ಅಲ್ಲಮನ ಅನನ್ಯ ಪದಪ್ರಯೋಗಗಳು | ನೀರ ಸುಟ್ಟ ಕಿಚ್ಚು 

Date:

ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ ಪದದ ಬಗ್ಗೆ ಈ ಕೆಳಗಿನ ಮಾದರಿಯಲ್ಲಿ ವಿವರಿಸಲಾಗುವುದು. ಈದಿನ ಓದುಗರಿಗಾಗಿ ಅಲ್ಲಮನ ಅರಿವು…

ನೀರ ಸುಟ್ಟ ಕಿಚ್ಚು
ನೀರ ಸುಟ್ಟ ಕಿಚ್ಚಿನ
ಬೂದಿಯ ಬಲ್ಲಡೆ
ನೀವು ಹೇಳಿರೆ!
ಬಯಲ ಸುಟ್ಟ ಕಿಚ್ಚಿನ
ಬೂದಿಯ ಕಂಡಡೆ
ನೀವು ಹೇಳಿರೆ!
ವಾಯು ನಿಂದ ಸ್ಥಾನವ
ಗುಹೇಶ್ವರ ನಿಂದ ನಿಲವ
ಕಂಡಡೆ
ನೀವು ಹೇಳಿರೆ!

ವಚನಾರ್ಥ:
ನಿಂದ ನಿಲವು ಎಂದರೆ ದೈವ ವಸ್ತುವಿನ ಪರ ಬ್ರಹ್ಮ ಸ್ವರೂಪ. ಗುಹೇಶ್ವರ ನಿಂದ ನಿಲವ ಕಂಡಡೆ ನೀವು ಹೇಳಿರೆ ಎಂದು ಅಲ್ಲಮ ಕೇಳಿರುವುದು ಗುಹೇಶ್ವರನ ಪರ ಬ್ರಹ್ಮ ಸ್ವರೂಪವನ್ನು ಕಂಡವರು ಯಾರಾದರೂ ಇದ್ದರೆ ಹೇಳಿ ಎಂದು. ಹೇಗೆ ವಾಯು ಅಂದರೆ ಗಾಳಿಯು ಒಂದು ಕಡೆ ಸ್ಥಿರವಾಗಿ ನಿಂತ ಯಾವುದಾದರು ಒಂದು ಸ್ಥಳವು ಇರುವುದಿಲ್ಲವೋ ಹಾಗೆ ಗುಹೇಶ್ವರನ ಪರ ಬ್ರಹ್ಮ ಸ್ವರೂಪವನ್ನು ಹೀಗೆಯೇ ಕಂಡೆ ಎಂದು ಯಾರೂ ಹೇಳಲಾಗದು. ಅದಕ್ಕೆ ಉದಾಹರಣೆಯಾಗಿ ಅಲ್ಲಮ ನೀಡುವ ಎರಡು ಸಂಗತಿಗಳು. ಬೆಂಕಿಯು ನೀರನ್ನು ಸುಟ್ಟು ಆ ನಂತರ ಉಳಿಯುವ ಬೂದಿಯನ್ನು ಹೇಗೆ ಕಾಣಲು ಸಾಧ್ಯವಿಲ್ಲವೋ ಹಾಗೆ. ಬಯಲನ್ನು ಆವರಿಸಿರುವ ಆಕಾಶವನ್ನು ಬೆಂಕಿ ಸುಟ್ಟು ಆ ನಂತರ ಉಳಿಯುವ ಬೂದಿಯನ್ನು ಹೇಗೆ ಕಾಣಲು ಸಾಧ್ಯವಿಲ್ಲವೋ ಹಾಗೆ. ನೀರಿನಂತೆ ಎಲ್ಲೆಲ್ಲೂ ಹರಿದಾಡುವ ಚಂಚಲ ಮನಸ್ಸನ್ನು ಸ್ಥಿರತೆ ಎಂಬ ಬೆಂಕಿಯಿಂದ ಸುಡಬೇಕು. ಸುಟ್ಟ ನೀರು ಆವಿಯಾಗಿ ಆಕಾಶವನ್ನು ಸೇರುವ ಹಾಗೆ, ಒಂದೆಡೆಯೇ ನಿಲ್ಲದ ವಾಯುವಿನ ಹಾಗೆ, ಶರಣನು ಅವನಲ್ಲಿ ಬೆರೆಯಬೇಕು, ಬೆರೆತು ಒಂದಾಗಬೇಕು.

ಪದಪ್ರಯೋಗಾರ್ಥ:
ನೀರನ್ನು ಸುಡುವ ಬೆಂಕಿ ಇರಬಹುದೇ, ಇಲ್ಲ! ಬಯಲನ್ನು ಆವರಿಸಿರುವ ಆಕಾಶವನ್ನು ಸುಡುವ ಬೆಂಕಿ ಇರಬಹುದೇ, ಇಲ್ಲ! ಆದರೆ ಈ ವಚನದ ಸಂದರ್ಭದಲ್ಲಿ ನೀರನ್ನು ಸುಡುವ ಕಿಚ್ಚಿದೆ. ಆಕಾಶವನ್ನು ಸುಡುವ ಬೆಂಕಿಯಿದೆ. ಅದೇ ಈ ವಚನ ವಿಶೇಷ. ಇವು ಬೆಡಗಿನ ಪದಗಳು. ಹೊರ ಅರ್ಥವೊಂದು. ಒಳಾರ್ಥವೊಂದು. ಬೆಡಗಿನ ಪದಗಳನ್ನು ಪ್ರಯೋಗಿಸಿ ವಚನಗಳನ್ನು ಕಟ್ಟುವಲ್ಲಿ ಶರಣ ಸಾಹಿತ್ಯದಲ್ಲಿ ಅಲ್ಲಮನಿಗೆ ಅಗ್ರಸ್ಥಾನ. ಬೆಂಕಿಯ ಸುಡುವಲ್ಲಿ, ನೀರನ್ನು ತೊಳೆವಲ್ಲಿ, ವಾಯುವ ಮೆಟ್ಟುವಲ್ಲಿ, ಆಕಾಶವ ಹಿಡಿವಲ್ಲಿ ಎಂದು ಬೆಡಗಿನ ಪದ ಬಳಕೆ ಮಾಡಿದ ಅಲ್ಲಮನ ಪ್ರಸಿದ್ದ ವಚನವಿದೆ. “ಅಗ್ನಿಯ ಸುಡುವಲ್ಲಿ, ಉದಕವ ತೊಳೆವಲ್ಲಿ, ವಾಯುವ ಮೆಟ್ಟಿ, ಆಕಾಶವ ಹಿಡಿವಲ್ಲಿ” ಎಂದು. ಗುಹೇಶ್ವರ ನಿಂತ ನಿಲುವು ಹೇಗಿರುತ್ತದೆ ಎಂದರೆ ಬಯಲು ಸುಟ್ಟ ನಂತರ ಉಳಿಯುವ ಬೂದಿಯಂತೆ, ನೀರು ಸುಟ್ಟ ನಂತರ ಸಿಗುವ ಬೂದಿಯಂತೆ. ಗುಹೇಶ್ವರನ ನಿಲುವು ಅದೃಶ್ಯ, ಅಗೋಚರ, ಅಪ್ರಮಾಣ, ಅಪ್ರತಿಮ, ಅಗಮ್ಯ. ಅದು “ನೀರ ಸುಟ್ಟ ಕಿಚ್ಚು” ಉಳಿಸಿದ ಬೂದಿಯಂತೆ. ಕಿಚ್ಚು ನೀರನ್ನು ಸುಡುವುದುಂಟೇ? ನೀರು ಸುಟ್ಟ ನಂತರ ಬೂದಿ ಉಳಿವುದುಂಟೇ? ನೀವು ಹೇಳಿರೆ ಎಂದು ಮೂರು ಪ್ರಶ್ನೆಗಳು. “ನೀರ ಸುಟ್ಟ ಕಿಚ್ಚು” ಅನನ್ಯವಾದ ಬೆಡಗಿನ ಪದ ಪ್ರಯೋಗ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಸಾಯದ ಸಂಚು

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಅನುಪಮಸುಖಿ

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ನೀರಲಾದ ನಿರ್ಮಿತಂಗಳು

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಹೊದಕುಳಿ

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಅನುಪಮಸುಖಿ

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಆಶಾಪಾಶ ವಿರಹಿತರು

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಮಡದಿಯರ ಒಲುಮೆ

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಬಗೆದು ಬಿತ್ತಿದ ಬ್ರಹ್ಮಬೀಜ

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ತಾನಿದ್ದಲ್ಲಿ

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ನಿದ್ರೆಯೆಂಬ ಕಾಳೋರಗ 

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಕೀಲು ಮಡಗಿದಾತ

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಮಾದುದು ಮಾದುದಲ್ಲ

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಮಾಯದ ಮಂಜು

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ದಳದುಳಿ

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಬಯಲು

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ನಷ್ಟಸಂತಾನ

ಶಿವಕುಮಾರ್
ಹರಿಹರ ಶಿವಕುಮಾರ್
+ posts

ಲೇಖಕ, ವೃತ್ತಿಯಿಂದ ಚಾರ್ಟರ್ಡ್ ಅಕೌಂಟೆಂಟ್. ಲೆಕ್ಕಪರಿಶೋಧನೆ ಮತ್ತು ತೆರಿಗೆ ವಿಚಾರಗಳಲ್ಲಿ ಪರಿಣತಿ. ಕನ್ನಡದಲ್ಲಿ ಕಂಪ್ಯೂಟರ್ ಬಳಕೆ ಇವರ ಹವ್ಯಾಸ. ಕನ್ನಡ ಭಾಷೆ ಮತ್ತು ಸಾಹಿತ್ಯದಲ್ಲಿ ಆಸಕ್ತರು. ಶಿವಮೊಗ್ಗ ಜಿಲ್ಲೆಯವರು, ಸದ್ಯ ಬೆಂಗಳೂರಿನಲ್ಲಿ ನೆಲೆ.

ಪೋಸ್ಟ್ ಹಂಚಿಕೊಳ್ಳಿ:

ಹರಿಹರ ಶಿವಕುಮಾರ್
ಹರಿಹರ ಶಿವಕುಮಾರ್
ಲೇಖಕ, ವೃತ್ತಿಯಿಂದ ಚಾರ್ಟರ್ಡ್ ಅಕೌಂಟೆಂಟ್. ಲೆಕ್ಕಪರಿಶೋಧನೆ ಮತ್ತು ತೆರಿಗೆ ವಿಚಾರಗಳಲ್ಲಿ ಪರಿಣತಿ. ಕನ್ನಡದಲ್ಲಿ ಕಂಪ್ಯೂಟರ್ ಬಳಕೆ ಇವರ ಹವ್ಯಾಸ. ಕನ್ನಡ ಭಾಷೆ ಮತ್ತು ಸಾಹಿತ್ಯದಲ್ಲಿ ಆಸಕ್ತರು. ಶಿವಮೊಗ್ಗ ಜಿಲ್ಲೆಯವರು, ಸದ್ಯ ಬೆಂಗಳೂರಿನಲ್ಲಿ ನೆಲೆ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಿಲ್ಲಿ ಮಾತು | ಕ್ರೂರಿಗಳ ಲೋಕದಲ್ಲಿ ಮಹಿಳಾ ದಿನ

ನಮ್ಮ ಪಾಖಂಡ ಸಮಾಜದ ರೀತಿ ನೀತಿಗಳನ್ನು ನೋಡಿ ನಗು ಬರುತ್ತದೆ. ಇಲ್ಲಿ...

ಅಲ್ಲಮನ ಅನನ್ಯ ಪದಪ್ರಯೋಗಗಳು | ನೇತ್ರಮಹಿಮೆ

ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ...

ಯುಗಧರ್ಮ | ಇರಾನ್ ಬಗ್ಗೆ ಮೋದಿ ಮೌನ ನಮ್ಮನ್ನು ನಾಚಿಕೆಗೀಡು ಮಾಡಿದೆ

ಕನಿಷ್ಠ ಭಾರತವಾದರೂ ಈ ಬೂಟಾಟಿಕೆಯಲ್ಲಿ ಭಾಗವಹಿಸಬಾರದು. ನಮ್ಮ ಪರಮಾಣು ಬಾಂಬ್‌ಗಳಿಗೆ ಜಾಗತಿಕ...