ಈ ದಿನ ಸಂಪಾದಕೀಯ | ಬಾಕಿ ಖಟ್ಲೆಗಳ ಭಾರದಡಿ ಕುಸಿದಿರುವ ನ್ಯಾಯಾಂಗ ಮತ್ತು ಸಿನಿಕ ಸಾರ್ವಜನಿಕರು

Date:

ಭಾರತೀಯ ನ್ಯಾಯಾಂಗದ ಮುಂದಿರುವ ಪ್ರಬಲ ಸವಾಲಿದು ಎನ್ನುವುದು ತಪ್ಪುದಾರಿಗೆಳೆಯುವ ಬಣ್ಣನೆ. ದೇಶದ ಸರ್ಕಾರ ಮತ್ತು ಸಮಾಜದ ಮುಂದಿರುವ ಸವಾಲಿದು. ಕೇವಲ ನ್ಯಾಯಾಂಗವನ್ನು ಗುರಿ ಮಾಡುವುದು ತರವಲ್ಲ.

ಭಾರತದ ನ್ಯಾಯಾಂಗ ವ್ಯವಸ್ಥೆ ಬಾಕಿ ಖಟ್ಲೆಗಳ ಬೆಟ್ಟದ ಭಾರದಡಿ ಕುಸಿದಿದೆ. ನ್ಯಾಯದ ಗಾಲಿಗಳು ತೀರಾ ಮಂದಗತಿಯಲ್ಲಿ ಉರುಳುತ್ತಿವೆ. ಬ್ರಿಟೀಷರ ಕಾಲದ ಪುರಾತನ ಪೆಡಸು ಕಾನೂನು ಪ್ರಕ್ರಿಯೆಗಳು, ಸುತ್ತು ಬಳಸಿನ ವಿಚಾರಣೆ ವೈಖರಿಗಳು ಇತ್ಯರ್ಥದ ಗತಿಯನ್ನು ಮಂದಗೊಳಿಸಿವೆ.

ಪರಿಣಾಮವಾಗಿ ಜನತೆಯಲ್ಲಿ ನ್ಯಾಯಾಂಗ ಪ್ರಕ್ರಿಯೆಯ ಕುರಿತು ಸಿನಿಕತನ ತಲೆದೋರಿದೆ. ತಪ್ಪೋ ಸರಿಯೋ ದಿಢೀರ್ ನ್ಯಾಯವನ್ನು ಬಯಸುವವರ ಪ್ರಮಾಣವೇ ಅಧಿಕ. ಗಂಭೀರ ಅಪರಾಧಗಳ ಆರೋಪಿಗಳನ್ನು ಹುಸಿ ಎನ್‌ಕೌಂಟರ್‌ಗಳಲ್ಲಿ ಪೊಲೀಸರೇ ಹೊಡೆದು ಸಾಯಿಸುವ ‘ದಿಢೀರ್ ನ್ಯಾಯದಾನ’ ಜನಪ್ರಿಯತೆ ಗಳಿಸಿದೆ.

ಲಾಕಪ್ ಸಾವುಗಳ ಕುರಿತು ಯಾರೂ ತಲೆಕೆಡಿಸಿಕೊಳ್ಳದ ಅಪಾಯಕಾರಿ ನಿರ್ಲಕ್ಷ್ಯ ಏರ್ಪಟ್ಟಿದೆ. ದೇಶದ ನಾಗರಿಕರನ್ನು ನ್ಯಾಯದ ಹಕ್ಕಿನಿಂದ ವಂಚಿತರನ್ನಾಗಿಸುವ ಮತ್ತು ನ್ಯಾಯಾಂಗ ವ್ಯವಸ್ಥೆಯಲ್ಲಿ ನಂಬಿಕೆ ಕಳೆದುಕೊಳ್ಳುವ ಸ್ಥಿತಿಯನ್ನು ಸೃಷ್ಟಿಸುತ್ತದೆ. ಕಳವಳಕಾರಿ ವಿದ್ಯಮಾನವಿದು. ಈ ಬೆಳವಣಿಗೆಯಲ್ಲಿ ಪ್ರಭುತ್ವದ ಪ್ರತ್ಯಕ್ಷ ಮತ್ತು ಪರೋಕ್ಷ ಪಾಲಿದೆ. ಸ್ವತಂತ್ರ ಮನೋಭಾವದ ನ್ಯಾಯಾಂಗವನ್ನು ತಾನು ಸಹಿಸುವುದಿಲ್ಲವೆಂದು ಮೋದಿ ಸರ್ಕಾರ ಅಡಿಗಡಿಗೆ ಇಂಗಿತ ನೀಡಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ದೇಶದ ನಾನಾ ನ್ಯಾಯಾಲಯಗಳಲ್ಲಿ ವಿಚಾರಣೆಗೆ ಬಾಕಿ ಇರುವ ಖಟ್ಲೆಗಳ ಸಂಖ್ಯೆ ಐದು ಕೋಟಿಯನ್ನು ಮೀರಿದೆ. 25 ಹೈಕೋರ್ಟುಗಳಲ್ಲಿನ ಬಾಕಿ ಉಳಿದಿರುವ ವ್ಯಾಜ್ಯಗಳು 61 ಲಕ್ಷ. ನಾಲ್ಕೂವರೆ ಕೋಟಿ ಖಟ್ಲೆಗಳು ಜಿಲ್ಲಾ ಮತ್ತು ಇತರೆ ಕೆಳಹಂತದ ನ್ಯಾಯಾಲಯಗಳಲ್ಲಿನ ಬಾಕಿ ಉಳಿದಿವೆ. ಆಸ್ತಿ ಮತ್ತು ಜಮೀನು ವ್ಯಾಜ್ಯದ ಕೇಸುಗಳೇ ಅತ್ಯಧಿಕ. ಕೇಂದ್ರ ಸರ್ಕಾರವೇ ಕಳೆದ ತಿಂಗಳು ಲೋಕಸಭೆಯಲ್ಲಿ ನೀಡಿದ ಅಂಕಿ ಅಂಶವಿದು. ಆದರೆ ಈ ಬಾಕಿ ಬೆಟ್ಟದ ಶೇ.50ರಷ್ಟು ಕೇಸುಗಳಿಗೆ ಕಾರಣ ಸರ್ಕಾರವೇ. ತನ್ನ ಪ್ರಜೆಗಳ ಮೇಲೆ ಇಷ್ಟೊಂದು ಕೇಸುಗಳನ್ನು ಹೂಡಿರುವ ಅತಿ ದೊಡ್ಡ ವಾಜ್ಯಕೋರ ಕಕ್ಷಿದಾರ.

ದೇಶದ ನ್ಯಾಯಾಂಗದಲ್ಲಿ ಮಂಜೂರಾತಿ ಪಡೆದ ನ್ಯಾಯಮೂರ್ತಿಗಳ ಒಟ್ಟು ಸಂಖ್ಯೆ 26,568. ಈ ಪೈಕಿ ಸುಪ್ರೀಮ್ ಕೋರ್ಟಿನ ನ್ಯಾಯಮೂರ್ತಿಗಳು 34. ಈ ಹುದ್ದೆಗಳಲ್ಲಿನ ಒಂದು ಪ್ರಮಾಣ ಸದಾ ಖಾಲಿಯಾಗಿಯೇ ಉಳಿದಿರುವುದು ಉಂಟು. ಈ ಸಮಸ್ಯೆಯ ಮುಂದೆ ಸುಪ್ರೀಮ್ ಕೋರ್ಟ್ ಕೂಡ ಅಸಹಾಯಕ. ಖಾಲಿ ಹುದ್ದೆಗಳನ್ನು ತುಂಬುವಂತೆ ಸುಪ್ರೀಮ್ ಕೋರ್ಟಿನ ಮುಖ್ಯ ನ್ಯಾಯಮೂರ್ತಿಯೊಬ್ಬರು ಬಹಿರಂಗ ಸಭೆಯೊಂದರಲ್ಲಿ ಪ್ರಧಾನಿ ಮೋದಿಯವರನ್ನು ಅಂಗಲಾಚಿ ಕಣ್ಣೀರಿಟ್ಟಿದ್ದುಂಟು. ನ್ಯಾಯಮೂರ್ತಿಗಳ ನೇಮಕದ ಅಧಿಕಾರವನ್ನು ಮೋದಿ ಸರ್ಕಾರ ಹತಾರಿನಂತೆ ಬಳಸಿದೆ.

Supreme Court of India

ಜನಸಂಖ್ಯೆ ಮತ್ತು ನ್ಯಾಯಾಧೀಶರ ಅನುಪಾತವನ್ನು ಪರಿಗಣಿಸಿದರೆ ಅತ್ಯಂತ ತಳದಲ್ಲಿರುವ ದೇಶಗಳ ಪೈಕಿ ಭಾರತವೂ ಒಂದು. ಹತ್ತು ಲಕ್ಷ ಮಂದಿ ಜನಸಂಖ್ಯೆಗೆ ಅಮೆರಿಕಾದಲ್ಲಿ 150 ಮಂದಿ ನ್ಯಾಯಾಧೀಶರಿದ್ದರೆ, ಭಾರತದಲ್ಲಿ 21 ಮಂದಿ ನ್ಯಾಯಾಧೀಶರಿದ್ದಾರೆ. ಪ್ರತಿ ಹತ್ತು ಲಕ್ಷ ಜನಸಂಖ್ಯೆಗೆ 50 ಮಂದಿ ನ್ಯಾಯಾಧೀಶರಿಗೆ ಏರಿಸುವಂತೆ ನ್ಯಾಯಮೂರ್ತಿ ವಿ.ಎಸ್.ಮಳೀಮಠ್ ಅವರ ಅಧ್ಯಕ್ಷತೆಯ ಕಾನೂನು ಆಯೋಗ ಶಿಫಾರಸು ನೀಡಿ ದಶಕಗಳೇ ಉರುಳಿವೆ. ಸರ್ಕಾರಗಳು ಕಿವಿ ಮೇಲೆ ಹಾಕಿಕೊಂಡಿಲ್ಲ. ಸುಪ್ರೀಮ್ ಕೋರ್ಟಿನ ಹಣಕಾಸು ಬಾಧ್ಯತೆ ಕೇಂದ್ರ ಸರ್ಕಾರದ್ದು. ಉಳಿದಂತೆ ಹೈಕೋರ್ಟು ಮತ್ತು ಜಿಲ್ಲಾ ನ್ಯಾಯಾಲಯಗಳು ಹಾಗೂ ಅಧೀನ ನ್ಯಾಯಾಲಯಗಳ ಎಲ್ಲ ವೆಚ್ಚವನ್ನು ರಾಜ್ಯ ಸರ್ಕಾರಗಳು ಭರಿಸುತ್ತವೆ. ತಮ್ಮ ಬಜೆಟ್ಟಿನ ಶೇ.ಒಂದರಷ್ಟು ಮೊತ್ತವನ್ನು ರಾಜ್ಯಗಳು ಈ ಉದ್ದೇಶಕ್ಕೆ ಹಂಚಿಕೆ ಮಾಡಿದರೆ ಅದೇ ಹೆಚ್ಚು.

ಈ ಸಂಖ್ಯೆಯ ಹೆಚ್ಚಳಕ್ಕೆ, ವಿಚಾರಣೆಯ ಸೌಲಭ್ಯಗಳ ಸುಧಾರಣೆಗೆ, ಕಂಪ್ಯೂಟರೀಕರಣಕ್ಕೆ ಹೆಚ್ಚುವರಿ ಹಣ ಹಂಚಿಕೆಯಾಗುತ್ತಿಲ್ಲ ದೇಶಾದ್ಯಂತ ನ್ಯಾಯಾಲಯಗಳಲ್ಲಿ ವಿಚಾರಣೆಗೆ ಕಾದಿರುವ ಕೇಸುಗಳ ಸಂಖ್ಯೆ ಐವತ್ತು ಲಕ್ಷ. ನ್ಯಾಯಾಲಯಗಳು ಮತ್ತು ನ್ಯಾಯಮೂರ್ತಿಗಳ ಸಂಖ್ಯೆಯನ್ನು ಹೆಚ್ಚಿಸದಿದ್ದರೆ, ವಿಚಾರಣೆಯ ವೈಖರಿಯಲ್ಲಿ ಸುಧಾರಣೆಗಳನ್ನು ತುರ್ತಾಗಿ ತರಬೇಕಿದೆ. ಇಲ್ಲದೆ ವಿಚಾರಣೆ ಈಗಿನ ಗತಿಯಲ್ಲೇ ಜರುಗಿದರೆ ಈ ಬಾಕಿಯ ಬೆಟ್ಟವನ್ನು ಕರಗಿಸಲು 350 ವರ್ಷಗಳೇ ಬೇಕೆಂಬುದು ಒಂದು ಅಂದಾಜು.

ಭಾರತೀಯ ನ್ಯಾಯಾಂಗದ ಮುಂದಿರುವ ಪ್ರಬಲ ಸವಾಲಿದು ಎನ್ನುವುದು ತಪ್ಪುದಾರಿಗೆಳೆಯುವ ಬಣ್ಣನೆ. ದೇಶದ ಸರ್ಕಾರ ಮತ್ತು ಸಮಾಜದ ಮುಂದಿರುವ ಸವಾಲಿದು. ಕೇವಲ ನ್ಯಾಯಾಂಗವನ್ನು ಗುರಿ ಮಾಡುವುದು ತರವಲ್ಲ.

ನ್ಯಾಯದಾನ ವಿಳಂಬದ ಬಹುದೊಡ್ಡ ಲಾಭಾರ್ಥಿಗಳು ಯಾರ್ಯಾರೆಂದು ಪ್ರಜ್ಞಾವಂತ ಪ್ರಜೆಗಳು ಗುರುತಿಸಬೇಕಿದೆ. ನ್ಯಾಯಾಲಯಗಳು ಮತ್ತು ನ್ಯಾಯಾಧೀಶರ ಸಂಖ್ಯೆಯನ್ನು ಹೆಚ್ಚಿಸಲು ಬಜೆಟ್ ಹಂಚಿಕೆಯನ್ನು ಹೆಚ್ಚಿಸಬೇಕೆಂಬ ಮತ್ತು ವಿಚಾರಣಾ ವ್ಯವಸ್ಥೆಯಲ್ಲಿ, ಸಂಬಂಧಪಟ್ಟ ಕಾನೂನು ಪ್ರಕ್ರಿಯೆಗಳಲ್ಲಿ ಸುಧಾರಣೆ ತರಬೇಕೆಂದು ಸರ್ಕಾರಗಳ ಮೇಲೆ ಒತ್ತಡ ತರಬೇಕಿದೆ.

WhatsApp Image 2025 11 17 at 3.23.18 PM
ಈ ದಿನ ಸಂಪಾದಕೀಯ
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ|ಗುಜರಾತಿನ ದಲಿತರಿಗೆ ಗಗನ ಕುಸುಮವಾಗೇ ಉಳಿದ ನ್ಯಾಯ

ಗುಜರಾತಿನ ಜನಸಂಖ್ಯೆಯಲ್ಲಿ ದಲಿತರ ಪ್ರಮಾಣ ಕಡಿಮೆ. ಶೇ.6.34 ಮಾತ್ರ. ಇಲ್ಲಿ ದಲಿತರಿಗಿಂತ...

ಈ ದಿನ ಸಂಪಾದಕೀಯ | ಮೋದಿಯ ಸಣ್ಣತನವನ್ನು ದೊಡ್ಡತನದಿಂದ ಸೋಲಿಸಿದ ಇರಾನ್‌!

ಇಂಧನ ಭದ್ರತೆಯನ್ನು ಕಾಪಾಡಿಕೊಳ್ಳಲು ಭಾರತದ ಹಡಗುಗಳು ಹಾರ್ಮುಜ್ ಜಲಸಂಧಿಯಿಂದ ಹಾದುಹೋಗಲು ಅವಕಾಶ...

ಈ ದಿನ ಸಂಪಾದಕೀಯ | SIR ಹೆಸರಲ್ಲಿ ಮಹಿಳೆಯರ ಮತದಾನದ ಹಕ್ಕಿನ ಹರಣ ಅಕ್ಷಮ್ಯ

ಕರ್ನಾಟಕದಲ್ಲಿ ಮಹಿಳೆಯರ ಹಕ್ಕುಗಳನ್ನು ರಕ್ಷಿಸುವ ಕೆಲಸ ಆಗಬೇಕಿದೆ. ಎಸ್‌ಐಆರ್‌ ನಡೆಯುವ ಸಮಯದಲ್ಲಿ...

ಈ ದಿನ ಸಂಪಾದಕೀಯ | ಕಾಂಗ್ರೆಸ್ಸಿಗರಿಗೆ ಇಂದಿರಾ ಬೇಕು, ಬಡವರ ಕ್ಯಾಂಟೀನ್ ಬೇಡ

ಶಾಸಕರು, ಸಚಿವರು, ಅಧಿಕಾರಿಗಳು ವಾರಕ್ಕೊಂದು ಸಲವಾದರೂ ಇಂದಿರಾ ಕ್ಯಾಂಟೀನ್‌ನಲ್ಲಿ ಊಟ-ತಿಂಡಿ ಮಾಡಬೇಕಿದೆ....