ಅಲ್ಲಮನ ಅನನ್ಯ ಪದಪ್ರಯೋಗಗಳು | ನಂದಿನಾಥ 

Date:

ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ ಪದದ ಬಗ್ಗೆ ಈ ಕೆಳಗಿನ ಮಾದರಿಯಲ್ಲಿ ವಿವರಿಸಲಾಗುವುದು. ಈದಿನ ಓದುಗರಿಗಾಗಿ ಅಲ್ಲಮನ ಅರಿವು…

ನಂದಿನಾಥ
ಅರಿವಿನ ಕುರುಹದೇನೋ,
ಒಳಗೆ ಅನಿಮಿಷ ನಂದಿನಾಥನಿರಲು?
ಪೂಜಿಸುವ ಭಕ್ತನಾರೊ?
ಪೂಜೆಗೊಂಬ ದೇವನಾರೊ?
ಮುಂದು ಹಿಂದು,
ಹಿಂದು ಮುಂದಾದರೆ,
ಗುಹೇಶ್ವರಾ, ನೀನು ನಾನು,
ನಾನು ನೀನಾದಡೆ?

ವಚನಾರ್ಥ:
ನಾನು ಅಂದರೆ ಭಕ್ತ. ನೀನು ಅಂದರೆ ದೇವರು. ಮುಂದು ಎಂದರೆ ಎದುರುಗಡೆ ಪೂಜೆಗೊಳ್ಳುವ ದೇವರು. ಹಿಂದು ಎಂದರೆ ಪೂಜೆ ಮಾಡುವ ಭಕ್ತ. ಸಾಂಪ್ರದಾಯಿಕ ಪೂಜೆಯಲ್ಲಿ ದೇವರ ಎದುರು ಭಕ್ತನಿರುತ್ತಾನೆ.

ಈ ವಚನದಲ್ಲಿರುವ ಪ್ರಶ್ನೆ ಏನೆಂದರೆ ಭಕ್ತ ಎದುರು ಬಂದು ಮುಂದೆ ನಿಂತು ದೇವರು ಹಿಂದೆ ಇದ್ದಂತಹ ಸನ್ನಿವೇಶದಲ್ಲಿ ಏನಾಗುತ್ತದೆ ಎಂದು. ಮುಂದು ಹಿಂದಾಗದೆ ಹಿಂದು ಮುಂದಾದರೆ ಏನಾಗುತ್ತದೆ? ಅಲ್ಲಮನು ಗುಹೇಶ್ವರನಿಗೆ ಕೇಳುವ ಪ್ರಶ್ನೆ.  ಗುಹೇಶ್ವರಾ, ನೀನು ನಾನು, ನಾನು ನೀನಾದಡೆ? ಆಗ ಪೂಜಿಸುವ ಭಕ್ತನಾರೊ, ಪೂಜೆಗೊಳ್ಳುವ ದೇವನಾರೊ ಎಂದು ತಿಳಿಯಲಾರದ ಸ್ಥಿತಿ ಸೃಷ್ಟಿಯಾಗುತ್ತದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಗುಹೇಶ್ವರನನ್ನು ಪೂಜಿಸುವ ಭಕ್ತ ಅಲ್ಲಮನೇ? ಅಥವಾ ಪೂಜಿಸಿಕೊಳ್ಳುವ ದೇವ ಗುಹೇಶ್ವರನೇ? ಶರಣನು ತನ್ನ ಅರಿವಿನಲ್ಲಿ ಬೆರೆತು ತನ್ನೊಳಗೆ ತಾನೇ ಅನಿಮಿಷ ನಂದಿನಾಥನಾದಾಗ ಅಲ್ಲಿ ಏಕೋಭಾವ ಉಂಟಾಗಿ ಪೂಜಕ ಮತ್ತು ಪೂಜ್ಯ ಎಂಬ ದ್ವಂದ್ವ ಭಾವಗಳು ಅಳಿಯುತ್ತವೆ. ನಾನು ಪೂಜಿಸುವವ, ನೀನು ಪೂಜ್ಯ ಎಂಬ ಎರಡು ಸಂಪೂರ್ಣ ಬೆರೆದು ಒಂದಾಗುತ್ತವೆ. ಇದು ಭಕ್ತನು ಶರಣನಾಗುವ ಪಥದಲ್ಲಿ ಪ್ರಾಣಲಿಂಗಿ ಎಂಬ ಸ್ಥಳದ ಮೈಲುಗಲ್ಲು.

ಪದ ಪ್ರಯೋಗಾರ್ಥ:
ನಮಗೆ ಮಂಜುನಾಥ ಅಂತ ಗೊತ್ತು. ವೃಷಭನಾಥ ಅಂತ ಗೊತ್ತು. ಆದರೆ ನಂದಿನಾಥ ಎಂಬುದು ಬಹಳ ವಿರಳವಾಗಿರುವ ಹೆಸರು. ಮೈಸೂರು ಜಿಲ್ಲೆಯಲ್ಲಿ ನಂದಿನಾಥಪುರ ಎಂಬ ಸ್ಥಳವಿದೆ ಎನ್ನುವುದನ್ನು ಬಿಟ್ಟರೆ ನಂದಿನಾಥ ಎಂಬ ಹೆಸರಿನ ವ್ಯಕ್ತಿಗಳಿರುವುದು ವಿರಳ. ಹಾಗಾಗಿ ನಂದಿನಾಥ ಈ ವಚನದಲ್ಲಿ ಪ್ರಯೋಗವಾಗಿರುವ ವಿರಳವಾದ ಅನನ್ಯ ಪದ. ನಂದಿನಾಥ ಎಂದರೆ ನಂದಿವಾಹನನಾದವನು. ಶಿವ. ಆ ನಂದಿಗೆ ಒಡೆಯನಾದವನು. ಆನಂದಿ ಎಂದರೆ ಸದಾ ಕಾಲ ಆನಂದವಾಗಿರುವವನು. ಸಚ್ಚಿದಾನಂದ ಸ್ವರೂಪಿ. ಶಿವಶಕ್ತಿಯ ಅಗಾಧವಾದ ಭಾರನನ್ನು ಹೊತ್ತು ಆನಂದದಿಂದ ಸಂಚರಿಸುವ ನಂದಿ ಸದಾ ಆನಂದಿ.

“ನಂದಿ ನಾನು, ಆನಂದಿ ನಾನು, ಆ ವೃಷಭ ಧ್ವಜ ಎತ್ತು, ಬಂದೆ ನಾ ಶಿವಶಕ್ತಿಯ ಹೊತ್ತು, ಈ ಹೊತ್ತು” ಎಂದು ಬೇಂದ್ರೆ ನಂದಿಯನ್ನು ವಂದಿಸಿದ್ದಾರೆ. ಅಲ್ಲಮನ ಅಂತರಂಗದ ಗುಹೆಯೊಳಗೆ ಅನಿಮಿಷಯ್ಯನಿದ್ದಾನೆ. ಅವನು ಶಿವಸ್ವರೂಪಿ. ನಂದಿವಾಹನನಾದ ನಂದಿನಾಥ.

ಅಲ್ಲಮನ ಇದೇ ಒಂದು ವಚನದಲ್ಲಿ ಮಾತ್ರ ಬಳಕೆಯಾಗಿರುವ “ನಂದಿನಾಥ” ಕನ್ನಡದ ಅನನ್ಯವಾದ ಪದ.

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಸಾಯದ ಸಂಚು

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಅನುಪಮಸುಖಿ

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ನೀರಲಾದ ನಿರ್ಮಿತಂಗಳು

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಹೊದಕುಳಿ

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಅನುಪಮಸುಖಿ

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಆಶಾಪಾಶ ವಿರಹಿತರು

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಮಡದಿಯರ ಒಲುಮೆ

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಬಗೆದು ಬಿತ್ತಿದ ಬ್ರಹ್ಮಬೀಜ

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ತಾನಿದ್ದಲ್ಲಿ

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ನಿದ್ರೆಯೆಂಬ ಕಾಳೋರಗ 

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಕೀಲು ಮಡಗಿದಾತ

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಮಾದುದು ಮಾದುದಲ್ಲ

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಮಾಯದ ಮಂಜು

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ದಳದುಳಿ

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಬಯಲು

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ನಷ್ಟಸಂತಾನ

ಶಿವಕುಮಾರ್
ಹರಿಹರ ಶಿವಕುಮಾರ್
+ posts

ಲೇಖಕ, ವೃತ್ತಿಯಿಂದ ಚಾರ್ಟರ್ಡ್ ಅಕೌಂಟೆಂಟ್. ಲೆಕ್ಕಪರಿಶೋಧನೆ ಮತ್ತು ತೆರಿಗೆ ವಿಚಾರಗಳಲ್ಲಿ ಪರಿಣತಿ. ಕನ್ನಡದಲ್ಲಿ ಕಂಪ್ಯೂಟರ್ ಬಳಕೆ ಇವರ ಹವ್ಯಾಸ. ಕನ್ನಡ ಭಾಷೆ ಮತ್ತು ಸಾಹಿತ್ಯದಲ್ಲಿ ಆಸಕ್ತರು. ಶಿವಮೊಗ್ಗ ಜಿಲ್ಲೆಯವರು, ಸದ್ಯ ಬೆಂಗಳೂರಿನಲ್ಲಿ ನೆಲೆ.

ಪೋಸ್ಟ್ ಹಂಚಿಕೊಳ್ಳಿ:

ಹರಿಹರ ಶಿವಕುಮಾರ್
ಹರಿಹರ ಶಿವಕುಮಾರ್
ಲೇಖಕ, ವೃತ್ತಿಯಿಂದ ಚಾರ್ಟರ್ಡ್ ಅಕೌಂಟೆಂಟ್. ಲೆಕ್ಕಪರಿಶೋಧನೆ ಮತ್ತು ತೆರಿಗೆ ವಿಚಾರಗಳಲ್ಲಿ ಪರಿಣತಿ. ಕನ್ನಡದಲ್ಲಿ ಕಂಪ್ಯೂಟರ್ ಬಳಕೆ ಇವರ ಹವ್ಯಾಸ. ಕನ್ನಡ ಭಾಷೆ ಮತ್ತು ಸಾಹಿತ್ಯದಲ್ಲಿ ಆಸಕ್ತರು. ಶಿವಮೊಗ್ಗ ಜಿಲ್ಲೆಯವರು, ಸದ್ಯ ಬೆಂಗಳೂರಿನಲ್ಲಿ ನೆಲೆ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಿಲ್ಲಿ ಮಾತು | ಕ್ರೂರಿಗಳ ಲೋಕದಲ್ಲಿ ಮಹಿಳಾ ದಿನ

ನಮ್ಮ ಪಾಖಂಡ ಸಮಾಜದ ರೀತಿ ನೀತಿಗಳನ್ನು ನೋಡಿ ನಗು ಬರುತ್ತದೆ. ಇಲ್ಲಿ...

ಅಲ್ಲಮನ ಅನನ್ಯ ಪದಪ್ರಯೋಗಗಳು | ನೇತ್ರಮಹಿಮೆ

ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ...

ಯುಗಧರ್ಮ | ಇರಾನ್ ಬಗ್ಗೆ ಮೋದಿ ಮೌನ ನಮ್ಮನ್ನು ನಾಚಿಕೆಗೀಡು ಮಾಡಿದೆ

ಕನಿಷ್ಠ ಭಾರತವಾದರೂ ಈ ಬೂಟಾಟಿಕೆಯಲ್ಲಿ ಭಾಗವಹಿಸಬಾರದು. ನಮ್ಮ ಪರಮಾಣು ಬಾಂಬ್‌ಗಳಿಗೆ ಜಾಗತಿಕ...