ಈ ದಿನ ಸಂಪಾದಕೀಯ | ಯುವ ಪ್ರೇಮಿಗಳನ್ನು ಅಪರಾಧಿಗಳಂತೆ ನೋಡುವುದೇಕೆ?

Date:

ಮದುವೆಯಾಗದೆ ಒಟ್ಟಿಗೆ ವಾಸಿಸಲು ಆಶಿಸುವ ಭಾರತೀಯ ಸಂಗಾತಿಗಳನ್ನು ತಪ್ಪಿತಸ್ಥರಂತೆ ನೋಡಲಾಗುತ್ತಿದೆ. 'ಲಿವ್-ಇನ್ ಸಂಬಂಧ'ದಲ್ಲಿ ಬದುಕುತ್ತಿರುವ ಪ್ರೇಮಿಗಳನ್ನು ಕಳಂಕಿತರಂತೆ ನೋಡಲಾಗುತ್ತಿದೆ.

ಸಮಾಜದಲ್ಲಿ ಯುವಜನರ ಪ್ರೀತಿಯನ್ನು ವಿರೋಧಿಸುವ, ಅನುಮಾನಿಸುವ ನಿಲುವು ಮತ್ತು ಧೋರಣೆ ಯಾವಾಗಲೂ ಇದ್ದೇ ಇರುತ್ತದೆ. ಅದು ಎಲ್ಲರ ಮನಸ್ಸಿನಲ್ಲಿ ಹುಳುವಿನಂತೆ ಗುಯ್‌ಗುಡುತ್ತಲೇ ಇರುತ್ತದೆ. ಹಿಂದೆಯೂ-ಇಂದೂ ಆ ಹುಳು ನಾನಾ ರೀತಿಯಲ್ಲಿ ರೂಪಾಂತರಗೊಂಡಿದೆಯೇ ಹೊರತು, ಅದಕ್ಕೆ ಔಷಧ ದೊರೆತಿಲ್ಲ.

ಪ್ರೀತಿಯನ್ನು ನಿರಾಕರಿಸುವ, ವಿರೋಧಿಸುವ ಒಂದು ವರ್ಗ ಸಮಾಜದಲ್ಲಿ ಇರುವಾಗಲೇ, ಪ್ರೀತಿಯು ಮತ್ತೊಂದು ಹಂತಕ್ಕೆ ಏರಿಕೆಯಾಗಿದೆ. ಪ್ರೇಮಿಗಳು ‘ಲಿವ್-ಇನ್ ಸಂಬಂಧ’ದೊಂದಿಗೆ ಜೊತೆಯಾಗಿ ಬದುಕಲು ಆರಂಭಿಸಿದ್ದಾರೆ. ಆದರೆ, ಪ್ರೀತಿಯನ್ನೇ ಒಪ್ಪದ ಸಮಾಜ, ‘ಲಿವ್-ಇನ್ ಸಂಬಂಧ’ವನ್ನು ಒಪ್ಪಲು ಸಾಧ್ಯವೇ? ಅದರಲ್ಲೂ ವಿದ್ಯಾವಂತ, ಅಧಿಕಾರಸ್ಥ ಪುರುಷರಲ್ಲಿ ಪ್ರೀತಿ ವಿರೋಧಿ ಧೋರಣೆ ಇನ್ನೂ ಹೆಚ್ಚು.

ಇತ್ತೀಚೆಗೆ, ಉತ್ತರ ಪ್ರದೇಶದ ನೋಯ್ಡಾದಲ್ಲಿ ವಸತಿ ಸೊಸೈಟಿಯೊಂದರ ಅಧ್ಯಕ್ಷರು ‘ತಮ್ಮ ವಸತಿ ಸಮುಚ್ಛಯದಲ್ಲಿ ವಾಸಿಸುವ ಗಂಡು-ಹೆಣ್ಣು ಬಾಡಿಗೆದಾರರು ತಮ್ಮ ಕುಟುಂಬಗಳಿಂದ ಒಪ್ಪಿಗೆ ಪತ್ರವನ್ನು ಹೊಂದಿರಬೇಕು. ಇಲ್ಲವೇ, ವಿವಾಹ ಪ್ರಮಾಣಪತ್ರ ಹೊಂದಿರಬೇಕು’ ಎಂದು ತಮ್ಮ ನಿವಾಸಿಗಳಿಗೆ ಸುತ್ತೋಲೆಯನ್ನು ಕಳುಹಿಸಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಜಾತಿ ದೌರ್ಜನ್ಯ ಪ್ರಕರಣ: ಶಿಕ್ಷೆಯ ಪ್ರಮಾಣ ಕುಸಿತ; ದಲಿತ ಕಳಕಳಿಯ ವಕೀಲರ ನೇಮಕವಾಗಲಿ

ಅವರ ಪತ್ರವು ತಾವು ಯುವ ಪ್ರೇಮಿಗಳ ಪ್ರೀತಿ ಅಥವಾ ‘ಲಿವ್-ಇನ್’ ಸಂಬಂಧದ ಬಗ್ಗೆ ಹೊಂದಿರುವ ಧೋರಣೆಯನ್ನು ಸೂಚಿಸುತ್ತದೆ. ಆದಾಗ್ಯೂ, ಅವರು ತಾವು ಇಂತಹ ಪತ್ರವನ್ನು ಕಳುಹಿಸಲು ಇತ್ತೀಚೆಗೆ ಯುವಕನೊಬ್ಬ ಆತ್ಮಹತ್ಯೆಯಿಂದ ಸಾವನ್ನಪ್ಪಿದ್ದೇ ಕಾರಣವೆಂದು ಹೇಳಿಕೊಂಡಿದ್ದಾರೆ. ಇಲ್ಲಿ, ಮುಖ್ಯವಾಗಿ ಪ್ರಶ್ನೆಯೊಂದು ಉದ್ಭವಿಸುತ್ತದೆ- ಅವಿವಾಹಿತ ಸಂಗಾತಿಗಳು ಒಟ್ಟಿಗೆ ವಾಸಿಸುವುದಕ್ಕೂ ಈ ದುರಂತಕ್ಕೂ ಏನು ಸಂಬಂಧ?

ಇನ್ನೊಂದೆಡೆ, ಉತ್ತರಾಖಂಡ ಸರ್ಕಾರವು ‘ಏಕರೂಪ ನಾಗರಿಕ ಸಂಹಿತೆ’ಯನ್ನು ಜನವರಿ 27ರಂದು ಜಾರಿಗೆ ತಂದಿದೆ. ಅದರಲ್ಲಿಯೂ, ಲಿವ್-ಇನ್ ಸಂಬಂಧಗಳನ್ನು ನಿಯಂತ್ರಿಸುವ ನಿಮಯಗಳನ್ನು ರೂಪಿಸಿದೆ. ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು, ‘ವಿವಾಹೇತರ ಪ್ರೇಮ ಸಂಬಂಧದಿಂದ ನಡೆಯುತ್ತಿರುವ ಅಪರಾಧಗಳನ್ನು ತಪ್ಪಿಸಲು ಇಂತಹ ನಿಯಂತ್ರಣ ಮತ್ತು ಕ್ರಮಗಳು ಅಗತ್ಯ’ ಎಂದು ಹೇಳಿದ್ದಾರೆ.

ಇದೇ ಸದಂರ್ಭದಲ್ಲಿ, ಜನವರಿ 29ರಂದು ರಾಜಸ್ಥಾನ ಹೈಕೋರ್ಟ್‌ನ ನ್ಯಾಯಮೂರ್ತಿ ಅನೂಪ್ ಕುಮಾರ್ ಧಂಡ್  ಅವರು ”ಲಿವ್-ಇನ್ ಸಂಬಂಧದ ಕಲ್ಪನೆಯು ವಿಶಿಷ್ಟ ಮತ್ತು ಆಕರ್ಷಕವಾಗಿ ಕಾಣಿಸಬಹುದು. ಆದರೆ, ವಾಸ್ತವದಲ್ಲಿ ಉದ್ಭವಿಸಬಹುದಾದ ಸಮಸ್ಯೆಗಳು ಮತ್ತು ಸವಾಲುಗಳಿವೆ. ಈ ಸಂಬಂಧವು ಸಾಮಾಜಿಕ ಅನುಮೋದನೆ ಅಥವಾ ಪಾವಿತ್ರ್ಯತೆಯನ್ನು ಹೊಂದಿರುವುದಿಲ್ಲ. ಲಿವ್-ಇನ್‌ ಸಂಬಂಧಕ್ಕೆ ರಕ್ಷಣೆ ಕೊಡುವ ಕಾನೂನು ಜಾರಿಗೆ ಬರುವವರೆಗೆ, ಲಿವ್-ಇನ್ ಸಂಬಂಧಗಳನ್ನು ಸಕ್ಷಮ ಪ್ರಾಧಿಕಾರ/ನ್ಯಾಯಮಂಡಳಿಯಲ್ಲಿ ನೋಂದಾಯಿಸಬೇಕು. ಅದಕ್ಕಾಗಿ ಸರ್ಕಾರ ಹೊಸ ವೆಬ್‌ ಪೋರ್ಟಲ್ ತೆರೆಯಬೇಕು” ಎಂದು ಹೇಳಿದ್ದಾರೆ.

ಇಂತಹ ಹಲವಾರು ನಿದರ್ಶನಗಳು ಒಂದಾದ ಮೇಲೊಂದರಂತೆ ಘಟಿಸುತ್ತಿವೆ. ಇದಕ್ಕೆ ಪೂರಕ ಎಂಬಂತೆ, 2022ರಲ್ಲಿ ದೆಹಲಿಯಲ್ಲಿ ಯುವತಿಯೊಬ್ಬಳನ್ನು ಆಕೆಯ ‘ಲಿವ್-ಇನ್’ ಸಂಗಾತಿಯೇ ಹತ್ಯೆಗೈದಿದ್ದ ಪ್ರಕರಣ, ಉತ್ತರ ಪ್ರದೇಶದಲ್ಲಿ ಪ್ರೇಮಿಯೊಬ್ಬನ ಆತ್ಮಹತ್ಯೆ ಪ್ರಕರಣದಂತಹ ಉದಾಹರಣೆಗಳನ್ನು ಮುನ್ನೆಲೆಗೆ ತರಲಾಗಿದೆ.

ಒಟ್ಟಾರೆಯಾಗಿ, ಮದುವೆಯಾಗದೆ ಒಟ್ಟಿಗೆ ವಾಸಿಸಲು ಆಶಿಸುವ ಭಾರತೀಯ ಸಂಗಾತಿಗಳನ್ನು ತಪ್ಪಿತಸ್ಥರಂತೆ ನೋಡಲಾಗುತ್ತಿದೆ. ‘ಲಿವ್-ಇನ್ ಸಂಬಂಧ’ದಲ್ಲಿ ಬದುಕುತ್ತಿರುವ ಪ್ರೇಮಿಗಳನ್ನು ಕಳಂಕಿತರಂತೆ ನೋಡಲಾಗುತ್ತಿದೆ.

ಇದನ್ನು ಓದಿದ್ದೀರಾ?: ಪ್ರಚೋದನಕಾರಿ ಭಾಷಣ – ಆಯುಧ ಹಂಚಿಕೆ ಕಾನೂನು ಉಲ್ಲಂಘನೆಯಲ್ಲವೇ?

ಮೇಲಿನ ಮೂರು ನಿದರ್ಶನಗಳನ್ನು ಗಮನಿಸಿದರೆ, ಪ್ರೀತಿ, ಪ್ರೇಮ ಅಥವಾ ಲಿವ್-ಇನ್ ಸಂಬಂಧವೇ ತಪ್ಪು ಎಂಬ ಭಾವ ‘ಅಂಡರ್‌ಲೈನ್‌’ನಲ್ಲಿ ಎದ್ದು ಕಾಣುತ್ತಿದೆ. ಇದು ಸಾಮಾಜಿಕ ಖಂಡನೆಯ ದೊಡ್ಡ ಮಾದರಿಯನ್ನು ಪ್ರತಿಬಿಂಬಿಸುತ್ತದೆ. ಹತ್ಯೆ-ಆತ್ಮಹತ್ಯೆಗಳಿಗೆ ಪ್ರೀತಿಯೇ ಕಾರಣವೆಂದು ಪ್ರತಿಪಾದಿಸುತ್ತದೆ.

ಈ ಸಂದರ್ಭದಲ್ಲಿ ಎದುರಾಗುವ ಪ್ರಮುಖ ಪ್ರಶ್ನೆ, ಮದುವೆ ಸಂಬಂಧದಲ್ಲಿ ಅತ್ಯಾಚಾರ ನಡೆದಾಗ ಅದನ್ನು ಸರ್ಕಾರ, ಸಮಾಜ ಹೇಗೆ ನೋಡುತ್ತದೆ? ಇದೇ ವಿವಾಹ ಸಂಬಂಧಗಳಲ್ಲಿ ವರದಕ್ಷಿಣೆ ದೌರ್ಜನ್ಯ ನಡೆದಾಗ ಅದನ್ನು ಹೇಗೆ ವ್ಯಾಖ್ಯಾನಿಸುತ್ತದೆ? ಮಡದಿಯನ್ನೇ ಪತಿ ಹತ್ಯೆಗೈದಾಗ ಮದುವೆ ಸಂಬಂಧವನ್ನು ಯಾವ ರೀತಿಯಲ್ಲಿ ನೋಡಲಾಗುತ್ತದೆ? ಒಂದು ಹತ್ಯೆ, ಒಂದು ದೌರ್ಜನ್ಯದ ಆಧಾರದ ಮೇಲೆ ಆ ಸಂಬಂಧವೇ ತಪ್ಪು ಎಂದು ಹೇಳಲಾದೀತೆ?

ಪ್ರೀತಿ ಮತ್ತು ಲಿವ್-ಇನ್ ಸಂಬಂಧಗಳೂ ಅಂತೆಯೇ. ಕೆಲವೊಮ್ಮೆ ಸಂಗಾತಿಯ ಆಯ್ಕೆ ತಪ್ಪಾಗಿರುತ್ತದೆಯೇ ಹೊರತು, ಸಂಬಂಧವೇ ತಪ್ಪಾಗಲಾರದು. ಸಂಪ್ರದಾಯದ ಕಟ್ಟುಪಾಡುಗಳೊಂದಿಗೆ ಹೇರಲಾದ ಬಿಗಿ ನಿರ್ಬಂಧಗಳನ್ನು ಮೀರಿ ಪ್ರೀತಿ ಮತ್ತು ಒಡನಾಟದ ಬದುಕನ್ನು ಆಯ್ಕೆ ಮಾಡಿಕೊಳ್ಳುವವರನ್ನು ದೂಷಿಸಲು, ಖಂಡಿಸಲು ಸಾಧ್ಯವಿಲ್ಲ.

ಅವಿವಾಹಿತ ಸಂಗಾತಿಗಳ ಬದುಕು ಮತ್ತು ಆಯ್ಕೆಯನ್ನು ನಿಯಂತ್ರಿಸುವ ಪ್ರಯತ್ನಗಳು ಕೇವಲ 21ನೇ ಶತಮಾನದ ಪ್ರವೃತ್ತಿ ಮಾತ್ರವಲ್ಲ. ಮಹಿಳೆಯರ ಜೀವನವನ್ನು ನಿಯಂತ್ರಿಸುವ ಅತ್ಯಂತ ಹಳೆಯ ಧೋರಣೆ ಭಾಗವಾಗಿ ಈ ‘ಲಿವ್-ಇನ್’ ಸಂಬಂಧವನ್ನು ವಿರೋಧಿಸುವ ಪ್ರವೃತ್ತಿ ಬೆಳೆದುಕೊಂಡಿದೆ. ಪ್ರೀತಿ, ಪ್ರೇಮದ ಸಂಬಂಧವನ್ನು ವಿರೋಧಿಸುವ ಸಮಾಜದಲ್ಲಿನ ಹುಳಕ್ಕೆ ಅರಿವಿನ ಚಿಕಿತ್ಸೆ ನೀಡುವ ಅಗತ್ಯವಿದೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ|ಗುಜರಾತಿನ ದಲಿತರಿಗೆ ಗಗನ ಕುಸುಮವಾಗೇ ಉಳಿದ ನ್ಯಾಯ

ಗುಜರಾತಿನ ಜನಸಂಖ್ಯೆಯಲ್ಲಿ ದಲಿತರ ಪ್ರಮಾಣ ಕಡಿಮೆ. ಶೇ.6.34 ಮಾತ್ರ. ಇಲ್ಲಿ ದಲಿತರಿಗಿಂತ...

ಈ ದಿನ ಸಂಪಾದಕೀಯ | ಮೋದಿಯ ಸಣ್ಣತನವನ್ನು ದೊಡ್ಡತನದಿಂದ ಸೋಲಿಸಿದ ಇರಾನ್‌!

ಇಂಧನ ಭದ್ರತೆಯನ್ನು ಕಾಪಾಡಿಕೊಳ್ಳಲು ಭಾರತದ ಹಡಗುಗಳು ಹಾರ್ಮುಜ್ ಜಲಸಂಧಿಯಿಂದ ಹಾದುಹೋಗಲು ಅವಕಾಶ...

ಈ ದಿನ ಸಂಪಾದಕೀಯ | SIR ಹೆಸರಲ್ಲಿ ಮಹಿಳೆಯರ ಮತದಾನದ ಹಕ್ಕಿನ ಹರಣ ಅಕ್ಷಮ್ಯ

ಕರ್ನಾಟಕದಲ್ಲಿ ಮಹಿಳೆಯರ ಹಕ್ಕುಗಳನ್ನು ರಕ್ಷಿಸುವ ಕೆಲಸ ಆಗಬೇಕಿದೆ. ಎಸ್‌ಐಆರ್‌ ನಡೆಯುವ ಸಮಯದಲ್ಲಿ...

ಈ ದಿನ ಸಂಪಾದಕೀಯ | ಕಾಂಗ್ರೆಸ್ಸಿಗರಿಗೆ ಇಂದಿರಾ ಬೇಕು, ಬಡವರ ಕ್ಯಾಂಟೀನ್ ಬೇಡ

ಶಾಸಕರು, ಸಚಿವರು, ಅಧಿಕಾರಿಗಳು ವಾರಕ್ಕೊಂದು ಸಲವಾದರೂ ಇಂದಿರಾ ಕ್ಯಾಂಟೀನ್‌ನಲ್ಲಿ ಊಟ-ತಿಂಡಿ ಮಾಡಬೇಕಿದೆ....