ಈ ದಿನ ಸಂಪಾದಕೀಯ | ಪ್ರವಾಹಕ್ಕೆದುರು ದಶಕ ಕಾಲದ ಈಜು-  Scroll.in ಗೆ ಅಭಿನಂದನೆ!

Date:

ತಲಸ್ಪರ್ಶಿ ವರದಿಗಾರಿಕೆ ಮತ್ತು ಸುದ್ದಿ ವಿಶ್ಲೇಷಣೆ scroll.in ಜಾಲತಾಣದ ವಿಶೇಷ ಹೂರಣ. ಆರ್ಥಿಕ ಸಂಕಟಗಳನ್ನು ಎದುರಿಸಿಯೂ ಪತ್ರಿಕಾವೃತ್ತಿಯ ಆದರ್ಶಗಳನ್ನು ಪಾಲಿಸಿದೆ. ಅಬ್ಬರದ ಅಲೆಗಳ ಹೊಡೆತಗಳನ್ನು ತಡೆದುಕೊಂಡು ನಿಂತಿದೆ. ಪ್ರವಾಹಕ್ಕೆದುರು ಈಜಾಡಿಯೂ ಹತ್ತು ವರ್ಷಗಳ ಕಾಲ ಉಳಿದುಕೊಂಡಿದೆ.

Scroll ಎಂಬ ಇಂಗ್ಲಿಷ್ ಪದಕ್ಕೆ ಎರಡು ಅರ್ಥಗಳುಂಟು. ಬರವಣಿಗೆಯಿರುವ ಉದ್ದನೆಯ ಕಾಗದದ ಸುರುಳಿ. ಕಂಪ್ಯೂಟರ್ ಪರದೆಯ ಮೇಲೆ ಬರೆದದ್ದು ಅಥವಾ ಚಿತ್ರಿಸಿದ್ದನ್ನು ನೋಡಲು ಎಡ-ಬಲಕ್ಕೆ ಅಥವಾ ಮೇಲೆ-ಕೆಳಗೆ ಚಲಿಸುವ ಕ್ರಿಯೆಯನ್ನೂ ಸ್ಕ್ರೋಲ್ ಎಂದು ಬಣ್ಣಿಸುವುದುಂಟು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಡಿಜಿಟಲ್ ಮಾಧ್ಯಮದ ಉದಯವು ಬಂಡವಾಳದ ಸಂಕೋಲೆಯಿಂದ ಸಮೂಹ ಮಾಧ್ಯಮದ ಬಿಡುಗಡೆಯ ಹಾದಿಯನ್ನು ತೆರೆಯಿತು. ಅರ್ಥಪೂರ್ಣ ಮೀಡಿಯಾಗೆ ಅವಕಾಶ ಕಲ್ಪಿಸಿತು. Scroll.in ಎಂಬ ಭಾರತೀಯ ಅಂತರ್ಜಾಲ ಇಂಗ್ಲಿಷ್ ಸುದ್ದಿತಾಣಕ್ಕೆ ಜನವರಿ 26 ಗಣರಾಜ್ಯೋತ್ಸವದಂದು ಹತ್ತು ವರ್ಷಗಳು ತುಂಬಿದವು. ಅರ್ಥಪೂರ್ಣ ಅಸ್ತಿತ್ವದ ಒಂದು ದಶಕವನ್ನು ಪೂರೈಸಿರುವ ಈ ಸುದ್ದಿ ಸಂಸ್ಥೆಗೆ ಹಾರ್ದಿಕ ಅಭಿನಂದನೆಗಳು ಸಲ್ಲಬೇಕಿವೆ. ದೇಶದ ಪರ್ಯಾಯ ಪತ್ರಿಕೋದ್ಯಮದಲ್ಲಿ ಬೆರಳೆಣಿಕೆಯ ಸುದ್ದಿ ಸಂಸ್ಥೆಗಳಲ್ಲಿ ‘ಸ್ಕ್ರೋಲ್’ ಕೂಡ ಒಂದು.

ಜನತಂತ್ರದ ಸ್ವತಂತ್ರ ಮಾಧ್ಯಮವೆಂಬುದು ಮುಕ್ತ ಸಮಾಜಗಳ ಅಡಿಗಲ್ಲು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪತ್ರಿಕಾಂಗ ಸದಾ ರಚನಾತ್ಮಕ ಪ್ರತಿಪಕ್ಷದಂತೆ ಕೆಲಸ ಮಾಡಬೇಕು, ವ್ಯವಸ್ಥೆ ಮತ್ತು ಆಡಳಿತ ವಿರೋಧಿಯಾಗಿರಬೇಕು. ಕಾರ್ಯಾಂಗ, ಶಾಸಕಾಂಗ ಹಾಗೂ ನ್ಯಾಯಾಂಗದ ಹದ್ದಿನ ಕಣ್ಣಿಟ್ಟು ಕಾದು ಜನತಂತ್ರವನ್ನು ಪೊರೆಯಬೇಕು. ಮುಖ್ಯಧಾರೆಯ ಬಹುತೇಕ ಮಾಧ್ಯಮಗಳು ಈ ಆದರ್ಶವನ್ನು ಗಾಳಿಗೆ ತೂರಿವೆ. ಸತ್ಯ ಮತ್ತು ವಾಸ್ತವತೆಗೆ ಬೆನ್ನು ತಿರುಗಿಸಿವೆ. ಲಾಭದ ಮೇಲೆ ಕಣ್ಣಿಟ್ಟು ಜನಪರ ನಿಲುವನ್ನು ತ್ಯಾಗ ಮಾಡಿವೆ. ಆಳುವವರ ಅಡಿಯಾಳುಗಳಾಗಿ ಹೋಗಿವೆ. ಓದುಗರು ಮತ್ತು ಜನತಂತ್ರ ಈ ಮಾಧ್ಯಮ ಗುಲಾಮಗಿರಿಯ ಮೊದಲ ಬಲಿ.

ಆದರೆ ‘ಸ್ಕ್ರೋಲ್’ ಈ ಪ್ರವೃತ್ತಿಗೊಂದು ಅಪವಾದ. ತಲಸ್ಪರ್ಶಿ ವರದಿಗಾರಿಕೆ ಮತ್ತು ಸುದ್ದಿ ವಿಶ್ಲೇಷಣೆ ಈ ಜಾಲತಾಣದ ವಿಶೇಷ ಹೂರಣ. ಆರ್ಥಿಕ ಸಂಕಟಗಳನ್ನು ಎದುರಿಸಿಯೂ ಪತ್ರಿಕಾವೃತ್ತಿಯ ಆದರ್ಶಗಳನ್ನು ಪಾಲಿಸಿದೆ. ಅಬ್ಬರದ ಅಲೆಗಳ ಹೊಡೆತಗಳನ್ನು ತಡೆದುಕೊಂಡು ನಿಂತಿದೆ. ಪ್ರವಾಹಕ್ಕೆದುರು ಈಜಾಡಿಯೂ ಹತ್ತು ವರ್ಷಗಳ ಕಾಲ ಉಳಿದುಕೊಂಡಿದೆ. ಶ್ರೇಷ್ಠ ಪತ್ರಿಕೋದ್ಯಮಕ್ಕೆ ನೀಡಲಾಗುವ ರಾಮನಾಥ ಗೋಯೆಂಕಾ ಪ್ರಶಸ್ತಿಗಳು ಮತ್ತು ಪತ್ರಿಕಾ ಸ್ವಾತಂತ್ರ್ಯಕ್ಕೆ ಸಂಬಂಧಿಸಿದ 50ಕ್ಕೂ ಹೆಚ್ಚು ರಾಷ್ಟ್ರೀಯ- ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಗಳಿಸಿದೆ. ಪ್ರತಿಕೂಲ ವಾತಾವರಣದಲ್ಲಿ ಮಾಡಿದ ಅದ್ವಿತೀಯ ಸಾಧನೆಯಿದು. ಈ ಜಾಲತಾಣದ ಹಿಂದೀ ಆವೃತ್ತಿ ಸತ್ಯಾಗ್ರಹ್.ಕಾಂ ಕದವಿಕ್ಕಬೇಕಾಗಿ ಬಂದದ್ದು ದುರಂತ.

ಪ್ರತಿಷ್ಠಿತ ಮೆಸಾಚುಸೆಟ್ಸ್ ಇನ್‌ಸ್ಟಿಟ್ಯೂಟ್‌ ಆಫ್ ಟೆಕ್ನಾಲಜಿಯಲ್ಲಿ ಓದಿದ ಸಮೀರ್ ಪಾಟೀಲ್ ಎಂಬವರು ಅಮರ ಚಿತ್ರಕಥಾ ಮತ್ತು ಟಿಂಕಲ್ ಪ್ರಕಾಶಕರು. ಈ ಪ್ರಕಾಶನ ಸಂಸ್ಥೆಯನ್ನು ಮಾರಾಟ ಮಾಡಿ ಅಮೆರಿಕೆಯಲ್ಲೇ ಸ್ಕ್ರೋಲ್ ಮೀಡಿಯಾ ಇನ್ಕಾರ್ಪೊರೇಷನ್ ಸ್ಥಾಪಿಸಿದರು. ನರೇಶ್ ಫರ್ನಾಂಡಿಸ್ ಎಂಬ ಹಿರಿಯ ಪತ್ರಕರ್ತರೊಂದಿಗೆ ಕೈ ಜೋಡಿಸಿ 2014ರ ಜನವರಿಯಲ್ಲಿ Scroll.in ಎಂಬ ಭಾರತೀಯ ಸುದ್ದಿಜಾಲ ತಾಣವನ್ನು ಹುಟ್ಟಿ ಹಾಕಿದರು. (ಸ್ವತಂತ್ರ ಮತ್ತು ಸಾರ್ವಜನಿಕ ಆಶಯಗಳ ಮಾಧ್ಯಮ ಪ್ರತಿಷ್ಠಾನ (The Independent and Public Spirited Media Foundation-IPSMF), ಮೀಡಿಯಾ ಅಭಿವೃದ್ಧಿ ಹೂಡಿಕೆ ನಿಧಿ, ಒಮಿಡಿಯಾರ್ ನೆಟ್ವರ್ಕ್ ಹಾಗೂ ಖೇತಾನ್ ಅಂಡ್ ಕೋ ಸಂಸ್ಥೆಗಳು ಈ ಸಾಹಸವನ್ನು ಆರಂಭಿಕ ಹಂತದಲ್ಲಿ ಪೋಷಿಸಿದ್ದವು.

ಮುಖ್ಯಧಾರೆಯ ಮೀಡಿಯಾ ಕುರುಡುಗಣ್ಣು ಹರಿಸಿರುವ ಭೌಗೋಳಿಕ ಮತ್ತು ವಿಷಯವಸ್ತುಗಳ ಮೇಲೆ scroll ತನ್ನ ನೋಟ ನೆಟ್ಟಿದೆ. ಕಾಶ್ಮೀರ, ವಿಶಾಲ ಈಶಾನ್ಯ ಸೀಮೆಗಳ ಜೊತೆಗೆ ಲಿಂಗತಾರತಮ್ಯ, ಪರಿಸರ, ಆರೋಗ್ಯ, ಶ್ರಮಿಕರ ಹಕ್ಕುಗಳು, ಜಾತಿ ಹಾಗೂ ಶಿಕ್ಷಣದ ವಿಷಯಗಳನ್ನು ವರದಿ ಮಾಡಿದ್ದೇವೆ. ಬದುಕನ್ನು ನಿಜಕ್ಕೂ ಸಹನೀಯಗೊಳಿಸುವ ಪುಸ್ತಕಗಳು, ಸಿನೆಮಾ, ಕಲೆ ಇನ್ನಿತರ ಸಾಂಸ್ಕೃತಿಕ ಮಗ್ಗುಲುಗಳ ಮೇಲೆಯೂ ಬೆಳಕು ಚೆಲ್ಲಲು ಪ್ರಯತ್ನಿಸಿದ್ದೇವೆ. ನಮ್ಮ ಈ ವಿಷಯ ವೈವಿಧ್ಯಕ್ಕೆ ಹಲವು ಹತ್ತು ಲಕ್ಷ ಓದುಗರಿದ್ದಾರೆಂಬುದೇ ಹರ್ಷದ ಸಂಗತಿ” ಎಂಬುದು ಈ ಜಾಲತಾಣದ ವಿನಮ್ರ ನಿವೇದನೆ.
ಜಾಹೀರಾತು ಬೆಂಬಲವಿಲ್ಲದ ಮತ್ತು ಪ್ರಭುತ್ವದ ಕೃಪಾಪೋಷಣೆಯಿಲ್ಲದೆ ಜನಪರ ಮಾಧ್ಯಮಗಳು ಬದುಕುವುದು ದುಸ್ಸಾಧ್ಯ. ಈದಿನ.ಕಾಂ ಕೂಡ ಇದೇ ಸಾಲಿಗೆ ಸೇರುವ ಸುದ್ದಿಸಂಸ್ಥೆ. ಜನಸಾಮಾನ್ಯರ ಆರ್ಥಿಕ ಬೆಂಬಲವೇ ಇಂತಹ ಸಂಸ್ಥೆಗಳ ಪ್ರಾಣವಾಯು.
WhatsApp Image 2025 11 17 at 3.23.18 PM
ಈ ದಿನ ಸಂಪಾದಕೀಯ
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ|ಗುಜರಾತಿನ ದಲಿತರಿಗೆ ಗಗನ ಕುಸುಮವಾಗೇ ಉಳಿದ ನ್ಯಾಯ

ಗುಜರಾತಿನ ಜನಸಂಖ್ಯೆಯಲ್ಲಿ ದಲಿತರ ಪ್ರಮಾಣ ಕಡಿಮೆ. ಶೇ.6.34 ಮಾತ್ರ. ಇಲ್ಲಿ ದಲಿತರಿಗಿಂತ...

ಈ ದಿನ ಸಂಪಾದಕೀಯ | ಮೋದಿಯ ಸಣ್ಣತನವನ್ನು ದೊಡ್ಡತನದಿಂದ ಸೋಲಿಸಿದ ಇರಾನ್‌!

ಇಂಧನ ಭದ್ರತೆಯನ್ನು ಕಾಪಾಡಿಕೊಳ್ಳಲು ಭಾರತದ ಹಡಗುಗಳು ಹಾರ್ಮುಜ್ ಜಲಸಂಧಿಯಿಂದ ಹಾದುಹೋಗಲು ಅವಕಾಶ...

ಈ ದಿನ ಸಂಪಾದಕೀಯ | SIR ಹೆಸರಲ್ಲಿ ಮಹಿಳೆಯರ ಮತದಾನದ ಹಕ್ಕಿನ ಹರಣ ಅಕ್ಷಮ್ಯ

ಕರ್ನಾಟಕದಲ್ಲಿ ಮಹಿಳೆಯರ ಹಕ್ಕುಗಳನ್ನು ರಕ್ಷಿಸುವ ಕೆಲಸ ಆಗಬೇಕಿದೆ. ಎಸ್‌ಐಆರ್‌ ನಡೆಯುವ ಸಮಯದಲ್ಲಿ...

ಈ ದಿನ ಸಂಪಾದಕೀಯ | ಕಾಂಗ್ರೆಸ್ಸಿಗರಿಗೆ ಇಂದಿರಾ ಬೇಕು, ಬಡವರ ಕ್ಯಾಂಟೀನ್ ಬೇಡ

ಶಾಸಕರು, ಸಚಿವರು, ಅಧಿಕಾರಿಗಳು ವಾರಕ್ಕೊಂದು ಸಲವಾದರೂ ಇಂದಿರಾ ಕ್ಯಾಂಟೀನ್‌ನಲ್ಲಿ ಊಟ-ತಿಂಡಿ ಮಾಡಬೇಕಿದೆ....