ಕುಮಟಾ ಸೀಮೆಯ ಕನ್ನಡ | ಈ ಬಿಂಬ್ಲಿಕಾಯಿ ರುಚಿ ತಿಂದವ್ರಿಗೇ ಗೊತ್ತು

Date:

ಇದ್ನ ಸಿಗದು, ಬೆಳಗ್ಗೆಯಾ ಬರೀ ಉಪ್ಪು, ಎರಡ ಸಣ್ ಮೆಣಸನಕಾಯಿ ಹಾಕಿಟ್ರೆ ಸಂಜಿ ಊಟಕ್ಕೆ ಉಪ್ಪಿನಕಾಯಿ ರೆಡಿ! ಮುರುಗಲು, ವಾಟೆ, ಉಪ್ಪಾಗೆ ಅದ್ಕಿಂತ ಮತ್ತೂ ಬೇರೆನೇ ರುಚಿ ಇದ್ದದ್ಕೆ ತೋರಿ ಬಂಗಡೆ ಸಾರಿಗೂ ಒಂದೆರಡಾದ್ರೂ ಕೊಯ್ದು ಹಾಕಿದ್ರೆ ಮಸ್ತ್-ಮಸ್ತ್

“ಸೀತಕ್ಕಾ… ಒಂದೆರಡು ಬಿಂಬ್ಲಿಕಾಯಿ ಕೊಯ್ಕಂಡೋತೆ ಹಾಂ…” ಅಂದಿ, ನಮ್ಮ ಅತ್ತೆ, “ಓ…” ಅನ್ನುದಕ್ಕೂ ಕಾಯ್ದೇ ತಪ್ಪಲೇಲಿ ಒಂದೆರಡು ಗೊಂಚಲು ಕಾಯಿಗಳನ್ನು ಬಿಡಿಸಿಕಂಡು ಹೋಗೋ ಆಚೀಚೆ ಮನೆಯೋರನ್ನ ನೋಡದಾಗ ನಂಗಂತೂ ಬಾಳ ಖುಷಿ.

“ನಿಲ್ಲೇ ನಾನೇ ಕೊಯ್ಕೊಡ್ತೆ…” ಅಂದ್ಕಂಡಿ ಕಂಜೂಸತನ ಮಾಡ್ವ ಅನಿಸದಷ್ಟು – ಮರದ ಕಾಂಡಕ್ಕೆಲ್ಲ ಗೆಜ್ಜೆಯಂಗೆ ಹಿಡದುಬಿಟ್ಟಿರ್ತದೆ ಈ ಬಿಂಬ್ಲಿಕಾಯಿಗಳು.

ನಮ್ಮ ಹೊಳಿ ದಡದ ಮನೆಗೊಂದ್ರಂಗೆ ಅತ್ವಾ ಕೇರಿಗೊಂದರಂಗೆ ಇದ್ದೇ ಇರೋ ಈ ಮರದಲ್ಲಿ ಒತ್ತೊತ್ತಾಗಿ ತುಂಬಿರೋ ಗಿಳಿಹಸಿರು ಎಲೆ ಹೊದ್ಕಿಗೇನೂ ಕಮ್ಮಿ ಇಲ್ಲದಂಗೆ ಕಾಯಿಗಳು ಗೊಂಚಲಲು ಗೊಂಚಲಾಗಿ ಇಳಿಬಿಟ್ಕಂಡಿರ್ತದೆ. ಒಂದೆರಡ ಮರ ಇದ್ಬಿಟ್ರೆ ನೋಡುಕೂ ಬಾಳ ಚಂದ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಬಾಳ ಕಾಳಜಿ, ಪ್ರೀತಿ, ಜಾಸ್ತಿ ನೀರು ಎಂತದ್ದೂ ಬೇಕಾಗ್ದಿರೊ ಈ ಬಿಂಬ್ಲಿ ಮರದಲ್ಲಿ ಈ ಸೀಜನ್ನಿಗೆ ಮೊದ್ಲಿಗಿಂತ ನಾಲ್ಕರಷ್ಟ ಕಾಯಿ ತೂಗ್ತದೆ.

ಈ ನುಡಿಗಟ್ಟು ಕೇಳಿದ್ದೀರಾ?: ಮಾಲೂರು ಸೀಮೆಯ ಕನ್ನಡ | ಪೋತುರಾಜುಲು ಮತ್ತು ಧರಮ ದೊರೆಗಳ ಬೆಂಕಿ ಆಟ

ಶೆಟ್ಲಿ, ಜಾಲಿ, ಕಲಗ ಎಲ್ಲದ್ಕೂ ಸಿಗಿದು ಬೆರಕೆ ಹಾಕಿದ್ರೆ ಹುಳಿ ರುಚಿಯ ಕಂಪು ಕೊಡೋ ಈ ಬಿಂಬ್ಲಿಕಾಯಿ ರುಚಿ ತಿಂದವ್ರಿಗೇ ಗೊತ್ತು.

ಹಂಗೇ ತರ್ಕಾರಿ ಸಾರಿಗೂ‌ ಅಟ್ಟೇ ಚಲೋ ಆತದೆ.

ಬಿಂಬ್ಲಿ ಸಿಗದು, ಬೆಳಗ್ಗೆಯಾ ಬರೀ ಉಪ್ಪು, ಎರಡ ಸಣ್ ಮೆಣಸನಕಾಯಿ ಹಾಕಿಟ್ರೆ, ಸಂಜಿಗೆ ಊಟಕ್ಕೆ ಉಪ್ಪಿನಕಾಯಿ ರೆಡಿ!

ಎಷ್ಟೋ ಬಡವ್ರ ಮನೆ ಮಡಿಕಿ ಮೀನು ಸಾರಿನ ಮಸಾಲಿಗೆ ಇದ್ರದ್ದೇ ಹುಳಿ. 

ಮುರುಗಲು, ವಾಟೆ, ಉಪ್ಪಾಗೆಗಳಿಗಿಂತ ಮತ್ತೂ ಬೇರೆನೇ ರುಚಿ ಇದ್ದದ್ಕೆ ತೋರಿ ಬಂಗಡೆ ಸಾರಿಗೂ ಒಂದೆರಡಾದ್ರೂ ಕೊಯ್ದು ಹಾಕಿದ್ರೆ ಮಸ್ತ್ ಮಸ್ತ್…

ಸಣ್ಣ ಪಿನ್ನು ಚುಚ್ಚಿದ್ರೂ ಹುಳಿರಸ ಜಲ್ ಅಂದಿ ಒಸರೊವಷ್ಟು ನೀರು ತುಂಬಿರೋ ಇವುಗಳನ್ನು, ಹಳೇರು ಕೆಲವು ಔಷಧಿ ಗುಣಕ್ಕಂತನೂ ಬಳಸತ್ರು. 

ಇನ್ನೂ ಉಪ್ಯೋಗ ಎಂತಾ ಇರುದು ಹೇಳಿ ಯೋಚನೆ ಮಾಡ್ತಾ, ಫೋಟೋ ತೆಗಿಲಿಕ್ಕೆಂದು ಮರದ ಹತ್ರ ಹೋಗಿ ನಿಂತ್ರೆ ನನ್ನಮ್ಮ, “ವರ್ಸಾ ಇಡೀ ಮರ ತುಂಬ್ಕಂಡಿರೋ ಕಾಯಿ ದೇವ್ರ ಹಿತ್ತಾಳಿ ಪಾತ್ರೆ ತಿಕ್ಕಲಿಕ್ಕೆ ಚಲೋ ಆತದೆ ಮಾರಾಯ್ತಿ…” ಎಂದಳು.

ಈದಿನ.ಕಾಮ್ ಬರಹಗಳ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಈದಿನ.ಕಾಮ್ ಕೇಳುದಾಣ

ಪೋಸ್ಟ್ ಹಂಚಿಕೊಳ್ಳಿ:

ಸಂಧ್ಯಾ ನಾಯ್ಕ ಅಘನಾಶಿನಿ
ಸಂಧ್ಯಾ ನಾಯ್ಕ ಅಘನಾಶಿನಿ
ಜೀವನದಿ ಅಘನಾಶಿನಿಯ ತಟದವರು. ಅದೇ ನದಿಯ ಹೆಸರಿನ ಊರಿನವರು ಕೂಡ. ಚಿಕ್ಕ ಮಕ್ಕಳಿಗೆ ಪಾಠ ಹೇಳುವ ಮೇಷ್ಟ್ರು. ಹೊಳೆ, ಮೀನು, ನದಿ, ಶಾಲೆ ಜೊತೆಗೇ ತಮ್ಮ ಪರಿಸರದ ಜನಜೀವನದ ಬಗ್ಗೆಯೂ ವಿಪರೀತ ಅಕ್ಕರೆ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ನಾಗಮಂಗಲ ಸೀಮೆಯ ಕನ್ನಡ | ‘ಹೆಣ್ಮಗ್ಳು ಒಬ್ಳೇ ಅವ್ಳೆ ಅಂತ ಚುಡಾಯ್ಸಕ್ ಬತ್ತೀಯ!’

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ...

ಬೀದರ್ ಸೀಮೆಯ ಕನ್ನಡ | ಪರೇಶಾನ್ ಬಾಬಾ ಮತ್ತು ಹೇಮಾಳ ‘ದವಾಖಾನಿ ಬ್ಯಾನಿ’

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ...

ಹೊನ್ನಾಳಿ ಸೀಮೆಯ ಕನ್ನಡ | ನಮ್ಮೂರಾಗ ಎಲ್ಲಾ ಜಾತೇರು ಸೇರ್ಕೆಂದ್ ಮಾಡಾ ಮಯೇಶುರಿ ಹಬ್ಬ

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ...

ಮಾಲೂರು ಸೀಮೆಯ ಕನ್ನಡ | ಪ್ರೊಫೆಸರ್ ಮೈಲಾರಪ್ಪನ ಅಗ್ರ ಪೂಜಾ ಅಭಿಲಾಷೆ

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ...