ಈ ದಿನ ಸಂಪಾದಕೀಯ | ಅನ್ನಪೂರ್ಣಿ ‘ನಿಷೇಧ’- ಧರ್ಮಗಳ ನಡುವೆ ಬೆಂಕಿ ಇಟ್ಟು ಬೇಳೆ ಬೇಯಿಸುವ ಕೃತ್ಯ

Date:

ಭಾರತೀಯರು ಸಿನಿಮಾವನ್ನು ಸಿನಿಮಾವಾಗಿ, ಮನರಂಜನೆಯಾಗಿಯಷ್ಟೇ ನೋಡಲು ಕಲಿತ ದಿನ ಈ ಎಲ್ಲ ರಗಳೆಗಳು ನಿಲ್ಲುತ್ತವೆ. ಅನ್ನಪೂರ್ಣಿ ಪಾತ್ರ ಅರ್ಚಕರ ಮಗಳು; ಆಕೆ ಮಾಂಸಾಹಾರ ತಯಾರಿಸುವುದು, ಸೇವಿಸುವುದು ಹಿಂದೂಗಳ ಭಾವನೆಗೆ ಧಕ್ಕೆ ಹೇಗಾಗುತ್ತದೆ? ಒಬ್ಬ ಬ್ರಾಹ್ಮಣ ವ್ಯಕ್ತಿಗೆ ಬಲವಂತವಾಗಿ ಮಾಂಸಾಹಾರ ತಿನ್ನಿಸಲಾಗಿದೆ ಎಂಬಂತೆ ಭ್ರಮಿಸುವುದು ಹುಚ್ಚುತನ

 

ಭಿನ್ನ ಧರ್ಮಗಳ ಗಂಡು ಹೆಣ್ಣಿನ ನಡುವಿನ ಸಹಜ ಪ್ರೀತಿ, ಮದುವೆಗೆ ಇತ್ತೀಚೆಗೆ ಹಿಂದೂ ಮೂಲಭೂತವಾದಿಗಳು ಇಟ್ಟ ಕೆಟ್ಟ ಹೆಸರು ಲವ್‌ ಜಿಹಾದ್‌“. ಭಾರತದ ಕಾನೂನು ಪುಸ್ತಕಗಳಲ್ಲಿ ಇಲ್ಲದಿರುವ ಪದವಿದು. ಈ ಬಗ್ಗೆ ಯಾವುದೇ ತನಿಖಾ ಸಂಸ್ಥೆಯಡಿ ದೂರು ದಾಖಲಾಗಿಲ್ಲ ಎಂದು ಹಿಂದೊಮ್ಮೆ ಮೋದಿ ಸರ್ಕಾರವೇ ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಸ್ಪಷ್ಟನೆ ನೀಡಿತ್ತು. ಆದರೆ, ಕೋಮುವಾದಿ ಸಂಘಟನೆಗಳು ಈ ಹೆಸರಿನಡಿ ನಡೆಸುತ್ತಿರುವ ದಾಂಧಲೆಗೆ ಕಡಿವಾಣ ಬಿದ್ದಿಲ್ಲ.

ಅಷ್ಟೇ ಅಲ್ಲ, ಸನಾತನ ಮನಸ್ಥಿತಿಯ ಒಂದು ಸಮೂಹ ಬ್ರಾಹ್ಮಣೇತರರ ವಿರುದ್ಧ ಆಹಾರ ರಾಜಕಾರಣವನ್ನು ಶುರು ಮಾಡಿವೆ. ದನದ ಮಾಂಸ ಸೇವನೆಯ ಮೇಲೆ ಗದಾಪ್ರಹಾರ, ಮಾಂಸಾಹಾರ ತುಚ್ಛ, ಸಸ್ಯಾಹಾರ ಶ್ರೇಷ್ಠ ಎಂಬ ಹೇಳಿಕೆಗಳು, ಆ ಹೆಸರಿನ ರಾಜಕಾರಣ, ಹಬ್ಬಗಳ ದಿನ ಮಾಂಸಾಹಾರ ಮಾರಾಟವನ್ನೇ ನಿಷೇಧ ಮಾಡುವ ಮೂಲಕ ಬಡವರ, ಮಾಂಸಾಹಾರಿಗಳ ಮೂಲಭೂತ ಹಕ್ಕಿನ ಮೇಲೆ ಕೇಂದ್ರ ಮತ್ತು ಬಿಜೆಪಿ ಸರ್ಕಾರಗಳೇ ನಡೆಸುತ್ತಿದೆ. ಬಹುಸಂಖ್ಯಾತ ಹಿಂದೂಗಳ ಮೇಲೆ ಅದೇ ಹಿಂದೂ ಧರ್ಮದ ಜಾತಿಶ್ರೇಷ್ಠತೆ ವ್ಯಸನಿಗಳು ನಡೆಸುತ್ತಿರುವ ಶೋಷಣೆಗೆ ಕಡಿವಾಣವೇ ಇಲ್ಲದಂತಾಗಿದೆ. ಇಂತಹ ಮನಸ್ಥಿತಿಗಳೇ ಗೋಮಾಂಸ ರಫ್ತುದಾರರ ಬಗ್ಗೆ ಮೌನವಾಗಿದ್ದು, ಮಾರುಕಟ್ಟೆಯಿಂದ ಒಂದು ಕೇಜಿ ಮಾಂಸ ಮನೆಗೆ ಕೊಂಡೊಯ್ಯುವ ಬಡಪಾಯಿಯನ್ನು ಬಹಿರಂಗವಾಗಿ ಜಜ್ಜಿ ಸಾಯಿಸುತ್ತಿವೆ. ಗೋರಕ್ಷಕರ ಹೆಸರಿನಲ್ಲಿ ಬಡ ವ್ಯಾಪಾರಿಗಳನ್ನು ಸುಲಿಗೆ ಮಾಡುತ್ತಿವೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಈ ಆಹಾರ ರಾಜಕಾರಣ ಮತ್ತು ಕಪೋಲ ಕಲ್ಪಿತ ಲವ್‌ ಜಿಹಾದ್‌ನ ಬಲಿ ಪಶುವಾಗಿ ಈಗ ನಮ್ಮ ಮುಂದೆ ‘ಅನ್ನಪೂರ್ಣಿ’ ಇದ್ದಾಳೆ. ಡಿಸೆಂಬರ್‌ 1ರಂದು ಬಿಡುಗಡೆಯಾದ, ನಯನತಾರಾ ಅಭಿನಯದ ತಮಿಳಿನ ‘ಅನ್ನಪೂರ್ಣಿ’ ಸಿನಿಮಾವು ಬ್ರಾಹ್ಮಣ ಸಂಪ್ರದಾಯಸ್ಥ ಮಹಿಳೆಯೊಬ್ಬಳು ಭಾರತದ ‘ನಂಬರ್‌ ವನ್ ಶೆಫ್’ (ನಂಬರ್ ವನ್ ಬಾಣಸಿಗಳು) ಆಗುವ ಕಥೆಯನ್ನು ಒಳಗೊಂಡಿದೆ. ಸಿನಿಮಾ ಪಾತ್ರಧಾರಿ ಅನ್ನಪೂರ್ಣಿ ಮಾಂಸಾಹಾರ ಅಡುಗೆ ಮಾಡುವುದು, ಸೇವನೆ ಮಾಡುವುದು ಹಾಗೂ ಆಕೆಯ ಮುಸ್ಲಿಂ ಸ್ನೇಹಿತ ರಾಮ ಮಾಂಸಾಹಾರಿಯಾಗಿದ್ದ ಎಂದು ಹೇಳುವ ದೃಶ್ಯಗಳ ಬಗ್ಗೆ ಹಿಂದೂ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದವು.

ಹಿಂದೂಗಳ ಧಾರ್ಮಿಕ ಭಾವನೆಗಳ ಬಗ್ಗೆ ಧಕ್ಕೆಯಾಗಿದೆ ಎಂದು ರಮೇಶ್ ಸೋಲಂಕಿ ಎಂಬುವವರು ನಟಿ ನಯನತಾರ, ಈ ಸಿನೆಮಾದ ನಿರ್ಮಾಪಕರು, ನಿರ್ದೇಶಕರು ಹಾಗೂ ನೆಟ್‌ಫ್ಲಿಕ್ಸ್ ಒ.ಟಿ.ಟಿ. ವೇದಿಕೆಯನ್ನು ಒಳಗೊಂಡು ಸಿನಿಮಾ ತಂಡದ ಎಂಟು ಮಂದಿಯ ವಿರುದ್ಧ ಜನವರಿ 8ರಂದು ಮುಂಬೈ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಒಟಿಟಿ ಫ್ಲಾಟ್‌ಫಾರ್ಮ್‌ ನೆಟ್‌ಫ್ಲಿಕ್ಸ್‌ ಇದೀಗ ಅನ್ನಪೂರ್ಣಿ ಸಿನಿಮಾ ಪ್ರದರ್ಶನವನ್ನು ನಿಲ್ಲಿಸಿದೆ. ಸಹನಿರ್ಮಾಪಕರಾದ ಜೀ ಸಿನಿಮಾಸ್‌ ಆರೆಸ್ಸೆಸ್‌ ನ ಕ್ಷಮೆ ಕೇಳಿದೆ! “ಸಿನಿಮಾದ ಸಹನಿರ್ಮಾಪಕರಾಗಿರುವ ನಾವು, ಸಿನಿಮಾದ ಕೆಲವು ದೃಶ್ಯಗಳನ್ನು ತಿದ್ದುಪಡಿ ಮಾಡುವವರೆಗೂ ನೆಟ್‌ಫ್ಲಿಕ್ಸ್‌ನಿಂದ ತೆಗೆದು ಹಾಕಿರುತ್ತೇವೆ” ಎಂದು ಝೀ ಸ್ಟುಡಿಯೋಸ್ ತಿಳಿಸಿದೆ.

ಚಿತ್ರದಲ್ಲಿ ಅನ್ನಪೂರ್ಣಿ ‘ಶೆಫ್’ ಆಗಲು ಬಯಸುತ್ತಾರೆ. ಅದಕ್ಕಾಗಿ ಅವರು ಮಾಂಸಾಹಾರವನ್ನು ಬೇಯಿಸಬೇಕು. ಇದು ಅವರ ಧಾರ್ಮಿಕ ಆಚರಣೆಗಳಿಗೆ ವಿರುದ್ಧವಾಗಿದೆ. ಆದರೆ ಅನ್ನಪೂರ್ಣಿ ಮಾಂಸಾಹಾರ ಬೇಯಿಸುವುದಷ್ಟೇ ಅಲ್ಲದೆ ಸೇವಿಸುತ್ತಾರೆ. ಬಿರಿಯಾನಿ ಅಡುಗೆ ಮಾಡುವ ಮೊದಲು ನಮಾಜ್ ಮಾಡಲಾಗುತ್ತದೆ. ಇದಕ್ಕೆಲ್ಲ ಆಕ್ಷೇಪ ವ್ಯಕ್ತಪಡಿಸಿರುವ ಸಂಘಟನೆಗಳು ಚಿತ್ರದಲ್ಲಿ ಫರ್ಹಾನ್ ಮತ್ತು ಅನ್ನಪೂರ್ಣಿಯ ಸಂಬಂಧವನ್ನು ಲವ್ ಜಿಹಾದ್‌ ಎಂದು ಕರೆದಿವೆ.

ಒಂದು ಕಥಾ ಹಂದರ, ಅದರ ಪಾತ್ರಗಳ ನಡವಳಿಕೆ, ವ್ಯಕ್ತಿತ್ವವನ್ನು ಕಾಲ್ಪನಿಕ ಕತೆ ಎಂಬ ಸಹಜ ದೃಷ್ಟಿಯಿಂದ ನೋಡಲಾಗದ ಮನಸ್ಥಿತಿಗಳು ಎಂಥವು?

ಭಾರತೀಯರು ಸಿನಿಮಾವನ್ನು ಸಿನಿಮಾ, ಮನರಂಜನೆಯಾಗಿಯಷ್ಟೇ ನೋಡಲು ಕಲಿತ ದಿನ ಈ ಎಲ್ಲ ರಗಳೆಗಳು ನಿಲ್ಲುತ್ತವೆ. ಅನ್ನಪೂರ್ಣಿ ಪಾತ್ರ ಅರ್ಚಕರ ಮಗಳು. ಆಕೆ ಮಾಂಸಾಹಾರ ತಯಾರಿಸುವುದು ಮತ್ತು ಸೇವಿಸುವುದು ಹಿಂದೂಗಳ ಭಾವನೆಗೆ ಧಕ್ಕೆ ಹೇಗಾಗುತ್ತದೆ? ವಾಸ್ತವದಲ್ಲಿ ಒಬ್ಬ ಬ್ರಾಹ್ಮಣ ವ್ಯಕ್ತಿಗೆ ಬಲವಂತವಾಗಿ ಮಾಂಸಾಹಾರ ತಿನ್ನಿಸಲಾಗಿದೆ ಎಂಬಂತೆ ಭ್ರಮಿಸುವುದು ಹುಚ್ಚುತನ. ಇದು ಜಾತಿ ಶ್ರೇಷ್ಠತೆಯ ವ್ಯಸನದ ಪರಾಕಾಷ್ಠೆಯನ್ನಷ್ಟೇ ತೋರಿಸುತ್ತದೆ.

ನಿಜ ಸಮಾಜದಲ್ಲಿ ಹಿಂದೂ ಮುಸ್ಲಿಂ ವ್ಯಕ್ತಿಗಳ ಸಂಬಂಧವನ್ನು ಸಹಿಸದವರು ಸಿನಿಮಾದ ಪಾತ್ರಗಳ ಬಗ್ಗೆಯೂ ತಕರಾರು ತೆಗೆದು ಲವ್‌ ಜಿಹಾದ್‌ನ ಪ್ರಚಾರ ಮಾಡಲಾಗುತ್ತಿದೆ ಎಂದು ಗದ್ದಲ ಎಬ್ಬಿಸಿರುವುದು ನಾಚಿಕೆಗೇಡಿನ ಸಂಗತಿ. ಸಾಂಸ್ಕೃತಿಕ ಲೋಕ ಆಹಾರ ರಾಜಕಾರಣ, ಕೋಮುದ್ವೇಷ, ಜಾತಿಶ್ರೇಷ್ಠತೆಯ ವ್ಯಸನಕ್ಕೆ ಬಲಿಯಾಗುತ್ತಿರುವುದು ಆರೋಗ್ಯಕರ ಸಮಾಜ ಸಹಬಾಳುವೆಗಳ ದೃಷ್ಟಿಯಿಂದ ನಿರಾಶಾದಾಯಕ ಬೆಳವಣಿಗೆ.

WhatsApp Image 2025 11 17 at 3.23.18 PM
ಈ ದಿನ ಸಂಪಾದಕೀಯ
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ|ಗುಜರಾತಿನ ದಲಿತರಿಗೆ ಗಗನ ಕುಸುಮವಾಗೇ ಉಳಿದ ನ್ಯಾಯ

ಗುಜರಾತಿನ ಜನಸಂಖ್ಯೆಯಲ್ಲಿ ದಲಿತರ ಪ್ರಮಾಣ ಕಡಿಮೆ. ಶೇ.6.34 ಮಾತ್ರ. ಇಲ್ಲಿ ದಲಿತರಿಗಿಂತ...

ಈ ದಿನ ಸಂಪಾದಕೀಯ | ಮೋದಿಯ ಸಣ್ಣತನವನ್ನು ದೊಡ್ಡತನದಿಂದ ಸೋಲಿಸಿದ ಇರಾನ್‌!

ಇಂಧನ ಭದ್ರತೆಯನ್ನು ಕಾಪಾಡಿಕೊಳ್ಳಲು ಭಾರತದ ಹಡಗುಗಳು ಹಾರ್ಮುಜ್ ಜಲಸಂಧಿಯಿಂದ ಹಾದುಹೋಗಲು ಅವಕಾಶ...

ಈ ದಿನ ಸಂಪಾದಕೀಯ | SIR ಹೆಸರಲ್ಲಿ ಮಹಿಳೆಯರ ಮತದಾನದ ಹಕ್ಕಿನ ಹರಣ ಅಕ್ಷಮ್ಯ

ಕರ್ನಾಟಕದಲ್ಲಿ ಮಹಿಳೆಯರ ಹಕ್ಕುಗಳನ್ನು ರಕ್ಷಿಸುವ ಕೆಲಸ ಆಗಬೇಕಿದೆ. ಎಸ್‌ಐಆರ್‌ ನಡೆಯುವ ಸಮಯದಲ್ಲಿ...

ಈ ದಿನ ಸಂಪಾದಕೀಯ | ಕಾಂಗ್ರೆಸ್ಸಿಗರಿಗೆ ಇಂದಿರಾ ಬೇಕು, ಬಡವರ ಕ್ಯಾಂಟೀನ್ ಬೇಡ

ಶಾಸಕರು, ಸಚಿವರು, ಅಧಿಕಾರಿಗಳು ವಾರಕ್ಕೊಂದು ಸಲವಾದರೂ ಇಂದಿರಾ ಕ್ಯಾಂಟೀನ್‌ನಲ್ಲಿ ಊಟ-ತಿಂಡಿ ಮಾಡಬೇಕಿದೆ....