ಅಲ್ಲಮನ ಅನನ್ಯ ಪದಪ್ರಯೋಗಗಳು | ಸಜ್ಜನವೆ ಮಜ್ಜನ: ಪುಣ್ಯಸ್ನಾನವಲ್ಲ

Date:

ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ ಪದದ ಬಗ್ಗೆ ಈ ಕೆಳಗಿನ ಮಾದರಿಯಲ್ಲಿ ವಿವರಿಸಲಾಗುವುದು. ಈದಿನ ಓದುಗರಿಗಾಗಿ ಅಲ್ಲಮನ ಅರಿವು…

ಸಜ್ಜನವೆ ಮಜ್ಜನ: ಪುಣ್ಯಸ್ನಾನವಲ್ಲ
ಉದಕ ಮಜ್ಜನವಲ್ಲ, ಪತ್ರೆ ಪೂಜೆಯಲ್ಲ.
ಧೂಪ ಪರಿಮಳವಲ್ಲ, ಕಂಚು ಬೆಳಗಲ್ಲ, ಸಯಧಾನ ಅರ್ಪಿತವಲ್ಲ.
ಅದೆಂತೆಂದಡೆ:
ಸಜ್ಜನವೆ ಮಜ್ಜನ,
ಸತ್ಯಸದಾಚಾರವೆ ಪತ್ರೆ ಪುಷ್ಪ. ಅಷ್ಟಮದಂಗಳ ಸುಟ್ಟುದೆ ಧೂಪ,
ನಯನವೆ ಸ್ವಯಂ ಜ್ಯೋತಿ,
ಪರಿಣಾಮವೆ ಅರ್ಪಿತ
ಕಾಣಾ ಗುಹೇಶ್ವರಾ

ಪದಾರ್ಥ:
ಉದಕ = ನೀರು
ಮಜ್ಜನ = ಸ್ನಾನ, ಅಭಿಷೇಕ
ಸಯಧಾನ = ನೈವೇದ್ಯ

ವಚನಾರ್ಥ:
ಮನುಷ್ಯನ ಅಂತರಂಗ ಶುದ್ದಿಯತ್ತ ಗಮನ ಸೆಳೆಯಲು ಅಲ್ಲಮ ರಚಿಸಿದ ವಚನವಿದು. ನೀರಲ್ಲಿ ಮುಳುಗಿ ಸ್ನಾನ ಮಾಡಿ ಮಡಿಯುಟ್ಟು ಹೂ ಪತ್ರೆ ಧರಿಸಿ ಧೂಪದ ಪರಿಮಳ ಪಸರಿಸಿ ಕರ್ಪೂರ ಬೆಳಗಿಸಿ ನೈವೇದ್ಯವ ಅರ್ಪಣೆ ಮಾಡುವುದು ಬಾಹ್ಯಪೂಜೆ. ಅಂತಹ ತೋರಿಕೆಯ ಪೂಜೆ ಅಲ್ಲಮನಿಂದ ಅಲ್ಲಗಳೆಯಲ್ಪಟ್ಟಿದೆ. ಅಲ್ಲಮನ ಪ್ರಕಾರ ಸದ್ಗುಣಗಳೇ ಸ್ನಾನ, ಅಭಿಷೇಕ.
ಸತ್ಯ ಸದಾಚಾರಗಳೇ ಪತ್ರೆ ಪುಷ್ಪ. ಧನ, ಕುಲ, ವಿದ್ಯೆ, ರೂಪ, ಯೌವನ, ತೋಳ್ಬಲ, ಜನಬಲ, ಅಧಿಕಾರ ಎಂಬ ಅಷ್ಟಮದಗಳನ್ನು ಮನಸ್ಸಲ್ಲಿ ಸುಡುವುದೇ ಧೂಪ. ಇಂತಹ ವ್ಯಕ್ತಿಯಲ್ಲಿ ಉಂಟಾಗಿರುವ ಅಂತರಂಗ ಶುದ್ದಿಯು ಆತನ ಕಣ್ಣುಗಳಲ್ಲಿ ಪ್ರತಿಫಲನವಾಗಿ ತೇಜೋಮಯವಾಗಿ ಹೊಳೆಯುತ್ತಿರುತ್ತದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಅಂತಹ ಪರಿಪೂರ್ಣವಾದ ವ್ಯಕ್ತಿತ್ವದಲ್ಲಿ ದೈವಕಳೆ ಕಂಡುಬರುತ್ತದೆ. ‘ನಯನವೆ ಸ್ವಯಂ ಜ್ಯೋತಿ’ ಎಂದ ಅಲ್ಲಮನ ವಚನದ ಸಾಲಿಗೆ ಉದಾಹರಣೆಯಾಗಿ ಶ್ರೀ ರಮಣಮಹರ್ಷಿಗಳ ಭಾವಚಿತ್ರದಲ್ಲಿರುವ ಜ್ಯೋತಿಯಂತೆ ಹೊಳೆಯುವ ಅವರ ಕಣ್ಣುಗಳನ್ನು ಗಮನಿಸಬಹುದು.

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ನೀರಲಾದ ನಿರ್ಮಿತಂಗಳು

ಪದ ಪ್ರಯೋಗಾರ್ಥ:
ಸಜ್ಜನವೆ ಮಜ್ಜನ. ಅಂತರಂಗ ಶುದ್ಧವಿಲ್ಲದೆ, ಸಜ್ಜನತೆಯಿಲ್ಲದೇ ಯಾವುದೇ ಪುಣ್ಯಸ್ನಾನ ಮಾಡಿದರೂ ಫಲವಿಲ್ಲ. ಉದಕ ಮಜ್ಜನವಲ್ಲ, ಜೀವನದಲ್ಲಿ ಸಜ್ಜನವೇ ಮಜ್ಜನ. ಅತ್ಯಂತ ಪರಿಣಾಮಕಾರಿಯಾಗಿ ಪ್ರಾಸಬದ್ಧವಾಗಿ ಸಜ್ಜನವೇ ಮಜ್ಜನ ಎಂದು ಅಲ್ಲಮ ಅಂದಿರುವುದು ಅನನ್ಯ ಪದಪ್ರಯೋಗ. ಸಜ್ಜನವೇ ಮಜ್ಜನವಾಗಿ, ಸತ್ಯವೇ ಹೂಪತ್ರೆಯಾಗಿ ನಡೆಯಬೇಕಿರುವ ಅಂತರಂಗದ ಪೂಜೆಯನ್ನು ಬೇಂದ್ರೆಯವರು ಚೈತನ್ಯದ ಪೂಜೆ ಅಂತ ಕರೆದಿದ್ದಾರೆ.
“ಚೈತನ್ಯದ ಪೂಜೆ ನಡೆದSದ
ನೋಡS ತಂಗಿ, ಅಭಂಗದ ಭಂಗೀS,
ಸೌಜನ್ಯ ಎಂಬುದು ಮೊದಲನೆ ಹೂವು
ಅರಳೋಣ ನಾವೂ ನೀವೂ,
ಸಾಮರ್ಥ್ಯ ಎಂಬುದು ಬೆಲಪತ್ರಿ, ಶಿವಗರ್ಪಿತ ಇರಲಿ ಖಾತ್ರಿ.
ಸತ್ಯ ಎಂಬುವ ನಿತ್ಯದ ದೀಪ, ಸುತ್ತೆಲ್ಲಾ ಅವನದೇ ರೂಪ,
ಪ್ರೀತಿ ಎಂಬುವ ನೈವೇದ್ಯ, ಇದು ಎಲ್ಲರ ಹೃದಯದ ಸಂವೇದ್ಯ”

ಅಲ್ಲಮ ಹೇಳಿರುವ ಸಜ್ಜನವೇ ಬೇಂದ್ರೆಯವರು ಬಳಸಿರುವ ಸೌಜನ್ಯ ಎಂಬ ಪದ. ಬೇಂದ್ರೆಯವರು ಹೇಳಿರುವ ಪ್ರೀತಿ ನೈವೇದ್ಯ, ಹೃದಯದ ಸಂವೇದ್ಯವೇ ಅಲ್ಲಮ ವಚನದ ಕೊನೆಯಲ್ಲಿ ನುಡಿದಿರುವ ‘ಪರಿಣಾಮವೆ ಅರ್ಪಿತ’.

ಶಿವಕುಮಾರ್
ಹರಿಹರ ಶಿವಕುಮಾರ್
+ posts

ಲೇಖಕ, ವೃತ್ತಿಯಿಂದ ಚಾರ್ಟರ್ಡ್ ಅಕೌಂಟೆಂಟ್. ಲೆಕ್ಕಪರಿಶೋಧನೆ ಮತ್ತು ತೆರಿಗೆ ವಿಚಾರಗಳಲ್ಲಿ ಪರಿಣತಿ. ಕನ್ನಡದಲ್ಲಿ ಕಂಪ್ಯೂಟರ್ ಬಳಕೆ ಇವರ ಹವ್ಯಾಸ. ಕನ್ನಡ ಭಾಷೆ ಮತ್ತು ಸಾಹಿತ್ಯದಲ್ಲಿ ಆಸಕ್ತರು. ಶಿವಮೊಗ್ಗ ಜಿಲ್ಲೆಯವರು, ಸದ್ಯ ಬೆಂಗಳೂರಿನಲ್ಲಿ ನೆಲೆ.

ಪೋಸ್ಟ್ ಹಂಚಿಕೊಳ್ಳಿ:

ಹರಿಹರ ಶಿವಕುಮಾರ್
ಹರಿಹರ ಶಿವಕುಮಾರ್
ಲೇಖಕ, ವೃತ್ತಿಯಿಂದ ಚಾರ್ಟರ್ಡ್ ಅಕೌಂಟೆಂಟ್. ಲೆಕ್ಕಪರಿಶೋಧನೆ ಮತ್ತು ತೆರಿಗೆ ವಿಚಾರಗಳಲ್ಲಿ ಪರಿಣತಿ. ಕನ್ನಡದಲ್ಲಿ ಕಂಪ್ಯೂಟರ್ ಬಳಕೆ ಇವರ ಹವ್ಯಾಸ. ಕನ್ನಡ ಭಾಷೆ ಮತ್ತು ಸಾಹಿತ್ಯದಲ್ಲಿ ಆಸಕ್ತರು. ಶಿವಮೊಗ್ಗ ಜಿಲ್ಲೆಯವರು, ಸದ್ಯ ಬೆಂಗಳೂರಿನಲ್ಲಿ ನೆಲೆ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಿಲ್ಲಿ ಮಾತು | ಕ್ರೂರಿಗಳ ಲೋಕದಲ್ಲಿ ಮಹಿಳಾ ದಿನ

ನಮ್ಮ ಪಾಖಂಡ ಸಮಾಜದ ರೀತಿ ನೀತಿಗಳನ್ನು ನೋಡಿ ನಗು ಬರುತ್ತದೆ. ಇಲ್ಲಿ...

ಅಲ್ಲಮನ ಅನನ್ಯ ಪದಪ್ರಯೋಗಗಳು | ನೇತ್ರಮಹಿಮೆ

ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ...

ಯುಗಧರ್ಮ | ಇರಾನ್ ಬಗ್ಗೆ ಮೋದಿ ಮೌನ ನಮ್ಮನ್ನು ನಾಚಿಕೆಗೀಡು ಮಾಡಿದೆ

ಕನಿಷ್ಠ ಭಾರತವಾದರೂ ಈ ಬೂಟಾಟಿಕೆಯಲ್ಲಿ ಭಾಗವಹಿಸಬಾರದು. ನಮ್ಮ ಪರಮಾಣು ಬಾಂಬ್‌ಗಳಿಗೆ ಜಾಗತಿಕ...