ಅಲ್ಲಮನ ಅನನ್ಯ ಪದಪ್ರಯೋಗಗಳು | ನೀರಲಾದ ನಿರ್ಮಿತಂಗಳು

Date:

ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ ಪದದ ಬಗ್ಗೆ ಈ ಕೆಳಗಿನ ಮಾದರಿಯಲ್ಲಿ ವಿವರಿಸಲಾಗುವುದು. ಈದಿನ ಓದುಗರಿಗಾಗಿ ಅಲ್ಲಮನ ಅರಿವು…

ನೀರಲಾದ ನಿರ್ಮಿತಂಗಳು

ಆಯಿತ್ತೆ ಉದಯಮಾನ
ಹೋಯಿತ್ತೆ ಅಸ್ತಮಾನ
ಅಳಿದವಲ್ಲಾ ನೀರಲಾದ ನಿರ್ಮಿತಂಗಳೆಲ್ಲವೂ!
ಕತ್ತಲೆಗವಿಯಿತ್ತು ಮೂರುಲೋಕದೊಳಗೆ
ಇದರ ಅಚ್ಚುಗವೇನು ಹೇಳಾ ಗುಹೇಶ್ವರ

ಪದಾರ್ಥ:

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ನೀರಲಾದ = ನೀರಿನಲ್ಲಿ ಉದಯಿಸಿದ
ನಿರ್ಮಿತಂಗಳು = ನೀರ್ಗುಳ್ಳೆ, ಅಲೆ, ತೆರೆ
ಅಚ್ಚುಗ = ಅದ್ಭುತ, ರಹಸ್ಯ

ವಚನಾರ್ಥ:

ಜಗತ್ತಿನಲ್ಲಿ ನಡೆಯುವ ನಿರಂತರವಾದ ನಿರ್ಮಾಣ ಕ್ರಿಯೆಯನ್ನು ಮತ್ತು ಅದರ ನಶ್ವರತೆಯನ್ನು ಪ್ರಚುರಪಡಿಸುವುದು ವಚನದ ಉದ್ದೇಶ. ಜೀವಜಗತ್ತಿನಲ್ಲಿ ಜೀವಿಗಳು ಸೃಷ್ಟಿಯಾಗುವ ಜನ್ಮ ತಳೆಯುವ ಪ್ರಕ್ರಿಯೆಯೇ ಉದಯ. ಆ ಜೀವಿಗಳು ತಮ್ಮ ರೂಪವನ್ನು ಕಳೆದುಕೊಂಡು ಮತ್ತದೇ ಜಗತ್ತಿನಲ್ಲಿ ಅಡಗಿಹೋಗುವ ಪ್ರಕ್ರಿಯೆಯೇ ಅಸ್ತಮಾನ ಅಂದರೆ ಅವಸಾನ. ಹೀಗೆ ಹುಟ್ಟುವ ಮತ್ತು ನಶಿಸಿಹೋಗುವ ನಿರಂತರ ಕ್ರಿಯೆಯನ್ನು ಅಲ್ಲಮ ನೀರಿನಲ್ಲಿ ಮೂಡಿಬರುವ ನೀರ್ಗುಳ್ಳೆ, ಅಲೆ, ತೆರೆಗಳಿಗೆ ಉದಹರಿಸಿದ್ದಾರೆ. ಅಲೆಗಳು ವಿವಿಧ ಆಕೃತಿಯಲ್ಲಿ ಮೂಡುತ್ತಲೇ ಮರುಕ್ಷಣದಲ್ಲಿ ಪತನಗೊಂಡು ಮತ್ತೆ ನೀರಾಗುತ್ತವೆ. ಇವೆಲ್ಲಾ ನೀರಲಾದ ನಿರ್ಮಿತಂಗಳು. ಈ ಸತ್ಯವನ್ನು ಅರಿಯದ ಜೀವಾತ್ಮನು ಜೀವಸೃಷ್ಟಿಯಾದಾಗ ಸಂಭ್ರಮಿಸುತ್ತಾನೆ. ನಾಶಹೊಂದಿದಾಗ ದುಃಖಿಸುತ್ತಾನೆ. ಇಂತಹ ಜೀವನ್ಮರಣಗಳ ಸುಳಿಗೆ ಸಿಕ್ಕು ಜೀವಾತ್ಮನು ಅಜ್ಞಾನದ ಕತ್ತಲೆಯಲ್ಲಿ ಬಳಲುತ್ತಾನೆ. ಇದೇನು ಅದ್ಭುತವೋ, ರಹಸ್ಯವೋ ಎಂಬುದು ಅಲ್ಲಮನ ಪ್ರಶ್ನೆ.

ಪದಪ್ರಯೋಗಾರ್ಥ:

ನೀರಲಾದ ನಿರ್ಮಿತಂಗಳು ಎಂಬುದು ಅನನ್ಯವಾದ ಪದಪ್ರಯೋಗ. ನೀರ್ಗುಳ್ಳೆಗಳು, ಅಲೆಗಳು, ತೆರೆಗಳು ಹರಿವ ನೀರಿನಲ್ಲಿ ಉದ್ಭವಿಸುವ ವಿವಿಧ ಆಕೃತಿಗಳು. ಅವೇ ನಿರ್ಮಿತಂಗಳು. ಅವು ನೀರಿಗಿಂತ ಭಿನ್ನವಲ್ಲ. ನೀರಿನಲ್ಲಿ ಉದಿಸಿ, ನೀರಿನಲ್ಲಿ ವಿಸರ್ಜನೆಯಾಗಿ ನೀರಿನಲ್ಲೇ ಒಂದಾಗುವ ಕ್ಷಣ ಕಾಲದ ಕ್ಷಣಿಕ ಕೃತಿಗಳು. ಇದನ್ನು ಜೀವಿಯ ಜೀವಿತದ ಕ್ಷಣಿಕತ್ವದ ಬಗ್ಗೆ ವಿವರಿಸಲು ನೀರಲಾದ ನಿರ್ಮಿತಂಗಳು ಎಂದು ಅಲ್ಲಮ ಪದಪ್ರಯೋಗ ಮಾಡಿದ್ದಾರೆ. ಇಂತಹುದೇ ಪದಪ್ರಯೋಗದ ಮುಂದುವರಿಕೆಯಾಗಿ ಬೇಂದ್ರೆಯವರು ‘ಸಖೀಗೀತ’ದ 25ನೇ ಖಂಡದಲ್ಲಿ ‘ಹರಿವ ನೀರಿನ ಮೇಲೆ ಹರಗೋಲ ಮನೆ ಕಟ್ಟಿ ಗೊತ್ತಿಲ್ಲವೇ ನಲ್ಲೆ ಹೊರಟಿಹೆವು?’ ಎಂದು ಪ್ರಶ್ನಿಸುತ್ತಾರೆ. ಗಿರೀಶ ಕಾರ್ನಾಡರು ತಮ್ಮ ಹಯವದನ ನಾಟಕದಲ್ಲಿನ ರಂಗಗೀತೆಯಲ್ಲಿ ‘ನೀರಿನ ಮೇಲೆ ಚಿತ್ರ ಕೆತ್ತಲಿಕ್ಕಾಗೋದಿಲ್ಲ’ ಎಂದು ಹೇಳಿರುವುದು ಸಹಾ ನೀರಲಾದ ನಿರ್ಮಿತಂಗಳ ನಿದರ್ಶನದಲ್ಲೇ.

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಹೊದಕುಳಿ

ಶಿವಕುಮಾರ್
ಹರಿಹರ ಶಿವಕುಮಾರ್
+ posts

ಲೇಖಕ, ವೃತ್ತಿಯಿಂದ ಚಾರ್ಟರ್ಡ್ ಅಕೌಂಟೆಂಟ್. ಲೆಕ್ಕಪರಿಶೋಧನೆ ಮತ್ತು ತೆರಿಗೆ ವಿಚಾರಗಳಲ್ಲಿ ಪರಿಣತಿ. ಕನ್ನಡದಲ್ಲಿ ಕಂಪ್ಯೂಟರ್ ಬಳಕೆ ಇವರ ಹವ್ಯಾಸ. ಕನ್ನಡ ಭಾಷೆ ಮತ್ತು ಸಾಹಿತ್ಯದಲ್ಲಿ ಆಸಕ್ತರು. ಶಿವಮೊಗ್ಗ ಜಿಲ್ಲೆಯವರು, ಸದ್ಯ ಬೆಂಗಳೂರಿನಲ್ಲಿ ನೆಲೆ.

ಪೋಸ್ಟ್ ಹಂಚಿಕೊಳ್ಳಿ:

ಹರಿಹರ ಶಿವಕುಮಾರ್
ಹರಿಹರ ಶಿವಕುಮಾರ್
ಲೇಖಕ, ವೃತ್ತಿಯಿಂದ ಚಾರ್ಟರ್ಡ್ ಅಕೌಂಟೆಂಟ್. ಲೆಕ್ಕಪರಿಶೋಧನೆ ಮತ್ತು ತೆರಿಗೆ ವಿಚಾರಗಳಲ್ಲಿ ಪರಿಣತಿ. ಕನ್ನಡದಲ್ಲಿ ಕಂಪ್ಯೂಟರ್ ಬಳಕೆ ಇವರ ಹವ್ಯಾಸ. ಕನ್ನಡ ಭಾಷೆ ಮತ್ತು ಸಾಹಿತ್ಯದಲ್ಲಿ ಆಸಕ್ತರು. ಶಿವಮೊಗ್ಗ ಜಿಲ್ಲೆಯವರು, ಸದ್ಯ ಬೆಂಗಳೂರಿನಲ್ಲಿ ನೆಲೆ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಿಲ್ಲಿ ಮಾತು | ಕ್ರೂರಿಗಳ ಲೋಕದಲ್ಲಿ ಮಹಿಳಾ ದಿನ

ನಮ್ಮ ಪಾಖಂಡ ಸಮಾಜದ ರೀತಿ ನೀತಿಗಳನ್ನು ನೋಡಿ ನಗು ಬರುತ್ತದೆ. ಇಲ್ಲಿ...

ಅಲ್ಲಮನ ಅನನ್ಯ ಪದಪ್ರಯೋಗಗಳು | ನೇತ್ರಮಹಿಮೆ

ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ...

ಯುಗಧರ್ಮ | ಇರಾನ್ ಬಗ್ಗೆ ಮೋದಿ ಮೌನ ನಮ್ಮನ್ನು ನಾಚಿಕೆಗೀಡು ಮಾಡಿದೆ

ಕನಿಷ್ಠ ಭಾರತವಾದರೂ ಈ ಬೂಟಾಟಿಕೆಯಲ್ಲಿ ಭಾಗವಹಿಸಬಾರದು. ನಮ್ಮ ಪರಮಾಣು ಬಾಂಬ್‌ಗಳಿಗೆ ಜಾಗತಿಕ...