ಅಲ್ಲಮನ ಅನನ್ಯ ಪದಪ್ರಯೋಗಗಳು | ನಿದ್ರೆಯೆಂಬ ಕಾಳೋರಗ 

Date:

ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ ಪದದ ಬಗ್ಗೆ ಈ ಕೆಳಗಿನ ಮಾದರಿಯಲ್ಲಿ ವಿವರಿಸಲಾಗುವುದು. ಈದಿನ ಓದುಗರಿಗಾಗಿ ಅಲ್ಲಮನ ಅರಿವು…

ನಿದ್ರೆಯೆಂಬ ಕಾಳೋರಗ
ರಾತ್ರಿಯೆಂಬ ಹುತ್ತಿನೊಳಗೆ ನಿದ್ರೆಯೆಂಬ ಕಾಳೋರಗ, ಹೆಡೆಯನೆತ್ತಿ ಆಡಿ ಕಚ್ಚಲೊಡನೆ ಅಂಜನಸಿದ್ಧರ ಅಂಜನ ಕರಗಿತ್ತು, ಘುಟಿಕಾಸಿದ್ಧರ ಘುಟಿಕೆ ಉರುಳಿತ್ತು. ಯಂತ್ರಿಗಳ ಯಂತ್ರ ಅದ್ದಿ ಹೋಯಿತ್ತು, ಮಂತ್ರಿಗಳ ಮಂತ್ರ ಮರೆತು ಹೋಯಿತ್ತು. ಔಷಧಿಕರ ಔಷಧವ ಆಳಿಗೊಂಡಿತ್ತು, ಸರ್ವ ವಿದ್ಯಾಮುಖದ ಜ್ಯೋತಿ ನಂದಿತ್ತು, ಇದರ ವಿಷವ ಪರಿಹರಿಸುವರನಾರನೂ ಕಾಣೆ. ಈ ರಾಹುವಿನ ವಿಷಯದಲ್ಲಿ ತ್ರಿಭುವನವೆಲ್ಲ ಮೂರ್ಛಿತವಾಗುತ್ತಿಹುದು ಗುಹೇಶ್ವರಾ.

ಪದಾರ್ಥ:
ಕಾಳೋರಗ = ಕಪ್ಪು ಸರ್ಪ
ಘುಟಿಕೆ = ಗುಳಿಗೆ
ಯಂತ್ರಿ = ಮಾಟಗಾರ
ಔಷಧಿಕ = ಔಷಧ ಪಂಡಿತ

ವಚನಾರ್ಥ:
ಹಗಲು ಬೆಳಕಿನ ಮಾನವ ಜಗತ್ತಿನಲ್ಲಿ ಎಷ್ಟೊಂದು ಕ್ರಿಯೆಗಳು! ಮಂತ್ರ ತಂತ್ರ ಯಂತ್ರ ಅಂಜನ ಘುಟಿಕೆ ಔಷಧೋಪಚಾರ ವಿದ್ಯೆ ಪಾಂಡಿತ್ಯ ಪ್ರದರ್ಶನ ಇತ್ಯಾದಿ. ಅಂಜನವನ್ನು ಸಿದ್ದಿಸಿಕೊಂಡು ಕಾಣಲಾರದ್ದನ್ನು ಕಾಣುವುದು, ಘುಟಿಕೆಯನ್ನು ನುಂಗಿ ಅಪಾರ ಶಕ್ತಿಯನ್ನು ಆವಾಹನಿಸಿಕೊಳ್ಳುವುದು, ಯಂತ್ರ ಮಂತ್ರಗಳನ್ನು ಹೂಡಿ ದೇವಾನುದೇವತೆಗಳನ್ನು ಕೈವಶಗೊಳಿಸಿಕೊಳ್ಳುವುದು, ಔಷಧವ ಪ್ರಯೋಗಿಸಿ ಆರೋಗ್ಯವ ಒಲಿಸಿಕೊಳ್ಳುವುದು, ಸರ್ವ ವಿದ್ಯಾ ಪಾರಂಗತನೆಂಬ ಪಟ್ಟ ಪಡೆದು ಸಂಭ್ರಮಿಸುವುದು. ಹೀಗೆ ಹಗಲು ಹೊತ್ತಿನಲ್ಲಿ ಎಲ್ಲರೂ ಶುಚಿ ವೀರ ಧೀರ ಸಾಧುಗಳೇ. ಹಗಲು ಕಳೆದು ಕತ್ತಲೆ ಆವರಿಸುತ್ತಿದ್ದಂತೆಯೇ ರಾತ್ರಿ ಹೊತ್ತಿನಲ್ಲಿ ಇವರೆಲ್ಲರೂ ನಿದ್ರಾವಶರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ದೇಹ ನಿದ್ರಿಸುತ್ತಿರುವಾಗ ಸರ್ವ ವಿದ್ಯಾ ಪಾರಂಗತನೂ, ಪಾಮರನೂ ಸಮಾನರು. ಮಂತ್ರ ತಂತ್ರ ಮದ್ದು ಮಾಟ ಸಿದ್ದಿಸಿಕೊಂಡ ಸಿದ್ದರೆಲ್ಲ ನಿದ್ದೆ ಆವರಿಸಿತೆಂದರೆ ರಾತ್ರಿಯೆಂಬ ಹುತ್ತಿನೊಳಗೆ ನಿದ್ರೆಯೆಂಬ ಕಾಳೋರಗದಿಂದ ಕಡಿಸಿಕೊಂಡವರೇ. ರಾತ್ರಿ ಹೊತ್ತಿನಲ್ಲಿ ನಿದ್ರೆ ಎಂಬ ಮಾಯೆ ನರ್ತಿಸಲೊಡನೆ ಮೂಲೋಕಗಳೆಲ್ಲವೂ ಮೂರ್ಛೆ ಹೋದಂತೆ!

ಪದ ಪ್ರಯೋಗಾರ್ಥ:
ನಿದ್ರೆಯೆಂಬ ಕಾಳೋರಗ. ರಾತ್ರಿ ಎಂಬ ಹುತ್ತದೊಳಗೆ ನಿದ್ರೆ ಎಂಬ ಕರಿ ಘಟಸರ್ಪ ಹೆಡೆಯನೆತ್ತಿ ಆಡುತ್ತಿದೆ ಎಂಬುದು ಅಲ್ಲಮನ ಅಂಬೋಣ. ಅಬ್ಬಾ! ನಾವೆಲ್ಲಾ ರಾತ್ರಿ ಸಮಯ ಅಂದರೆ ಮೆತ್ತನೆಯ ಹಾಸಿಗೆ ಮೇಲೆ ಮಲಗಿ ಸುಖನಿದ್ರೆ ಸವಿಯುವ ಆ ಆರೇಳು ಘಂಟೆಗಳ ಸನ್ನಿವೇಶವನ್ನು ಕಲ್ಪಿಸಿಕೊಂಡರೆ ಅಲ್ಲಮ ಅದನ್ನು ಹುತ್ತದೊಳಗಾಡುತ್ತಾ ಕಚ್ಚುವ ಹಾವಿಗೆ ಹೋಲಿಸುವುದೇ? ನಿದ್ರೆ ಎಂಬ ಕಾಳೋರಗ ಕಕ್ಕುವ ವಿಷವನುಂಡು ತ್ರಿಭುವನವೆಲ್ಲ ಮೂರ್ಛಿತವಾಗುತ್ತದೆ ಎಂದು ಅಲ್ಲಮನ ಅನಿಸಿಕೆ. ಅಲ್ಲಮನಂತೆಯೇ ನಿದ್ರೆಯ ಬಗ್ಗೆ ಆಧ್ಯಾತ್ಮಿಕ ವ್ಯಾಖ್ಯಾನ ನೀಡಿದವರಲ್ಲಿ ರಮಣ ಮಹರ್ಷಿ ಉಪದೇಶ ಸಾರ ಗಮನ ಸೆಳೆಯುತ್ತದೆ. ರಾತ್ರಿಯ ಸುದೀರ್ಘ ಸವಿನಿದ್ದೆಯಲ್ಲಿ ಮುಳುಗಿ ದೇಹದ ಅರಿವಿಲ್ಲದೆ ಮನುಷ್ಯ ಮಲಗಿ ಸುಖ ಕಾಣಬಲ್ಲ ಎಂದಾದರೆ ಸುಖ ಜೀವನವೇ ಗುರಿಯಾಗಿರುವ ಮನುಷ್ಯನಿಗೆ ದೇಹವು ಅವಶ್ಯವೇ ಎಂದು ರಮಣರು ಪ್ರಶ್ನಿಸುತ್ತಾರೆ. ನಿದ್ರೆಯಲ್ಲಿ ತ್ರಿಭುವನ ಲೋಕಗಳೆಲ್ಲ ಮೂರ್ಛೆವಸ್ಥೆ ತಲುಪಿ ನಿಶಬ್ದಗೊಂಡರೆ ಎಲ್ಲವೂ ಶಾಂತ. ನಿದ್ರೆಯೆಂಬ ಕಾಳೋರಗನ ಕಡಿತ ಅಷ್ಟೊಂದು ಪರಿಣಾಮಕಾರಿ. ಸಮಸ್ಯೆ ಶುರುವಾಗುವುದೇ ಮನುಷ್ಯ ನಿದ್ರೆಯಿಂದ ಎಚ್ಚತ್ತಾಗ! ನಿದ್ರೆಯೆಂಬ ಕಾಳೋರಗ ಎಂಬುದು ಅನನ್ಯವಾದ ವಚನ ಪದ ಪ್ರಯೋಗ.

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಅನುಪಮಸುಖಿ

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ನೀರಲಾದ ನಿರ್ಮಿತಂಗಳು

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಹೊದಕುಳಿ

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಅನುಪಮಸುಖಿ

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಆಶಾಪಾಶ ವಿರಹಿತರು

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಮಡದಿಯರ ಒಲುಮೆ

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಬಗೆದು ಬಿತ್ತಿದ ಬ್ರಹ್ಮಬೀಜ

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ತಾನಿದ್ದಲ್ಲಿ

ಶಿವಕುಮಾರ್
ಹರಿಹರ ಶಿವಕುಮಾರ್
+ posts

ಲೇಖಕ, ವೃತ್ತಿಯಿಂದ ಚಾರ್ಟರ್ಡ್ ಅಕೌಂಟೆಂಟ್. ಲೆಕ್ಕಪರಿಶೋಧನೆ ಮತ್ತು ತೆರಿಗೆ ವಿಚಾರಗಳಲ್ಲಿ ಪರಿಣತಿ. ಕನ್ನಡದಲ್ಲಿ ಕಂಪ್ಯೂಟರ್ ಬಳಕೆ ಇವರ ಹವ್ಯಾಸ. ಕನ್ನಡ ಭಾಷೆ ಮತ್ತು ಸಾಹಿತ್ಯದಲ್ಲಿ ಆಸಕ್ತರು. ಶಿವಮೊಗ್ಗ ಜಿಲ್ಲೆಯವರು, ಸದ್ಯ ಬೆಂಗಳೂರಿನಲ್ಲಿ ನೆಲೆ.

ಪೋಸ್ಟ್ ಹಂಚಿಕೊಳ್ಳಿ:

ಹರಿಹರ ಶಿವಕುಮಾರ್
ಹರಿಹರ ಶಿವಕುಮಾರ್
ಲೇಖಕ, ವೃತ್ತಿಯಿಂದ ಚಾರ್ಟರ್ಡ್ ಅಕೌಂಟೆಂಟ್. ಲೆಕ್ಕಪರಿಶೋಧನೆ ಮತ್ತು ತೆರಿಗೆ ವಿಚಾರಗಳಲ್ಲಿ ಪರಿಣತಿ. ಕನ್ನಡದಲ್ಲಿ ಕಂಪ್ಯೂಟರ್ ಬಳಕೆ ಇವರ ಹವ್ಯಾಸ. ಕನ್ನಡ ಭಾಷೆ ಮತ್ತು ಸಾಹಿತ್ಯದಲ್ಲಿ ಆಸಕ್ತರು. ಶಿವಮೊಗ್ಗ ಜಿಲ್ಲೆಯವರು, ಸದ್ಯ ಬೆಂಗಳೂರಿನಲ್ಲಿ ನೆಲೆ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಿಲ್ಲಿ ಮಾತು | ಕ್ರೂರಿಗಳ ಲೋಕದಲ್ಲಿ ಮಹಿಳಾ ದಿನ

ನಮ್ಮ ಪಾಖಂಡ ಸಮಾಜದ ರೀತಿ ನೀತಿಗಳನ್ನು ನೋಡಿ ನಗು ಬರುತ್ತದೆ. ಇಲ್ಲಿ...

ಅಲ್ಲಮನ ಅನನ್ಯ ಪದಪ್ರಯೋಗಗಳು | ನೇತ್ರಮಹಿಮೆ

ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ...

ಯುಗಧರ್ಮ | ಇರಾನ್ ಬಗ್ಗೆ ಮೋದಿ ಮೌನ ನಮ್ಮನ್ನು ನಾಚಿಕೆಗೀಡು ಮಾಡಿದೆ

ಕನಿಷ್ಠ ಭಾರತವಾದರೂ ಈ ಬೂಟಾಟಿಕೆಯಲ್ಲಿ ಭಾಗವಹಿಸಬಾರದು. ನಮ್ಮ ಪರಮಾಣು ಬಾಂಬ್‌ಗಳಿಗೆ ಜಾಗತಿಕ...