ಅಲ್ಲಮನ ಅನನ್ಯ ಪದಪ್ರಯೋಗಗಳು | ಒಲುಮೆಯ ಕೂಟ

Date:

ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ ಪದದ ಬಗ್ಗೆ ಈ ಕೆಳಗಿನ ಮಾದರಿಯಲ್ಲಿ ವಿವರಿಸಲಾಗುವುದು. ಈದಿನ ಓದುಗರಿಗಾಗಿ ಅಲ್ಲಮನ ಅರಿವು…

ಒಲುಮೆಯ ಕೂಟ
ಒಲುಮೆಯ ಕೂಟಕ್ಕೆ ಹಾಸಿನ ಹಂಗೇಕೆ?
ಬೇಟದ ಮರುಳಿಂಗೆ ಲಜ್ಜೆ ಮುನ್ನುಂಟೆ?
ನಿಮ್ಮನರಿದ ಶರಣಂಗೆ ಪೂಜೆಯ ಹಂಬಲ ದಂದುಗವೇಕೆ?
ಮಿಸುನಿಯ ಚಿನ್ನಕ್ಕೆ ಒರೆಗಲ್ಲ ಹಂಗೇಕೆ?
ಗುಹೇಶ್ವರಲಿಂಗಕ್ಕೆ ಕುರುಹು ಮುನ್ನುಂಟೆ?

ಪದಾರ್ಥ:
ಒಲುಮೆಯ = ಪ್ರೀತಿಯ
ಕೂಟ = ಮಿಲನ, ಸಮಾಗಮ
ಹಾಸಿನ = ಹಾಸಿಗೆಯ
ಬೇಟದ ಮರುಳಿ = ಕಾಮೋನ್ಮತ್ತಳು
ದಂದುಗ = ಗೋಜು, ಗೊಡವೆ
ಮಿಸುನಿಯ = ಮಿನುಗುವ

ವಚನಾರ್ಥ:
ಗುಹೇಶ್ವರಾ, ನಿನ್ನನ್ನು ಅರಿತು ನಿನ್ನಲ್ಲಿ ಒಂದಾಗಿ ಹೋದ ಶರಣನಿಗೆ ಮತ್ತೆ ನಿನ್ನನ್ನು ಪೂಜಿಸಿ ಪ್ರಾರ್ಥಿಸಿ ವಂದಿಸಿ ಒಲಿಸಿಕೊಳ್ಳುವ ಸಾಂಪ್ರದಾಯಕ ವಿಧಿ ವಿಧಾನಗಳ ದರ್ದು ಇಲ್ಲ ಬಾಹ್ಯದ ಯಾವ ಹಂಗುಗಳೂ ಇಲ್ಲ ಎಂದು ಪ್ರತಿಪಾದಿಸುವ ಅಲ್ಲಮ ತನ್ನ ಪ್ರತಿಪಾದನೆಯನ್ನು ಸಮರ್ಥಿಸಿಕೊಳ್ಳಲು ನೀಡುವ ಮೂರು ಉದಾಹರಣೆಗಳು ವಚನದ ಆಕರ್ಷಕ ಅಂಶಗಳು. ಗಂಡು ಮತ್ತು ಹೆಣ್ಣು ಒಬ್ಬರನ್ನೊಬ್ಬರು ಪ್ರೀತಿಸಿ ಮಿಲನಗೊಳ್ಳುವಾಗ ಅಲ್ಲಿ ಹಾಸಿಗೆ ಹೊದಿಕೆಯ ಬಗ್ಗೆ ಗಮನವಿರುವುದಿಲ್ಲ. ಒಲುಮೆಯ ಕೂಟವೊಂದೇ ಗುರಿ. ಹಾಗೆಯೇ ಕಾಮೋದ್ರೇಕದಿಂದ ಹುಚ್ಚರಾದವರಿಗೆ ನಾಚಿಕೆ ಎಂಬ ಸೌಜನ್ಯದ ತಡೆಗೋಡೆ ಇರುವುದಿಲ್ಲ. ಮೂರನೇ ಉದಾಹರಣೆ ಚಿನ್ನದ್ದು. ಚಿನಿವಾರನ ಕೈಲಿ ಸಿಕ್ಕು ಹೊಳಪುಗೊಂಡ ಚಿನ್ನಕ್ಕೆ ಮತ್ತೆ ಒರೆಗಲ್ಲು ಹಚ್ಚಿ ಉಜ್ಜಿ ಪರೀಕ್ಷೆ ಮಾಡುವ ಅಗತ್ಯವಿಲ್ಲ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಪದಪ್ರಯೋಗಾರ್ಥ:
ಒಲುಮೆಯ ಕೂಟ ಎಂಬ ಪದವೇ ಅತ್ಯಂತ ರೋಮಾಂಚನಕಾರಿಯಾದುದು. ರಸಭರಿತವಾದುದು. ಪ್ರೀತಿ ಪ್ರೇಮದಿಂದ ಒಂದಾದ ಪ್ರಣಯಿಗಳು ಬಯಸುವುದೇ ಪ್ರೇಮ ಸಮಾಗಮ. ಆ ಸಮಾಗಮದಲ್ಲಿ ಯಾವುದೇ ಪರಿಕರ ಅಥವಾ ವ್ಯವಸ್ಥೆಯ ಅಗತ್ಯವಿಲ್ಲ. ಮೆತ್ತನೆ ಹಾಸಿಗೆಯ ಸುಪ್ಪತ್ತಿಗೆ ಬೇಕಿಲ್ಲ. ಏಸಿ ಕೋಣೆಯಂತ ಅಂತಪುರವೇ ಆಗಬೇಕೆಂದಿಲ್ಲ. ಮಿಲನವೊಂದೇ ಗುರಿ. ಅದೇ ಐಸಿರಿ. ಅದುವೇ ಮೈಸಿರಿ. ದೈವದ ಸಂಗವ ಬಯಸಿ ಬರುವ ಶರಣನಿಗೆ ಮತ್ತು ಶರಣಾದವನೊಂದಿಗೆ ಲಿಂಗಾಂಗ ಸಾಮರಸ್ಯ ಸಾಧಿಸಲು ಹವಣಿಸುವ ದೈವಕ್ಕೆ ಮಧ್ಯದಲ್ಲಿ ಯಾವುದೇ ಕುರುಹು ಅಥವಾ ಶರತ್ತುಗಳಿರುವುದಿಲ್ಲ ಎಂಬುದನ್ನು ಒಂದು ಜ್ವಲಂತ ಉದಾಹರಣೆಯ ಮೂಲಕ ರೂಪಿಸಲು ಅಲ್ಲಮ ಬಳಸಿರುವ “ಒಲುಮೆಯ ಕೂಟ”ದ ರೂಪಕ ಅತ್ಯಂತ ಚೇತೋಹಾರಿಯಾದದ್ದು. ಈ ಹಿನ್ನಲೆಯಲ್ಲಿ “ಒಲುಮೆ ಪೂಜೆಗೆಂದೆ ಕರೆಯ ಕೇಳಿ ಬಂದೆ ರಾಗ ತಾನss ಪ್ರೇಮ ಗಾನss ಸಂಜೀವನss ಸಂಜೀವನಾsss” ಎಂಬ ಅತ್ಯಂತ ಸುಶ್ರಾವ್ಯವಾದ ಅನುಪಮ ಕನ್ನಡ ಚಲನಚಿತ್ರ ಗೀತೆ ನೆನಪಿಸಿಕೊಳ್ಳುವಂತಹುದು.

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ನೀರಲಾದ ನಿರ್ಮಿತಂಗಳು

ಶಿವಕುಮಾರ್
ಹರಿಹರ ಶಿವಕುಮಾರ್
+ posts

ಲೇಖಕ, ವೃತ್ತಿಯಿಂದ ಚಾರ್ಟರ್ಡ್ ಅಕೌಂಟೆಂಟ್. ಲೆಕ್ಕಪರಿಶೋಧನೆ ಮತ್ತು ತೆರಿಗೆ ವಿಚಾರಗಳಲ್ಲಿ ಪರಿಣತಿ. ಕನ್ನಡದಲ್ಲಿ ಕಂಪ್ಯೂಟರ್ ಬಳಕೆ ಇವರ ಹವ್ಯಾಸ. ಕನ್ನಡ ಭಾಷೆ ಮತ್ತು ಸಾಹಿತ್ಯದಲ್ಲಿ ಆಸಕ್ತರು. ಶಿವಮೊಗ್ಗ ಜಿಲ್ಲೆಯವರು, ಸದ್ಯ ಬೆಂಗಳೂರಿನಲ್ಲಿ ನೆಲೆ.

ಪೋಸ್ಟ್ ಹಂಚಿಕೊಳ್ಳಿ:

ಹರಿಹರ ಶಿವಕುಮಾರ್
ಹರಿಹರ ಶಿವಕುಮಾರ್
ಲೇಖಕ, ವೃತ್ತಿಯಿಂದ ಚಾರ್ಟರ್ಡ್ ಅಕೌಂಟೆಂಟ್. ಲೆಕ್ಕಪರಿಶೋಧನೆ ಮತ್ತು ತೆರಿಗೆ ವಿಚಾರಗಳಲ್ಲಿ ಪರಿಣತಿ. ಕನ್ನಡದಲ್ಲಿ ಕಂಪ್ಯೂಟರ್ ಬಳಕೆ ಇವರ ಹವ್ಯಾಸ. ಕನ್ನಡ ಭಾಷೆ ಮತ್ತು ಸಾಹಿತ್ಯದಲ್ಲಿ ಆಸಕ್ತರು. ಶಿವಮೊಗ್ಗ ಜಿಲ್ಲೆಯವರು, ಸದ್ಯ ಬೆಂಗಳೂರಿನಲ್ಲಿ ನೆಲೆ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಿಲ್ಲಿ ಮಾತು | ಕ್ರೂರಿಗಳ ಲೋಕದಲ್ಲಿ ಮಹಿಳಾ ದಿನ

ನಮ್ಮ ಪಾಖಂಡ ಸಮಾಜದ ರೀತಿ ನೀತಿಗಳನ್ನು ನೋಡಿ ನಗು ಬರುತ್ತದೆ. ಇಲ್ಲಿ...

ಅಲ್ಲಮನ ಅನನ್ಯ ಪದಪ್ರಯೋಗಗಳು | ನೇತ್ರಮಹಿಮೆ

ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ...

ಯುಗಧರ್ಮ | ಇರಾನ್ ಬಗ್ಗೆ ಮೋದಿ ಮೌನ ನಮ್ಮನ್ನು ನಾಚಿಕೆಗೀಡು ಮಾಡಿದೆ

ಕನಿಷ್ಠ ಭಾರತವಾದರೂ ಈ ಬೂಟಾಟಿಕೆಯಲ್ಲಿ ಭಾಗವಹಿಸಬಾರದು. ನಮ್ಮ ಪರಮಾಣು ಬಾಂಬ್‌ಗಳಿಗೆ ಜಾಗತಿಕ...