ಈ ದಿನ ಸಂಪಾದಕೀಯ | ಗೆದ್ದ ಗ್ಯಾರಂಟಿಯನ್ನು ಗೆಲುವನ್ನಾಗಿ ಮಾಡಿಕೊಳ್ಳದ ಮೂರ್ಖರು

Date:

ಶಕ್ತಿ ಯೋಜನೆ ನಾಡಿನ ಮಹಿಳೆಯರಲ್ಲಿ ಉಂಟುಮಾಡಿರುವ ಸಂಚಲನ, ಸ್ವಾವಲಂಬನೆಯನ್ನು,ಧೈರ್ಯಸ್ಥೆಯರ ದಾಪುಗಾಲನ್ನು, ದೇಶದ ಆರ್ಥಿಕ ಚಲನಶೀಲತೆಯನ್ನು- ಹೊಸ ದೃಷ್ಟಿಕೋನದಿಂದ ನೋಡಲು ಸಾಧ್ಯವಾಗದಿದ್ದರೆ ಇವರಿಗಿಂತ ಮೂರ್ಖರು ಮತ್ತೊಬ್ಬರಿಲ್ಲ. ಅಥವಾ ಸರ್ಕಾರ ನಡೆಸಲು ಇವರು ಯೋಗ್ಯರಲ್ಲ

ರಾಜ್ಯದ ಮಹಿಳೆಯರು ಜೂನ್‌ನಿಂದ ಸರ್ಕಾರಿ ಸ್ವಾಮ್ಯದ ಸಾರಿಗೆ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣಿಸಬಹುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಶಕ್ತಿ ಯೋಜನೆಯನ್ನು ಜಾರಿಗೆ ತಂದ ನಂತರ, ದೂರದ ಧಾರವಾಡದಲ್ಲೊಂದು ಘಟನೆ ಜರುಗಿತು. ಧಾರವಾಡದಿಂದ ಸವದತ್ತಿಗೆ ಹೋಗಲು ಬಂದಿದ್ದ ಬಡ ಮುದುಕಿ ನಿಂಗವ್ವರ ಕೈಗೆ ಹೂ ಮತ್ತು ಟಿಕೆಟ್‌ ಕೊಟ್ಟ ಕಂಡಕ್ಟರ್, ‘ಇಂದಿನಿಂದ ಮಹಿಳೆಯರಿಗೆ ಉಚಿತ ಪ್ರಯಾಣ’ ಎಂದಾಗ ಆ ಮುದುಕಿ ನಿಂಗವ್ವ, ಸರ್ಕಾರಿ ಬಸ್ಸಿನ ಮೆಟ್ಟಿಲುಗಳಿಗೆ ಹಣೆ ಹಚ್ಚಿ ನಮಸ್ಕರಿಸಿದ್ದರು.

ಹಾಗೆಯೇ ಮತ್ತೊಂದು ಘಟನೆ, ʼಮಗಳಿಗೆ ಆರಾಮ ಇದ್ದಿಲ್ಲರೀ, ಗದಗದ ದವಾಖಾನೆಗೆ ಕರಕೊಂಡ ಹೋಗದ್ದನ್ರಿ, ಹೋಗಾಕ ರೊಕ್ಕ ಕಡಿಮೆ ಇತ್ತರಿ, ಅದರಲ್ಲೆ ಔಷಧಿ-ಮಾತ್ರೆ ತಗೊಂಡವ್ರಿ, ಬಸ್‌ಗೆ ಹೋಗಾಕ ಟಿಕೆಟ್‌ ಫ್ರೀ ಐತರಿ, ಫ್ರೀ ಮಾಡಿದ್ದು ಭಾಳಾ ಚಲೋ ಆಗೇತ್ರಿ. ಕಷ್ಟದಾಗ ದೇವರು ಕೈ ಹಿಡಿತಾನ ಅಂದ್ರೆ ಇದೇ ನೋಡ್ರಿʼ ಎಂದು ರೋಣ ತಾಲೂಕಿನ ಹೊಸಳ್ಳಿ ಗ್ರಾಮದ ಹುಲಿಗೆಮ್ಮ ಮಾದರ ಹೇಳಿದ್ದರು.

ಇವೆರಡು ಘಟನೆಗಳು ಹಳ್ಳಿಯ ಮುಗ್ಧ ವೃದ್ಧ ಮಹಿಳೆಯರಿಂದ ಆ ಕ್ಷಣಕ್ಕೆ ವ್ಯಕ್ತವಾದ ಸಹಜ ಸಮಾಧಾನದ ಸಂತೃಪ್ತ ಸ್ಪಂದನಗಳು, ಋಣಸಂದಾಯದ ಸಣ್ಣ ಉದಾಹರಣೆಗಳು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಅಕಸ್ಮಾತ್‌, ಈ ಶಕ್ತಿ ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿಯವರು ಜಾರಿಗೆ ತಂದಿದ್ದರೆ, ಈ ಇಬ್ಬರು ವೃದ್ಧ ಮಹಿಳೆಯರ ಮಾತುಗಳನ್ನು ಸುವರ್ಣಾಕ್ಷರಗಳಲ್ಲಿ ಕೆತ್ತಿಸಿ ಇಡುತ್ತಿದ್ದರು. ಅವರನ್ನು ದೆಹಲಿಗೆ ಕರೆಸಿಕೊಂಡು ಸನ್ಮಾನ ಮಾಡುತ್ತಿದ್ದರು. ದೇಶದಾದ್ಯಂತ ಅವರ ಮೆರವಣಿಗೆ ಮಾಡಿ ಮೆರೆಸುತ್ತಿದ್ದರು. ಮೋದಿ ಎಂದರೆ ಮಹಿಳೆ ಎಂದು ಸಾರುತ್ತಿದ್ದರು. ಮುಂದುವರೆದು ನೆಹರೂ-ಇಂದಿರಾ ಗಾಂಧಿಗಳೇನು ಮಾಡಿದ್ದರು, ಮೋದಿ ಮಾಡಿದ್ದು ಎಲ್ಲ ಎಂದು ಇತಿಹಾಸವನ್ನೇ ತಿದ್ದಿ ಬರೆದುಕೊಳ್ಳುತ್ತಿದ್ದರು. ಇನ್ನು ʼಗೋಧಿʼ ಬಿಸ್ಕತ್‌ ತಿಂದ ಪತ್ರಕರ್ತರು ವೃದ್ಧ ಮಹಿಳೆಯರ ಸಹಜ ಸಂತಸಕ್ಕೆ ಹೊಸ ವ್ಯಾಖ್ಯಾನ ಬರೆಯುತ್ತಿದ್ದರು, ಮೋದಿಗೆ ಪದಪುಂಜಗಳನ್ನು ಪೋಣಿಸಿ ಪ್ರಚಾರ ಕೊಟ್ಟು ಅಟ್ಟಕ್ಕೇರಿಸುತ್ತಿದ್ದರು. ದೇಶದ ಮಹಿಳೆಯ ಮತಗಳು ಮೋದಿ ಮಡಿಲಿನಲ್ಲಿರುವಂತೆ ನೋಡಿಕೊಳ್ಳುತ್ತಿದ್ದರು.

ಆದರೆ ಕಾಂಗ್ರೆಸ್‌ ಸರ್ಕಾರ, ಗೆದ್ದ ಗ್ಯಾರಂಟಿಯನ್ನು ಗೆಲುವನ್ನಾಗಿ ಮಾಡಿಕೊಳ್ಳಲಾಗದ ಮುಖೇಡಿಯಂತೆ ವರ್ತಿಸುತ್ತಿದೆ. ಇದು ನಮ್ಮ ನಾಯಕಿ ಇಂದಿರಾ ಗಾಂಧಿಯವರು ಗರೀಬಿ ಹಠಾವೋ ಯೋಜನೆಯ ಮುಂದುವರೆದ ಭಾಗ ಎಂದು ತಣ್ಣಗಿದೆ. ಜನಪರ ಸರ್ಕಾರವೊಂದು ಮಾಡಬೇಕಾದ ಕೆಲಸವೆಂದು ಸುಮ್ಮನಿರಬಹುದು, ಆದರೆ ಆ ಯೋಜನೆ ನಾಡಿನ ಮಹಿಳೆಯರಲ್ಲಿ ಉಂಟುಮಾಡಿರುವ ಸಂಚಲನ, ಸ್ವಾವಲಂಬನೆಯನ್ನು ಕಂಡೂ ಕಾಣದಂತಿರಲಾದೀತೇ? ಮಹಿಳೆಯ ಕೈಗೆ ಬಂದ ಹಣದಿಂದ ಧೈರ್ಯಸ್ಥೆಯ ದಾಪುಗಾಲನ್ನು, ದೇಶದ ಆರ್ಥಿಕ ಚಲನಶೀಲತೆಯನ್ನು- ಹೊಸ ದೃಷ್ಟಿಕೋನದಿಂದ ನೋಡಲು ಸಾಧ್ಯವಾಗದಿದ್ದರೆ; ಅದನ್ನು ಪಕ್ಷದ ಪರವಾದ ಅಲೆಯನ್ನಾಗಿ ಪರಿವರ್ತಿಸಿಕೊಳ್ಳಲಾಗದಿದ್ದರೆ; ಅದು ನಮ್ಮ ಪಕ್ಷದ ಸಾಧನೆ ಎಂದು ಎದೆ ತಟ್ಟಿ ಹೇಳಿಕೊಳ್ಳಲಾಗದಿದ್ದರೆ; ಇವರಿಗಿಂತ ಮೂರ್ಖರು ಮತ್ತೊಬ್ಬರಿಲ್ಲ. ಅಥವಾ ಸರ್ಕಾರ ನಡೆಸಲು ಯೋಗ್ಯರಲ್ಲ.

ಇಲ್ಲಿ ಕೊಂಚ ಮೈಚಳಿ ಬಿಟ್ಟವರು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಾತ್ರ. ʼಶಕ್ತಿ ಯೋಜನೆಯಿಂದ ರಾಜ್ಯ ರಸ್ತೆ ಸಾರಿಗೆ ನಿಗಮದಲ್ಲಿ ಪ್ರಯಾಣಿಕರ ಸಂಖ್ಯೆ ಶೇಕಡ 15 ರಷ್ಟು ಹೆಚ್ಚಾಗಿದೆ. ಪ್ರಯಾಣಿಕರಿಗೆ ಉತ್ತಮ ಸೇವೆ ಒದಗಿಸಲು ಅನುವಾಗುವಂತೆ, ಪ್ರಸಕ್ತ ಆಯವ್ಯಯದಲ್ಲಿ ಹೊಸ ಬಸ್‌ಗಳ ಖರೀದಿಗೆ 500 ಕೋಟಿ ರೂಪಾಯಿ ಒದಗಿಸಲಾಗಿದೆʼ ಎಂದಿದ್ದಾರೆ. ತಮ್ಮ ಸಾಧನೆಯನ್ನು ತಾವೇ ಸಾರಿಕೊಳ್ಳುವುದು ಸರಿಯಲ್ಲವೆಂದು ಅಷ್ಟಕ್ಕೇ ಸುಮ್ಮನಾಗಿದ್ದಾರೆ.

ಆದರೆ, ಮಾತನಾಡಬೇಕಾದ ಮಾಧ್ಯಮಗಳು ಮಾತನಾಡುತ್ತಿಲ್ಲ. ತಮ್ಮ ಖಾತೆಯ ಗೆಲುವನ್ನು ಬೇರೊಂದು ಹಂತಕ್ಕೆ ಕೊಂಡೊಯ್ಯಬೇಕಾದ ಹುಮ್ಮಸ್ಸು ಸಾರಿಗೆ ಸಚಿವ ರಾಮಲಿಂಗಾರೆಡ್ಡಿಯವರಲ್ಲಿ ಕಾಣುತ್ತಿಲ್ಲ. ಮಾಧ್ಯಮಗಳಿಗೆ ಒಂದು ಪುಟದ ಜಾಹೀರಾತು ನೀಡಿದರೆ, ಅದಷ್ಟೇ ಸಾಧನೆಯಲ್ಲ. ಇನ್ನು ಕಾಂಗ್ರೆಸ್‌ ಪಕ್ಷದವರಿಗೆ ಇದು ತಮ್ಮ ಪಕ್ಷದ ಸಾಧನೆ ಎಂದು ಅನ್ನಿಸುತ್ತಲೇ ಇಲ್ಲ. ಅದನ್ನು ಮತಗಳನ್ನಾಗಿ ಪರಿವರ್ತಿಸಿಕೊಳ್ಳುವ ಮುತ್ಸದ್ದಿಗಳೂ ಕಾಣುತ್ತಿಲ್ಲ.

ಬದಲಿಗೆ ಪಕ್ಷ ಅಧಿಕಾರಕ್ಕೆ ಬಂದಿದೆ, ಏನಾದರೂ ಮಾಡಿ, ಹೇಗಾದರೂ ಮಾಡಿ ಅಧಿಕಾರಕ್ಕೇರಬೇಕು. ಆದಷ್ಟು ಬೇಗ ವರ್ಗಾವಣೆಯೋ ಮತ್ತೊಂದೋ ಮಾಡಿ ಬಾಚಿ ಬಳಿಯಬೇಕು, ಅದನ್ನೇ ಚೆಲ್ಲಿ ಚುನಾವಣೆ ಗೆಲ್ಲಬೇಕು, ಹೈಕಮಾಂಡನ್ನು ಹೈಕ್ಲಾಸಾಗಿ ನೋಡಿಕೊಳ್ಳಬೇಕು ಎಂಬುದಷ್ಟೇ ಕಾಣುತ್ತಿದೆ.

ಇದರ ಜೊತೆಗೆ ಕಾಂಗ್ರೆಸ್ಸಿಗರ ಗುಂಪುಗಾರಿಕೆ, ಜಾತಿಜಗಳ, ಬಂಡಾಯ, ಅಸಮಾಧಾನ, ಕಾಲೆಳೆಯುವಿಕೆ ತಾರಕಕ್ಕೇರುತ್ತಿದೆ. ಮಂತ್ರಿಗಳು ಇಪ್ಪತ್ತು ವರ್ಷದ ಹಿಂದಿನ ಕಾಂಗ್ರೆಸ್ ಸರ್ಕಾರದ ಮಂತ್ರಿಗಳಂತೆ ಕಾಣುತ್ತಿದ್ದಾರೆ. ಕೆಲವರು ಕುರ್ಚಿಯಲ್ಲಿ ಕೂತು ತೂಕಡಿಸುತ್ತಿದ್ದಾರೆ. ನಾಲ್ಕೈದು ಮಂತ್ರಿಗಳಷ್ಟೇ ಹೊಣೆಯರಿತು ಬದಲಾವಣೆ ತರಲು ಯತ್ನಿಸುತ್ತಿದ್ದಾರೆ.

ಗ್ಯಾರಂಟಿಗಳಾಚೆ ಉಳಿಯುವ ಹಣದಲ್ಲಿ ಮಾಡಬಹುದಾದ ಇತರ ಅಭಿವೃದ್ಧಿ ಕ್ರಮಗಳ ಮೇಲೆ ಎಲ್ಲರ ಗಮನವಿಲ್ಲ. ಹಣದ ಅಗತ್ಯವಿಲ್ಲದ ನೂರಾರು ಕ್ರಮಗಳನ್ನು, ಇರುವ ಹಣವನ್ನೇ ಸದ್ವಿನಿಯೋಗ ಮಾಡುವ ನೂರಾರು ದಾರಿಗಳನ್ನು ಹುಡುಕಬೇಕಾದ್ದು ಇಡೀ ಸಂಪುಟದ ಕರ್ತವ್ಯವೆಂದು ಭಾವಿಸುತ್ತಿಲ್ಲ. ಅದಕ್ಕೆ ಬೇಕಾದ ನಾಯಕತ್ವ ಕೊಡುವ ಅನುಭವವುಳ್ಳ ಸಿಎಂ ಮೈಕೊಡವಿ ಏಳುತ್ತಿಲ್ಲ.

ಬೆಂಕಿ ಹಚ್ಚುವ ಬಿಜೆಪಿ ಬೇಡವೆಂದು ಕಾಂಗ್ರೆಸ್ ಆರಿಸಿ ಕಳಿಸಿದ ನಾಡಿನ ಜನತೆ, ಕೇವಲ ಆರು ತಿಂಗಳು ಕಳೆಯುವುದರೊಳಗೆ ಹತಾಶೆ, ಬೇಸರ, ಜಿಗುಪ್ಸೆಗೆ ಜಾರುವಂತಾಗಿದೆ. ಕಾಂಗ್ರೆಸ್ ಪಕ್ಷದ ಆಡಳಿತದಿಂದ ದೊಡ್ಡದೇನನ್ನೂ ನಿರೀಕ್ಷೆ ಮಾಡದಂತಹ ಸನ್ನಿವೇಶ ಸೃಷ್ಟಿಯಾಗಿದೆ. ಇದು ಹೀಗೆಯೇ ಮುಂದುವರೆದರೆ, ಬಡವರ ಸಿಟ್ಟಿಗೆ ಕಾಂಗ್ರೆಸ್ ಸುಟ್ಟು ಕರಕಲಾಗುವುದು ಖಂಡಿತ, ಎನ್ನಲಾಗುತ್ತಿದೆ.

WhatsApp Image 2025 11 17 at 3.23.18 PM
ಈ ದಿನ ಸಂಪಾದಕೀಯ
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ|ಗುಜರಾತಿನ ದಲಿತರಿಗೆ ಗಗನ ಕುಸುಮವಾಗೇ ಉಳಿದ ನ್ಯಾಯ

ಗುಜರಾತಿನ ಜನಸಂಖ್ಯೆಯಲ್ಲಿ ದಲಿತರ ಪ್ರಮಾಣ ಕಡಿಮೆ. ಶೇ.6.34 ಮಾತ್ರ. ಇಲ್ಲಿ ದಲಿತರಿಗಿಂತ...

ಈ ದಿನ ಸಂಪಾದಕೀಯ | ಮೋದಿಯ ಸಣ್ಣತನವನ್ನು ದೊಡ್ಡತನದಿಂದ ಸೋಲಿಸಿದ ಇರಾನ್‌!

ಇಂಧನ ಭದ್ರತೆಯನ್ನು ಕಾಪಾಡಿಕೊಳ್ಳಲು ಭಾರತದ ಹಡಗುಗಳು ಹಾರ್ಮುಜ್ ಜಲಸಂಧಿಯಿಂದ ಹಾದುಹೋಗಲು ಅವಕಾಶ...

ಈ ದಿನ ಸಂಪಾದಕೀಯ | SIR ಹೆಸರಲ್ಲಿ ಮಹಿಳೆಯರ ಮತದಾನದ ಹಕ್ಕಿನ ಹರಣ ಅಕ್ಷಮ್ಯ

ಕರ್ನಾಟಕದಲ್ಲಿ ಮಹಿಳೆಯರ ಹಕ್ಕುಗಳನ್ನು ರಕ್ಷಿಸುವ ಕೆಲಸ ಆಗಬೇಕಿದೆ. ಎಸ್‌ಐಆರ್‌ ನಡೆಯುವ ಸಮಯದಲ್ಲಿ...

ಈ ದಿನ ಸಂಪಾದಕೀಯ | ಕಾಂಗ್ರೆಸ್ಸಿಗರಿಗೆ ಇಂದಿರಾ ಬೇಕು, ಬಡವರ ಕ್ಯಾಂಟೀನ್ ಬೇಡ

ಶಾಸಕರು, ಸಚಿವರು, ಅಧಿಕಾರಿಗಳು ವಾರಕ್ಕೊಂದು ಸಲವಾದರೂ ಇಂದಿರಾ ಕ್ಯಾಂಟೀನ್‌ನಲ್ಲಿ ಊಟ-ತಿಂಡಿ ಮಾಡಬೇಕಿದೆ....