ಈ ದಿನ ಸಂಪಾದಕೀಯ | ಇದು ಡಬಲ್ ಎಂಜಿನ್ ಸರ್ಕಾರವಲ್ಲ, ಎರಡು ನಾಲಗೆಯ ಸರ್ಕಾರ

Date:

ಬೆಲೆ ಏರಿಕೆ, ಭ್ರಷ್ಟಾಚಾರ, ವಂಶ ಪಾರಂಪರ್ಯ ರಾಜಕಾರಣದ ಬಗ್ಗೆ ಮಾತನಾಡದ ಮೋದಿ; ಗೋಧ್ರಾ ಹತ್ಯಾಕಾಂಡದ ಬಿಬಿಸಿ ವರದಿಗೆ, ಅದಾನಿ ಹಗರಣಕ್ಕೆ, ಪುಲ್ವಾಮಾ ದುರಂತಕ್ಕೆ ಉತ್ತರಿಸದ ಮೋದಿ; ಕೇವಲ ಮತಗಳಿಗಾಗಿ `ಅಮೃತಕಾಲ’ದ ಬಗ್ಗೆ ಮಾತನಾಡಿದರೆ, ಕೇಳಿಸಿಕೊಂಡು ಸುಮ್ಮನಿರಬೇಕೇ? 

`ದೇಶದ ಪ್ರಧಾನಿ ವಿಶ್ವ ನಾಯಕ ನರೇಂದ್ರ ಮೋದಿ ನನಗೆ ಫೋನ್ ಮಾಡಿ ಪಕ್ಷ ನಿಷ್ಠೆಗೆ ಪ್ರಶಂಸೆ ವ್ಯಕ್ತಪಡಿಸಿದರು. ನೀವು ಒಳ್ಳೆ ಕೆಲಸ ಮಾಡಿದ್ದೀರಿ ಎಂದು ಹೇಳಿದರುʼ ಎಂದು ಭಾರತೀಯ ಜನತಾ ಪಕ್ಷದ ಹಿರಿಯ ನಾಯಕ ಕೆ.ಎಸ್. ಈಶ್ವರಪ್ಪ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಪ್ರಧಾನಿಯೇ ಖುದ್ದಾಗಿ ಶಾಸಕನಿಗೆ ಫೋನ್ ಮಾಡಿದ್ದನ್ನು ವಿಡಿಯೋ ಮಾಡಿಸಿ ಹಂಚಿದ್ದಾರೆ.

ಇದು ಈಶ್ವರಪ್ಪನವರಿಗೆ ಜೀವಮಾನದ ಅತ್ಯದ್ಭುತ ಕ್ಷಣಗಳಲ್ಲಿ ಒಂದಾಗಿರಬಹುದು. ಪ್ರಧಾನಿ ಕೂಡ ಪಕ್ಷ ನಿಷ್ಠೆಗೆ ಪ್ರಶಂಸಿಸಿರಬಹದು. ಆದರೆ ಇದು ಅವರಿಬ್ಬರ ನಡುವೆ ನಡೆದಿರುವ ಸಂಭಾಷಣೆಯಾದರೂ, ಇದರ ಹಿಂದೆ ಅಡಗಿರುವ ಹಲವು ಸಂಗತಿಗಳನ್ನು ದೇಶದ ಜನತೆ ಅರಿಯುವ ಅಗತ್ಯವಿದೆ.

ಬಿಜೆಪಿಯವರು 70 ವರ್ಷಗಳ ಕಾಲ ದೇಶವನ್ನು ಆಳಿದ ಕಾಂಗ್ರೆಸ್ ಪಕ್ಷದ ಬೆಲೆ ಏರಿಕೆ, ಭ್ರಷ್ಟಾಚಾರ, ವಂಶ ಪಾರಂಪರ್ಯ ರಾಜಕಾರಣವನ್ನು ಉಗ್ರವಾಗಿ ಟೀಕಿಸಿದವರು. ದೇಶ ಅಧೋಗತಿಗಿಳಿಯಲು ಕಾಂಗ್ರೆಸ್ಸಿನ ಕೆಟ್ಟ ಆಡಳಿತವೇ ಕಾರಣವೆಂದು ಹೇಳುತ್ತಲೇ, ಜನರಲ್ಲಿ ಹೊಸ ಆಸೆ ಹುಟ್ಟಿಸಿದವರು. ಭರಪೂರ ಭರವಸೆಗಳನ್ನು ಕೊಟ್ಟು ಅಧಿಕಾರಕ್ಕೇರಿದವರು.  

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಕೇಂದ್ರದಲ್ಲಿ ನರೇಂದ್ರ ಮೋದಿ ಅಧಿಕಾರಕ್ಕೇರಿ 9 ವರ್ಷಗಳಾಯಿತು, ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದು ಮೂರೂವರೆ ವರ್ಷಗಳಾಯಿತು. ಇಷ್ಟು ವರ್ಷ ಈ ಡಬಲ್ ಎಂಜಿನ್ ಸರ್ಕಾರ ಮಾಡಿದ್ದೇನು? ಹೆಚ್ಚಿಗೆ ಬೇಡ, ಈಶ್ವರಪ್ಪ ಮತ್ತು ಮೋದಿಯ ನಡೆಗಳನ್ನಷ್ಟೇ ನೋಡಿ.

ಶಿವಮೊಗ್ಗದ ಅಡಿಕೆ ಮಂಡಿಯಲ್ಲಿ ಕೆಲಸಕ್ಕಿದ್ದ ಈಶ್ವರಪ್ಪನವರು, 1989ರಲ್ಲಿ ಮೊದಲ ಬಾರಿಗೆ ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದಿಂದ ಗೆದ್ದು ಶಾಸಕರಾದರು. 2008ರಲ್ಲಿ ಮೊದಲ ಬಾರಿಗೆ ಸಚಿವರಾದರು. ನೀರಾವರಿ, ಇಂಧನ, ಕಂದಾಯ, ಜಲಸಂಪನ್ಮೂಲ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಗಳಂತಹ ತೂಕದ ಖಾತೆಗಳನ್ನು ನಿರ್ವಹಿಸಿದರು. ರಾಜ್ಯದ ಉಪಮುಖ್ಯಮಂತ್ರಿಯೂ ಆದರು.

ಈಶ್ವರಪ್ಪನವರು 2008ರ ಚುನಾವಣೆಯಲ್ಲಿ 4 ಕೋಟಿ, 2013ರ ಚುನಾವಣೆಯಲ್ಲಿ 7 ಕೋಟಿ ಮತ್ತು 2018ರ ಚುನಾವಣೆಯಲ್ಲಿ 10 ಕೋಟಿ ಆಸ್ತಿ ಇರುವುದಾಗಿ ಚುನಾವಣಾ ಆಯೋಗಕ್ಕೆ ಅಫಿಡವಿಟ್ ಸಲ್ಲಿಸಿದ್ದಾರೆ. ಇದು ಅಧಿಕೃತ. ಬೇನಾಮಿ ಎಷ್ಟು ಎಂದು ಶಿವಮೊಗ್ಗದ ಜನ ಹೇಳಬಲ್ಲರು, ಇರಲಿ. 2012ರಲ್ಲಿ ಭ್ರಷ್ಟಾಚಾರ ನಿಗ್ರಹ ಸಂಸ್ಥೆ ಲೋಕಾಯುಕ್ತ ಈಶ್ವರಪ್ಪನವರ ಮನೆ ಮೇಲೆ ದಾಳಿ ನಡೆಸಿದಾಗ, ಹಲವು ನೋಟು ಎಣಿಕೆ ಯಂತ್ರಗಳು ಸಿಕ್ಕಿದ್ದವು.

ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಮೋದಿಯವರ ಸೇಡಿನ ಕ್ರಮ ರಾಹುಲ್‌ಗೆ ವರವಾಗುವುದೇ?

ಬಸವರಾಜ ಬೊಮ್ಮಾಯಿ ಸಚಿವ ಸಂಪುಟದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾಗಿದ್ದ ಕೆ.ಎಸ್. ಈಶ್ವರಪ್ಪರಿಗೆ ಪರಿಚಿತರಾಗಿದ್ದ, ಬಿಜೆಪಿಯ ಕಾರ್ಯಕರ್ತ, ಗುತ್ತಿಗೆದಾರ ಸಂತೋಷ್ ಪಾಟೀಲ್, ರಸ್ತೆ ಕಾಮಗಾರಿ ಗುತ್ತಿಗೆ ಪಡೆದಿದ್ದರು. ಕಾಮಗಾರಿ ಪೂರೈಸಲು 4 ಕೋಟಿ ಸಾಲ ಮಾಡಿದ್ದು, ಬಿಲ್ ಕೇಳಿದಾಗ, ಈಶ್ವರಪ್ಪ ಮತ್ತು ಸಹಚರರು ಕಮಿಷನ್‌ಗಾಗಿ ಕಿರುಕುಳ ನೀಡಿದ್ದರು.

ಬಿಜೆಪಿ ಕಾರ್ಯಕರ್ತ ಸಂತೋಷ್ ಪಾಟೀಲ್ ತಮ್ಮದೇ ಸರ್ಕಾರದ ಕೆ.ಎಸ್. ಈಶ್ವರಪ್ಪ ಮತ್ತು ಸಹಚರರು ಕಮಿಷನ್‌ಗಾಗಿ ಕಿರುಕುಳ ನೀಡುತ್ತಿದ್ದಾರೆಂದು, ಏಪ್ರಿಲ್ 12, 2022ರಂದು ಮುಖ್ಯಮಂತ್ರಿಗೆ, ಪ್ರಧಾನಿ ನರೇಂದ್ರ ಮೋದಿಗೆ ಮತ್ತು ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವ ಗಿರಿರಾಜ್ ಸಿಂಗ್ ಅವರಿಗೆ ಪತ್ರ ಬರೆದಿದ್ದರು. ಅಂದೇ ಉಡುಪಿ ಹೋಟೆಲ್ಲಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು.

ಇದು ಡಬಲ್ ಎಂಜಿನ್ ಸರ್ಕಾರ ಪಡೆದ ಬಲಿ. ಬಿಜೆಪಿಯ ಬಲಿಗೆ ಈಗ ವರ್ಷವಾಗಿದೆ. ಒಂದು ವರ್ಷವಾದರೂ ಮೃತ ಸಂತೋಷ್ ಪಾಟೀಲ್ ಕುಟುಂಬಕ್ಕೆ ಸಹಾಯ, ಸಾಂತ್ವನ ಹೇಳದ ಡಬಲ್ ಎಂಜಿನ್ ಸರ್ಕಾರ, ಕೊಲೆಗೆ ಕಾರಣರಾದವರಿಗೆ ಪ್ರಧಾನಿಯೇ ಖುದ್ದು ಕರೆ ಮಾಡಿ ಪ್ರಶಂಸಿಸಿದ್ದಾರೆ.

ಕೆ.ಎಸ್. ಈಶ್ವರಪ್ಪ ಶೂದ್ರ ಸಮುದಾಯಕ್ಕೆ ಸೇರಿದವರು. ವಿರೋಧಿಗಳನ್ನು ಹಣಿಯಲು ಮತ್ತು ಮುಸ್ಲಿಮರ ಬಗ್ಗೆ ಕೆಟ್ಟದಾಗಿ ಮಾತನಾಡಲು ಈಶ್ವರಪ್ಪನವರ ನಾಲಗೆಯನ್ನು ಕಳೆದ 30 ವರ್ಷಗಳಿಂದ ಬಿಜೆಪಿ ಬಳಸಿಕೊಂಡಿತು. ಈಗ ಈ ನಾಲಗೆ ಮೊನಚು ಕಳೆದುಕೊಂಡಿದೆ.; ಪ್ರಧಾನಿಗಳ ಪ್ರಶಂಸೆಯ ಮಾತುಗಳ ಮೂಲಕ ಸುಮ್ಮನಿರಿಸಲಾಗಿದೆ.  

ಆದರೆ, ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣನವರ 40% ಕಮಿಷನ್ ಪತ್ರಕ್ಕೆ, ಬಸನಗೌಡ ಪಾಟೀಲ್ ಯತ್ನಾಳರ 2,500 ಕೋಟಿ ಕೊಟ್ಟವನು ಸಿಎಂ ಎಂಬ ಹೇಳಿಕೆಗೆ, ಶಾಸಕ ಮಾಡಾಳ್ ವಿರೂಪಾಕ್ಷಪ್ಪನ ಬಂಧನಕ್ಕೆ ಬಾಯಿ ಬಿಡದ ಮೋದಿ; ಬೊಮ್ಮಾಯಿ ಸರ್ಕಾರದ ಬೆಲೆ ಏರಿಕೆ, ಭ್ರಷ್ಟಾಚಾರ, ವಂಶ ಪಾರಂಪರ್ಯ ರಾಜಕಾರಣದ ಬಗ್ಗೆ ಮಾತನಾಡದ ಮೋದಿ; ಗೋಧ್ರಾ ಹತ್ಯಾಕಾಂಡದ ಬಿಬಿಸಿ ವರದಿಗೆ, ಅದಾನಿ ಹಗರಣಕ್ಕೆ, ಪುಲ್ವಾಮಾ ದುರಂತಕ್ಕೆ ಉತ್ತರಿಸದ ಮೋದಿ; ಕೇವಲ ಮತಗಳಿಗಾಗಿ `ಅಮೃತಕಾಲ’ದ ಬಗ್ಗೆ ಮಾತನಾಡಿದರೆ, ಕೇಳಿಸಿಕೊಂಡು ಸುಮ್ಮನಿರಬೇಕೇ?

ಈಶ್ವರಪ್ಪನವರ ಹರಿತ ನಾಲಗೆಗೆ ನಿವೃತ್ತಿ ಬೇಕೆಂದು ಬಿಜೆಪಿಯೇ ಬಯಸುವುದಾದರೆ, ದೇಶದ ಜನತೆಯ ಪ್ರಶ್ನೆಗಳಿಗೆ ಉತ್ತರಿಸಲಾಗದೆ ನೈತಿಕತೆ ಕಳೆದುಕೊಂಡಿರುವ ಮೋದಿಯವರ ನಾಲಗೆಗೂ ನಿವೃತ್ತಿ ಬೇಕಲ್ಲವೇ? ಇದು ಡಬಲ್ ಎಂಜಿನ್ ಸರ್ಕಾರವೇ ಅಥವಾ ಎರಡು ನಾಲಗೆಯ ಸರ್ಕಾರವೇ? ಜನರೇ ನಿರ್ಧರಿಸಬೇಕು.  

WhatsApp Image 2025 11 17 at 3.23.18 PM
ಈ ದಿನ ಸಂಪಾದಕೀಯ
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ|ಗುಜರಾತಿನ ದಲಿತರಿಗೆ ಗಗನ ಕುಸುಮವಾಗೇ ಉಳಿದ ನ್ಯಾಯ

ಗುಜರಾತಿನ ಜನಸಂಖ್ಯೆಯಲ್ಲಿ ದಲಿತರ ಪ್ರಮಾಣ ಕಡಿಮೆ. ಶೇ.6.34 ಮಾತ್ರ. ಇಲ್ಲಿ ದಲಿತರಿಗಿಂತ...

ಈ ದಿನ ಸಂಪಾದಕೀಯ | ಮೋದಿಯ ಸಣ್ಣತನವನ್ನು ದೊಡ್ಡತನದಿಂದ ಸೋಲಿಸಿದ ಇರಾನ್‌!

ಇಂಧನ ಭದ್ರತೆಯನ್ನು ಕಾಪಾಡಿಕೊಳ್ಳಲು ಭಾರತದ ಹಡಗುಗಳು ಹಾರ್ಮುಜ್ ಜಲಸಂಧಿಯಿಂದ ಹಾದುಹೋಗಲು ಅವಕಾಶ...

ಈ ದಿನ ಸಂಪಾದಕೀಯ | SIR ಹೆಸರಲ್ಲಿ ಮಹಿಳೆಯರ ಮತದಾನದ ಹಕ್ಕಿನ ಹರಣ ಅಕ್ಷಮ್ಯ

ಕರ್ನಾಟಕದಲ್ಲಿ ಮಹಿಳೆಯರ ಹಕ್ಕುಗಳನ್ನು ರಕ್ಷಿಸುವ ಕೆಲಸ ಆಗಬೇಕಿದೆ. ಎಸ್‌ಐಆರ್‌ ನಡೆಯುವ ಸಮಯದಲ್ಲಿ...

ಈ ದಿನ ಸಂಪಾದಕೀಯ | ಕಾಂಗ್ರೆಸ್ಸಿಗರಿಗೆ ಇಂದಿರಾ ಬೇಕು, ಬಡವರ ಕ್ಯಾಂಟೀನ್ ಬೇಡ

ಶಾಸಕರು, ಸಚಿವರು, ಅಧಿಕಾರಿಗಳು ವಾರಕ್ಕೊಂದು ಸಲವಾದರೂ ಇಂದಿರಾ ಕ್ಯಾಂಟೀನ್‌ನಲ್ಲಿ ಊಟ-ತಿಂಡಿ ಮಾಡಬೇಕಿದೆ....