ಯುಗಧರ್ಮ | ಚುನಾವಣಾ ಆಯೋಗದ ಕುರಿತು ಎತ್ತಲಾದ ಪ್ರಶ್ನೆಗಳು; ಈಗ ಕಳ್ಳತನದ ಬಗ್ಗೆ ಬಡಾಯಿ ಕೊಚ್ಚಿಕೊಳ್ಳುತ್ತಿದ್ದೀರಾ?

Date:

ನಾನು ಈ ಹಿಂದೆ ಪ್ರಾಧ್ಯಾಪಕ ಮತ್ತು ಚುನಾವಣಾ ತಜ್ಞನಾಗಿ, ಪ್ರಪಂಚದಾದ್ಯಂತ ಭಾರತದ ಚುನಾವಣಾ ವ್ಯವಸ್ಥೆಯನ್ನು ಹೊಗಳುತ್ತಿದ್ದೆ. ಮುಕ್ತ ಮತ್ತು ನ್ಯಾಯಯುತ ಚುನಾವಣೆಗಳನ್ನು ನಡೆಸುವುದು ಪಶ್ಚಿಮದ ಶ್ರೀಮಂತ ದೇಶಗಳಿಗೆ ಸೀಮಿತವಾಗಿರುವ ವಿಶೇಷತೆಯೇನೂ ಅಲ್ಲ ಎಂದು ಬಹಳ ಹೆಮ್ಮೆಯಿಂದ ಹೇಳುತ್ತಿದ್ದೆ. ಆದರೆ ಕಳೆದ ಕೆಲವು ವರ್ಷಗಳಲ್ಲಿ, ಅದೇ ಚುನಾವಣಾ ಆಯೋಗದ ದುಷ್ಕೃತ್ಯಗಳು ಭಾರತೀಯ ಚುನಾವಣಾ ವ್ಯವಸ್ಥೆಯ ವಿಶ್ವಾಸಾರ್ಹತೆಗೆ ಕಳಂಕ ತಂದಿವೆ. ಅದಕ್ಕಾಗಿಯೇ, ಇಂದು ಈ ಸಾಲುಗಳನ್ನು ಬರೆಯುವಾಗ ನಾನು ನಾಚಿಕೆಯಿಂದ ತಲೆ ತಗ್ಗಿಸಿದ್ದೇನೆ.

ಚುನಾವಣಾ ಆಯೋಗದ ವಿಶೇಷ ಪತ್ರಿಕಾಗೋಷ್ಠಿಯು ಕೇವಲ ಶ್ರೀ ಜ್ಞಾನೇಶ್ ಕುಮಾರ್ ಗುಪ್ತಾ ಅವರ ಘನತೆಯನ್ನು ಕುಗ್ಗಿಸಲಿಲ್ಲ. ಚುನಾವಣಾ ಆಯೋಗ ಎಂಬ ಸಾಂವಿಧಾನಿಕ ಸಂಸ್ಥೆಯ ವಿಶ್ವಾಸಾರ್ಹತೆಯನ್ನು ಮಾತ್ರವೇ ಕುಗ್ಗಿಸಲಿಲ್ಲ. ಈ ಸಂದರ್ಭದಲ್ಲಿ ಚುನಾವಣಾ ಆಯೋಗ ಸೋತಿದೆ ಮತ್ತು ವಿರೋಧ ಪಕ್ಷ ಗೆದ್ದಿವೆ ಎಂದೂ ಭಾವಿಸಬೇಡಿ. ಇಂತಹ ಘಟನೆಯು ಪ್ರತಿಯೊಬ್ಬ ಭಾರತೀಯನ ಪಾಲಿಗೂ ಅವಮಾನಕರ. ಇದು ದಶಕಗಳಿಂದ ಸಂಪಾದಿಸಿರುವ ರಾಷ್ಟ್ರೀಯತೆಯನ್ನು ಅಪಮೌಲ್ಯಗೊಳಿಸುತ್ತದೆ. ನಮ್ಮ ಸ್ಥಾಪಿತ ಚುನಾವಣಾ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಮತ್ತೆ ಮೇಲೆದ್ದು ಬರಲಾಗದಷ್ಟು ಆಳದ ಕಂದಕಕ್ಕೆ ತಳ್ಳುತ್ತದೆ.

ನಾನು ಹಿಂದೆ ಪ್ರಾಧ್ಯಾಪಕ ಮತ್ತು ಚುನಾವಣಾ ತಜ್ಞನಾಗಿ, ಪ್ರಪಂಚದಾದ್ಯಂತ ಭಾರತದ ಚುನಾವಣಾ ವ್ಯವಸ್ಥೆಯನ್ನು ಹೊಗಳುತ್ತಿದ್ದೆ. ಮುಕ್ತ ಮತ್ತು ನ್ಯಾಯಯುತ ಚುನಾವಣೆಗಳನ್ನು ನಡೆಸುವುದು ಪಶ್ಚಿಮದ ಶ್ರೀಮಂತ ದೇಶಗಳ ವಿಶೇಷತೆಯಲ್ಲ ಎಂದು ಬಹಳ ಹೆಮ್ಮೆಯಿಂದ ಹೇಳುತ್ತಿದ್ದೆ. ವಸಾಹತುಶಾಹಿ ಗುಲಾಮಗಿರಿಯ ಸಂಕೋಲೆಗಳನ್ನು ಮುರಿದ ಅತ್ಯಂತ ಬಡ ದೇಶವೂ ಸಹ ಚುನಾವಣಾ ಪ್ರಜಾಪ್ರಭುತ್ವದ ಉದಾಹರಣೆಯಾಗಬಹುದು. ಇಂಗ್ಲೆಂಡಿನಂತಹ ದೇಶ ಕೂಡ ಭಾರತದ ಚುನಾವಣಾ ಆಯೋಗದಿಂದ ಕಲಿಯುವುದು ಬಹಳಷ್ಟಿದೆ ಎಂದು ಹೇಳಿದ ಕಾಲವೊಂದಿತ್ತು. ಯಾವುದೇ ಪಕ್ಷಪಾತವಿಲ್ಲದೆ ಚುನಾವಣೆಗಳನ್ನು ಹೇಗೆ ನಡೆಸಬೇಕೆಂದು ಭಾರತದ ಚುನಾವಣಾ ವ್ಯವಸ್ಥೆಯಿಂದ ಕಲಿಯಲು ಅಮೆರಿಕಕ್ಕೆ ಸಲಹೆ ನೀಡಲಾಗುತ್ತಿತ್ತು. ಕಳೆದ ಕೆಲವು ವರ್ಷಗಳಲ್ಲಿ, ಅದೇ ಚುನಾವಣಾ ಆಯೋಗದ ದುಷ್ಕೃತ್ಯಗಳು ಭಾರತೀಯ ಚುನಾವಣಾ ವ್ಯವಸ್ಥೆಯ ವಿಶ್ವಾಸಾರ್ಹತೆಗೆ ಕಳಂಕ ತಂದಿವೆ. ಅದಕ್ಕಾಗಿಯೇ, ಇಂದು ಈ ಸಾಲುಗಳನ್ನು ಬರೆಯುವಾಗ, ನಾನು ನಾಚಿಕೆಯಿಂದ ತಲೆ ತಗ್ಗಿಸಿದ್ದೇನೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಚುನಾವಣಾ ಆಯೋಗ ಕಳೆದ ಭಾನುವಾರ ಆಯೋಜಿಸಿದ್ದ ಪತ್ರಿಕಾಗೋಷ್ಠಿಯ ಸಂದರ್ಭವನ್ನು ಅರ್ಥಮಾಡಿಕೊಳ್ಳಿ. ಅದಕ್ಕೆ ಸುಮಾರು ಹತ್ತು ದಿನಗಳ ಹಿಂದೆ, ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಮಹಾರಾಷ್ಟ್ರದಲ್ಲಿ ಮತದಾರರ ಪಟ್ಟಿ ವಂಚನೆಯ ಆರೋಪಗಳನ್ನು ಮಾಡಿದ ನಂತರ, ಕರ್ನಾಟಕದ ವಿಧಾನಸಭಾ ಕ್ಷೇತ್ರದಲ್ಲಿ ಮತದಾರರ ಪಟ್ಟಿ ವಂಚನೆಯ ಗಂಭೀರ ಪುರಾವೆಗಳನ್ನು ದೇಶದ ಮುಂದೆ ಮಂಡಿಸಿದ್ದರು. ಬಿಹಾರದಲ್ಲಿ ಮತದಾರರ ಪಟ್ಟಿಯ ಸಂಪೂರ್ಣ ಪರಿಷ್ಕರಣೆಯ ಬಗ್ಗೆ ಗಂಭೀರ ಪ್ರಶ್ನೆಗಳು ಎದ್ದಿದ್ದವು. ಚುನಾವಣಾ ಆಯೋಗದ ವಿಶ್ವಾಸಾರ್ಹತೆ ಅದರ ಐತಿಹಾಸಿಕ ಕನಿಷ್ಠ ಮಟ್ಟಕ್ಕಿಂತ ಕೆಳಕ್ಕೆ ಕುಸಿದಿದೆ ಎಂದು ಜನಾಭಿಪ್ರಾಯ ಸಮೀಕ್ಷೆಗಳು ತೋರಿಸುತ್ತಿದ್ದವು. ಬಿಹಾರದ ಎಲ್ಲಾ ವಿರೋಧ ಪಕ್ಷಗಳ ಪ್ರಮುಖ ನಾಯಕರು ಕಳೆದ ಭಾನುವಾರ ಮತದಾರರ ಪಟ್ಟಿಯ ಅಕ್ರಮದ ವಿರುದ್ಧ ಮತದಾರರ ಹಕ್ಕುಗಳ ಯಾತ್ರೆಯನ್ನು ಪ್ರಾರಂಭಿಸಿದ್ದಾರೆ. ಸರ್ಕಾರಿ ರಜಾದಿನವಾಗಿದ್ದರೂ, ಚುನಾವಣಾ ಆಯೋಗವು ಅದೇ ದಿನ, ಭಾನುವಾರ ಪತ್ರಿಕಾಗೋಷ್ಠಿಯನ್ನು ನಡೆಸಿದೆ.

Rahul yatra 1
ಬಿಹಾರದಲ್ಲಿ ಮತದಾರರ ಹಕ್ಕುಗಳ ಯಾತ್ರೆ ಯಲ್ಲಿ ರಾಹುಲ್‌ ಗಾಂಧಿ

ಆದರೆ ಪರಿಸ್ಥಿತಿಯ ಗಂಭೀರತೆಯನ್ನು ಅರಿತುಕೊಂಡ ಚುನಾವಣಾ ಆಯೋಗವು ಚುನಾವಣಾ ವ್ಯವಸ್ಥೆಯ ವಿಶ್ವಾಸಾರ್ಹತೆ ಉಳಿಸಲು ಒಂದು ದೊಡ್ಡ ಸುಧಾರಣೆಯ ಘೋಷಣೆಯನ್ನು ಮಾಡಬಹುದೆಂಬ ಭರವಸೆ ಇನ್ನೂ ಇತ್ತು. ಸತ್ಯವನ್ನು ಹೊರತರುವ ತನಿಖೆ ನಡೆಸುವ ನಿರೀಕ್ಷೆ ಇತ್ತು. ಎಲ್ಲಾ ಮಾಧ್ಯಮ ವರದಿಗಾರರಿಗೆ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಲು ಅವಕಾಶ ನೀಡಲಾಯಿತು ಮತ್ತು ಪ್ರಶ್ನೆಗಳನ್ನು ಸೆನ್ಸಾರ್ ಮಾಡಲುವುದಿಲ್ಲ ಎಂಬ ಭರವಸೆಯೂ ಇತ್ತು. ಆದರೆ ಪತ್ರಿಕಾಗೋಷ್ಠಿಯಲ್ಲಿ ಏನನ್ನು ಹೇಳಲಾಯಿತು ಮತ್ತು ಏನನ್ನು ಹೇಳದೆ ಮುಚ್ಚಿಡಲಾಯಿತು ಎಂಬುದು ಚುನಾವಣಾ ಆಯೋಗದ ಇತಿಹಾಸದಲ್ಲಿ ನಾಚಿಕೆಗೇಡಿನ ಅಧ್ಯಾಯವಾಗಿ ದಾಖಲಾಗುತ್ತದೆ.

ಈ ಪತ್ರಿಕಾಗೋಷ್ಠಿಯಲ್ಲಿ, ಮುಖ್ಯ ಚುನಾವಣಾ ಆಯುಕ್ತರ ಬಳಸಿದ ಭಾಷೆ ಮತ್ತು ಆಂಗಿಕ ಭಾಷೆಯು ತೀವ್ರ ಟೀಕೆಗೆ ಒಳಗಾಗಿದೆ. ಜ್ಞಾನೇಶ್ ಜೀ ಈ ಎಲ್ಲಾ ಟೀಕೆಗಳಿಗೆ ಅರ್ಹರು. ಅವರ ಆರಂಭಿಕ ಹೇಳಿಕೆಯು ಸ್ವಾಯತ್ತ ಸಾಂವಿಧಾನಿಕ ಸಂಸ್ಥೆಯ ಅಧ್ಯಕ್ಷರೊಬ್ಬರು ನೀಡಬಹುದಾದ ಹೇಳಿಕೆಗೆ ಬದಲಾಗಿ ರಾಜಕಾರಣಿ ಅಥವಾ ಪುಢಾರಿಯೊಬ್ಬನ ಭಾಷಣದ ತರ್ಕವನ್ನು ಆಧರಿಸಿದೆ. ಅವರ ಭಾಷಣವನ್ನು ಬೇರೊಬ್ಬರಿಂದ ಬರೆಯಿಸಲಾಗಿದೆ ಎಂದು ಭಾವಿಸುವುದು ಸಹಜ. ಹಿಂದಿನ ಆಯುಕ್ತ ರಾಜೀವ್ ಕುಮಾರ್‌ರಂತೆ ಕೃತಕ ಪ್ರಾಸ ಹೊಂದಿಸಿ ಮಾತನಾಡಲು ಪ್ರಯತ್ನಿಸಲಿಲ್ಲ, ಆದರೆ ಅವರ ಮಾತುಗಳು ಖಂಡಿತವಾಗಿಯೂ ಅಗ್ಗದ ಚಲನಚಿತ್ರ ಸಂಭಾಷಣೆಗಳಂತಿದ್ದವು. ವಿಮರ್ಶಕರು ಏರುವ ಎತ್ತರಕ್ಕಿಂತ ಮೇಲೇರುವ ಬದಲು, ವಿಮರ್ಶಕರೊಂದಿಗೆ ಹೋರಾಡಲು ಸಿದ್ಧರಿರುವಂತೆ ತೋರುತ್ತಿತ್ತು. ಅವರು ಪಂದ್ಯದ ಅಂಪೈರ್‌ಗಿಂತ ಹೆಚ್ಚಾಗಿ ಆಟಗಾರನಂತೆ ಕಾಣಿಸಿಕೊಂಡರು.

ಅಭಿವ್ಯಕ್ತಿಯ ಶೈಲಿಯನ್ನು ನಾವು ಬದಿಗಿಟ್ಟರೂ, ಆ ಪತ್ರಿಕಾಗೋಷ್ಠಿಯಲ್ಲಿ ಏನಾಯಿತು ಅದು ಅದ್ಭುತವಾಗಿತ್ತು. ಸಹಜವಾಗಿ, ಪತ್ರಕರ್ತರು ತಮ್ಮ ಪ್ರಶ್ನೆಗಳನ್ನು ಕೇಳಲು ಸ್ವತಂತ್ರರಾಗಿದ್ದರು. ಆದರೆ ಮುಖ್ಯ ಚುನಾವಣಾ ಆಯುಕ್ತರು ಯಾವುದೇ ಪ್ರಶ್ನೆಗೆ ಉತ್ತರಿಸಲು ಅಥವಾ ಉತ್ತರಿಸದಿರಲು ಸ್ವತಂತ್ರರಾಗಿದ್ದರು. ಯಾವುದೇ ಪ್ರಶ್ನೆಗೆ ಪ್ರತಿಕ್ರಿಯೆಯಾಗಿ ಸಂಬಂಧಿತ ಅಥವಾ ಅಪ್ರಸ್ತುತವಾದದ್ದನ್ನು ಹೇಳಲು ಸ್ವತಂತ್ರರಾಗಿದ್ದರು. ರಾಹುಲ್ ಗಾಂಧಿ ಅವರಿಂದ ಅಫಿಡವಿಟ್ ಕೇಳಿದ್ದರೆ, ಅನುರಾಗ್ ಠಾಕೂರ್ ಅವರಿಂದ ಏಕೆ ಕೇಳಬಾರದು ಎಂಬುದು ಪ್ರಶ್ನೆಯಾಗಿತ್ತು. ಸ್ಥಳೀಯ ಮತದಾರರು ಮಾತ್ರ ಆಕ್ಷೇಪಣೆ ಸಲ್ಲಿಸಬಹುದು ಎಂಬ ಉತ್ತರವಿತ್ತು. ಹಾಗಾದರೆ ಅನುರಾಗ್ ಠಾಕೂರ್ ವಯನಾಡಿನ ಸ್ಥಳೀಯ ಮತದಾರರೇ? ಪ್ರಶ್ನೆಯೆಂದರೆ ಅಫಿಡವಿಟ್ ನೀಡುವ ಮೂಲಕ ಉತ್ತರ ಸಿಕ್ಕರೆ, ಸಮಾಜವಾದಿ ಪಕ್ಷ ನೀಡಿದ ಅಫಿಡವಿಟ್‌ಗೆ ಏಕೆ ಉತ್ತರ ಸಿಗಲಿಲ್ಲ. ಅಂತಹ ಯಾವುದೇ ಅಫಿಡವಿಟ್ ನೀಡಲಾಗಿಲ್ಲ ಎಂಬ ಉತ್ತರವಿತ್ತು. ಈ ಉತ್ತರವು ಶುದ್ಧ ಸುಳ್ಳಾಗಿತ್ತು. ಮತದಾರರ ಪಟ್ಟಿ ದೋಷಪೂರಿತವಾಗಿದ್ದರೆ, ಮೋದಿ ಅವರ ಸರ್ಕಾರವು ಕಳ್ಳತನ ಮಾಡಿದ ಮತಗಳ ಆಧಾರದ ಮೇಲೆ ರಚನೆಯಾಗಿದೆಯೇ? ಮತದಾರರಾಗಿರುವುದು ಮತ್ತು ಮತ ಚಲಾಯಿಸಿದವರ ನಡುವೆ ವ್ಯತ್ಯಾಸವಿದೆ ಎಂಬ ಉತ್ತರವಿತ್ತು. ಮತದಾರರ ಪಟ್ಟಿಯಲ್ಲಿ ಹೆಸರು ತಪ್ಪಾಗಿರುವವರು ಮತ ಚಲಾಯಿಸಲಿಲ್ಲ ಎಂದರು. ಆದರೆ, ಈ ತೀರ್ಮಾನಕ್ಕೆ ಹೇಗೆ ಬಂದರು ಎಂಬುದಕ್ಕೆ ಆಧಾರವಿಲ್ಲ.

Election Commission 1 4

ಪ್ರಶ್ನೆಯೆಂದರೆ, SIR ಗಿಂತ ಮೊದಲು ಪಕ್ಷಗಳೊಂದಿಗೆ ಏಕೆ ಸಮಾಲೋಚನೆ ನಡೆಸಲಿಲ್ಲ? ಇದಕ್ಕೆ ಯಾವುದೇ ಉತ್ತರವಿರಲಿಲ್ಲ. ಚುನಾವಣಾ ವರ್ಷದಲ್ಲಿ ತೀವ್ರ ಪರಿಷ್ಕರಣೆ ಮಾಡದಿರಲು ಚುನಾವಣಾ ಆಯೋಗವು ಹೊಂದಿದ್ದ ಹಿಂದಿನ ಮಿತಿಯನ್ನು ಏಕೆ ಉಲ್ಲಂಘಿಸಲಾಯಿತು? ಉತ್ತರವು ಪರಿಷ್ಕರಣೆಯನ್ನು ಚುನಾವಣೆಗೆ ಮೊದಲು ಅಥವಾ ನಂತರ ಮಾಡಬೇಕೇ? ಎಂದಾಗಿತ್ತು. ಮಳೆ ಮತ್ತು ಪ್ರವಾಹದ ನಡುವೆ SIR ಅನ್ನು ಏಕೆ ಇಷ್ಟು ಆತುರದಿಂದ ಮಾಡಲಾಯಿತು? 2003ರಲ್ಲಿಯೂ ಅದೇ ತಿಂಗಳಲ್ಲಿ ಇದನ್ನು ಮಾಡಲಾಗಿದೆ ಎಂಬ ಉತ್ತರವಿತ್ತು. ಇದು ಸಂಪೂರ್ಣವಾಗಿ ತಪ್ಪಾಗಿತ್ತು, ಏಕೆಂದರೆ 2003ರಲ್ಲಿ, ಪರಿಷ್ಕರಣೆಗೆ ಹಲವಾರು ತಿಂಗಳುಗಳ ಮೊದಲು ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿತ್ತು. ಹೊಸದಾಗಿ ಅರ್ಜಿ ಅಥವಾ ದಾಖಲೆಗಳನ್ನು ಸಂಗ್ರಹಿಸಲು ಅವಕಾಶ ಇರಲಿಲ್ಲ. ಅನೇಕ ಪತ್ರಕರ್ತರು ನೇರವಾಗಿ ಸತ್ಯಗಳನ್ನು ಕೇಳಿದರು. ಅರ್ಜಿಯೊಂದಿಗೆ ಎಷ್ಟು ಜನ ಯಾವುದೇ ದಾಖಲೆಗಳನ್ನು ಸಲ್ಲಿಸಲಿಲ್ಲ? BLO ನಿಂದ “ಶಿಫಾರಸು ಮಾಡದ” ವರ್ಗದಲ್ಲಿ ಎಷ್ಟು ಫಾರ್ಮ್‌ಗಳನ್ನು ಇರಿಸಲಾಗಿದೆ? ಯಾವ ಆಧಾರದ ಮೇಲೆ? ಜೂನ್-ಜುಲೈ ನಡುವೆ ಬಿಹಾರದಲ್ಲಿ ಎಷ್ಟು ಹೆಸರುಗಳನ್ನು ಸೇರಿಸಲಾಗಿದೆ? SIR ಮೂಲಕ ಹಳೆಯ ಮತದಾರರ ಪಟ್ಟಿಯಲ್ಲಿ ಎಷ್ಟು ವಿದೇಶಿ ವಲಸಿಗರು ಕಂಡುಬಂದಿದ್ದಾರೆ? ಈ ಎಲ್ಲಾ ಪ್ರಶ್ನೆಗಳಿಗೆ ಮೌನ ಮಾತ್ರ ಉತ್ತರವಾಗಿತ್ತು.

ಇದನ್ನೂ ಓದಿ 2029ರ ಚುನಾವಣೆಯಲ್ಲಿ ರಾಹುಲ್ ಗಾಂಧಿ ಇಂಡಿಯಾ ಒಕ್ಕೂಟದ ಪ್ರಧಾನಿ ಅಭ್ಯರ್ಥಿ: ತೇಜಸ್ವಿ ಯಾದವ್

ಕೆಲವೊಮ್ಮೆ ಮೌನವನ್ನು ಮಾತಿನ ಚಾತುರ್ಯದಿಂದ ಮುರಿಯಲಾಯಿತು. “ಏಳು ಕೋಟಿ ಮತದಾರರು ಚುನಾವಣಾ ಆಯೋಗದೊಂದಿಗೆ ನಿಂತಿದ್ದಾರೆ” ಎಂಬಂತಹ ಅರ್ಥಹೀನ ಹೇಳಿಕೆಗಳು, “ಮತದಾನದ ವಿಡಿಯೋಗಳನ್ನು ಬಹಿರಂಗಪಡಿಸುವುದರಿಂದ ತಾಯಂದಿರು ಮತ್ತು ಸಹೋದರಿಯರ ಖಾಸಗಿತನಕ್ಕೆ ಧಕ್ಕೆಯಾಗುತ್ತದೆ” ಎಂಬ ಹೇಳಿಕೆ, ಇವಿಎಂ ಯಂತ್ರದ ಡೇಟಾದ ಬೇಡಿಕೆಯನ್ನು ಅಪಾಯಕಾರಿ ಎಂದು ಬಿಂಬಿಸುವ ಹಾಸ್ಯಾಸ್ಪದ ಪ್ರಯತ್ನ. ಬಿಹಾರದ ಪ್ರತಿಯೊಂದು ಹಳ್ಳಿಯಲ್ಲಿ, ಬಿಎಲ್‌ಒ ಸ್ಥಳೀಯ ಪಕ್ಷದ ಕಾರ್ಯಕರ್ತರ ಸಭೆಯನ್ನು ಕರೆದು ಯಾರು ಸತ್ತಿದ್ದಾರೆ, ಯಾರು ಹೊರಗೆ ಹೋಗಿದ್ದಾರೆ ಎಂಬ ಪಟ್ಟಿಯನ್ನು ಮಾಡಲಾಗಿದೆ ಎಂಬ ದೊಡ್ಡ ಸುಳ್ಳನ್ನು ದೇಶದ ಮುಂದೆ ಹೇಳುವ ಧೈರ್ಯ ಮಾಡಿದ್ದಾರೆ.

ಅರ್ಧ-ಸತ್ಯಗಳು ಸಂಪೂರ್ಣ ಸುಳ್ಳುಗಳಿಗಿಂತ ಹೆಚ್ಚು ಅಪಾಯಕಾರಿ. “ಮತದಾರರಾಗುವುದು ನಾಗರಿಕನ ಕರ್ತವ್ಯ, ಮತದಾರರ ಪಟ್ಟಿಯಲ್ಲಿ ಯಾವುದೇ ತಪ್ಪು ಇದ್ದರೆ ಅದು ಪಕ್ಷಗಳ ತಪ್ಪು, ಚುನಾವಣಾ ಆಯೋಗದಲ್ಲ. ಆರೋಪಗಳು ಏನೇ ಇರಲಿ, ನಾವು ತನಿಖೆ ನಡೆಸುವುದಿಲ್ಲ. ಯಾರು ಏನು ಬೇಕಾದರೂ ಮಾಡಿ. ಚುನಾವಣಾ ಆಯೋಗವು ಬಂಡೆಯಂತೆ ನಿಂತಿದೆ”.

ಅದು ಯಾರೊಂದಿಗೆ ನಿಂತಿದೆ ಎಂದು ಈಗ ನಿಮಗೆ ಅರ್ಥವಾಗಿರುತ್ತದೆ.

ಯೋಗೇಂದ್ರ
ಯೋಗೇಂದ್ರ ಯಾದವ್
+ posts

ಸ್ವರಾಜ್‌ ಇಂಡಿಯಾದ ಸಂಸ್ಥಾಪಕರಲ್ಲಿ ಒಬ್ಬರು, ರಾಜಕೀಯ ವಿಶ್ಲೇಷಕ

ಪೋಸ್ಟ್ ಹಂಚಿಕೊಳ್ಳಿ:

ಯೋಗೇಂದ್ರ ಯಾದವ್
ಯೋಗೇಂದ್ರ ಯಾದವ್
ಸ್ವರಾಜ್‌ ಇಂಡಿಯಾದ ಸಂಸ್ಥಾಪಕರಲ್ಲಿ ಒಬ್ಬರು, ರಾಜಕೀಯ ವಿಶ್ಲೇಷಕ

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಿಲ್ಲಿ ಮಾತು | ಕ್ರೂರಿಗಳ ಲೋಕದಲ್ಲಿ ಮಹಿಳಾ ದಿನ

ನಮ್ಮ ಪಾಖಂಡ ಸಮಾಜದ ರೀತಿ ನೀತಿಗಳನ್ನು ನೋಡಿ ನಗು ಬರುತ್ತದೆ. ಇಲ್ಲಿ...

ಅಲ್ಲಮನ ಅನನ್ಯ ಪದಪ್ರಯೋಗಗಳು | ನೇತ್ರಮಹಿಮೆ

ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ...

ಯುಗಧರ್ಮ | ಇರಾನ್ ಬಗ್ಗೆ ಮೋದಿ ಮೌನ ನಮ್ಮನ್ನು ನಾಚಿಕೆಗೀಡು ಮಾಡಿದೆ

ಕನಿಷ್ಠ ಭಾರತವಾದರೂ ಈ ಬೂಟಾಟಿಕೆಯಲ್ಲಿ ಭಾಗವಹಿಸಬಾರದು. ನಮ್ಮ ಪರಮಾಣು ಬಾಂಬ್‌ಗಳಿಗೆ ಜಾಗತಿಕ...