ಅಲ್ಲಮನ ಅನನ್ಯ ಪದಪ್ರಯೋಗಗಳು | ಮಾಯಾಮಲಿನ ಮನ

Date:

ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ ಪದದ ಬಗ್ಗೆ ಈ ಕೆಳಗಿನ ಮಾದರಿಯಲ್ಲಿ ವಿವರಿಸಲಾಗುವುದು. ಈದಿನ ಓದುಗರಿಗಾಗಿ ಅಲ್ಲಮನ ಅರಿವು…

“ಮಾಯಾಮಲಿನ ಮನ”

ಮಾಯಾಮಲಿನ ಮನದಿಂದಗಲದೆ,
ಕಾಯದ ದಂದುಗ ಕಳೆಯಿಂದಗಲದೆ,
ಅರಿವು ಬರಿದೆ ಬಪ್ಪುದೆ?
ನಿಜವು ಬರಿದೆ ಸಾಧ್ಯವಪ್ಪುದೆ?
ಮರುಳೆ, ಗುಹೇಶ್ವರಲಿಂಗವನರಿಯಬಲ್ಲಡೆ, ನಿನ್ನ ನೀ ತಿಳಿದು ನೋಡಾ.

ಪದಾರ್ಥ:
ಕಾಯದ = ದೇಹದ
ದಂದುಗ = ಚಿಂತೆ-ಭ್ರಾಂತಿ, ವ್ಯಥೆ-ವ್ಯಸನ
ಕಳೆಯಿಂದ = ಜೀವದಿಂದ
ನಿಜವು = ತನ್ನ ತಾನರಿದ ಅರಿವು

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ವಚನಾರ್ಥ:

ಅರಿವು ಅಂದರೆ ಜಡ ದೇಹವು ತಾನಲ್ಲ, ಸದಾ ಚೈತನ್ಯದಾಯಕವಾದ ಜೀವಾತ್ಮನೇ ತಾನು ಎಂಬ ತಿಳಿವಳಿಕೆಯು ಸುಮ್ಮನೆ ತಾನೇ ತಾನಾಗಿ ಬರುವುದಿಲ್ಲ. ಅರಿವಿನ ನೆಲೆಯಲ್ಲಿ ನಿಲ್ಲಬೇಕಾದರೆ ಮೈ ಮನಸ್ಸುಗಳು ಸಜ್ಜಾಗಿರಬೇಕು. ಎಂತಹ ಮನಸ್ಸು? ಈ ಜೀವಜಗತ್ತು ಕ್ಷಣ ಕ್ಷಣಕ್ಕೂ ತಂದು ನಮ್ಮೆದುರು ಹರಡುವ ಮಾಯೆಯ ಜಾಲದಿಂದ ಮಲಿನಗೊಳ್ಳದ ಮನಸ್ಸಾಗಿರಬೇಕು. ಎಂತಹ ಮೈ? ದೇಹಕ್ಕೆ ಅಂಟಿದ ಬಾಧೆ, ಚಿಂತೆ, ವ್ಯಸನಗಳಿಂದ ಮುಕ್ತವಾಗಿರಬೇಕು. ಅಂತಹ ಮೈಮನಸ್ಸುಗಳು ಮೇಳಯಿಸಿದಲ್ಲಿ ನಿಜದ ಅರಿವು ಸಾಧ್ಯವಾಗುತ್ತದೆ. ತನ್ನ ತಾ ತಿಳಿದುನೋಡಲು ಮನಸ್ಸು ತೆರವಾಗುತ್ತದೆ. ಒಮ್ಮೆ ಒಬ್ಬ ಭಕ್ತನು ರಮಣಮಹರ್ಷಿಗಳಲ್ಲಿಗೆ ಬಂದ. ಸ್ವಾಮಿ, ನನಗೆ ದೇವರ ಬಗ್ಗೆ ತಿಳಿಸಿಕೊಡಿ ಅಂದ. ನಿನ್ನ ಬಗ್ಗೆ ನೀನು ತಿಳಿದುಕೊಂಡಿದ್ದೀಯ ಎಂದು ರಮಣರು ಕೇಳಿದರು. ಇಲ್ಲ ಅಂದ. ನಿನ್ನ ನೀ ತಿಳಿದುಕೊಂಡು ಬಾ, ಆಮೇಲೆ ದೇವರ ಬಗ್ಗೆ ತಿಳಿಸುತ್ತೇನೆ ಅಂದರು. ಇದೇ ಅಲ್ಲಮನ ವಚನದ ಇಂಗಿತ.

ಪದಪ್ರಯೋಗಾರ್ಥ:

ಮನಸ್ಸು ಮಾಯೆಗೊಳಗಾದರೆ ಮಲಿನವಾಗುತ್ತದೆ ಎಂಬುದರ ಕಾವ್ಯಮಯ ನಿರೂಪಣೆಯೇ ಮಾಯಾಮಲಿನಮನ. ಅಲ್ಲಮನೇ ತನ್ನ ವೈಯಕ್ತಿಕ ಬದುಕಿನಲ್ಲಿ ಮಾಯಾಂಗನೆ ಎಂಬ ಸುಂದರಿಯ ಪ್ರಣಯ ಪಾಶದಲ್ಲಿ ಸಿಲುಕಿ ಮಾಯೆಯಿಂದ ಮಲಿನಗೊಂಡ ಮನಸ್ಸಿನಿಂದ ಮುಕ್ತಿ ಹೊಂದಿ ತದನಂತರ ಅಧ್ಯಾತ್ಮ ಪಥವನ್ನು ತುಳಿದವ. ಅಲ್ಲಮನು ಮಾಯಾಮಲಿನ ಮನವನ್ನು ತನ್ನಲ್ಲಿ ಪೋಷಿಸಿಕೊಳ್ಳದೆ, ಮಾಯೆ ಮುಟ್ಟದ ಮೈಯನ್ನು ಮೈಗೂಡಿಸಿಕೊಂಡಿದ್ದರಿಂದಲೇ ಮಾಯಾಂಗನೆಯಿಂದ ಮುಕ್ತನಾದ ಅಲ್ಲಮಪ್ರಭುವಾಗಿ ಇಂದು ನಮಗೆ ಸಿಕ್ಕಿರುವುದು. ನಿನ್ನ ನೀ ತಿಳಿದು ನೋಡಲು, ತನ್ನ ತಾ ಅರಿದು ನೋಡಲು ಮಾಯಾಮಲಿನ ಮನದಿಂದ ವಿಮುಖನಾಗಬೇಕು ಎಂದು ಸಲಹೆ ಕೊಡುವಲ್ಲಿ ಅಲ್ಲಮ ಬಳಸಿದ ಕಾವ್ಯಗುಣವುಳ್ಳ ಪದಪುಂಜ “ಮಾಯಾಮಲಿನ ಮನ” ಅತ್ಯಪೂರ್ವವಾಗಿದೆ.

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಅನುಪಮಸುಖಿ

ಶಿವಕುಮಾರ್
ಹರಿಹರ ಶಿವಕುಮಾರ್
+ posts

ಲೇಖಕ, ವೃತ್ತಿಯಿಂದ ಚಾರ್ಟರ್ಡ್ ಅಕೌಂಟೆಂಟ್. ಲೆಕ್ಕಪರಿಶೋಧನೆ ಮತ್ತು ತೆರಿಗೆ ವಿಚಾರಗಳಲ್ಲಿ ಪರಿಣತಿ. ಕನ್ನಡದಲ್ಲಿ ಕಂಪ್ಯೂಟರ್ ಬಳಕೆ ಇವರ ಹವ್ಯಾಸ. ಕನ್ನಡ ಭಾಷೆ ಮತ್ತು ಸಾಹಿತ್ಯದಲ್ಲಿ ಆಸಕ್ತರು. ಶಿವಮೊಗ್ಗ ಜಿಲ್ಲೆಯವರು, ಸದ್ಯ ಬೆಂಗಳೂರಿನಲ್ಲಿ ನೆಲೆ.

ಪೋಸ್ಟ್ ಹಂಚಿಕೊಳ್ಳಿ:

ಹರಿಹರ ಶಿವಕುಮಾರ್
ಹರಿಹರ ಶಿವಕುಮಾರ್
ಲೇಖಕ, ವೃತ್ತಿಯಿಂದ ಚಾರ್ಟರ್ಡ್ ಅಕೌಂಟೆಂಟ್. ಲೆಕ್ಕಪರಿಶೋಧನೆ ಮತ್ತು ತೆರಿಗೆ ವಿಚಾರಗಳಲ್ಲಿ ಪರಿಣತಿ. ಕನ್ನಡದಲ್ಲಿ ಕಂಪ್ಯೂಟರ್ ಬಳಕೆ ಇವರ ಹವ್ಯಾಸ. ಕನ್ನಡ ಭಾಷೆ ಮತ್ತು ಸಾಹಿತ್ಯದಲ್ಲಿ ಆಸಕ್ತರು. ಶಿವಮೊಗ್ಗ ಜಿಲ್ಲೆಯವರು, ಸದ್ಯ ಬೆಂಗಳೂರಿನಲ್ಲಿ ನೆಲೆ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಿಲ್ಲಿ ಮಾತು | ಕ್ರೂರಿಗಳ ಲೋಕದಲ್ಲಿ ಮಹಿಳಾ ದಿನ

ನಮ್ಮ ಪಾಖಂಡ ಸಮಾಜದ ರೀತಿ ನೀತಿಗಳನ್ನು ನೋಡಿ ನಗು ಬರುತ್ತದೆ. ಇಲ್ಲಿ...

ಅಲ್ಲಮನ ಅನನ್ಯ ಪದಪ್ರಯೋಗಗಳು | ನೇತ್ರಮಹಿಮೆ

ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ...

ಯುಗಧರ್ಮ | ಇರಾನ್ ಬಗ್ಗೆ ಮೋದಿ ಮೌನ ನಮ್ಮನ್ನು ನಾಚಿಕೆಗೀಡು ಮಾಡಿದೆ

ಕನಿಷ್ಠ ಭಾರತವಾದರೂ ಈ ಬೂಟಾಟಿಕೆಯಲ್ಲಿ ಭಾಗವಹಿಸಬಾರದು. ನಮ್ಮ ಪರಮಾಣು ಬಾಂಬ್‌ಗಳಿಗೆ ಜಾಗತಿಕ...