡಲು ಕೂಡ ಅವಕಾಶವಿದೆ. ಹಾಗೆಯೇ ಒಂದಿಷ್ಟು ಸಣ್ಣ ಪುಟ್ಟ ಅಂಗಡಿಗಳಿವೆ (ನೀರಿನ ಬಾಟಲ್, ಕೋಲ್ಡ್ ಡ್ರಿಂಕ್ಸ್ , ಪ್ಯಾಕೆಟ್ ತಿನಿಸುಗಳು ಇತ್ಯಾದಿ).

ನಾಲ್ಕುನಾಡು ಅರಮನೆ ಐತಿಹಾಸಿಕ ಮಹತ್ವ ಹೊಂದಿದೆ ಹಾಗೆಯೇ ಇದು ಚಾರಣದ ಸ್ಟಾರ್ಟಿಂಗ್ ಪಾಯಿಂಟ್ ಕೂಡ ಹೌದು. ಕಕ್ಕಬೆ ಸೇತುವೆಯಿಂದ ನಾಲ್ಕುನಾಡು ಅರಮನೆಗೆ ಕಾಲ್ನಡಿಗೆಯಲ್ಲಿಯೂ ತಲುಪಬಹುದು, ಅಥವಾ ವಾಹನದಲ್ಲೂ ತಲುಪಬಹುದು. ಕಕ್ಕಬೆ ಸೇತುವೆಯಿಂದ ಅರಮನೆಗೆ ಇರುವ ದೂರ ಸರಿ ಸುಮಾರು 5.5 ಕಿಲೋಮೀಟರು. ಇದು ಆರಾಮದಾಯಕ ದಾರಿ, ಆದರೆ ಸಮಯದ ಅಭಾವ ಇರುವವರು ವಾಹನದಲ್ಲಿ ಸ್ಟಾರ್ಟಿಂಗ್ ಪಾಯಿಂಟ್ ಅನ್ನು ತಲುಪಿ, ಅಲ್ಲಿಂದ ಚಾರಣ ಶುರು ಮಾಡಬಹುದು.
ನಾಲ್ಕುನಾಡು ಅರಮನೆಯಿಂದ ತಡಿಯಂಡಮೋಲ್ ಚಾರಣದ ಮುಂದಿನ ಹಂತ ಆರಂಭವಾಗುತ್ತದೆ. ಮೊದಲನೆಯದಾಗಿ, ಚೆಕ್‌ಪಾಯಿಂಟ್‌ಗೆ ತಲುಪಿ ಅಲ್ಲಿ ಅರಣ್ಯ ಇಲಾಖೆಯಿಂದ ಅಧಿಕೃತ ಪರವಾನಿಗೆ ಪಡೆಯಬೇಕು. ಪರವಾನಿಗೆ ದೊರಕಿದ ಬಳಿಕವೇ ಟ್ರೆಕಿಂಗ್ ಅನ್ನು ಮುಂದುವರಿಸಲು ಅನುಮತಿ ಸಿಗುತ್ತದೆ. ಅಧಿಕೃತವಾಗಿ ಇದನ್ನು ತಡಿಯಂಡಮೋಲ್ ಟ್ರೆಕ್ಕಿಂಗ್‌ಗಾಗಿ ಪ್ರಾರಂಭ ಬಿಂದುವಾಗಿ ಪರಿಗಣಿಸಲಾಗುತ್ತದೆ. ಆದರೆ ಹೆಚ್ಚಿನ ಚಾರಣಿಕರು ನಾಲ್ಕುನಾಡನ್ನೇ ತಮ್ಮ ಚಾರಣದ ಪ್ರಾರಂಭಿಕ ಬಿಂದುವಾಗಿ ಪರಿಗಣಿಸುತ್ತಾರೆ.

WhatsApp Image 2025 03 14 at 11.07.41 PM

ಇಲ್ಲಿಂದ ಮುಂದೆ ಸೌಮ್ಯವಾದ ಇಳಿಜಾರುಗಳ ಮೂಲಕ ತಡಿಯಂಡಮೋಲ್ ಬೇಸ್‌ಕ್ಯಾಂಪ್ ತಲುಪಬಹುದು. ಮುಂದೆ, ಚಾರಣ ತೀವ್ರಗತಿಯಲ್ಲಿ ಮುನ್ನಡೆಯುತ್ತಾ, ಬೃಹತ್ ಬಂಡೆಗಳಿರುವ “ಬೌಲ್ಡರ್ ಪಾಯಿಂಟ್” ತಲುಪುತ್ತದೆ. ಇದನ್ನು ಕ್ಯಾಂಪಿಂಗ್ ಪಾಯಿಂಟ್ ಅಂತಲೂ ಕರೆಯುತ್ತಾರೆ (ಒಂದೊಮ್ಮೆ ಇಲ್ಲಿ ಕ್ಯಾಂಪಿಂಗ್ ಮಾಡಲು ಅವಕಾಶವಿತ್ತು, ಈವಾಗ ಯಾವುದೇ ಬೆಟ್ಟದ ಮೇಲೆ ಕ್ಯಾಂಪಿಂಗ್ ಮಾಡಲು ಅವಕಾಶ ಇಲ್ಲ). ಇಲ್ಲಿನ ಪ್ರಾಕೃತಿಕ ಸೌಂದರ್ಯದ ಅದ್ಭುತ ನೋಟ ಎಂತವರನ್ನೂ ಆಕರ್ಷಿಸ ಬಲ್ಲದು. ಫೋಟೋ ತೆಗೆಯುವವರಿಗೆ ಇದು ಸೂಕ್ತ ಜಾಗ.

ತಡಿಯಂಡಮೋಲ್ ಚಾರಣ – ಶಿಖರವರೆಗೆ ಒಂದೇ ಹೆಜ್ಜೆಯಲ್ಲಿ!

ಹಳೆಯ ಕ್ಯಾಂಪಿಂಗ್ ಸ್ಥಳವನ್ನು ಮೀರಿ ಮುಂದೆ ಸಾಗಿದ ಕ್ಷಣದಿಂದಲೇ, ನಿಜವಾದ ಚಾರಣಯಾನ ಆರಂಭವಾಗುತ್ತದೆ. ಈ ಹಾದಿ ಸಮತಟ್ಟಾಗಿರದೆ, ತೀವ್ರವಾದ ಏರಿಳಿತಗಳಿಂದ ಕೂಡಿದೆ. ನಿಮ್ಮ ದೈಹಿಕ ಶಕ್ತಿಯನ್ನೆಲ್ಲಾ ಪರೀಕ್ಷಿಸುವಷ್ಟು ಕಠಿಣವಾದ ದಾರಿ ಇದು. ಆದರೂ, ಈ ಮಾರ್ಗವು ಆಕರ್ಷಕ ದೃಶ್ಯಗಳ ಮೂಲಕ ನಿಮ್ಮ ಮನಸ್ಸನ್ನು ಸೆಳೆಯುತ್ತದೆ. ದಾರಿ ತುಂಬಾ ತಿರುವು-ಮರಿವುಗಳಿಂದ ಕೂಡಿದ್ದು, ಪ್ರತಿಯೊಂದು ತಿರುವಿನಲ್ಲಿ ಕಾಡಿನ ಶಾಂತಿ, ಆಕಾಶದ ವಿಶಾಲತೆ ಮತ್ತು ದಟ್ಟ ಹಸಿರಿನ ಮನಮುಟ್ಟುವ ನೋಟಗಳು ನಿಮ್ಮನ್ನು ಮೆಚ್ಚಿಸದೇ ಇರುವುದಿಲ್ಲ. ದಾರಿ ಬಹುತೇಕ ತಿರುವು-ಮುರುವುಗಳಿಂದ ಕೂಡಿದ್ದು, ಪ್ರತಿಯೊಂದು ತಿರುವಿನಲ್ಲೂ ಕಾಡು, ಪರ್ವತ, ಆಕಾಶ ಮತ್ತು ದಟ್ಟ ಹಸಿರಿನ ಪರಿ ಸುಂದರ ವೀಕ್ಷಣಾ ಬಿಂದುಗಳನ್ನು (viewing point ) ಒದಗಿಸುತ್ತದೆ. ಆದರೂ ನೀವು ಇಲ್ಲಿ ಆರಾಮವಾಗಿ ನಡೆಯುವ ಹಾಗೆ ಇಲ್ಲ, ಪ್ರತಿಯೊಂದು ಹೆಜ್ಜೆಯ ಮೇಲೂ ಗಮನವಿಟ್ಟು ನಡೆಯಬೇಕಾದ ದಾರಿ ಇದು. ಟ್ರೆಕಿಂಗ್ ಪೋಲ್ ಇದ್ದರೆ ಇನ್ನೂ ಉತ್ತಮ. ಈ ದಾರಿ ಸುಮಾರು 1-1.5 ಕಿಲೋಮೀಟರು ಆದರೂ ಕೂಡ, ಸರಿ ಸುಮಾರು 1-2 ಗಂಟೆ ತೆಗೆದುಕೊಳ್ಳಬಹುದು(ಅವರವರ ದೈಹಿಕ ಸಾಮರ್ಥ್ಯಕ್ಕೆ ಅನುಗುಣವಾಗಿ).

ಆರಂಭಿಕ ಚಾರಣಿಗರಿಗೆ ಕಿವಿಮಾತು: ಚಾರಣವನ್ನು ಆದಷ್ಟು ಬೆಳಗಿನ ಜಾವವೇ ಪ್ರಾರಂಭಿಸಿದರೆ ಉತ್ತಮ, ಏಕೆಂದರೆ ತುಂಬಾ ಸ್ಟೀಪ್ ಇರುವ ಜಾಗಗಳಲ್ಲಿ ಬೆಟ್ಟವನ್ನು ಏರಲು ಸಾಕಷ್ಟು ಸಮಯ ಬೇಕಾಗುತ್ತದೆ. ಆದ್ದರಿಂದ ನಿದಾನವಾಗಿ, ನಿಮ್ಮ ಅನುಕೂಲಕ್ಕೆ ತಕ್ಕಂತೆ ಸಾಗಿದರೆ ಚಾರಣ ಅಷ್ಟು ಕಷ್ಟಕರವಾಗುವುದಿಲ್ಲ. ಬೇಸಿಗೆ ಸಮಯದಲ್ಲಿ ಸೂರ್ಯನ ತೀವ್ರತೆಯು ಹೆಚ್ಚಾಗಿ ಭಾಸವಾಗುತ್ತದೆ, ಹಾಗಾಗಿ ಸಾಕಷ್ಟು ನೀರು ತೆಗೆದುಕೊಂಡು ಹೋಗುವುದು ಅಗತ್ಯ. ಜೊತೆಗೆ ಕ್ಯಾಪ್ ಮತ್ತು ಸನ್ ಗ್ಲಾಸ್ಸೆಸ್ ತೆಗೆದುಕೊಂಡು ಹೋದರೆ, ಬಿಸಿಲಿನಿಂದ ರಕ್ಷಣೆ ಪಡೆಯಲು ಸಹಾಯಕವಾಗುತ್ತದೆ. ಮಾರ್ಗಮಧ್ಯದಲ್ಲಿ ಎಲ್ಲಿಯೂ ನೀರು ಅಥವಾ ಆಹಾರ ದೊರೆಯುವುದಿಲ್ಲ. ಆದ್ದರಿಂದ ಮುನ್ನೆಚ್ಚರಿಕೆಯಾಗಿ ಬೇಕಾದಷ್ಟು ಪಾನೀಯ ಮತ್ತು ಆಹಾರ ಪದಾರ್ಥಗಳನ್ನು ಪೂರೈಸಿಕೊಂಡು ಹೊರಡುವುದು ಅತ್ಯಂತ ಮುಖ್ಯ.

ಶಿಖರವಿಗೆ ಮುನ್ನದ ಅಂತಿಮ ಸವಾಲು – ಅರಣ್ಯ ವಿಭಾಗ

ಅಂತಿಮ ಹಂತದಲ್ಲಿ ತಡಿಯಂಡಮೋಲ್ ಬೆಟ್ಟವನ್ನು ತಲುಪಲು ತೀವ್ರ ಏರಿಳಿತಗಳ ಹಾದಿಯನ್ನು ದಾಟಬೇಕಾಗುತ್ತದೆ. ಈ ಹಂತ ಸವಾಲಿನಂತೆ ಭಾಸವಾದರೂ, ಬೆಟ್ಟದ ಶಿಖರವನ್ನು ತಲುಪಿದಾಗ ಎದುರಾಗುವ ನೋಟ ಮತ್ತು ಅನುಭವವು ಎಲ್ಲವನ್ನು ಮರೆಮಾಡಿಸುವಷ್ಟು ಅದ್ಭುತವಾಗಿರುತ್ತದೆ. ತಡಿಯಂಡಮೋಲ್ ಬೆಟ್ಟದ ಶಿಖರ ತಲುಪುವ ಮುನ್ನ, ಸುಮಾರು 500 ಮೀಟರ್ ಉದ್ದದ ಗಾಢ ಅರಣ್ಯ ಭಾಗವನ್ನು ದಾಟಬೇಕಾಗುತ್ತದೆ. ಈ ಹಂತದಲ್ಲಿ ಹಾದಿ ಇನ್ನಷ್ಟು ಕಠಿಣವಾಗುತ್ತದೆ—ಜಾರಿ ಹೋಗುವ ಅಪಾಯವಿರುವ ತೀವ್ರ ಏರುಗಳೂ ಇರುತ್ತವೆ. ಪ್ರತಿಯೊಂದು ಹೆಜ್ಜೆಯನ್ನೂ ಎಚ್ಚರಿಕೆಯಿಂದ ಇಡಬೇಕಾಗುತ್ತೆ . ಮಳೆಗಾಲದಲ್ಲಿ ಈ ಹಾದಿ ಮತ್ತಷ್ಟು ಸವಾಲುದಾಯಕ: ತೀವ್ರವಾದ ಹಿಮ ಗಾಳಿ, ಜಾರುವ ಬೂದು ಮಣ್ಣು—ಬಲು ಎಚ್ಚರಿಕೆಯಿಂದ ನಡೆಯಬೇಕಾಗುತ್ತೆ. ಇಲ್ಲಿ “ನಿಮ್ಮ ಮುಂದಿನ ಹೆಜ್ಜೆ ಎಲ್ಲಿಡುವುದು” ಎನ್ನುವ ಹೊರತು ಮನಸ್ಸಿನಲ್ಲಿ ಇನ್ಯಾವ ಆಲೋಚನೆಯೂ ನುಸುಳುವುದಿಲ್ಲ. ಒಂದೊಮ್ಮೆ ನನ್ನನ್ನು ನಾನು ಪ್ರಶ್ನಿಸಿದ್ದೂ ಇದೆ: ಇಂತಹುದೇ ಏಕಾಗ್ರತೆ ಜೀವನಪೂರ್ತಿ ಇದ್ದರೆ ಜೀವನ ಹೇಗಿರುತ್ತಿತ್ತು ಎಂದು? ಉತ್ತರವಿನ್ನೂ ಸಿಕ್ಕಿಲ್ಲ.

ಆದರೆ, ಈ ಕಠಿಣ ಹಂತವನ್ನು ತಲುಪಿದಮೇಲೆ ಎದುರಿಗೆ ಬರುವ ದೃಶ್ಯ?—ಅದು ವರ್ಣಿಸಲಾಗದಷ್ಟು ಅದ್ಭುತ! ಬೆಟ್ಟದ ತುದಿಯಲ್ಲಿ ನಿಂತು, ಚಳಿ ಮಿಡಿಯುವ ಗಾಳಿಯನ್ನು ಉಸಿರಾಡುವಾಗ, ನಿಮ್ಮ ಶ್ರಮವೆಲ್ಲವೂ ಸಾರ್ಥಕ ಎಂದೆನಿಸುವ ಕ್ಷಣ ಅದು. ಈ ಅಂತಿಮ ಹಂತದ ಸವಾಲುಗಳು, ನೀವು ಎದ್ದಿದ್ದು, ಬಿದ್ದಿದ್ದು, ಉಸಿರಾಡಲು ಕಷ್ಟ ಪಟ್ಟಿದ್ದು – ಇವೆಲ್ಲವೂ ಬೆಟ್ಟದ ಮೇಲಿಂದ ಕಾಣುವ ಅದ್ಭುತ ಅನುಭವದ ಮುಂದೆ ಸಂಪೂರ್ಣವಾಗಿ ಮರೆತುಹೋಗುತ್ತವೆ. ಕಣ್ಣು ಹರಿಸಿದಷ್ಟು ದೂರವಿರುವ ಪರ್ವತ ಶ್ರೇಣಿಗಳ ಅದ್ಭುತ ಸಾನ್ನಿಧ್ಯ, ಸಮತಟ್ಟಾಗಿ ಹಬ್ಬಿರುವ ಹಸಿರು ಮರಗಿಡಗಳ ನಡುವಿನಲ್ಲಿ ಹಚ್ಚ ಹಸುರಿನ ಹುಲ್ಲು ಪೈರುಗಳು ಹರಡಿರುವ ನೈಸರ್ಗಿಕ ಸೌಂದರ್ಯ ಮನಸ್ಸನ್ನು ಮೋಡಿ ಮಾಡಿಯೇ ಬಿಡುತ್ತವೆ. ಕೆಲವೊಮ್ಮೆ ಆಕಾಶವನ್ನು ಅಲಂಕರಿಸುವ ಮಳೆಬಿಲ್ಲು, ತುಂತುರು ಮಳೆಬಿಂದುಗಳು, ಮತ್ತು ಮೋಡಗಳಿಂದ ಆವರಿಸಲಾದ ಆಕಾಶದ ದೃಶ್ಯ ಈ ಸ್ಥಳವನ್ನು ಮತ್ತಷ್ಟು ವಿಶೇಷವಾಗಿಸುತ್ತವೆ. ಇವನ್ನೆಲ್ಲ ನೋಡಿದ ನಿಮಗೆ ಸ್ಕಾಟ್ಲೆಂಡಿನ ಪ್ರಕೃತಿಯೊಳಗೇ ಇದ್ದೀರಿ ಎಂಬ ಅನುಭವವನ್ನು ನೀಡುವುದು ಸಹಜ.

WhatsApp Image 2025 03 14 at 10.51.12 PM

ತಡಿಯಂಡಮೋಲ್ ಚಾರಣದ ದಾರಿಯ ಉದ್ದ ಸುಮಾರು 14 ಕಿಲೋಮೀಟರ್ (ಹೋಗಿ-ಬರುವುದನ್ನು ಸೇರಿಸಿ). ಸರಾಸರಿ ವೇಗದಲ್ಲಿ ನಡೆದರೆ, ಬೆಟ್ಟವನ್ನು ಏರಿ ಇಳಿಯಲು ಸರಿ ಸುಮಾರು 7-8 ಗಂಟೆಗಳ ಕಾಲ ಬೇಕಾಗುತ್ತದೆ, ಇದರಲ್ಲಿ ವಿಶ್ರಾಂತಿ ತೆಗೆದುಕೊಳ್ಳುವ ಸಮಯವೂ ಒಳಗೊಂಡಿದೆ. ನೀವು ಚಾರಣಕ್ಕೆ ಹೆಚ್ಚು ಸಮಯ ತೆಗೆದುಕೊಂಡರೆ, ಸಂಜೆ ಮುಸುಕಾದಾಗ ಅಥವಾ ರಾತ್ರಿ ಕತ್ತಲಾದಾಗ ಇಳಿಯುವ ದಾರಿ ಸ್ವಲ್ಪ ಕಷ್ಟವಾಗಬಹುದು. ಇದಲ್ಲದೆ, ಈ ಚಾರಣಕ್ಕೆ ಅರಣ್ಯ ಇಲಾಖೆಯಿಂದ ಅನುಮತಿ ಪಡೆಯಬೇಕಾಗಿರುವುದರಿಂದ, ಅವರ ನಿಯಮಿತ ಸಮಯದ ಒಳಗೆ ಹಿಂತಿರುಗುವುದು ಅಗತ್ಯ. ಕರ್ನಾಟಕದಲ್ಲಿ ಯಾವುದೇ ಬೆಟ್ಟದಲ್ಲಿ ಕ್ಯಾಂಪಿಂಗ್ ಮಾಡಲು ಅನುಮತಿ ಇಲ್ಲ, ಆದ್ದರಿಂದ ನೀವು ಆರಂಭದ ಬಿಂದುವಿಗೆ ತಲುಪಲು ಎಷ್ಟು ಸಮಯ ಬೇಕಾಗಬಹುದು ಎಂಬುದನ್ನು ಮುಂಚಿತವಾಗಿ ನಿರ್ಧರಿಸಿ, ಆ ಸಮಯದ ಆಧಾರದ ಮೇಲೆ ಬೇಕಾಗಿರುವ ಸಮಯಕ್ಕೆ ಮುಂಚೆಯೇ ಇಳಿಯಲು ಆರಂಭಿಸುವುದು ಉತ್ತಮ. ಕಕ್ಕಬೆ, ಅಥವಾ ಮಡಿಕೇರಿಯಲ್ಲಿ ನಿಮಗೆ ಗೈಡ್ ಬೇಕೆಂದರೆ ಇಲ್ಲಿ ಸಿಗುತ್ತಾರೆ. ಆದರೆ ಈ ಚಾರಣಕ್ಕೆ ಗೈಡಿನ ಅವಶ್ಯಕತೆ ಇಲ್ಲ.

ಚಾರಣ ಎಂದರೆ ಶಾರೀರಿಕ ಪ್ರಯತ್ನ ಮಾತ್ರವಲ್ಲ, ಅದು ಮನಸ್ಸಿನ ಶಕ್ತಿಯನ್ನು ಪರೀಕ್ಷಿಸುವ ಒಂದು ಪ್ರಯಾಣವೂ ಹೌದು. ಅಷ್ಟೊಂದು ಚಾರಣದ ಅನುಭವವಿಲ್ಲದ ನನಗೆ, ತಡಿಯಂಡಮೋಲ್ ನನ್ನೊಳಗಿನ ಸಾಮರ್ಥ್ಯವನ್ನು ಅರ್ಥಮಾಡಿಕೊಳ್ಳುವ ಅವಕಾಶ ನೀಡಿತ್ತು. ಬೆಟ್ಟದ ತುದಿಯನ್ನು ತಲುಪುವುದರಲ್ಲೇ ಚಾರಣದ ಸಾರ್ಥಕತೆ ಇರುವುದಿಲ್ಲ; ಬದಲಾಗಿ, ಅದು ಜೀವನದ ಹೊಸ ಬಗೆಯನ್ನು ಅರಿಯುವ ಒಂದು ಅನನ್ಯ ಅನುಭವ ಕೂಡ ಹೌದು ಎಂದು ಇಲ್ಲಿ ಮನದಟ್ಟಾಗಿದ್ದು ನಿಜ.

ಇಂದಿಗೂ ನಾನು ಚಾರಣವನ್ನು ಅಪಾರವಾಗಿ ಪ್ರೀತಿಸುವುದಕ್ಕೆ ಒಂದು ಮುಖ್ಯ ಕಾರಣವಿದೆ—ಪ್ರತಿಯೊಂದು ಪರ್ವತವು ತನ್ನದೇ ಆದ ಕಥೆಯನ್ನು ಹೇಳುತ್ತದೆ, ಪ್ರತಿಯೊಂದು ಹಾದಿಯು ಹೊಸ ಅನುಭವವೊಂದನ್ನು ತರುತ್ತದೆ. “ನಾನು ಏಕೆ ಚಾರಣ ಮಾಡುತ್ತೇನೆ?” ಈ ಪ್ರಶ್ನೆಗೆ ಸ್ಪಷ್ಟ ಉತ್ತರ ಸಿಗದಿರಬಹುದು. ಕೆಲವೊಮ್ಮೆ ಪ್ರಶ್ನೆಗಳು ಪ್ರಶ್ನೆಗಳಾಗಿಯೇ ಉಳಿಯುತ್ತವೆ. ಅದಕ್ಕೆ ಉತ್ತರ ಕಂಡುಕೊಳ್ಳಬೇಕು ಎನ್ನುವ ತವಕವೂ ಇರುವುದಿಲ್ಲ. ಆದರೆ ಪ್ರತಿಯೊಂದು ಪ್ರಯಾಣವೂ ಹೊಸ ಪ್ರಶ್ನೆಗಳನ್ನು ಹುಟ್ಟಿಸುತ್ತದೆ, ಹೊಸ ಅರಿವುಗಳನ್ನು ನೀಡುತ್ತದೆ, ಹೊಸ ನೆನಪುಗಳನ್ನು ಬರೆಯುತ್ತದೆ. ಜೀವನದ ಸೌಂದರ್ಯವನ್ನು ಅರ್ಥಮಾಡಿಕೊಳ್ಳಲು ಇಷ್ಟು ಸಾಕು, ಅಲ್ಲವೇ?

WhatsApp Image 2025 11 17 at 5.26.24 PM
ಸುಚಿತ್ರಾ ಎಸ್‌ ಎ
+ posts

ಮೂಲತಃ ಉಡುಪಿಯವರು. ಸ್ವಲ್ಪ ಕಾಲ ಕರ್ನಾಟಕ ಹೈಕೋರ್ಟಿನಲ್ಲಿ ವಕೀಲಿ ವೃತ್ತಿ ಮಾಡಿದ್ದಾರೆ. ಸದ್ಯ ಜರ್ಮನಿಯ ಮ್ಯೂನಿಚ್ ಟೆಕ್ನಿಕಲ್ ಯುನಿವರ್ಸಿಟಿಯಲ್ಲಿ ಪಿಎಚ್‌ಡಿ ಮಾಡುತ್ತಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಸುಚಿತ್ರಾ ಎಸ್‌ ಎ
ಸುಚಿತ್ರಾ ಎಸ್‌ ಎ
ಮೂಲತಃ ಉಡುಪಿಯವರು. ಸ್ವಲ್ಪ ಕಾಲ ಕರ್ನಾಟಕ ಹೈಕೋರ್ಟಿನಲ್ಲಿ ವಕೀಲಿ ವೃತ್ತಿ ಮಾಡಿದ್ದಾರೆ. ಸದ್ಯ ಜರ್ಮನಿಯ ಮ್ಯೂನಿಚ್ ಟೆಕ್ನಿಕಲ್ ಯುನಿವರ್ಸಿಟಿಯಲ್ಲಿ ಪಿಎಚ್‌ಡಿ ಮಾಡುತ್ತಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಿಲ್ಲಿ ಮಾತು | ಕ್ರೂರಿಗಳ ಲೋಕದಲ್ಲಿ ಮಹಿಳಾ ದಿನ

ನಮ್ಮ ಪಾಖಂಡ ಸಮಾಜದ ರೀತಿ ನೀತಿಗಳನ್ನು ನೋಡಿ ನಗು ಬರುತ್ತದೆ. ಇಲ್ಲಿ...

ಅಲ್ಲಮನ ಅನನ್ಯ ಪದಪ್ರಯೋಗಗಳು | ನೇತ್ರಮಹಿಮೆ

ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ...

ಯುಗಧರ್ಮ | ಇರಾನ್ ಬಗ್ಗೆ ಮೋದಿ ಮೌನ ನಮ್ಮನ್ನು ನಾಚಿಕೆಗೀಡು ಮಾಡಿದೆ

ಕನಿಷ್ಠ ಭಾರತವಾದರೂ ಈ ಬೂಟಾಟಿಕೆಯಲ್ಲಿ ಭಾಗವಹಿಸಬಾರದು. ನಮ್ಮ ಪರಮಾಣು ಬಾಂಬ್‌ಗಳಿಗೆ ಜಾಗತಿಕ...