ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ ಪದದ ಬಗ್ಗೆ ಈ ಕೆಳಗಿನ ಮಾದರಿಯಲ್ಲಿ ವಿವರಿಸಲಾಗುವುದು. ಈದಿನ ಓದುಗರಿಗಾಗಿ ಅಲ್ಲಮನ ಅರಿವು…
ಎರಡೊಂದಾದ ಬಳಿಕ
ಎರಡೊಂದಾದ ಬಳಿಕ ಅರ್ಚನೆ ಹಿಂಗಿತ್ತು.
ಎರಡೊಂದಾದ ಬಳಿಕ ಅರ್ಪಿತ ಹಿಂಗಿತ್ತು.
ಎರಡೊಂದಾದ ಬಳಿಕ ಆಚಾರ ಹಿಂಗಿತ್ತು.
ಎರಡೊಂದಾದ ಬಳಿಕ ಅವಧಾನ ಹಿಂಗಿತ್ತು.
ಎರಡೊಂದಾದ ಬಳಿಕ ಶಬ್ದಕ್ಕೆ ಇಂಬಿಲ್ಲ ರೂಹಿಸಲೆಡೆಯುಂಟೆ ಗುಹೇಶ್ವರಾ?
ವಚನಾರ್ಥ:
ಇದು ದ್ವೈತ, ಅದ್ವೈತ ಸಿದ್ಧಾಂತಗಳ ಕಲ್ಪನೆಯಲ್ಲಿ ರಚಿಸಿದ ವಚನ. ಅದ್ವೈತದ ಪ್ರಕಾರ ಬ್ರಹ್ಮವೊಂದೇ ಸತ್ಯ. ಜಗತ್ ಮಿಥ್ಯ. ಜೀವವು ಬ್ರಹ್ಮವೇ ಹೊರತು ಬೇರೆ ಅಲ್ಲ. ದ್ವೈತ ಎಂದರೆ ಎರಡು. ಜೀವಾತ್ಮ ಪರಮಾತ್ಮ ಬೇರೆ ಬೇರೆ ಎಂಬುದು ಇಲ್ಲಿನ ತತ್ವ. ವಚನದ ಸಂದರ್ಭದಲ್ಲಿ ಅಂಗ ಮತ್ತು ಲಿಂಗ ಎಂದು ಅರ್ಥೈಸಬಹುದು. ಅಂಗ ಮತ್ತು ಲಿಂಗ ಬೇರೆ ಎಂದರೆ ದ್ವೈತ. ಎರಡೂ ಒಂದೇ ಎಂದರೆ ಅದ್ವೈತ. ಅಂಗ ಮತ್ತು ಲಿಂಗ ಎರಡೂ ಒಂದಾದ ಬಳಿಕ ಶರಣನಿಗೆ ತಾನು ಲಿಂಗದ ಅವಿಭಾಜ್ಯ ಅಂಗ ಎಂಬ ಅನುಭಾವ ಮೂಡುತ್ತದೆ. ಹಾಗೆ ಎರಡೊಂದಾದ ಬಳಿಕ ಅರ್ಚನೆ ಅಂದರೆ ಪೂಜೆ, ಅರ್ಪಿತ ಅಂದರೆ ನೈವೇದ್ಯ, ಆಚಾರ ಅಂದರೆ ಜಪತಪ, ಅವಧಾನ ಅಂದರೆ ಧ್ಯಾನ ಇವೆಲ್ಲವೂ ಶರಣನಲ್ಲಿ ಇಂಗಿ ಹೋಗುತ್ತವೆ, ಹಿಂಗಿ ಹೋಗುತ್ತವೆ. ಆಗ ಅಲ್ಲಿ ಎಲ್ಲವೂ ಮೌನ. ಕೇಳಿಸಿಕೊಳ್ಳುವ ಶಬ್ದವಿಲ್ಲ. ಕಾಣಿಸಿಕೊಳ್ಳುವ ರೂಪವಿಲ್ಲ. ಗುಹೇಶ್ವರ ಅದ್ವೈತ!
ಪದ ಪ್ರಯೋಗಾರ್ಥ:
ಆರು ಸಾಲಿನ ವಚನದಲ್ಲಿ “ಎರಡೊಂದಾದ ಬಳಿಕ” ಐದು ಸಾರಿ ಪುನರಾವರ್ತನೆ ಆಗಿದೆ. ಇದೇ ಈ ವಚನದ ಅನನ್ಯತೆ. ಎರಡು ಒಂದಾಗುವ ಅದ್ವೈತ, ಎರಡು ಎರಡಾಗಿರುವ ದ್ವೈತ ಇವೆರಡರಲ್ಲಿ ಸಮನ್ವಯ ಕಾಯ್ದುಕೊಂಡು ಅದ್ವೈತ ಸಿದ್ದಾಂತವನ್ನು ಪ್ರತಿಪಾದಿಸುವ ವಚನದ ಉದ್ದೇಶ “ಎರಡೊಂದಾದ ಬಳಿಕ” ಎಂಬ ಪದ ಬಳಕೆಯಲ್ಲಿ ಸಫಲವಾಗಿದೆ. ಇಡೀ ವಚನ ಸಾಹಿತ್ಯ ಚಿಂತನೆ ನೆಲೆ ನಿಂತಿರುವುದೇ ಅದ್ವೈತ ಸಿದ್ದಾಂತದ ಆಧಾರದ ಮೇಲೆ. ಶರಣ ಪರಂಪರೆಯಲ್ಲಿ ಇಷ್ಟಲಿಂಗದ ಕಲ್ಪನೆ ಒಡ ಮೂಡುವುದರ ಮೂಲವಿರುವುದೇ ಅದ್ವೈತ ಸಿದ್ದಾಂತದಲ್ಲಿ. “ಇಡೀ ಕಾಳಾಗಿ ಒಂದಾಗಿ ಬಾಳಿ, ಒಡೆದು ಆಗದಿರಿ ಎರಡು ಬ್ಯಾಳಿ” ಅಂತ ಬೇಂದ್ರೆಯವರು ತಮ್ಮದೇ ವಿಶಿಷ್ಟ ಧಾಟಿಯಲ್ಲಿ ಅದ್ವೈತವನ್ನು ವ್ಯಾಖ್ಯಾನಿಸಿದ್ದಾರೆ.
ಮೇಲ್ನೋಟಕ್ಕೆ ಸರಳವಾಗಿ ಕಾಣುವ ಅಲ್ಲಮನ ವಚನ ಆಧ್ಯಾತ್ಮಿಕ ಅರ್ಥದಲ್ಲಿ ಮತ್ತು ಕಾವ್ಯ ಗುಣದಲ್ಲಿ ಅತ್ಯಂತ ಗಂಭೀರವಾಗಿದೆ. ಎರಡೊಂದಾದ ಬಳಿಕ ಹಿಂಗಿತ್ತು ಎಂದು ಐದು ಸಾರಿ ಪುನರಾವರ್ತನೆ ಮಾಡುತ್ತಲೇ ಅರ್ಚನೆ, ಅರ್ಪಿತ, ಆಚಾರ, ಅವಧಾನ ಎಂದು ಅಕಾರದ ಪದಗಳನ್ನು ಪ್ರಾಸಬದ್ದವಾಗಿ ಪ್ರಯೋಗಿಸುತ್ತಾ ವಚನಕ್ಕೆ ಚಾಲನ ಶಕ್ತಿಯನ್ನು ನೀಡುತ್ತದೆ.
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಸಾಯದ ಸಂಚು
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಅನುಪಮಸುಖಿ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ನೀರಲಾದ ನಿರ್ಮಿತಂಗಳು
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಹೊದಕುಳಿ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಅನುಪಮಸುಖಿ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಆಶಾಪಾಶ ವಿರಹಿತರು
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಮಡದಿಯರ ಒಲುಮೆ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಬಗೆದು ಬಿತ್ತಿದ ಬ್ರಹ್ಮಬೀಜ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ತಾನಿದ್ದಲ್ಲಿ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ನಿದ್ರೆಯೆಂಬ ಕಾಳೋರಗ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಕೀಲು ಮಡಗಿದಾತ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಮಾದುದು ಮಾದುದಲ್ಲ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಮಾಯದ ಮಂಜು
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ದಳದುಳಿ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಬಯಲು
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ನಷ್ಟಸಂತಾನ

ಹರಿಹರ ಶಿವಕುಮಾರ್
ಲೇಖಕ, ವೃತ್ತಿಯಿಂದ ಚಾರ್ಟರ್ಡ್ ಅಕೌಂಟೆಂಟ್. ಲೆಕ್ಕಪರಿಶೋಧನೆ ಮತ್ತು ತೆರಿಗೆ ವಿಚಾರಗಳಲ್ಲಿ ಪರಿಣತಿ. ಕನ್ನಡದಲ್ಲಿ ಕಂಪ್ಯೂಟರ್ ಬಳಕೆ ಇವರ ಹವ್ಯಾಸ. ಕನ್ನಡ ಭಾಷೆ ಮತ್ತು ಸಾಹಿತ್ಯದಲ್ಲಿ ಆಸಕ್ತರು. ಶಿವಮೊಗ್ಗ ಜಿಲ್ಲೆಯವರು, ಸದ್ಯ ಬೆಂಗಳೂರಿನಲ್ಲಿ ನೆಲೆ.




