ಮಾಲೂರು ಸೀಮೆಯ ಕನ್ನಡ | ಮುಂತಾಯಕ್ಕನ ಸೊಸೆಯ ತಾನದ ಪ್ರಸಂಗ

Date:

(ಈ ಆಡಿಯೊ ಟ್ಯಾಬ್‌ನ ಬಲ ಮೇಲ್ತುದಿಯಲ್ಲಿ ಮೂರು ಗೆರೆಗಳಿರುವಲ್ಲಿ ಕ್ಲಿಕ್ ಮಾಡಿ, ಸಂಪೂರ್ಣ ಆಡಿಯೊ ಕೇಳಿ)

ಶಿನ್ಶ್ಯಾಮನು ಬರ್ತಾ ದಾರಿಯಲ್ಲಿ ಸಂಪಂಗಿ ದುಕಾನಾಕ ಜಾಂಗ್ರಿ ಪೊಟ್ಟಣ ಕಟ್ಟಿಸಿ ನಿಕ್ಕರ್ ಜೇಬಿನಾಗ ಇಟ್ಟು ಲುಂಗಿನ ಕೆಳಕ್ಕೆ ಬಿಟ್ಟುಕೊಂಡ. ಮಕದ ಮೇಲೆ ನಗ ಮೂಡ್ತು. ಮನ್ತಾಕ ಬಂದು ನೋಡ್ತಾನೆ ಅಲಮೇಲು ಹೊರಗೆ ಕುಂತವಳೆ...!

ಮಿನಸಂದ್ರದ ಮುಂತಾಯಕ್ಕನುಕ ಮೂರು-ಮೂರು ಮಕ್ಕಳಾದ್ರೂ ಕೊನ್ಕ್ಯಾ ಪಾಣ ಉಳಿಸಿಕೊಂಡಿದ್ದು ಶಿನ್ಶ್ಯಾಮನು ಮಾತ್ರ. ಅವನು ಅಪ್ಪ ಸತ್ತ ಮ್ಯಾಲೆ ಹುಟ್ಟಿದ್ದು ಅಂತಾರೆ ಊರಾಗ. ಇದ ಕೇಳಿದಾಗ ಮುಂತಾಯಕ್ಕನ ಮಕದಾಗ ನೆರಪು ಭಗ್ ಅಂತದೆ. ಅಂದವರ ಗಾಚಾರ ಸರೀಗಾ ಬಿಡಿಸೊಳು ಹಾಗೆಲ್ಲಾ.

ಶಿನ್ಶ್ಯಾಮನು ಅಲ್ಲಿಇಲ್ಲಿ ಪೆರಕಿ ತಿಂದು ಸಮ ಮೀಸೆ ಬೆಳೆದ ಗಂಡಾಳು ಆದನು. ಊರಾಗ ಕೂಲಿ ನಾಲಿಕಾ ರವಷ್ಟೂ ಕೊರೆ ಇರಲಿಲ್ಲ. ಅವನು ಕೂಲಿನ ಅವ್ವನುಕುಟ್ಟೆ ಕೊಟ್ಟು ತನ್ ಕರ್ಚ್ಕ ಎಷ್ಟ್ ಬೇಕೋ ಅಷ್ಟ ಕಿತ್ಕಿತಾನೂ ಕೇಳಿ ಇಸ್ಕಕೊಳ್ಳೊಣು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಇಂಗೆ ದಿನಗಳು ಸರ್ ಸರಾ-ಸರ್ ಸರಾ ಅಂತ  ಹೋಗ್ತಾ ಇದ್ವು. ಇಂತಾ ಒಂದು ದಿನದಾಗ ಮುಂತಾಯಕ್ಕನುಕ ಮಗನುಕ ಮದುವೆ ಮಾಡಬೇಕು ಅಂತ ಆಸೆ ಮೊಳಿತು. ಅಪ್ಪನು ಇಲ್ಲದ ಮಗ ಈ ಶಿನ್ಶ್ಯಾಮನು ಅಂತ ಊರಾಗ ಟಾಕಿತ್ತು. ಆದರೂ ಮುಂತಾಯಕ್ಕನುಕ ದುಡ್ಡು-ಕಾಸು ಜೋರಾಗಿ ಮಡಗಿದ್ದರಿಂದ ಎದಿವಿರುವ ಮಗನ ಕಲ್ಯಾಣುಕ ಶಿರಿಕಿಗಳು ಕೊರೆ ಬೀಳಲಿಲ್ಲ.

ಹಿಂಗಾಗಿ, ಮುಂತಾಯಕ್ಕನುಕ ಸೊಸಿಯಾಗಿ, ಶಿನ್ಶ್ಯಾಮನುಕ ಹೆಂಡ್ರಾಗಿ ಬಂದವಳೆ ಅರಸನಹಳ್ಳಿಯ ಅಲಮೇಲು. ಅವಳು ಸಣ್ಣಕ, ಕೆಂಪುಕ ಇದ್ದುದು ಮುಂತಾಯಕ್ಕನುಕ ಮೊದಲು ಕೋಡು ಹುಟ್ಟಿಸಿತ್ತು. ಆದ್ರೆ, ಆಮ್ಯಾಕಾಮ್ಯಾಕ ತನ್ತಾವ ಇಲ್ಲದ್ದು ಇವಳತಾವ ಅದೆ ಅಂತ ಅವಳುಕ ಭಗ್ ಅಂತು. ಸೊಸಿ ಕುಂತರೆ-ನಿಂತರೆ, ಆಡಿದ್ರೆ- ಆಡದಿದ್ದರೆ, ಬಂದ್ರೆ-ಹೋದ್ರೆ ಇಲ್ಲೆಲ್ಲಾ ಮಿಸ್ಟೇಕು ಫತ್ತಾ ಮಾಡಿ, ಅವಳುಕ ಅರಸನಹಳ್ಳಿ ಅಪ್ಪ ಕಲಿಸದ ವಾಣಿನಾ ಸರಿಯಾಗಿ ಕಲಿಸಿದ್ಲು.

ಮದುವೆ ಆಗಿ ಮೊದಲ ಮಾಸ. ಗೂದೆ ಕಾಯಿ ಕೀಳುವ ಕೂಲಿ ಕೆಲಸಕ್ಕ ಶಿನ್ಶ್ಯಾಮನು ಹೋಗಿದ್ದ. ಅದೇನು ಪಿಲೇಕಿ ಬಂತೋ ಏನೋ ಗೂದೆ ಕಾಯಿ ಅವತ್ತು ಕೀಳೋದು ತಪ್ಪೋಯ್ತು. ಶಿನ್ಶ್ಯಾಮನು ಬರ್ತಾ ದಾರಿಯಲ್ಲಿ ಸಂಪಂಗಿ ದುಕಾನಾಕ ಜಾಂಗ್ರಿ ಪೊಟ್ಟಣ ಕಟ್ಟಿಸಿ ನಿಕ್ಕರ್ ಜೇಬಿನಾಗ ಇಟ್ಟು ಲುಂಗಿನ ಕೆಳಕ್ಕೆ ಬಿಟ್ಟುಕೊಂಡ. ಮಕದ ಮೇಲೆ ನಗ ಮೂಡ್ತು.

ಮನ್ತಾಕ ಬಂದು ನೋಡ್ತಾನೆ ಹೊರಗೆ ಅಲಮೇಲು ಕುಂತವಳೆ. “ಇದ್ಯಾಕಮ್ಮಿ ಇಲ್ಲಿ ವರಗಿದ್ದಿಯಾ?” ಅಂತ ಕೇಳಲಾಗಿ, ಅವಳು, “ತಾನದ ಟೈಮು ಮಾಮೋ…” ಅಂದಳು. “ಸರಿ, ಏನಾದ್ರೂ ಕೊಟ್ಲ ಅವ್ವ?” ಅಂದುದುಕ, “ಏನೂ ಇಲ್ಲ. ತಾನ ಆಗೋಗಂಟ ನೀರೂ ಮುಟ್ಟಬೇಡ ಅಂದವಳೇ…” ಅಂದಳು. ಶಿನ್ಶ್ಯಾಮನ ಎದೆ ಧಸಕ್ ಅಂತು. ಟೈಮು ನೋಡಿದ್ರ ಆಗಲೇ ಮಟ ಮಟ ಮಧ್ಯಾನು ಆಗದ, ನೀರೂ ಸೋಕಿಸಿಲ್ಲ ಅಂದ್ರ… ಅವ್ವನ ಮ್ಯಾಲೆ ಅವನುಕ ರೋಷ ಉಕ್ತು. ಸೀದಾ ಒಳಕ್ಕೆ ಹೋಗಿ, “ಅವ್ವೋ… ಇದ್ಯಾನ ಮಾಡಿದೆ ನೀನು?” ಅಂದ. “ಕೇಳಿಸಿಕಂಡೆ ಕಂದಾ… ನೀನು ಆ ಸುಪನಾತಿ ತಾವ ಉಯ್ಯಾಲೆ ಆಡ್ತಾ ಇದ್ದುದ. ಮೂರು ದಿನ ತಾನ ಆಗದೆ ಮನೆ ಒಳಕ್ಕೆ ಬರೋದಿರಲಿ, ನೀರಿನ ಗ್ಲಾಸೂ ಸೋಕಿಸ್ಕೊಬಾರ್ದು, ಇದು ಪಬ್ತಿ,” ಅಂದು ಸಿರಕ್ಕನೆ ರೇಗಿ, “ಹೆಂಗಸರ ವೇವಾರ ನಿಂಗ್ ಯಾಕಪ್ಪ?” ಅಂತ ಅವನ ಬಾಯಿ ಮುಚ್ಚಿಸಿದಳು. 

ಆಚೆಗೆ ಬಂದ ಶಿನ್ಶ್ಯಾಮನ ಮಕ ಸಪ್ಪೆ ಬಿದ್ದಿತ್ತು. ಲುಂಗಿ ನಿಕ್ಕರಾಗ ಜಾಂಗ್ರಿ ಅದ. ಈಗ ಅದ ಹೆಂಡ್ರುಕ ಕೊಡಬೇಕೋ ಬ್ಯಾಡವೋ ತಿಳಿದೇ ಒದ್ದಾಡ್ದ.

ಸಂಜೆ ತಾನ ಆದಮ್ಯಾಲೆ, ಅಲಮೇಲು ಅನ್ನ-ಸಾರು ಉಣ್ಣುವಾಗ ಅತ್ತೆಮ್ಮ ಕೇಳಿದ್ಲು, “ಅಲಮೇಲು… ತಾನ ಲೇಟಾಯ್ತು ಅಂತ ಬೇಜಾರ್ ಆಯ್ತಾ? ಸುಸ್ತಾಯ್ತೇನೆ?” 

“ಇಲ್ಲಿನ ಪಬ್ತಿ ಇಂಗೇ. ಬೇಜಾರ್ ಯಾಕೆ?”

ಅತ್ತೆ ನಕ್ಕಳು.

“ನನ್ ಗಂಡ ಇಂತ ಟಯಾನಾಗ ಕದ್ದುಮುಚ್ಚಿ ಏನಾದ್ರೂ ತಂದುಕೊಡೋನು. ನಮ್ ಅತ್ತೆ ಕಾಗೆ ತರ. ಇಂತದ್ದ ನೋಡಿದ್ರೆ  ಕಾ…ಕಾ… ಅಂತ ಅರುಚೋಳು. ಇವನು ಮಾತ್ರ ಬಲಂತ್ರ ಮಾಡಿ ಏನಾದ್ರೂ ತಂದುಕೊಡೋನು…”

ಅಲಮೇಲು, “ನಿಮ್ ಮಗ ಜಾಂಗ್ರಿ ತಂದಿತ್ತು…” ಮೆಲ್ಲ ಉಲಿದಳು – ಗುಮ್ಮನಗುಸಕದಂಗೆ.

“ತಿಂದ್ಯಾ?”

ಅಲಮೇಲು ಪಲುಕಿದ್ದರೆ ಆಣೆ.

“ನೋಡ್ದೆ ಬಿಡೆ!”

ಈಗ ಅಲಮೇಲು ಮಕದಾಗ ನಗ ಮೂಡ್ತು.

“ಹಿಂದ ಕಾಲದವರು ತಮಗೆ ತಿಳಿದಂತೆ ಪಬ್ತಿಗಳ ಮಾಡ್ತಾರೆ. ನಾವುಗಳು ಅದರ ಮಧ್ಯಾಗ ಬಾಳ್ವೆ ಮಾಡಬೇಕು ಅಂದ್ರ ಇಂತ ದಾರಿಗಳು ಕಂಡುಕೋಬೇಕು,” ಅತ್ತೆ ಸೋಸಿಕಾ ಹೇಳಿದ್ಲೋ ಅಥವಾ ತನಗೇ ಹೇಳಿಕೊಂಡ್ಲೋ, ಅಲಮೇಲುಕ ತಿಳಿಲಿಲ್ಲ.

ರಾತ್ರಿ ಬಂದ ಮಗರಾಯನುಕ ಅವ್ವನು ತಗಲಿಕೊಂಡ್ಲು. “ತಾನ ಆಗದೆ ನೀರಿನ ಗ್ಲಾಸೂ ಸೋಕಿಸಬಾರ್ದು ಅಂತ ನಮ್ ಕಡೆ ಪಬ್ತಿಗಳು ಅವೆ. ನೀ ನೋಡಿದ್ರೆ ಲುಂಗಿನಾಗ ಜಾಂಗ್ರಿ ತಂದು ಅವಲುಕ ಕೊಟ್ಟಂತೆ. ಇದ ಸರಿನಾ? ಪಬ್ತಿಗಳು ಉಳಿತಾವ ಹಿಂಗೇ ಆದರೆ?” 

ಮಗ ತಲೆ ಕೆರ್ಕಂಡು ಹೆಂಡ್ರು ತೊಟ್ಟು ನೋಡಿದ.

ಅವಳ ಮಕದಗ ನಗ. ಮಗ ಈಗ ಅವ್ವನ ತೊಟ್ಟು ನೋಡಿದ. ಅವಳ ಮಕದಾಗೂ ಈಗ ನಗ ಅಲೆ-ಅಲೆಯಾಗಿ ಹರೀತಿತ್ತು.

ಗಳನ್ನು ಆಲಿಸಲು ಕ್ಲಿಕ್ ಮಾಡಿ – ಈದಿನ.ಕಾಮ್ ಕೇಳುದಾಣ

ಪೋಸ್ಟ್ ಹಂಚಿಕೊಳ್ಳಿ:

ಆನಂದ್ ಗೋಪಾಲ್
ಆನಂದ್ ಗೋಪಾಲ್
ಕತೆ, ಕವಿತೆ ಅಂತ ಆಗಾಗ ಕಳೆದುಹೋಗುವ ಆನಂದ್, ಕನ್ನಡ ಮೇಷ್ಟ್ರು. ಏಸೂರು ತಿರುಗಿದರೂ ತನ್ನೂರ ಭಾಷೆಯನ್ನು ಗಟ್ಟಿ ತಬ್ಬಿ ಹಿಡಿದ ಮನುಷ್ಯ. ಕೋಲಾರ ಜಿಲ್ಲೆಯ ಮಾಲೂರು ಪ್ರಾಂತ್ಯದ ದೇಸಿ ನುಡಿಗಟ್ಟಿನ ಸೊಗಡು ತಿಳಿಯಬೇಕು ಅಂದರೆ, ಆನಂದ್‌ ಮಾತಿಗೆ ಕಿವಿಯಾಗಬೇಕು.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ನಾಗಮಂಗಲ ಸೀಮೆಯ ಕನ್ನಡ | ‘ಹೆಣ್ಮಗ್ಳು ಒಬ್ಳೇ ಅವ್ಳೆ ಅಂತ ಚುಡಾಯ್ಸಕ್ ಬತ್ತೀಯ!’

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ...

ಬೀದರ್ ಸೀಮೆಯ ಕನ್ನಡ | ಪರೇಶಾನ್ ಬಾಬಾ ಮತ್ತು ಹೇಮಾಳ ‘ದವಾಖಾನಿ ಬ್ಯಾನಿ’

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ...

ಹೊನ್ನಾಳಿ ಸೀಮೆಯ ಕನ್ನಡ | ನಮ್ಮೂರಾಗ ಎಲ್ಲಾ ಜಾತೇರು ಸೇರ್ಕೆಂದ್ ಮಾಡಾ ಮಯೇಶುರಿ ಹಬ್ಬ

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ...

ಮಾಲೂರು ಸೀಮೆಯ ಕನ್ನಡ | ಪ್ರೊಫೆಸರ್ ಮೈಲಾರಪ್ಪನ ಅಗ್ರ ಪೂಜಾ ಅಭಿಲಾಷೆ

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ...