ಅಲ್ಲಮನ ಅನನ್ಯ ಪದಪ್ರಯೋಗಗಳು | ಕಾಮವಿಕಾರಿಗಳು

Date:

ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ ಪದದ ಬಗ್ಗೆ ಈ ಕೆಳಗಿನ ಮಾದರಿಯಲ್ಲಿ ವಿವರಿಸಲಾಗುವುದು. ಈದಿನ ಓದುಗರಿಗಾಗಿ ಅಲ್ಲಮನ ಅರಿವು…

ಕಾಮವಿಕಾರಿಗಳು
ಗಗನದ ಮೇಘಂಗಳೆಲ್ಲ ಸುರಿದವು
ಭೂಮಿಯ ಮೇಲೆ.
ಭೂಮಿ ದಣಿಯುಂಡು
ಸಸಿಗಳೆಲ್ಲಾ ಬೆಳೆದವು.
ಬಹುವಿಕಾರದಿಂದ ಬೆಳೆದ ಸಸಿಯ ವಿಕಾರದಿಂದ ಗ್ರಹಿಸುವ ಕಾಮವಿಕಾರಿಗಳು, ಲಿಂಗವನೆತ್ತ ಬಲ್ಲರು ಗುಹೇಶ್ವರಾ?

ಪದಾರ್ಥ:
ದಣಿಯುಂಡು = ಪೂರ್ತಿಯಾಗಿ ಉಂಡು
ಬಹುವಿಕಾರ = ನಾನಾ ಬಗೆ ಆಸೆಗಳಿಂದ
ಕಾಮವಿಕಾರಿ = ಭೋಗಲಾಲಸೆಯುಳ್ಳವ

ವಚನಾರ್ಥ:
ನಿಸರ್ಗ ಸುಭಿಕ್ಷವಾಗಿದ್ದ ಸಮಯದಲ್ಲಿ ಆಯಾಯ ಕಾಲಕ್ಕೆ ಸರಿಯಾಗಿ ವಾಡಿಕೆಯಂತೆ ಮೋಡಗಳು ಭೂಮಿಯ ಮೇಲೆ ಮಳೆ ಸುರಿಸುತ್ತವೆ. ಭೂಮಿ ಸಮೃದ್ಧವಾಗಿ ಮಳೆಯನುಂಡು ಸಸ್ಯಸಂಕುಲ ಮತ್ತೆ ಮೈದಳೆಯುತ್ತದೆ. ಚಿಗುರು, ಹೂವು, ಹಸಿರು, ಹಣ್ಣು, ಪೈರು, ಫಸಲು ಹೊಮ್ಮುತ್ತವೆ. ನಿಸರ್ಗ ನೀಡುವ ಫಲ ಜನ ಸಮುದಾಯದ ಅಗತ್ಯವನ್ನು ತೀರಿಸುವುದಕ್ಕಾಗಿ. ಆದರೆ ಅತೀ ಆಸೆಯುಳ್ಳ ಮನುಷ್ಯ ನಿಸರ್ಗ ನೀಡಿದ ಫಲವನ್ನು ಅಗತ್ಯಕ್ಕಷ್ಟೇ ಬಳಸದೆ ತನ್ನ ಸ್ವಾರ್ಥಕ್ಕಾಗಿ ಅತಿಯಾಗಿ ಭೋಗಿಸಲಾರಂಭಿಸುತ್ತಾನೆ. ಆತನ ಆಸೆ ಅಂದರೆ ಕಾಮ ಸಕಾರಗೊಳ್ಳದೆ ವಿಕಾರವಾಗತೊಡಗುತ್ತದೆ. ನಿಸರ್ಗ ಬೆಳೆದು ಕೊಟ್ಟ ಫಲವನ್ನು ವಿಕಾರದಿಂದ ಭೋಗಿಸುವವ ಕಾಮವಿಕಾರಿ ಆಗುತ್ತಾನೆ. ದೈವಸ್ವರೂಪಿಯಾದ ನಿಸರ್ಗಕ್ಕೆ ಕೃತಘ್ನನಾಗುತ್ತಾನೆ. ಈ ಭೂಮಿ ಪ್ರತಿಯೊಬ್ಬರ
ಅಗತ್ಯವನ್ನು ಪೂರೈಸಲು ಶಕ್ತವಾಗಿದೆ, ಆದರೆ ಪ್ರತಿಯೊಬ್ಬರ ಅತೀಯಾಸೆಯನ್ನಲ್ಲ ಎಂಬ ಮಹಾತ್ಮಾ ಗಾಂಧಿಯ ಪ್ರಸಿದ್ಧ ಉಲ್ಲೇಖವೇ ಈ ವಚನದ ಆಶಯ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಅನುಪಮಸುಖಿ

ಪದ ಪ್ರಯೋಗಾರ್ಥ:
ಕಾಮ ಅಂದರೆ ಆಸೆ. ಆಸೆ ಮನುಷ್ಯ ಸಹಜವಾದುದು. ಆಸೆ ಇರಬಾರದು ಅಂತೇನಿಲ್ಲ. ಆಸೆಗೆ ಮಿತಿಯಿರಬೇಕೆಂದು ಲೋಕಾನುಭವ ಹೇಳುತ್ತದೆ. ನಿಸರ್ಗ ಕೊಟ್ಟ ಸಂಪನ್ಮೂಲಗಳನ್ನು ಸದ್ಭಳಕೆ ಮಾಡಿ ಜೀವನ ನಡೆಸಬೇಕು. ಬಳಕೆ ದುರ್ಬಳಕೆ ಆಗಬಾರದು.
ಆಸೆ ದುರಾಸೆ ಆಗಬಾರದು. ಕಾಮ ವಿಕಾರ ಆಗಬಾರದು. ಕಾಮವಿಕಾರವಾದವನು ಕಾಮವಿಕಾರಿ. “ಏನೆಂದು ನಾ ಹೇಳಲಿ, ಮಾನವನಾಸೆಗೆ ಕೊನೆಯೆಲ್ಲಿ, ಕಾಣೋದೆಲ್ಲ ಬೇಕು ಎಂಬ ಹಠದಲ್ಲಿ ಒಳ್ಳೇದೆಲ್ಲ ಬೇಕು ಎಂಬ ಛಲದಲ್ಲಿ ಯಾರನ್ನೂ ಪ್ರೀತಿಸನು ಮನದಲ್ಲಿ ಏನೊಂದೂ ಬಾಳಿಸನು ಜಗದಲ್ಲಿ” ಎಂಬ ತತ್ವಪದದಂತ ಗೀತೆಯನ್ನು ಗಿರಿಕನ್ಯೆ ಚಿತ್ರಕ್ಕೆ ಚಿ. ಉದಯಶಂಕರ ಬರೆದಿದ್ದು ಈ ವಚನದಲ್ಲಿನ ಮನುಷ್ಯನ “ಕಾಮವಿಕಾರಿ”ತನಕ್ಕೆ ಅತ್ಯುತ್ತಮ ಉದಾಹರಣೆ ಆಗಿದೆ. ಕಾಮವಿಕಾರಿ ಎಂಬ ಪದ ಪ್ರಯೋಗ ಅತ್ಯಂತ ವಿರಳವಾಗಿದ್ದು ಅನನ್ಯವಾಗಿದೆ.

ಶಿವಕುಮಾರ್
ಹರಿಹರ ಶಿವಕುಮಾರ್
+ posts

ಲೇಖಕ, ವೃತ್ತಿಯಿಂದ ಚಾರ್ಟರ್ಡ್ ಅಕೌಂಟೆಂಟ್. ಲೆಕ್ಕಪರಿಶೋಧನೆ ಮತ್ತು ತೆರಿಗೆ ವಿಚಾರಗಳಲ್ಲಿ ಪರಿಣತಿ. ಕನ್ನಡದಲ್ಲಿ ಕಂಪ್ಯೂಟರ್ ಬಳಕೆ ಇವರ ಹವ್ಯಾಸ. ಕನ್ನಡ ಭಾಷೆ ಮತ್ತು ಸಾಹಿತ್ಯದಲ್ಲಿ ಆಸಕ್ತರು. ಶಿವಮೊಗ್ಗ ಜಿಲ್ಲೆಯವರು, ಸದ್ಯ ಬೆಂಗಳೂರಿನಲ್ಲಿ ನೆಲೆ.

ಪೋಸ್ಟ್ ಹಂಚಿಕೊಳ್ಳಿ:

ಹರಿಹರ ಶಿವಕುಮಾರ್
ಹರಿಹರ ಶಿವಕುಮಾರ್
ಲೇಖಕ, ವೃತ್ತಿಯಿಂದ ಚಾರ್ಟರ್ಡ್ ಅಕೌಂಟೆಂಟ್. ಲೆಕ್ಕಪರಿಶೋಧನೆ ಮತ್ತು ತೆರಿಗೆ ವಿಚಾರಗಳಲ್ಲಿ ಪರಿಣತಿ. ಕನ್ನಡದಲ್ಲಿ ಕಂಪ್ಯೂಟರ್ ಬಳಕೆ ಇವರ ಹವ್ಯಾಸ. ಕನ್ನಡ ಭಾಷೆ ಮತ್ತು ಸಾಹಿತ್ಯದಲ್ಲಿ ಆಸಕ್ತರು. ಶಿವಮೊಗ್ಗ ಜಿಲ್ಲೆಯವರು, ಸದ್ಯ ಬೆಂಗಳೂರಿನಲ್ಲಿ ನೆಲೆ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಿಲ್ಲಿ ಮಾತು | ಕ್ರೂರಿಗಳ ಲೋಕದಲ್ಲಿ ಮಹಿಳಾ ದಿನ

ನಮ್ಮ ಪಾಖಂಡ ಸಮಾಜದ ರೀತಿ ನೀತಿಗಳನ್ನು ನೋಡಿ ನಗು ಬರುತ್ತದೆ. ಇಲ್ಲಿ...

ಅಲ್ಲಮನ ಅನನ್ಯ ಪದಪ್ರಯೋಗಗಳು | ನೇತ್ರಮಹಿಮೆ

ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ...

ಯುಗಧರ್ಮ | ಇರಾನ್ ಬಗ್ಗೆ ಮೋದಿ ಮೌನ ನಮ್ಮನ್ನು ನಾಚಿಕೆಗೀಡು ಮಾಡಿದೆ

ಕನಿಷ್ಠ ಭಾರತವಾದರೂ ಈ ಬೂಟಾಟಿಕೆಯಲ್ಲಿ ಭಾಗವಹಿಸಬಾರದು. ನಮ್ಮ ಪರಮಾಣು ಬಾಂಬ್‌ಗಳಿಗೆ ಜಾಗತಿಕ...