ಅಲ್ಲಮನ ಅನನ್ಯ ಪದಪ್ರಯೋಗಗಳು | ಕೀಲು ಮಡಗಿದಾತ

Date:

ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ ಪದದ ಬಗ್ಗೆ ಈ ಕೆಳಗಿನ ಮಾದರಿಯಲ್ಲಿ ವಿವರಿಸಲಾಗುವುದು. ಈದಿನ ಓದುಗರಿಗಾಗಿ ಅಲ್ಲಮನ ಅರಿವು…

ಕೀಲು ಮಡಗಿದಾತ
ನಡೆವರಿಗೊಂದು ಬಟ್ಟೆ,
ಮನೆಯ ಒಡೆಯರಿಗೊಂದು ಬಟ್ಟೆ.
ನಡೆಯದು ನಡೆಯದು,
ಹೋ, ನಡೆಗೆಟ್ಟಿತ್ತು ನಿಂದಿತ್ತಲ್ಲಾ! ಗಮನಾಗಮನದ ನುಡಿಯ ಬೆಡಗಿನ ಕೀಲ, ಮಡಗಿದಾತ ಬಲ್ಲ ಗುಹೇಶ್ವರಾ.

ಪದಾರ್ಥ:
ನಡೆವರು = ಜಂಗಮರು, ಚರಿಸುವವರು
ಬಟ್ಟೆ = ಹಾದಿ, ದಾರಿ
ನಡೆಗೆಟ್ಟಿತ್ತು = ಸಲ್ಲದ ನಡವಳಿಕೆ
ಗಮನಾಗಮನ = (ಗಮನ+ಅಗಮನ) ಜಂಗಮ ಮತ್ತು ಭಕ್ತ
ಬೆಡಗಿನ ಕೀಲು = ರಹಸ್ಯ ತತ್ವ

ವಚನಾರ್ಥ:
ಮುಕ್ತಿ ಮಾರ್ಗದಲ್ಲಿ ನಡೆಯುವ ಹಾದಿಯಲ್ಲಿ ಜಂಗಮರಿಗೆ ಮತ್ತು ಜ್ಞಾನಿಗಳಿಗೆ ಒಂದು ದಾರಿ, ಸಂಸಾರಿಯಾಗಿ ಒಂದೆಡೆ ಮನೆ ಕಟ್ಟಿಕೊಂಡು ನೆಲೆ ನಿಂತವರಿಗೆ ಬೇರೆ ದಾರಿ ಎನ್ನಲಾಗದು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಸನ್ಯಾಸಿಯೂ ಸಂಸಾರಿಯೂ ಕೊನೆಯಲ್ಲಿ ಸೇರುವ ಸಂಗಮ ಸ್ಥಳ ಅದೊಂದೇ. ಜಂಗಮನದು ಜ್ಞಾನ ಪ್ರಧಾನ ಮಾರ್ಗವಾದರೆ ಸಂಸಾರಿಯದು ಭಕ್ತಿ ಪ್ರಧಾನ ಮಾರ್ಗ. ಜಂಗಮನು ಜ್ಞಾನದ ಮೂಲಕ ಭಕ್ತನಾದರೆ, ಸಂಸಾರಿಯು ಸತ್ಯನಿಷ್ಠ ಕಾಯಕದ ಮೂಲಕ ಭಕ್ತನಾಗುತ್ತಾನೆ. ಅವರೇ ಬೇರೆ ಇವರೇ ಬೇರೆ ಎಂಬ ಭೇದ ಸಲ್ಲದು. ಜಂಗಮ ಮಾರ್ಗ ಶ್ರೇಷ್ಠವಾದದ್ದು, ಸಂಸಾರ ಮಾರ್ಗ ನಿಕೃಷ್ಟವಾದದ್ದು ಎಂಬ ಭೇದ ಭಾವವನ್ನು ಅಲ್ಲಗಳೆಯುವ ಅಲ್ಲಮ ಹೋ ಎಂದು ಹೂಂಕರಿಸುತ್ತ ಎಚ್ಚರಿಸುವುದೇ ಈ ವಚನದ ಹೈಲೈಟ್!

ಗಮನಾಗಮನ ಅಂದರೆ ಗಮನ ಮತ್ತು ಅಗಮನ. ಗಮನ ಅಂದರೆ ಗಮಿಸುವವ, ಜಂಗಮ. ಅಗಮನ ಅಂದರೆ ಒಂದೆಡೆ ನಿಂತವ, ಸಂಸಾರಿ. ಇವರಿಬ್ಬರ ನಡೆಯನ್ನು ನುಡಿಯನ್ನು ನಿಯಂತ್ರಿಸಿ ಜೀವನ ರಥ ಸರಿದಾರಿಯಲ್ಲಿ ಸಾಗುವಂತೆ ಚಕ್ರಕ್ಕೆ ಕೀಲು ಮಡಗಿದಾತ ಅವನೇ. ಚಕ್ರದ ಕೀಲಿನ ರಹಸ್ಯವನ್ನು ಮಡಗಿದಾತನೇ ಬಲ್ಲ. ನಾವಲ್ಲ!

ಪದ ಪ್ರಯೋಗಾರ್ಥ:
ಕೀಲು ಮಡಗಿದಾತ. ಮಡಗು ಅಂದರೆ ಒಂದೆಡೆ ಇಡು ಎಂಬ ಅರ್ಥದಲ್ಲಿ ಅತ್ಯಂತ ಸಹಜವಾಗಿ ಜನಸಾಮಾನ್ಯರು ಆಡುಭಾಷೆಯಲ್ಲಿ ದಿನನಿತ್ಯ ಬಳಸುವ ಪದ. ಮಡಗು ಎಂಬ ಸಾಮಾನ್ಯ ಪದವನ್ನು ಅಲ್ಲಮ ಇಲ್ಲಿ ವಚನದ ಅಂತ್ಯದಲ್ಲಿ ಮಡಗಿರುವುದು ಅನನ್ಯವಾದ ಪದ ಪ್ರಯೋಗ. ತನ್ನ ವಚನಗಳಲ್ಲಿ ಪ್ರಯೋಗಿಸಿರುವ ಅತ್ಯದ್ಭುತ ಪದಗಳಂತೆಯೇ ತೀರಾ ಸಾಮಾನ್ಯವಾದ ಮಡಗು ಎಂಬ ಪದವನ್ನು ಅಲ್ಲಮ ಈ ವಚನದ ಕೊನೆಯಲ್ಲಿ ಕರಾರುವಾಕ್ಕಾಗಿ ಪ್ರಯೋಗಿಸಿರುವುದು ಅಲ್ಲಮಪ್ರಭುವಿನ ಕನ್ನಡ ಭಾಷಾ ಪ್ರಭುತ್ವಕ್ಕೆ ಉದಾಹರಣೆ. ಕೀಲು ಮಡಗುವುದು ಎಂಬ ಪ್ರಸಂಗ ಎದುರಾದಾಗ ಕನ್ನಡದ ಆದ್ಯ ವಚನಕಾರ ದೇವರ ದಾಸಿಮಯ್ಯನ ಅತ್ಯದ್ಭುತ ವಚನ ಇಲ್ಲಿ ಉಲ್ಲೇಖನೀಯವಾಗುತ್ತದೆ. “ಕಡೆಗೀಲು ಇಲ್ಲದ ಬಂಡಿಯ ಹೊಡೆಗೆಡೆಯದೆ ಮಾಣ್ಬುದೆ? ಕಡೆಗೀಲು ಬಂಡಿಗಾಧಾರ. ಈ ಕಡುದರ್ಪವೇರಿದ ಒಡಲೆಂಬ ಬಂಡಿಗೆ ಮೃಢಭಕ್ತರ ನುಡಿಗಡಣವೆ ಕಡೆಗೀಲು ಕಾಣಾ! ರಾಮನಾಥ” ಈ ಎರಡೂ ವಚನಗಳಲ್ಲಿ ಬಳಕೆಯಾಗಿರುವ ಕೀಲು ಮಡಗಿದಾತ ಅವನೇ, ಅವನೊಬ್ಬನೇ!

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಅನುಪಮಸುಖಿ

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ನೀರಲಾದ ನಿರ್ಮಿತಂಗಳು

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಹೊದಕುಳಿ

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಅನುಪಮಸುಖಿ

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಆಶಾಪಾಶ ವಿರಹಿತರು

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಮಡದಿಯರ ಒಲುಮೆ

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಬಗೆದು ಬಿತ್ತಿದ ಬ್ರಹ್ಮಬೀಜ

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ತಾನಿದ್ದಲ್ಲಿ

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ನಿದ್ರೆಯೆಂಬ ಕಾಳೋರಗ 

ಶಿವಕುಮಾರ್
ಹರಿಹರ ಶಿವಕುಮಾರ್
+ posts

ಲೇಖಕ, ವೃತ್ತಿಯಿಂದ ಚಾರ್ಟರ್ಡ್ ಅಕೌಂಟೆಂಟ್. ಲೆಕ್ಕಪರಿಶೋಧನೆ ಮತ್ತು ತೆರಿಗೆ ವಿಚಾರಗಳಲ್ಲಿ ಪರಿಣತಿ. ಕನ್ನಡದಲ್ಲಿ ಕಂಪ್ಯೂಟರ್ ಬಳಕೆ ಇವರ ಹವ್ಯಾಸ. ಕನ್ನಡ ಭಾಷೆ ಮತ್ತು ಸಾಹಿತ್ಯದಲ್ಲಿ ಆಸಕ್ತರು. ಶಿವಮೊಗ್ಗ ಜಿಲ್ಲೆಯವರು, ಸದ್ಯ ಬೆಂಗಳೂರಿನಲ್ಲಿ ನೆಲೆ.

ಪೋಸ್ಟ್ ಹಂಚಿಕೊಳ್ಳಿ:

ಹರಿಹರ ಶಿವಕುಮಾರ್
ಹರಿಹರ ಶಿವಕುಮಾರ್
ಲೇಖಕ, ವೃತ್ತಿಯಿಂದ ಚಾರ್ಟರ್ಡ್ ಅಕೌಂಟೆಂಟ್. ಲೆಕ್ಕಪರಿಶೋಧನೆ ಮತ್ತು ತೆರಿಗೆ ವಿಚಾರಗಳಲ್ಲಿ ಪರಿಣತಿ. ಕನ್ನಡದಲ್ಲಿ ಕಂಪ್ಯೂಟರ್ ಬಳಕೆ ಇವರ ಹವ್ಯಾಸ. ಕನ್ನಡ ಭಾಷೆ ಮತ್ತು ಸಾಹಿತ್ಯದಲ್ಲಿ ಆಸಕ್ತರು. ಶಿವಮೊಗ್ಗ ಜಿಲ್ಲೆಯವರು, ಸದ್ಯ ಬೆಂಗಳೂರಿನಲ್ಲಿ ನೆಲೆ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಿಲ್ಲಿ ಮಾತು | ಕ್ರೂರಿಗಳ ಲೋಕದಲ್ಲಿ ಮಹಿಳಾ ದಿನ

ನಮ್ಮ ಪಾಖಂಡ ಸಮಾಜದ ರೀತಿ ನೀತಿಗಳನ್ನು ನೋಡಿ ನಗು ಬರುತ್ತದೆ. ಇಲ್ಲಿ...

ಅಲ್ಲಮನ ಅನನ್ಯ ಪದಪ್ರಯೋಗಗಳು | ನೇತ್ರಮಹಿಮೆ

ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ...

ಯುಗಧರ್ಮ | ಇರಾನ್ ಬಗ್ಗೆ ಮೋದಿ ಮೌನ ನಮ್ಮನ್ನು ನಾಚಿಕೆಗೀಡು ಮಾಡಿದೆ

ಕನಿಷ್ಠ ಭಾರತವಾದರೂ ಈ ಬೂಟಾಟಿಕೆಯಲ್ಲಿ ಭಾಗವಹಿಸಬಾರದು. ನಮ್ಮ ಪರಮಾಣು ಬಾಂಬ್‌ಗಳಿಗೆ ಜಾಗತಿಕ...