ಈ ದಿನ ಸಂಪಾದಕೀಯ | ದ್ವೇಷ -ವಿರಸ- ವೈಷಮ್ಯಗಳ ಮೇಲೆ ಮತಯಾಚನೆ ಪರಮವಿಕೃತಿ

Date:

ನೈಜ ಯದುವಂಶಿಗಳಾಗಿದ್ದರೆ ಭಗವಾನ್ ಕೃಷ್ಣನನ್ನು ಅವಮಾನಿಸಿದವರನ್ನು ಶಿಕ್ಷಿಸಿ ಎನ್ನುತ್ತಾರೆ ಮೋದಿ. ಒಂದು ಇಡೀ ಜನಾಂಗಕ್ಕೇ ನುಸುಳುಕೋರರು ಎಂದು ಹಣೆಪಟ್ಟಿ ಹಚ್ಚಿ ದ್ವೇಷ ಬಿತ್ತುತ್ತಾರೆ. ದ್ವೇಷದ ಆಧಾರದ ಮೇಲೆ ಹಿಂದೂ ಮತಗಳನ್ನು ಧೃವೀಕರಿಸಲು ಮುಂದಾಗುತ್ತಾರೆ.

 

ದ್ವೇಷ, ನಿಂದೆ, ಹಗೆತನ ಪೂರ್ವಗ್ರಹಗಳನ್ನೇ ಬಿತ್ತಿ ಬೆಳೆದು ತಮ್ಮ ಅಧಿಕಾರ ಗದ್ದುಗೆಯನ್ನು ಗಟ್ಟಿ ಮಾಡಿಕೊಂಡವರಿದ್ದಾರೆ. ವಿಷಪೂರಿತ ಫಸಲು ಕಟಾವು ಮಾಡಿಕೊಂಡು ಜನರ ಕಷ್ಟ ಕಣ್ಣೀರಿನ ಸಮಾಧಿಗಳ ಮೇಲೆ ಸಿಂಹಾಸನ ಇರಿಸಿ ಗಹಗಹಿಸುವ ಕಟುಕ ಕೃಷಿಕರು ಇತಿಹಾಸದಲ್ಲಿ ದಾಖಲಾಗಿ ಹೋಗಿದ್ದಾರೆ. ಮನುಷ್ಯತ್ವದ ಆಳದಲ್ಲಿ ಸುರುಳಿ ಸುತ್ತಿ ಮಲಗಿರುವ ಸುಪ್ತವಿಕಾರಗಳನ್ನು ಬಡಿದೆಬ್ಬಿಸಿ ಕೇಕೆ ಹಾಕಿಸುವವರು ಇವರು. ಮನುಷ್ಯ ಕುಲದ ಕರಾಳ ಇತಿಹಾಸದ ಕಪ್ಪು ಚುಕ್ಕೆಗಳು. ವಿರಸದ ವಿಧ್ವಂಸದ ಜ್ವಾಲೆಗಳನ್ನು ಹೊತ್ತಿಸಿ ದೇಶ ದೇಶಗಳನ್ನು ಬೇಯಿಸಿದವರು. ಜನಸಾಮಾನ್ಯರ ಸುಖ ದುಃಖಗಳಿಗೆ ಇವರು ಮೂರು ಕಾಸಿನ ಕಿಮ್ಮತ್ತನ್ನೂ ನೀಡುವುದಿಲ್ಲ.

ಹುಸಿ ಭಯಗಳನ್ನು ಸೃಷ್ಟಿಸಿ ಒಬ್ಬರ ವಿರುದ್ಧ ಮತ್ತೊಬ್ಬರನ್ನು ಎತ್ತಿ ಕಟ್ಟಿ ಒಡೆದು ಆಳುವುದೇ ಇಂತಹ ದುರಾತ್ಮರ ಧರ್ಮ ಮತ್ತು ಮರ್ಮ. ಕಾಲ ಕಾಲಕ್ಕೆ ಹತ್ತು ಹಲವು ದೇಶಕೋಶಗಳ ಸೂತ್ರ ಹಿಡಿದು ಚರಿತ್ರೆಯ ಕರಾಳ ಪುಟಗಳಲ್ಲಿ ದಾಖಲಾಗಿ ಹೋಗಿದ್ದಾರೆ. ಇತಿಹಾಸ ಇವರಿಗೆ ಪಾಠಗಳನ್ನು ಕಲಿಸುತ್ತಲೇ ಇರುತ್ತದೆ. ಆದರೂ ಇಂತಹವರ ಸಾಲಿಗೆ ಸೇರಲು ಹಲವು ಮಂದಿ ಚಂಡ ಪ್ರಚಂಡರು ಸೇರಲು ಹಗಲಿರುಳು ತಹತಹಿಸುತ್ತಲೇ ಇರುತ್ತಾರೆ. ಇತಿಹಾಸದ ತಿಪ್ಪೆ ಸೇರಿದರೂ ವರ್ತಮಾನದ ಉಪ್ಪರಿಗೆಯ ಮೋಹ ಇವರನ್ನು ಬೆನ್ನು ಹತ್ತಿ ಕಾಡುತ್ತಿರುತ್ತದೆ. ನಮ್ಮ ಪ್ರಧಾನಮಂತ್ರಿಯವರನ್ನೂ ಇಂತಹ ದೌರ್ಬಲ್ಯ ಮೆಟ್ಟಿ ಹಿಡಿದಂತಿದೆ.
ವಿರಸ ವೈಷಮ್ಯಗಳೇ ಇವರ ಕರ್ಮಸೂಚಿ. ಇದರ ಅಡಿಪಾಯದ ಮೇಲೆ ಅಭಿವೃದ್ಧಿಯ ಹುಸಿ ಕನಸುಗಳನ್ನು ಹರವಿ ಸಿಂಹಾಸನ ಹಿಡಿದವರು ಇವರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಆಳುವವರಿಗೆ ತಮ್ಮ ಪ್ರಜೆಗಳ ಅನ್ನ ನೀರು ನೆರಳು ಅರಿವೆಗಳ ಕುರಿತು ಕಾಳಜಿ ಇರಬೇಕು. ಹಸಿದ ಹೊಟ್ಟೆಗಳಿಗೆ ಅನ್ನ, ದುಡಿಯುವ ಕೈಗಳಿಗೆ ಉದ್ಯೋಗಗಳು ಒದಗಿಸಿ ದೇಶದ ಸಂಪತ್ತನ್ನು ಸೃಷ್ಟಿಸಬೇಕು. ಹಸಿದ ಹೊಟ್ಟೆಗಳಿಗೆ ವೇದಾಂತ ಬೋಧನೆ ಸಲ್ಲದು ಎಂದಿದ್ದರು ಸ್ವಾಮಿ ವಿವೇಕಾನಂದ. ಧರ್ಮ ಒತ್ತಟ್ಟಿಗಿರಲಿ, ಹಸಿದ ಹೊಟ್ಟೆಗಳಿಗೆ ವೈಷಮ್ಯದ ವಿಷ ಹಿಂಡಿ, ದುಡಿಯುವ ಕೈಗಳಿಗೆ ದ್ವೇಷದ ಕತ್ತಿ ಕಠಾರಿಗಳನ್ನು ಹಂಚುವುದು ಪರಮ ವಿಕೃತಿ. ಈ ಕೃತಿಯು ಎಲ್ಲ ಕಾಲಕ್ಕೂ ಸಲ್ಲುವುದಿಲ್ಲ. ಅದಕ್ಕೊಂದು ತೀರುವಳಿ ದಿನಾಂಕ ಇದ್ದೇ ಇರುತ್ತದೆ ನಿಜ. ಆದರೆ ಇಂತಹ ದಿನಾಂಕ ಹತ್ತಿರ ಬರುವ ಹೊತ್ತಿಗೆ, ತಮ್ಮ ಮೈಮನಗಳಿಗೆ ಎರೆದ ವಿದ್ವೇಷದ ನಶೆ ಇಳಿದ ಜನ ಎಚ್ಚೆತ್ತುಕೊಳ್ಳುವ ಹೊತ್ತಿಗೆ ಅನಾಹುತ ಆಗಿ ಹೋಗಿರುತ್ತದೆ. ನೆತ್ತರು ನರನಾಡಿಗಳಿಗೆ ಇಳಿದು ವ್ಯಾಪಿಸಿದ ವಿಷ ಇಳಿಯುವುದು ಅಷ್ಟು ಸಲೀಸೇ?

ಲೋಕಸಭಾ ಚುನಾವಣೆಯ ಮೊದಲ ಸುತ್ತಿನ ಮತದಾನದ ವೈಖರಿ ದೇಶ ಆಳುವವರಲ್ಲಿ ದಿಗಿಲು ಹುಟ್ಟಿಸಿದಂತಿದೆ. 102 ಸೀಟುಗಳಲ್ಲಿ ನಡೆದ ಮತದಾನ ನೀರಸವಾಗಿದೆ. ಮೋದಿ ಅಲೆ ಕಾಣೆಯಾಗಿದೆ. ಮತದಾನದ ಪ್ರಮಾಣ 2019ರ ಚುನಾವಣೆಗೆ ಹೋಲಿಸಿದರೆ ನಿರಾಶಾದಾಯಕ. ನಾಲ್ಕು ನೂರು ಸೀಟುಗಳ ಸಂಖ್ಯೆಯ ದಾಟಿ ಜಯಭೇರಿ ಬಾರಿಸುವ ಮೋದಿ ಘೋಷಣೆಗೆ ಮಂಕು ಹಿಡಿದಿದೆ. ಮೋದಿ ನಿರ್ಮಿತ ಹುಸಿ ಹುರುಪು ಕಳೆದ ಎರಡು ಚುನಾವಣೆಗಳಲ್ಲಿ ಮತದಾರರನ್ನು ಮತಗಟ್ಟೆಗಳಿಗೆ ಕರೆ ತಂದಿದ್ದು ಹೌದು. ಈ ಪರಿಯ ಉತ್ಸಾಹ ಈ ಸಲ ಕಾಣೆಯಾಗಿದೆ.

ಶೇ.4.6ರಷ್ಟು ಮತದಾನ ತಗ್ಗಿದೆ. ಮತದಾನದ ಶೇಕಡಾವಾರು ಪ್ರಮಾಣ ಕೆಳಗೆ ಬಿದ್ದಿದೆ. 2019ರಲ್ಲಿ ಶೇ 69.9 ರಷ್ಟು ಮತದಾನ ನಡೆದಿತ್ತು. ಚುನಾವಣಾ ಆಯೋಗದ ಅಂಕಿ ಅಂಶಗಳ ಪ್ರಕಾರವೇ ಈ ಪ್ರಮಾಣ ಶೇ 65.5ಕ್ಕೆ ಕುಸಿದಿದೆ. ಒಂದೆಡೆ 2024ರ ಚುನಾವಣೆಗಳ ಮೊದಲ ದೃಶ್ಯದ ಝಲಕ್ ಎನ್ನುತ್ತಾರೆ ಯೋಗೇಂದ್ರ ಯಾದವ್. ಮೊದಲ ಹಂತ 2024ರ ಚುನಾವಣೆಯ ಕನ್ನಡಿ. 4.60 ಪರ್ಸೆಂಟ್ ಅಂದ್ರೆ 76 ಲಕ್ಷ ಮಂದಿ ಮತ ಚಲಾಯಿಸಿಲ್ಲ. ಮುಂಬರುವ ಹಂತಗಳಲ್ಲಿನ ಶೇಕಡಾವಾರು ಪ್ರಮಾಣ ಇನ್ನಷ್ಟು ಕುಸಿಯಲಿದೆ ಎನ್ನುತ್ತಾರೆ ವೀಕ್ಷಕರು.

ಮೋದಿ ಸುಳ್ಳುಗಳ ಕುರಿತು ಮತದಾರರ ಉತ್ಸಾಹ ತಗ್ಗಿದೆ. ದೇಶವನ್ನು ಕಾಡುವ ಎಲ್ಲ ಸಮಸ್ಯೆಗಳಿಗೆ ಮೂಲ ಕಾರಣವೆಂದು ಕಾಂಗ್ರೆಸ್ ಪಕ್ಷ ಮತ್ತು ಮುಸಲ್ಮಾನರನ್ನು ದೂಷಿಸುವುದರಲ್ಲೇ ಕಾಲ ಕಳೆದಿದ್ದಾರೆ ಪ್ರಧಾನಮಂತ್ರಿ ಮೋದಿ. ಹತ್ತು ವರ್ಷಗಳ ನಂತರವೂ ಅವರು ಈ ಚಾಳಿ ಬಿಟ್ಟಿಲ್ಲ. ಹಿಂದೂಗಳನ್ನು ಮುಸಲ್ಮಾನರ ವಿರುದ್ಧ ಕೆರಳಿಸಿ ಛೂ ಬಿಡುವ ಅವರ ಕುಯುಕ್ತಿಗೆ ಕೊನೆಯೇ ಇಲ್ಲ. ಮತದಾರರ ಮೇಲೆ ಮಂಕುಬೂದಿ ಎರಚುವ ಕುರಿತು ಅವರಿಗಿರುವ ಆತ್ಮವಿಶ್ವಾಸ ಅಪಾರ.

ಕಾಂಗ್ರೆಸ್ಸು ಮುಸಲ್ಮಾನರಿಗೆ ನೀಡಲು ಹೊರಟಿರುವ ದೇಶದ ಸಂಪತ್ತನ್ನು ತಾವು ಹಿಂದುಗಳಿಗೆ ಮರು ಹಂಚಿಕೆ ಮಾಡುವುದಾಗಿ ಮೋದಿ ಗ್ಯಾರಂಟಿ ನೀಡಿದ್ದಾರೆ. ತಾವು ಪ್ರಧಾನಿಯಾದ ನಂತರ ದೇಶದ ಸಂಪತ್ತನ್ನು ತಮ್ಮ ಮಿತ್ರರಾದ ಅದಾನಿ, ಅಂಬಾನಿಗಳಿಗೆ ನಿರಂತರವಾಗಿ ಧಾರೆ ಎರೆಯುತ್ತ ಬಂದಿದ್ದಾರೆ. ಈ ಘೋರ ಅನ್ಯಾಯದ ಹಂಚಿಕೆಯನ್ನು ಅವರು ಮೊದಲು ನಿಲ್ಲಿಸಬೇಕು. ಈ ಸಂಬಂಧ ಮೋದಿ ಗ್ಯಾರಂಟಿ ಯಾಕೆ ನಾಪತ್ತೆ ಎಂದು ಜವಾಬು ನೀಡಬೇಕು.

ದ್ವೇಷದ ಕುದುರೆಯೇರಿ ದಿಬ್ಬಣ ಹೊರಡುವ ಮದುಮಗ ಆಗಿ ಹೋಗಿದ್ದಾರೆ ಮೋದಿ. ಇಂತಹ ಹಗೆತನದ ಕುದುರೆ ಸವಾರಿ ದೇಶವನ್ನು ಸುಸ್ಥಿರವಾಗಿ ಇಡುವುದಿಲ್ಲ ಎಂಬ ಹಿರಿಯ ನ್ಯಾಯವಾದ ಕಪಿಲ್ ಸಿಬಲ್ ಮಾತಿನಲ್ಲಿ ವಿವೇಕವಿದೆ.

ರಾಮಮಂದಿರವನ್ನು ವಿರೋಧಿಸುವವರನ್ನು ಮರೆಯಬೇಡಿ. ನೈಜ ಯದುವಂಶಿಗಳಾಗಿದ್ದರೆ ಭಗವಾನ್ ಕೃಷ್ಣನನ್ನು ಅವಮಾನಿಸಿದವರನ್ನು ಶಿಕ್ಷಿಸಿ ಎನ್ನುತ್ತಾರೆ ಮೋದಿ. ಒಂದು ಇಡೀ ಜನಾಂಗಕ್ಕೇ ನುಸುಳುಕೋರರು ಎಂದು ಹಣೆಪಟ್ಟಿ ಹಚ್ಚಿ ದ್ವೇಷ ಬಿತ್ತುತ್ತಾರೆ. ದ್ವೇಷದ ಆಧಾರದ ಮೇಲೆ ಹಿಂದೂ ಮತಗಳನ್ನು ಧೃವೀಕರಿಸಲು ಮುಂದಾಗುತ್ತಾರೆ. ‘ವಿಶ್ವಜನತಂತ್ರದ ಜನನಿ’ ಎಂದು ಭಾರತವನ್ನು ತಾವೇ ಬಣ್ಣಿಸುತ್ತಾರೆ. ಆದರೆ ಮೋದಿಯವರ ದ್ವೇಷ ಬಿತ್ತನೆಯ ಕೃತ್ಯವು ವಿಶ್ವಜನತಂತ್ರದ ಜನನಿ ಎಂಬ ಬಣ್ಣನೆಗೆ ಶೋಭಿಸುವುದಿಲ್ಲ.

ಚುನಾವಣಾ ನೀತಿ ಸಂಹಿತೆಯ ಚೀರಹರಣವಿದು. ಎಳ್ಳಷ್ಟು ನೈತಿಕತೆ ಉಳಿದಿದ್ದರೂ ಚುನಾವಣಾ ಆಯೋಗ ಕ್ರಮ ಜರುಗಿಸಬೇಕು. ಧರ್ಮಗಳ ನಡುವೆ ದ್ವೇಷ ಹುಟ್ಟಿಸುವ ಮಾತುಗಳನ್ನು ಆಡಕೂಡದೆಂದು ನೀತಿ ಸಂಹಿತೆ ವಿಧಿಸುತ್ತದೆ. ಹೇಳಿದವರಿಗೆ ಜೈಲು ಶಿಕ್ಷೆ ವಿಧಿಸುವ ಮತ್ತು ಆರು ವರ್ಷಗಳ ಕಾಲ ಚುನಾವಣೆಯಿಂದ ದೂರ ಇರಿಸುವ ಶಿಕ್ಷೆಯ ಅಧಿಕಾರ ಆಯೋಗಕ್ಕೆ ಉಂಟು. ಆಯೋಗದ ಕಣ್ಣುಗಳು ಇಂಗಿ ಹೋಗಿವೆಯೇ, ನಾಲಗೆ ಸೇದಿ ಹೋಗಿದೆಯೇ, ಆತ್ಮಸಾಕ್ಷಿ ಸತ್ತು ಹೋಗಿದೆಯೇ?

WhatsApp Image 2025 11 17 at 3.23.18 PM
ಈ ದಿನ ಸಂಪಾದಕೀಯ
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ|ಗುಜರಾತಿನ ದಲಿತರಿಗೆ ಗಗನ ಕುಸುಮವಾಗೇ ಉಳಿದ ನ್ಯಾಯ

ಗುಜರಾತಿನ ಜನಸಂಖ್ಯೆಯಲ್ಲಿ ದಲಿತರ ಪ್ರಮಾಣ ಕಡಿಮೆ. ಶೇ.6.34 ಮಾತ್ರ. ಇಲ್ಲಿ ದಲಿತರಿಗಿಂತ...

ಈ ದಿನ ಸಂಪಾದಕೀಯ | ಮೋದಿಯ ಸಣ್ಣತನವನ್ನು ದೊಡ್ಡತನದಿಂದ ಸೋಲಿಸಿದ ಇರಾನ್‌!

ಇಂಧನ ಭದ್ರತೆಯನ್ನು ಕಾಪಾಡಿಕೊಳ್ಳಲು ಭಾರತದ ಹಡಗುಗಳು ಹಾರ್ಮುಜ್ ಜಲಸಂಧಿಯಿಂದ ಹಾದುಹೋಗಲು ಅವಕಾಶ...

ಈ ದಿನ ಸಂಪಾದಕೀಯ | SIR ಹೆಸರಲ್ಲಿ ಮಹಿಳೆಯರ ಮತದಾನದ ಹಕ್ಕಿನ ಹರಣ ಅಕ್ಷಮ್ಯ

ಕರ್ನಾಟಕದಲ್ಲಿ ಮಹಿಳೆಯರ ಹಕ್ಕುಗಳನ್ನು ರಕ್ಷಿಸುವ ಕೆಲಸ ಆಗಬೇಕಿದೆ. ಎಸ್‌ಐಆರ್‌ ನಡೆಯುವ ಸಮಯದಲ್ಲಿ...

ಈ ದಿನ ಸಂಪಾದಕೀಯ | ಕಾಂಗ್ರೆಸ್ಸಿಗರಿಗೆ ಇಂದಿರಾ ಬೇಕು, ಬಡವರ ಕ್ಯಾಂಟೀನ್ ಬೇಡ

ಶಾಸಕರು, ಸಚಿವರು, ಅಧಿಕಾರಿಗಳು ವಾರಕ್ಕೊಂದು ಸಲವಾದರೂ ಇಂದಿರಾ ಕ್ಯಾಂಟೀನ್‌ನಲ್ಲಿ ಊಟ-ತಿಂಡಿ ಮಾಡಬೇಕಿದೆ....