ಈ ದಿನ ಸಂಪಾದಕೀಯ | ರಾಜ್ಯದಲ್ಲಿ ಮತ್ತೆ ಶುರುವಾಯಿತು ಹೆಣ ರಾಜಕಾರಣ

Date:

ಸಂವಿಧಾನದತ್ತವಾಗಿ ಅಧಿಕಾರ ಪಡೆದ, ಬಹುಜನರ ಆಶಯಗಳ ಪ್ರತೀಕವಾಗಿ ಸರ್ಕಾರ ರಚನೆ ಮಾಡಿರುವ ಕಾಂಗ್ರೆಸ್ ಈಗ ಕಠೋರವಾಗಿ ವರ್ತಿಸಬೇಕಿದೆ. ಹೆಣ ರಾಜಕಾರಣ ಮಾಡುವ ರಾಜಕೀಯ ಪಕ್ಷಗಳು, ಸಂಘಟನೆಗಳು ಹಾಗೂ ವ್ಯಕ್ತಿಗಳ ಬಗ್ಗೆ ಸರ್ಕಾರವು ನಿರ್ದಾಕ್ಷಿಣ್ಯವಾಗಿ ಹಾಗೂ ಕಠಿಣವಾಗಿ ವರ್ತಿಸಬೇಕಿದೆ. 

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದಾಗಿನಿಂದಲೂ ಮಂಕಾಗಿದ್ದ ಕೇಸರಿ ಪಾಳಯದಲ್ಲಿ ಜೀವ ಸಂಚಾರವಾಗಿದೆ. ಬಿಜೆಪಿ ಮುಖಂಡರು ಮತ್ತು ಕೆಲವು ಹಿಂದುತ್ವವಾದಿ ಸಂಘಟನೆಗಳ ಕಾರ್ಯಕರ್ತರು ತಮ್ಮ ಎಂದಿನ ಹೆಣ ರಾಜಕಾರಣ ಆರಂಭಿಸಿ. ಸರ್ಕಾರದ ಜೊತೆಗೆ ಸಂಘರ್ಷಕ್ಕೆ ಇಳಿದಿದ್ದಾರೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ರಾಜ್ಯ ಬಿಜೆಪಿ ಮುಖಂಡರು ಬೀದಿಗಿಳಿದರೆ, ಕಾಂಗ್ರೆಸ್ ಸರ್ಕಾರದಲ್ಲಿ ಹಿಂದೂಗಳಿಗೆ ರಕ್ಷಣೆಯಿಲ್ಲ ಎಂದು ಯುವ ಬ್ರಿಗೇಡ್‌ನ ಚಕ್ರವರ್ತಿ ಸೂಲಿಬೆಲೆ ಸರ್ಕಾರದ ವಿರುದ್ಧ ಬೊಬ್ಬೆ ಹಾಕುತ್ತಿದ್ದಾರೆ. ಇವರೆಲ್ಲರ ಬೊಬ್ಬೆ, ಪ್ರತಿಭಟನೆಗಳಿಗೆ ಕಾರಣವಾದ ವಿಚಾರ ತಿ ನರಸೀಪುರದ ವೇಣುಗೋಪಾಲ್ ಎನ್ನುವವರ ಹತ್ಯೆ ಹಾಗೂ ಬೆಳಗಾವಿಯ ಜೈನ ಮುನಿ ಕಾಮಕುಮಾರ ನಂದಿಯ ಹತ್ಯೆ. ಎರಡೂ ಪ್ರಕರಣಗಳ ಸಂಬಂಧ ಪೊಲೀಸರು ದೂರು ದಾಖಲಿಸಿಕೊಂಡು, ಎಫ್‌ಐಆರ್ ಹಾಕಿದ್ದಾರೆ ಮತ್ತು ಆರೋಪಿಗಳನ್ನೂ ಬಂಧಿಸಿದ್ದಾರೆ.

ಆದರೆ, ಒಂದು ಸಮರ್ಥ ವಿರೋಧ ಪಕ್ಷವಾಗಿ ಕೆಲಸ ಮಾಡುವಲ್ಲಿ ವಿಫಲವಾಗಿದೆ ಎಂದು ಟೀಕೆಗೆ ಗುರಿಯಾಗಿದ್ದ ಬಿಜೆಪಿಗೆ ಈಗ ಈ ಕೊಲೆಗಳೇ ನೆಪವಾಗಿ ಒದಗಿವೆ. ಕೊಲೆಗಳಿಗೆ ಧಾರ್ಮಿಕ ದ್ವೇಷದ ಲೇಪ ನೀಡಲು ಹೊರಟಿರುವ ಬಿಜೆಪಿ, ತನ್ನ ಎಂದಿನ ಹೆಣ ರಾಜಕಾರಣವನ್ನು ಮತ್ತೆ ರಾಜ್ಯದಲ್ಲಿ ಮತ್ತೆ ಆರಂಭಿಸಿದೆ.

ಎರಡೂ ಕೊಲೆಗಳ ವಿವರಗಳನ್ನು ಪರಿಶೀಲಿಸಿದರೆ, ಅವು ವೈಯಕ್ತಿಕ ಕಾರಣಕ್ಕಾಗಿ ನಡೆದಂಥವು ಎನ್ನುವುದು ಸ್ಪಷ್ಟವಾಗುತ್ತದೆ. ತಿ ನರಸೀಪುರದಲ್ಲಿ ಹನುಮ ಜಯಂತಿ ಆಚರಣೆ ವೇಳೆ ಮಂಡಿ ವ್ಯಾಪಾರಿ ವೇಣುಗೋಪಾಲ್ ಮತ್ತು ಅದೇ ಊರಿನ ಮಣಿಕಂಠನ ನಡುವೆ ಕ್ಷುಲ್ಲಕ ಕಾರಣಕ್ಕೆ ಜಗಳವಾಗಿತ್ತು. ಅದೇ ಹಿನ್ನೆಲೆಯಲ್ಲಿ ಮಣಿಕಂಠ ಮತ್ತು ಇತರ ಕೆಲವರು ಸೇರಿಕೊಂಡು ವೇಣುಗೋಪಾಲ್‌ನನ್ನು ಕೊಲೆ ಮಾಡಿದ್ದಾರೆ. ಇನ್ನು ಜೈನ ಮುನಿಯ ಪ್ರಕರಣದಲ್ಲಿ, ಕೊಟ್ಟ ಹಣವನ್ನು ವಾಪಸ್ ಕೇಳಿದ ಕಾರಣಕ್ಕಾಗಿ ನಾರಾಯಣ ಮಾಳಿ ಎನ್ನುವ ಮುನಿಯ ಆಪ್ತನೇ ಅವರನ್ನು ಕೊಂದಿದ್ದಾಗಿ ಹೇಳಿದ್ದಾನೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಇಷ್ಟಾದರೂ ವೇಣುಗೋಪಾಲ್ ಹಿಂದುತ್ವವಾದಿ ಸಂಘಟನೆಯೊಂದರ ಕಾರ್ಯಕರ್ತನಾಗಿದ್ದ ಎನ್ನುವುದನ್ನೇ ಒಂದು ನೆಪವಾಗಿಸಿಕೊಂಡು ಚಕ್ರವರ್ತಿ ಸೂಲಿಬೆಲೆ, ಶ್ರೀರಾಮುಲು ಮುಂತಾದವರು ದ್ವೇಷ ಹರಡುವ, ಸಾಮರಸ್ಯ ಕದಡುವ ಹೇಳಿಕೆಗಳನ್ನು ಕೊಡುತ್ತಿದ್ದಾರೆ. ವಿಪರ್ಯಾಸ ಎಂದರೆ, ಶೋಷಿತ ಎಸ್‌ಟಿ ಸಮುದಾಯದ ವೇಣುಗೋಪಾಲ್, ಇಂದು ಬಿಜೆಪಿಯ ಹಿಂದೂ ಹೆಸರಿನ ಪ್ರಬಲ ಜಾತಿಗಳ ಪಾರಮ್ಯದ ಹೋರಾಟಕ್ಕೆ ಅಸ್ತ್ರವಾಗಿದ್ದಾನೆ.

ಈ ಹಿಂದೆ ಕೂಡ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ಡಿ ಕೆ ರವಿ ಆತ್ಮಹತ್ಯೆ ಮಾಡಿಕೊಂಡಿದ್ದು ದೊಡ್ಡ ವಿವಾದವಾಗಿತ್ತು. ಬಿಜೆಪಿ ಆಗಲೂ ಇದೇ ರೀತಿ ಪ್ರಕರಣದಲ್ಲಿ ಕಾಂಗ್ರೆಸ್ ಶಾಸಕರು, ಮಂತ್ರಿಗಳ ಕೈವಾಡ ಇದೆ ಎಂದು ಬೊಬ್ಬೆ ಹೊಡೆದಿತ್ತು. ಸತ್ಯ ಹೊರಬರಬೇಕೆಂದರೆ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕೆಂದು ಹೀಗಿನಂತೆ ಆಗಲೂ ಒತ್ತಾಯಿಸಿತ್ತು. ಸಿದ್ದರಾಮಯ್ಯ ಸರ್ಕಾರ ಪ್ರಕರಣವನ್ನು ಸಿಬಿಐಗೆ ವಹಿಸಿತ್ತು. ತನಿಖೆಯ ನಂತರ ಡಿ ಕೆ ರವಿ, ಅವರ ವೈಯಕ್ತಿಕ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಸಿಬಿಐ ವರದಿ ಹೇಳಿತ್ತು.                

ವೇಣುಗೋಪಾಲ್ ಹಾಗೂ ಜೈನ ಮುನಿ ಹತ್ಯೆಗಳು ಹೇಗೆ ನೋಡಿದರೂ ವೈಯಕ್ತಿಕ ಕಾರಣಕ್ಕೆ ನಡೆದಂಥವು. ಇದರ ಹಿಂದೆ ಯಾವುದೇ ಧರ್ಮ ಸಂಘರ್ಷವಿಲ್ಲ, ಧಾರ್ಮಿಕ ಗುಂಪುಗಳಿಲ್ಲ. ಮತ್ತು ಸೈದ್ಧಾಂತಿಕ ದ್ವೇಷದ ಕಾರಣಗಳಿಲ್ಲ. ಆದರೂ ಈ ಪ್ರಕರಣಗಳಿಗೆ ಕೋಮು ಬಣ್ಣ ಹಚ್ಚಲು ಬಿಜೆಪಿ ಮತ್ತು ಕೆಲ ಹಿಂದುತ್ವವಾದಿ ಸಂಘಟನೆಗಳು ಪ್ರಯತ್ನಿಸುತ್ತಿವೆ. ಹಿಂದುವಿನ ಕೊಲೆ ನಡೆದಿದೆ, ಕಾಂಗ್ರೆಸ್ ಸರ್ಕಾರದಲ್ಲಿ ಹಿಂದೂಗಳು ಅಪಾಯಕ್ಕೆ ಗುರಿಯಾಗಿದ್ದಾರೆ ಎಂದು ಅಪಪ್ರಚಾರ ಮಾಡಲಾಗುತ್ತಿದೆ.

ಬಿಜೆಪಿ ಹಿಂದೂಗಳ ಹಿತ ಕಾಯುವ ಪಕ್ಷ ಎನ್ನುವುದಾದರೆ, ರಾಜ್ಯದಲ್ಲಿ ಬಹಳಷ್ಟು ಹಿಂದೂಗಳಿದ್ದಾರೆ. ಅವರಿಗೆ ನೂರೆಂಟು ಕಷ್ಟಗಳಿವೆ, ಸಮಸ್ಯೆಗಳಿವೆ. ಉದ್ಯೋಗ, ಶಿಕ್ಷಣ, ಸೂರು ಮುಂತಾದ ಕೊರತೆಗಳಿವೆ. ಅದ್ಯಾವುದರ ಬಗ್ಗೆಯೂ ಯಾಕೆ ಬಿಜೆಪಿ ಎಂದೂ ಚಕಾರ ಎತ್ತುವುದಿಲ್ಲ ಎನ್ನುವ ಪ್ರಶ್ನೆಗಳನ್ನು ಮತ್ತೆ ಮತ್ತೆ ಕೇಳಬೇಕಾಗಿದೆ. ಬಿಜೆಪಿ ಅಧಿಕಾರದಲ್ಲಿದ್ದಾಗ ಅವರ ಬೆಲೆ ಏರಿಕೆ, ಭ್ರಷ್ಟಾಚಾರಗಳಿಂದ ಬಾಧಿತರಾಗಿದ್ದವರೂ ಕೂಡ ಬಹುಸಂಖ್ಯಾತ ಹಿಂದೂಗಳೇ. ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಮಾಡಿಕೊಂಡಾಗ ಆತನೊಬ್ಬ ಹಿಂದೂ ಎನ್ನುವುದು ಯಾರಿಗೂ ಮುಖ್ಯವಾಗಿರಲಿಲ್ಲ. ಮಂತ್ರಿಗಳು, ಶಾಸಕರ ವಿರುದ್ಧ 40% ಕಮಿಷನ್ ಆರೋಪ ಮಾಡಿ ತಮ್ಮ 80ನೇ ವಯಸ್ಸಲ್ಲಿ ಜೈಲಿಗೆ ಹೋದ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರೂ ಕೂಡ ಓರ್ವ ಹಿಂದೂನೇ. ಆಗಲೂ ಸ್ವಯಂಘೋಷಿತ ಹಿಂದುತ್ವವಾದಿ ಸಂಘಟನೆಗಳು ಅವರ ಪರವಾಗಿ ಬೀದಿಗಿಳಿಯಲಿಲ್ಲ.   

ಅಂದರೆ, ಬಿಜೆಪಿ ಸರ್ಕಾರ ಇದ್ದಾಗ ಎಷ್ಟು ಜನ ಹಿಂದೂಗಳ ಹತ್ಯೆ ನಡೆದರೂ, ಹಿಂದೂಗಳಿಗೆ ಅನ್ಯಾಯವಾದರೂ ಅದು ಅವರಿಗೆ ಮುಖ್ಯ ವಿಷಯ ಅನ್ನಿಸುವುದಿಲ್ಲ. ಕಾಂಗ್ರೆಸ್ ಸರ್ಕಾರವಿದ್ದಾಗ ಇಬ್ಬರು ಹಿಂದೂ ಸ್ನೇಹಿತರೇ ಹೊಡೆದಾಡಿಕೊಂಡು ಸತ್ತರೂ ಅದು ವಿವಾದವಾಗುತ್ತದೆ. ನಡುವೆ ಧರ್ಮದ ವಿಚಾರವನ್ನು ಹುಡುಕಿ ತರಲಾಗುತ್ತದೆ.

ಜನರ ಸಾವನ್ನು ತನ್ನ ರಾಜಕಾರಣಕ್ಕೆ ಬಳಸಿಕೊಳ್ಳುವ ಗುಣ ಬಿಜೆಪಿಗೆ ಮೊದಲಿನಿಂದಲೂ ಕರಗತವಾಗಿದೆ. ಇದನ್ನು ಹಿಂದುತ್ವದ ಪ್ರಯೋಗಶಾಲೆಯಾದ ಕರಾವಳಿಯಲ್ಲಿ ಬಳಸಿ ಯಶಸ್ಸು ಕಂಡ ನಂತರ ರಾಜ್ಯದ ಇತರೆಡೆ ಕೂಡ ವಿಸ್ತರಿಸಲು ಬಿಜೆಪಿ ಶ್ರಮಿಸುತ್ತಿದೆ.

ಸಂವಿಧಾನದತ್ತವಾಗಿ ಅಧಿಕಾರ ಪಡೆದ, ಬಹುಜನರ ಆಶಯಗಳ ಪ್ರತೀಕವಾಗಿ ಸರ್ಕಾರ ರಚನೆ ಮಾಡಿರುವ ಕಾಂಗ್ರೆಸ್ ಈಗ ಕಠೋರವಾಗಿ ವರ್ತಿಸಬೇಕಿದೆ. ಜನರ ಸಾವಿನ ವಿಷಯ ಇಟ್ಟುಕೊಂಡು ಅದನ್ನು ರಾಜಕಾರಣದ ದಾಳವನ್ನಾಗಿ ಬಳಸುವ ಪಕ್ಷಗಳು, ಸಂಘಟನೆಗಳು ಹಾಗೂ ವ್ಯಕ್ತಿಗಳ ಬಗ್ಗೆ ಸರ್ಕಾರವು ನಿರ್ದಾಕ್ಷಿಣ್ಯವಾಗಿ ಹಾಗೂ ಕಠಿಣವಾಗಿ ವರ್ತಿಸಬೇಕು. ಈ ವಿಚಾರದಲ್ಲಿ ದ್ವೇಷ ಭಾಷಣ ಮಾಡುವ ಮುಖಂಡರ ವಿರುದ್ಧ, ಸತ್ಯವನ್ನು ಮರೆಮಾಚಿ ಸುಳ್ಳನ್ನು ಬಿತ್ತುವ ಕೂಗು ಮಾರಿ ಮಾಧ್ಯಮಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಹಾಗೆ ಮಾಡದೇ ಕಾಂಗ್ರೆಸ್ ಮೃದು ಹಿಂದುತ್ವದ ಮೊರೆ ಹೋದರೆ, ಅದರ ಫಲವನ್ನೂ ಎಲ್ಲರೂ ಅನುಭವಿಸಬೇಕಾಗುತ್ತದೆ.  

WhatsApp Image 2025 11 17 at 3.23.18 PM
ಈ ದಿನ ಸಂಪಾದಕೀಯ
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ|ಗುಜರಾತಿನ ದಲಿತರಿಗೆ ಗಗನ ಕುಸುಮವಾಗೇ ಉಳಿದ ನ್ಯಾಯ

ಗುಜರಾತಿನ ಜನಸಂಖ್ಯೆಯಲ್ಲಿ ದಲಿತರ ಪ್ರಮಾಣ ಕಡಿಮೆ. ಶೇ.6.34 ಮಾತ್ರ. ಇಲ್ಲಿ ದಲಿತರಿಗಿಂತ...

ಈ ದಿನ ಸಂಪಾದಕೀಯ | ಮೋದಿಯ ಸಣ್ಣತನವನ್ನು ದೊಡ್ಡತನದಿಂದ ಸೋಲಿಸಿದ ಇರಾನ್‌!

ಇಂಧನ ಭದ್ರತೆಯನ್ನು ಕಾಪಾಡಿಕೊಳ್ಳಲು ಭಾರತದ ಹಡಗುಗಳು ಹಾರ್ಮುಜ್ ಜಲಸಂಧಿಯಿಂದ ಹಾದುಹೋಗಲು ಅವಕಾಶ...

ಈ ದಿನ ಸಂಪಾದಕೀಯ | SIR ಹೆಸರಲ್ಲಿ ಮಹಿಳೆಯರ ಮತದಾನದ ಹಕ್ಕಿನ ಹರಣ ಅಕ್ಷಮ್ಯ

ಕರ್ನಾಟಕದಲ್ಲಿ ಮಹಿಳೆಯರ ಹಕ್ಕುಗಳನ್ನು ರಕ್ಷಿಸುವ ಕೆಲಸ ಆಗಬೇಕಿದೆ. ಎಸ್‌ಐಆರ್‌ ನಡೆಯುವ ಸಮಯದಲ್ಲಿ...

ಈ ದಿನ ಸಂಪಾದಕೀಯ | ಕಾಂಗ್ರೆಸ್ಸಿಗರಿಗೆ ಇಂದಿರಾ ಬೇಕು, ಬಡವರ ಕ್ಯಾಂಟೀನ್ ಬೇಡ

ಶಾಸಕರು, ಸಚಿವರು, ಅಧಿಕಾರಿಗಳು ವಾರಕ್ಕೊಂದು ಸಲವಾದರೂ ಇಂದಿರಾ ಕ್ಯಾಂಟೀನ್‌ನಲ್ಲಿ ಊಟ-ತಿಂಡಿ ಮಾಡಬೇಕಿದೆ....