ಈ ದಿನ ಸಂಪಾದಕೀಯ | ಮಕ್ಕಳ ಬಗೆಗಿನ ಮಮಕಾರ ಮತ್ತು ಮೋದಿಯ ಸೋಗಲಾಡಿತನ

Date:

ಕಳ್ಳರು ಯಾವಾಗಲೂ ಬುದ್ಧಿವಂತರಾಗಿರುತ್ತಾರೆ, ಜನರನ್ನು ವಂಚಿಸಲು ಹೊಸ ಮಾರ್ಗಗಳ ಮೊರೆ ಹೋಗುತ್ತಾರೆ. ಅದೇ ರೀತಿ ಮೋದಿಯವರು ಕೂಡ. ವೃತ್ತಿವಂತ ರಾಜಕಾರಣಿಗಳು ಬಳಸಿದ ಭ್ರಷ್ಟ ಮಾರ್ಗ ಬಿಟ್ಟು, ಬಾಂಡ್ ಮಾರ್ಗ ಹಿಡಿದರು. ಇಬ್ಬರ ಅಂತಿಮ ಗುರಿ- ಅಧಿಕಾರ ಹಿಡಿಯುವುದು. ಆದರೆ ದಾರಿ ಬೇರೆ, ಅಷ್ಟೇ.

‘ನಮಗೆ ಮಕ್ಕಳಿಲ್ಲ, ನಿಮ್ಮ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಕೆಲಸ ಮಾಡುತ್ತಿದ್ದೇವೆ. ವಿರೋಧ ಪಕ್ಷಗಳು ಅವರ ಮಕ್ಕಳ ರಾಜಕೀಯ ಭವಿಷ್ಯಕ್ಕಾಗಿ ಚುನಾವಣೆ ಎದುರಿಸುತ್ತಿದ್ದರೆ, ಮೋದಿ ಮತ್ತು ಯೋಗಿ ನಿಮ್ಮ ಮಕ್ಕಳ ಏಳಿಗೆಗೆ ಚುನಾವಣೆ ಎದುರಿಸುತ್ತಿದ್ದಾರೆ’ ಎಂದು ಉತ್ತರ ಪ್ರದೇಶದ ಎಟಾವಾದ ಚುನಾವಣಾ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಮಾತನಾಡಿದ್ದಾರೆ.

1974ರಲ್ಲಿ ತೆರೆಕಂಡ, ಡಾ. ರಾಜಕುಮಾರ್ ನಟಿಸಿದ್ದ ‘ಸಂಪತ್ತಿಗೆ ಸವಾಲ್’ ಎಂಬ ಚಿತ್ರದ ಒಂದು ದೃಶ್ಯದಲ್ಲಿ ಸಾಹುಕಾರ್ ಸಿದ್ದಪ್ಪ ಊರಿನ ಜನರನ್ನು ಉದ್ದೇಶಿಸಿ, ‘ಮಹಾ ಜನಗಳೇ ನೀವೆಲ್ಲ ನಮಗೆ ಮಕ್ಕಳಿದ್ದಂತೆ, ನಾವು ನಿಮಗೆ ತಂದೆ ಇದ್ದಂತೆ’ ಎನ್ನುತ್ತಾರೆ.

ಸಾಹುಕಾರ್ ಸಿದ್ದಪ್ಪನ ಮಾತಿಗೆ ಬಡಯುವಕ ಭದ್ರ, ‘ಮಹಾಜನಗಳೇ ನಮ್ ಸಾವ್ಕಾರ್ ಸಿದ್ಧಪ್ಪನೋರು ಹೇಳುದ್ರು… ನೀವೆಲ್ಲರೂ ನನಗೆ ಮಕ್ಕಳಿದ್ದ ಹಾಗೆ, ನಾವು ನಿಮಗೆ ತಂದೆ ಇದ್ದ ಹಾಗೇ ಅಂತ. ಇದ್ ಯಾವ ಗ್ರಹಚಾರ ನಮಗೆ? ಬ್ಯಾಡಿ ಬ್ಯಾಡೀ… ನಾವು ಇವರಿಗೆ ಮಕ್ಕಳಾಗಿ ಉಳುಕೊಳ್ಳುವಂಥ ಪುಣ್ಯ ಬ್ಯಾಡ. ಯಾಕಂದ್ರೆ ಈ ಮಾತಿನ ಅರ್ಥ ಬಹಳಾ ದೂರಕ್ಕೆ ಎಳಕ್ಕೊಂಡು ಹೋಗುತ್ತೆ. ಆದ್ದರಿಂದ ನಮ್ಮ ನಮ್ಮ ತಂದೆ ತಾಯಿಗಳಿಗೆ ನಾವು ಮಕ್ಕಳಾಗಿ ಉಳುಕ್ಕೊಂಬಿಟ್ರೆ ಸಾಕು. ಏನಪ್ಪಾ ಏನಂತಿರಾ?’ ಎನ್ನುತ್ತಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಬೇರೆಯವರು ‘ನಮ್ಮ ಮಕ್ಕಳು’ ಎಂದಾಗ ಆಗುವ ಆಭಾಸವನ್ನು 1974ರಲ್ಲಿಯೇ ರಾಜಕುಮಾರ್ ಸರಳವಾಗಿ, ಸ್ಪಷ್ಟವಾಗಿ ನಮ್ಮೆದೆಗೆ ದಾಟಿಸಿದ್ದಾರೆ. ರಾಜ್ ಹೇಳಿ 50 ವರ್ಷಗಳ ನಂತರ, ಸಾಹುಕಾರ್ ಸಿದ್ದಪ್ಪನ ವೇಷದಲ್ಲಿರುವ ಮೋದಿ, ಮತ್ತೆ ‘ನಮ್ಮ ಮಕ್ಕಳ’ ಬಗ್ಗೆ ಮಾತನಾಡಿದ್ದಾರೆ.

ಮೋದಿಯವರು ಈಗ ಮಕ್ಕಳನ್ನು ಏಕೆ ಎಳೆದು ತರುತ್ತಿದ್ದಾರೆಂದರೆ, ನನಗೆ ಮತ್ತು ಯೋಗಿಗೆ ಮಕ್ಕಳು-ಮರಿ ಇಲ್ಲ, ಸ್ವಾರ್ಥಿಗಳಲ್ಲ, ಹಣ-ಆಸ್ತಿಗಾಗಿ ಆಸೆ ಪಡುವವರಲ್ಲ, ದೇಶಸೇವೆ ಬಿಟ್ಟು ಬೇರೆ ಗೊತ್ತಿಲ್ಲ ಎಂಬ ಸಂದೇಶ ಸಾರಲು. ಸ್ವಾರ್ಥಿಗಳೇ ತುಂಬಿ ತುಳುಕುತ್ತಿರುವ ಸಮಾಜದಲ್ಲಿ, ಈ ಕಾಲದಲ್ಲೂ ‘ಇಂಥವರು ಇದ್ದಾರೆಯೇ’ ಎಂದು ಬೆರಗು ಹುಟ್ಟಿಸಲು.

ಭಾರತೀಯರು ಭಾವನಾತ್ಮಕ ಜೀವಿಗಳು. ವಾಟ್ಸಾಪ್ ಯೂನಿವರ್ಸಿಟಿಗೆ ಬಲಿಯಾಗಿ, ಯೋಚಿಸುವುದನ್ನೇ ಕಳೆದುಕೊಂಡವರು. ಸಾರ್ವಜನಿಕ ಬದುಕಿನಲ್ಲಿರುವವರು ದುಡ್ಡು ಕಾಸಿಗೆ ಕೈಯೊಡ್ಡುವವರಲ್ಲ ಎಂದಾಕ್ಷಣ ಅವರನ್ನು ಬಲವಾಗಿ ನಂಬುತ್ತಾರೆ. ಅವರು ಹೇಳಿದ್ದು-ಮಾಡಿದ್ದು ಎಲ್ಲ ನಮಗಾಗಿಯೇ ಎಂದು ಭಾವಿಸಿ, ಅವರ ಪರ ನಿಲ್ಲುತ್ತಾರೆ.

ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಪ್ರಜ್ವಲ್ ಪ್ರಕರಣ, ಒಕ್ಕಲಿಗರ ನಾಯಕತ್ವ ಮತ್ತು ಮನುಷ್ಯತ್ವ

ಆದರೆ, ಮೋದಿಯವರು ಎಲ್ಲಿ ನಿಂತು ಮಾತನಾಡುತ್ತಿದ್ದಾರೆ- ಉತ್ತರ ಪ್ರದೇಶದಲ್ಲಿ. ಉತ್ತರ ಪ್ರದೇಶದಲ್ಲಿರುವ ಸರ್ಕಾರ ಯಾರದು- ಯೋಗಿಯವರದು. ಯೋಗಿಯ ಉತ್ತರ ಪ್ರದೇಶದಲ್ಲಿ ವಂಶ ಪಾರಂಪರ್ಯ ರಾಜಕಾರಣದ ವಿರುದ್ಧ ದೊಡ್ಡ ಗಂಟಲಿನಲ್ಲಿ ಮಾತನಾಡುವ ಮೋದಿ; ಶಿವಮೊಗ್ಗದ ಪ್ರಚಾರ ಭಾಷಣದಲ್ಲಿ ಯಡಿಯೂರಪ್ಪ ಮತ್ತು ಮಕ್ಕಳ ವಂಶ ಪಾರಂಪರ್ಯ ರಾಜಕಾರಣದ ಬಗ್ಗೆ ಮಾತನಾಡುವುದಿಲ್ಲ. ಮೈಸೂರಿನಲ್ಲಿ ದೇವೇಗೌಡ ಮತ್ತವರ ಪರಿವಾರದ ವಿರುದ್ಧ ಬಾಯಿ ಬಿಡುವುದಿಲ್ಲ. ಇದು ಮೋದಿಯ ಸೋಗಲಾಡಿತನ ಅನ್ನದೇ ವಿಧಿ ಇಲ್ಲ.

ಮನೆ, ಮಕ್ಕಳು, ಮಡದಿ ಇಲ್ಲದ ಹಲವು ರಾಜಕೀಯ ನಾಯಕರನ್ನು ದೇಶ ಕಂಡಿದೆ. ಬಿಜೆಪಿಯ ಬ್ರಹ್ಮಚಾರಿ ಅಟಲ್ ಬಿಹಾರಿ ವಾಜಪೇಯಿ ಅವರ ಸರಳ ಬದುಕು; ಮನೆ, ಮಡದಿ, ಮಕ್ಕಳಿದ್ದೂ ಕಾಂಗ್ರೆಸ್ಸಿನ ಮನಮೋಹನ್ ಸಿಂಗ್ ಅವರ ಸರಳತೆ, ಪ್ರಾಮಾಣಿಕತೆ- ಸಾರ್ವಜನಿಕ ಬದುಕಿಗೊಂದು ಮಾದರಿಯಾಗಿ ನಿಲ್ಲುವಂಥದ್ದು. ಇವರಿಬ್ಬರೇ ಅಲ್ಲ, ಈ ರೀತಿ ಬದುಕಿದವರ ಬಹಳ ದೊಡ್ಡ ಪಟ್ಟಿಯೇ ನಮ್ಮ ಕಣ್ಣಮುಂದಿದೆ.

ಆದರೆ, ಮೋದಿ ಮತ್ತು ಯೋಗಿ ಅವರಂಥಲ್ಲ. ಆ ಪಟ್ಟಿಗೆ ಸೇರುವ ರಾಜಕೀಯ ನಾಯಕರಲ್ಲ. ಇವರು ವೃತ್ತಿವಂತ ರಾಜಕಾರಣಿಗಳಿಗಿಂತಲೂ ದುಷ್ಟರು ಮತ್ತು ಭ್ರಷ್ಟರು ಎನ್ನುವುದಕ್ಕೆ ಬೇಕಾದಷ್ಟು ಉದಾಹರಣೆಗಳಿವೆ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರು ಅಧಿಕಾರದಲ್ಲಿದ್ದಾಗ ಚೆಕ್‌ನಲ್ಲಿ ಹಣ ಪಡೆದು ದೇಶಾದ್ಯಂತ ಸುದ್ದಿಯಾದರು. ಜೈಲಿಗೂ ಹೋಗಿಬಂದರು. ಆದರೆ ಮೋದಿಯವರು, ಚುನಾವಣಾ ಬಾಂಡ್ ಮೂಲಕ ಸಾವಿರಾರು ಕೋಟಿ ರೂಪಾಯಿಗಳನ್ನು ಸಂಗ್ರಹಿಸಿದರು. ಯಡಿಯೂರಪ್ಪನವರು ಚೆಕ್ ಮೂಲಕ ಪಡೆದ ಹಣವನ್ನು ವಿನಿಯೋಗಿಸಿ, ಚುನಾವಣೆಯಲ್ಲಿ ಗೆದ್ದು ಅಧಿಕಾರಕ್ಕೇರಿದರು. ಮೋದಿಯವರು ಕೂಡ ಬಾಂಡ್ ಮೂಲಕ ಸಂಗ್ರಹಿಸಿದ ಹಣ ವಿನಿಯೋಗಿಸಿ ಗೆದ್ದು ಅಧಿಕಾರಕ್ಕೇರಿದರು. ಇಬ್ಬರ ಅಂತಿಮ ಗುರಿ- ಅಧಿಕಾರ ಹಿಡಿಯುವುದು. ಆದರೆ ದಾರಿ ಬೇರೆ.

ಕಳ್ಳರು ಯಾವಾಗಲೂ ಬುದ್ಧಿವಂತರಾಗಿರುತ್ತಾರೆ, ಜನರನ್ನು ವಂಚಿಸಲು ಹೊಸ ಮಾರ್ಗಗಳ ಮೊರೆ ಹೋಗುತ್ತಾರೆ. ಅದೇ ರೀತಿ ಮೋದಿಯವರು ಕೂಡ. ವೃತ್ತಿವಂತ ರಾಜಕಾರಣಿಗಳು ಬಳಸಿದ ಭ್ರಷ್ಟ ಮಾರ್ಗ ಬಿಟ್ಟು, ಬಾಂಡ್ ಮಾರ್ಗ ಹಿಡಿದರು, ಅಷ್ಟೇ.

ಭಾರತೀಯರ ಮನಸ್ಥಿತಿಯನ್ನು ಅರಿತಿರುವ ಮೋದಿ, ಉತ್ತರ ಪ್ರದೇಶದಲ್ಲಿ ವಂಶ ಪಾರಂಪರ್ಯ ರಾಜಕಾರಣದ ವಿರುದ್ಧ ಮಾತನಾಡುತ್ತಾರೆ. ಬೇರೆ ರಾಜ್ಯಗಳಲ್ಲಿ ಗೋ ಹತ್ಯೆ ಮಹಾ ಪಾಪ ಎನ್ನುವ ಮೋದಿ, ಗೋವಾದಲ್ಲಿ ಗೋ ಮಾಂಸ ತಿನ್ನುವುದು ತಪ್ಪಲ್ಲ ಎನ್ನುತ್ತಾರೆ. ಮಹಾರಾಷ್ಟ್ರದಲ್ಲಿ ಶಿಂದೆ-ಅಜಿತ್ ಪವಾರ್ ಪಕ್ಕ ನಿಂತು ಭ್ರಷ್ಟಮುಕ್ತ ಭಾರತ ಮಾಡುತ್ತೇನೆ ಎಂದು ಬಡಬಡಿಸುತ್ತಾರೆ. ಎಐಎಂಐಎಂನ ನಾಯಕ ಅಸಾದುದ್ದಿನ್ ಒವೈಸಿಯನ್ನು ಅಪ್ಪಿಕೊಂಡು, ಮುಸ್ಲಿಮರು ಭಯೋತ್ಪಾದಕರು, ನುಸುಳುಕೋರರು ಎನ್ನುತ್ತಾರೆ. ಕಾಂಗ್ರೆಸ್ ಆಸ್ತಿ ತೆರಿಗೆ ಜಾರಿಗೆ ತಂದು, ಮಹಿಳೆಯರ ಮಂಗಳಸೂತ್ರಕ್ಕೆ ಕೈ ಹಾಕಿ ಮುಸ್ಲಿಮರಿಗೆ ಹಂಚುತ್ತದೆ ಎನ್ನುವ ಮೋದಿಯವರು, ಅಂಬಾನಿ-ಅದಾನಿಗಳಿಗೆ ಅನುಕೂಲ ಮಾಡಿಕೊಡಲು ಕಾರ್ಪೊರೇಟ್ ತೆರಿಗೆ ಕಡಿತ ಮಾಡುತ್ತಾರೆ. 400 ಸ್ಥಾನ ಗೆಲ್ಲುವುದು ಸಂವಿಧಾನವನ್ನು ಬದಲಿಸಲಿಕ್ಕೆ ಎಂದು ಬಹಿರಂಗವಾಗಿ ಹೇಳುತ್ತಲೇ, ಕಾಂಗ್ರೆಸ್ ಅಂಬೇಡ್ಕರ್ ಅವರನ್ನು ಸೋಲಿಸಿ ಅವಮಾನಿಸಿತು ಎಂದು ಹಳೇ ಕಾಲದ ಕತೆ ಹೇಳುತ್ತಾರೆ. ಅಮೃತಕಾಲದತ್ತ ದೇಶ ಮುನ್ನುಗ್ಗುತ್ತಿದೆ ಎನ್ನುವ ಮೋದಿಯೇ, ದೇಶದಲ್ಲಿ 80 ಕೋಟಿ ಬಡವರಿದ್ದಾರೆ ಎಂಬ ಅಂಕಿ ಅಂಶವನ್ನೂ ನೀಡುತ್ತಾರೆ.

ಇದೇ ರೀತಿ, ಇವತ್ತಿನ ಮೋದಿಯವರ ‘ನಮಗೆ ಮಕ್ಕಳಿಲ್ಲ, ನಿಮ್ಮ ಮಕ್ಕಳ ಏಳಿಗೆಗಾಗಿ’ ಎನ್ನುವ ಮಾತು ಕೂಡ ಸುಳ್ಳಿನಿಂದ, ಸೋಗಲಾಡಿತನದಿಂದ ಕೂಡಿದ್ದು ಎನ್ನುವುದನ್ನು ದೇಶದ ಜನ ಅರ್ಥ ಮಾಡಿಕೊಳ್ಳಬೇಕಿದೆ. ಅಧಿಕಾರದಿಂದ ಕೆಳಗಿಳಿಸಿ, ಮೊದಲು ಮಡದಿ ಜಶೋದಾ ಬೆನ್ ಬಗ್ಗೆ ಮಾತಾಡು ಎನ್ನಬೇಕಿದೆ.

WhatsApp Image 2025 11 17 at 3.23.18 PM
ಈ ದಿನ ಸಂಪಾದಕೀಯ
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ|ಗುಜರಾತಿನ ದಲಿತರಿಗೆ ಗಗನ ಕುಸುಮವಾಗೇ ಉಳಿದ ನ್ಯಾಯ

ಗುಜರಾತಿನ ಜನಸಂಖ್ಯೆಯಲ್ಲಿ ದಲಿತರ ಪ್ರಮಾಣ ಕಡಿಮೆ. ಶೇ.6.34 ಮಾತ್ರ. ಇಲ್ಲಿ ದಲಿತರಿಗಿಂತ...

ಈ ದಿನ ಸಂಪಾದಕೀಯ | ಮೋದಿಯ ಸಣ್ಣತನವನ್ನು ದೊಡ್ಡತನದಿಂದ ಸೋಲಿಸಿದ ಇರಾನ್‌!

ಇಂಧನ ಭದ್ರತೆಯನ್ನು ಕಾಪಾಡಿಕೊಳ್ಳಲು ಭಾರತದ ಹಡಗುಗಳು ಹಾರ್ಮುಜ್ ಜಲಸಂಧಿಯಿಂದ ಹಾದುಹೋಗಲು ಅವಕಾಶ...

ಈ ದಿನ ಸಂಪಾದಕೀಯ | SIR ಹೆಸರಲ್ಲಿ ಮಹಿಳೆಯರ ಮತದಾನದ ಹಕ್ಕಿನ ಹರಣ ಅಕ್ಷಮ್ಯ

ಕರ್ನಾಟಕದಲ್ಲಿ ಮಹಿಳೆಯರ ಹಕ್ಕುಗಳನ್ನು ರಕ್ಷಿಸುವ ಕೆಲಸ ಆಗಬೇಕಿದೆ. ಎಸ್‌ಐಆರ್‌ ನಡೆಯುವ ಸಮಯದಲ್ಲಿ...

ಈ ದಿನ ಸಂಪಾದಕೀಯ | ಕಾಂಗ್ರೆಸ್ಸಿಗರಿಗೆ ಇಂದಿರಾ ಬೇಕು, ಬಡವರ ಕ್ಯಾಂಟೀನ್ ಬೇಡ

ಶಾಸಕರು, ಸಚಿವರು, ಅಧಿಕಾರಿಗಳು ವಾರಕ್ಕೊಂದು ಸಲವಾದರೂ ಇಂದಿರಾ ಕ್ಯಾಂಟೀನ್‌ನಲ್ಲಿ ಊಟ-ತಿಂಡಿ ಮಾಡಬೇಕಿದೆ....