ಈ ದಿನ ಸಂಪಾದಕೀಯ | ಕಬ್ಬಿನ ನಂತರ ಮೆಕ್ಕೆಜೋಳ, ಬೀದಿಗೆ ಬಂದ ರೈತರ ಬದುಕು

Date:

ಕೇಂದ್ರವೇ ಆಗಲಿ, ರಾಜ್ಯವೇ ಆಗಲಿ 'ನಮ್ಮದು ರೈತಪರ ಸರ್ಕಾರ' ಎನ್ನುವುದನ್ನು ಟ್ರಂಪ್ ಕಾರ್ಡ್‌ನಂತೆ ಬಳಸುವುದನ್ನು ಬಿಟ್ಟಿಲ್ಲ. ತಮಗೆ ಬೇಕಾದ ಬೆಳೆಗಳನ್ನು ಬೆಳೆಯದ ಹೊರತು; ಸ್ಪಂದಿಸುವ ಸರ್ಕಾರಗಳನ್ನು ಚುನಾಯಿಸಿಕೊಳ್ಳದ ಹೊರತು, ರೈತರಿಗೆ ಬೇರೆ ಮಾರ್ಗವಿಲ್ಲ.

ರಾಜ್ಯದಲ್ಲಿ ಈ ಬಾರಿ ಸಮಯಕ್ಕೆ ಸರಿಯಾಗಿ ಮಳೆ ಬಾರದಿರುವುದರಿಂದ ಬೇಸಾಯಗಾರರು ಭಾರೀ ಬಾಧೆಗೆ ಒಳಗಾಗಿದ್ದಾರೆ. ಬದುಕಿಗೆ ಆಸರೆಯಾದ ಕೃಷಿ ಕೈ ಕೊಟ್ಟಿದೆ. ಕಳವಳಕ್ಕೀಡು ಮಾಡಿದೆ. ಕಷ್ಟಕ್ಕೆ ದೂಡಿದೆ. ಕಳೆದ ವಾರ ಕಬ್ಬಿಗೆ ಕನಿಷ್ಠ ಬೆಂಬಲ ಬೆಲೆ ನೀಡಿ ಎಂದು ಬೀದಿಗಿಳಿದ ರಾಜ್ಯದ ರೈತರು, ಇಂದು ಮೆಕ್ಕೆಜೋಳಕ್ಕೆ ಬೆಂಬಲ ಬೆಲೆ ನೀಡಬೇಕು, ಸರ್ಕಾರ ಖರೀದಿ ಕೇಂದ್ರ ತೆರೆಯಬೇಕು ಎಂದು ಒತ್ತಾಯಿಸುತ್ತಿದ್ದಾರೆ.

ರೈತರು ಹೀಗೆ ಬೀದಿಗಿಳಿದು ಹೋರಾಟ ಮಾಡಲು ಮುಖ್ಯ ಕಾರಣ, ಮಾರುಕಟ್ಟೆಯಲ್ಲಿ ಮೆಕ್ಕೆಜೋಳಕ್ಕೆ ಯೋಗ್ಯ ಬೆಲೆ ಸಿಗುತ್ತಿಲ್ಲ ಎನ್ನುವುದಾಗಿದೆ. ರೈತ ಬೆಳೆದ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ನಿಗದಿ ಎಂಬುದು ರೈತರಿಗೆ ಬೆಲೆ ಭದ್ರತೆ ಒದಗಿಸುವ ಉದ್ದೇಶದಿಂದ ಸರ್ಕಾರವೇ ರೂಪಿಸಿದ್ದಾಗಿದೆ. ಆದರೆ, ಅದೇ ಸರ್ಕಾರ ಕನಿಷ್ಠ ಬೆಂಬಲ ಬೆಲೆ ಘೋಷಿಸದೆ, ಬೆಳೆ ಖರೀದಿಸದೆ, ಕಾಲಕ್ಕೆ ಸರಿಯಾಗಿ ಹಣ ಸಂದಾಯ ಮಾಡದೆ ಸತಾಯಿಸುತ್ತಿದೆ. ಸಾಲದ ಸುಳಿಗೆ ಸಿಕ್ಕ ರೈತರ ಆತ್ಮಹತ್ಯೆಗೂ ಕಾರಣವಾಗುತ್ತಿದೆ.

ಇದನ್ನು ಓದಿದ್ದೀರಾ?: ಪೆಹ್ಲೂಖಾನ್‌ಗೆ ಬಗೆದ ಅದೇ ದ್ರೋಹ ಕಾದಿದೆಯೇ ಅಖ್ಲಾಕ್‌ಗೆ?

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಕಳೆದ ವರ್ಷ ಮುಕ್ತ ಮಾರುಕಟ್ಟೆಯಲ್ಲಿ ಒಂದು ಕ್ವಿಂಟಲ್ ಮೆಕ್ಕೆಜೋಳದ ಬೆಲೆ ರೂ. 3,200ಕ್ಕೂ ಮೀರಿತ್ತು. ಇದು ರೈತರಲ್ಲಿ, ತಮ್ಮ ಶ್ರಮಕ್ಕೆ ತಕ್ಕ ಬೆಲೆ ಸಿಗುತ್ತದೆ ಎಂಬ ಆಸೆ ಹುಟ್ಟಿಸಿ, ಬಯಲುಸೀಮೆಯ ರೈತರೆನ್ನದೆ, ಎಲ್ಲರೂ ಮೆಕ್ಕೆಜೋಳ ಬೆಳೆಯಲಾರಂಭಿಸಿದರು. ಚಿತ್ರದುರ್ಗದಲ್ಲಿ ಈರುಳ್ಳಿ, ಹಾಸನದಲ್ಲಿ ಆಲೂಗಡ್ಡೆ, ಮಂಡ್ಯದಲ್ಲಿ ಕಬ್ಬು ಬೆಳೆಯುತ್ತಿದ್ದವರು ಮೆಕ್ಕೆಜೋಳ ಬೆಳೆಯಲು ಶುರು ಮಾಡಿದ್ದರು.

ಇದರ ಫಲವಾಗಿ, ಇತ್ತೀಚಿನ ವರ್ಷಗಳಲ್ಲಿ ಕರ್ನಾಟಕ ರಾಜ್ಯ ಮೆಕ್ಕೆಜೋಳ ಬೆಳೆಯುವುದರಲ್ಲಿ ಮುಂಚೂಣಿಯಲ್ಲಿದೆ, ಎರಡನೇ ಅತಿದೊಡ್ಡ ಉತ್ಪಾದಕ ರಾಜ್ಯವಾಗಿ ಗುರುತಿಸಿಕೊಂಡಿದೆ. ಅದರಲ್ಲೂ ದಾವಣಗೆರೆ ಜಿಲ್ಲೆ ಅತಿ ಹೆಚ್ಚು ಬೆಳೆಯುತ್ತಿದೆ. ರಾಜ್ಯದ ಮೆಕ್ಕೆಜೋಳ ಉತ್ಪಾದನೆಯು ದೇಶದ ಒಟ್ಟು ಉತ್ಪಾದನೆಯ ಶೇ. 15ರಷ್ಟಿದೆ.

ಈ ಮಟ್ಟದಲ್ಲಿ ರೈತರು ಮೆಕ್ಕೆಜೋಳದತ್ತ ಒಲವು ತೋರಲು, ವಲಸೆ ಹೋಗಲು ಹಲವು ಕಾರಣಗಳೂ ಇವೆ. ಅದರಲ್ಲಿ ಮುಖ್ಯವಾಗಿ- ಮೆಕ್ಕೆಜೋಳ ಹೆಚ್ಚು ಶ್ರಮ ಬೇಡುವುದಿಲ್ಲ; ಹೆಚ್ಚಿಗೆ ನೀರು, ಗೊಬ್ಬರ, ಔಷಧಿಯನ್ನೂ ಕೇಳುವುದಿಲ್ಲ. ಜೊತೆಗೆ ನೂರರಿಂದ ನೂರಹತ್ತು ದಿನಗಳಲ್ಲಿ ಒಂದು ಹೆಕ್ಟೇರ್‍‌ಗೆ 60ರಿಂದ 80 ಕ್ವಿಂಟಲ್ ಬೆಳೆಯಬಹುದಾಗಿದೆ.

ಮೆಕ್ಕೆಜೋಳವು ಆಹಾರ, ಪಶುಆಹಾರ, ಎಥನಾಲ್ ಉತ್ಪಾದನೆ ಮತ್ತು ಇತರ ಉದ್ಯಮಗಳಿಗೆ ಬಳಕೆಯಾಗುವುದರಿಂದ ಬೇಡಿಕೆಯೂ ಹೆಚ್ಚಾಗಿದೆ. ಎಳೆಯ ಹಾಲುಳ್ಳ ಮೆಕ್ಕೆಜೋಳ(ಬೇಬಿ ಕಾರ್ನ್) ಹೋಟೆಲ್ ಉದ್ಯಮಕ್ಕೆ ಹಾಗೂ ಹೆಚ್ಚಿನ ಹಾಲು ಇಳುವರಿಗೆ ಪಶು ಆಹಾರಕ್ಕೆ ಬಳಸಲ್ಪಡುತ್ತದೆ. ಇವರೆಡೂ ಬೇಡವೆಂದರೆ, ಒಣ ಮೆಕ್ಕೆಜೋಳ ಮಾರಾಟ ಮಾಡಬಹುದಾಗಿದೆ. ಕೊನೆಗೆ ಉಳಿಯುವ ಜೋಳದ ಕಡ್ಡಿಯೂ ಕೂಡ ಪಶುವಿನ ಆಹಾರವಾಗಿ, ಅದು ಕೂಡ ಹಣ ತರುತ್ತದೆ. ಈ ಎಲ್ಲ ಕಾರಣಗಳಿಂದ ಇಂದು ಹೆಚ್ಚಿನಪಾಲು ರೈತರು ಮೆಕ್ಕೆಜೋಳ ಬೆಳೆಯುತ್ತಿದ್ದಾರೆ.

ಮೆಕ್ಕೆಜೋಳ ಬೆಳೆಯುವುದು ಹೆಚ್ಚಾದಂತೆ, ಬಿತ್ತನೆಬೀಜ, ರಸಗೊಬ್ಬರ, ಕೃಷಿ ಕೂಲಿ ಆಳುಗಳು ಸೇರಿದಂತೆ ಕೃಷಿ ಒಳಸುರಿಗಳ ಬೆಲೆ ಕೂಡ ದುಪ್ಪಟ್ಟಾಗಿದೆ. ಈ ಸಂದರ್ಭದಲ್ಲಿಯೇ, ಸುರಿದ ಅಕಾಲಿಕ ಮಳೆಗೆ ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ಬೆಳೆ ನಾಶವಾಗಿದೆ. ಅದರಲ್ಲೂ ಮೆಕ್ಕೆಜೋಳ ತೆನೆಗಟ್ಟುವ ಸಮಯದಲ್ಲಿ ಭಾರೀ ಮಳೆಗೆ ಬಲಿಯಾಗಿ ಬೆಳೆಯ ಇಳುವರಿ ಎಕರೆಗೆ 8ರಿಂದ 10 ಕ್ವಿಂಟಲ್‌ಗೆ ಕುಸಿದಿದೆ, ಗುಣಮಟ್ಟವನ್ನೂ ಕಳೆದುಕೊಂಡಿದೆ. ಅಳಿದುಳಿದ ಬೆಳೆ ಕೈಗೆ ಬಂದರೂ, ಮಾರುಕಟ್ಟೆಯಲ್ಲಿ ಮೆಕ್ಕೆಜೋಳವನ್ನು ಕೇಳುವವರೇ ಇಲ್ಲವಾಗಿದೆ. ಎಕರೆಗೆ 20ರಿಂದ 30 ಸಾವಿರ ಖರ್ಚು ಮಾಡಿದ ರೈತರಿಗೆ, ಈಗ ಕ್ವಿಂಟಲ್‌ಗೆ 1,200 ರೂ. ಕೂಡ ಸಿಗದಾಗಿದೆ. ಹೀಗಾಗಿ ರೈತರು ಬೀದಿಗಿಳಿದಿದ್ದಾರೆ. ಪ್ರತಿಭಟನೆ, ಧರಣಿ ಹಮ್ಮಿಕೊಂಡು ಸರ್ಕಾರ ಕನಿಷ್ಠ ಬೆಂಬಲ ಬೆಲೆಯಲ್ಲಿ ಖರೀದಿಸಬೇಕೆಂದು ಮನವಿ ಮಾಡಿಕೊಳ್ಳುತ್ತಿದ್ದಾರೆ. 

ದುರದೃಷ್ಟಕರ ಸಂಗತಿ ಎಂದರೆ, ಶೇ. 55ರಷ್ಟು ಕೃಷಿ ಕುಟುಂಬಗಳಿಗೆ ತಾವು ಬೆಳೆದ ಬೆಳೆಗಳ ಕನಿಷ್ಠ ಬೆಂಬಲ ಬೆಲೆಯ ಬಗ್ಗೆ ತಿಳಿವಳಿಕೆ ಇಲ್ಲ. ಕನಿಷ್ಠ ಬೆಂಬಲ ಬೆಲೆ ಬಗ್ಗೆ ತಿಳಿದಿರುವ ರೈತರಲ್ಲಿ ಶೇ. 20ರಷ್ಟು ರೈತರು ಖರೀದಿ ಕೇಂದ್ರಗಳಲ್ಲಿ ಉತ್ಪನ್ನಗಳನ್ನು ಮಾರಾಟ ಮಾಡುತ್ತಿಲ್ಲ. ಈ ಬಗ್ಗೆ ತೋಟಗಾರಿಕೆ, ಕೃಷಿ ಇಲಾಖೆಗಳು ಕೂಡ ರೈತರಲ್ಲಿ ಜಾಗೃತಿ ಮೂಡಿಸುತ್ತಿಲ್ಲ.

ಹೀಗಾಗಿ ರೈತರು ಪದೇ ಪದೆ ಕಷ್ಟಕ್ಕೀಡಾಗುವುದು, ಬೀದಿಗಿಳಿಯುವುದು, ಸರ್ಕಾರದ ಮೊರೆ ಹೋಗುವುದು ನಡೆದೇ ಇದೆ. ಪ್ರತಿಭಟನಾನಿರತ ಸ್ಥಳಕ್ಕೆ ಆಡಳಿತ ಪಕ್ಷದ ಸಚಿವರು, ವಿರೋಧ ಪಕ್ಷಗಳ ನಾಯಕರು ಧಾವಿಸುವುದು; ಕೇಂದ್ರ-ರಾಜ್ಯ ಸರ್ಕಾರಗಳನ್ನು ದೂರುವುದು ಕೂಡ ಸಾಮಾನ್ಯ ಸಂಗತಿಯೇ ಆಗಿಹೋಗಿದೆ. ಕೃಷಿ ಕುಟುಂಬದಿಂದಲೇ ಬಂದ ಶೋಭಾ ಕರಂದ್ಲಾಜೆಯವರು ಕೇಂದ್ರದಲ್ಲಿ; ಚಲುವರಾಯಸ್ವಾಮಿಯವರು ರಾಜ್ಯದಲ್ಲಿ ಕೃಷಿ ಸಚಿವರಾಗಿದ್ದಾರೆ. ಆದರೆ ಕೃಷಿಕರ ಕಷ್ಟ ಇವರಿಗೆ ಅರ್ಥವೇ ಆಗುತ್ತಿಲ್ಲ.

ಇದನ್ನು ಓದಿದ್ದೀರಾ?: ‘ಐಎಸ್‌ಐ ಜೊತೆ ಹಿಂದೂಗಳೇ ಹೆಚ್ಚು’: ಅಜಿತ್ ದೋವಲ್‌ ಮಾತು ಸತ್ಯಕ್ಕೆ ಹತ್ತಿರ!

ಸರಕಾರಗಳು ಯಾವುದೇ ಇದ್ದರೂ, ಕೃಷಿಕ ಸಮಾಜ ಸದಾ ಕಡೆಗಣನೆಗೆ ಒಳಗಾಗುತ್ತಲೇ ಬಂದಿದೆ. ವೆಚ್ಚ ಆಧರಿತ ಬೆಲೆ ನಿಗದಿಗೆ ಸರ್ಕಾರ ನೇಮಿಸಿದ ಅನೇಕ ಸಮಿತಿಗಳು ಶಿಫಾರಸ್ಸು ಮಾಡಿದರೂ, ಯಾವ ಸರ್ಕಾರವೂ ಅದನ್ನು ಗಂಭೀರವಾಗಿ ಪರಿಗಣಿಸಿದ್ದಿಲ್ಲ. ಜೊತೆಗೆ ನೈಸರ್ಗಿಕ ಪ್ರಕೋಪಗಳ ಸಂದರ್ಭದಲ್ಲಿ ಪರಿಹಾರ ನೀಡುವುದಾಗಲಿ, ಬೆಳೆಗಳಿಗೆ ಬೆಲೆ ನಿಗದಿಪಡಿಸುವ ವಿಚಾರವೇ ಆಗಲಿ, ಕೇಂದ್ರ-ರಾಜ್ಯಗಳ ನಡುವೆ ಪ್ರತಿ‍ಷ್ಠೆಯ ಪ್ರಶ್ನೆಯಾಗಿರುವುದು ಸುಳ್ಳಲ್ಲ. ರೈತ ಪ್ರತಿಯೊಂದಕ್ಕೂ ಬೀದಿಗಿಳಿಯುವುದು ಕೂಡ ನಿಂತಿಲ್ಲ.

ಕುತೂಹಲಕರ ಸಂಗತಿ ಎಂದರೆ, ಕೇಂದ್ರವೇ ಆಗಲಿ, ರಾಜ್ಯವೇ ಆಗಲಿ ‘ನಮ್ಮದು ರೈತಪರ ಸರ್ಕಾರ’ ಎನ್ನುವುದನ್ನು ಟ್ರಂಪ್ ಕಾರ್ಡ್‌ನಂತೆ ಬಳಸುವುದನ್ನು ಬಿಟ್ಟಿಲ್ಲ. ತಮಗೆ ಬೇಕಾದ ಬೆಳೆಗಳನ್ನು ಬೆಳೆಯದ ಹೊರತು; ಸ್ಪಂದಿಸುವ ಸರ್ಕಾರಗಳನ್ನು ಚುನಾಯಿಸಿಕೊಳ್ಳದ ಹೊರತು, ರೈತರಿಗೆ ಬೇರೆ ಮಾರ್ಗವಿಲ್ಲ.

WhatsApp Image 2025 11 17 at 3.23.18 PM
ಈ ದಿನ ಸಂಪಾದಕೀಯ
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ|ಗುಜರಾತಿನ ದಲಿತರಿಗೆ ಗಗನ ಕುಸುಮವಾಗೇ ಉಳಿದ ನ್ಯಾಯ

ಗುಜರಾತಿನ ಜನಸಂಖ್ಯೆಯಲ್ಲಿ ದಲಿತರ ಪ್ರಮಾಣ ಕಡಿಮೆ. ಶೇ.6.34 ಮಾತ್ರ. ಇಲ್ಲಿ ದಲಿತರಿಗಿಂತ...

ಈ ದಿನ ಸಂಪಾದಕೀಯ | ಮೋದಿಯ ಸಣ್ಣತನವನ್ನು ದೊಡ್ಡತನದಿಂದ ಸೋಲಿಸಿದ ಇರಾನ್‌!

ಇಂಧನ ಭದ್ರತೆಯನ್ನು ಕಾಪಾಡಿಕೊಳ್ಳಲು ಭಾರತದ ಹಡಗುಗಳು ಹಾರ್ಮುಜ್ ಜಲಸಂಧಿಯಿಂದ ಹಾದುಹೋಗಲು ಅವಕಾಶ...

ಈ ದಿನ ಸಂಪಾದಕೀಯ | SIR ಹೆಸರಲ್ಲಿ ಮಹಿಳೆಯರ ಮತದಾನದ ಹಕ್ಕಿನ ಹರಣ ಅಕ್ಷಮ್ಯ

ಕರ್ನಾಟಕದಲ್ಲಿ ಮಹಿಳೆಯರ ಹಕ್ಕುಗಳನ್ನು ರಕ್ಷಿಸುವ ಕೆಲಸ ಆಗಬೇಕಿದೆ. ಎಸ್‌ಐಆರ್‌ ನಡೆಯುವ ಸಮಯದಲ್ಲಿ...

ಈ ದಿನ ಸಂಪಾದಕೀಯ | ಕಾಂಗ್ರೆಸ್ಸಿಗರಿಗೆ ಇಂದಿರಾ ಬೇಕು, ಬಡವರ ಕ್ಯಾಂಟೀನ್ ಬೇಡ

ಶಾಸಕರು, ಸಚಿವರು, ಅಧಿಕಾರಿಗಳು ವಾರಕ್ಕೊಂದು ಸಲವಾದರೂ ಇಂದಿರಾ ಕ್ಯಾಂಟೀನ್‌ನಲ್ಲಿ ಊಟ-ತಿಂಡಿ ಮಾಡಬೇಕಿದೆ....