ಈ ದಿನ ಸಂಪಾದಕೀಯ | ಪ್ರಧಾನಿಯನ್ನಾಗಿಸಿದ ಹಾಸನಕ್ಕೆ ಗೌಡರು ಕೊಟ್ಟ ಉಜ್ವಲ ಕೊಡುಗೆ ಈ ಪ್ರಜ್ವಲ

Date:

ಹರದನಹಳ್ಳಿಯ ಕಡು ಬಡತನದ ಕೃಷಿ ಕುಟುಂಬದಿಂದ ಬಂದ ಎಚ್.ಡಿ. ದೇವೇಗೌಡರನ್ನು, ಹಾಸನ ಜಿಲ್ಲೆಯ ಜನ ಆರಾಧಿಸಿದ್ದರು. ಆರು ಬಾರಿ ಶಾಸಕರನ್ನಾಗಿ, ಐದು ಬಾರಿ ಸಂಸದರನ್ನಾಗಿ ಆರಿಸಿ ಮೆರೆಸಿದ್ದರು. ರಾಷ್ಟ್ರದ ಅತ್ಯುನ್ನತ ಸ್ಥಾನವಾದ ಪ್ರಧಾನಿ ಹುದ್ದೆಯಲ್ಲಿ ಕೂರಿಸಿ, ಜಿಲ್ಲೆಯ ಹೆಮ್ಮೆ ಎಂದು ಭಾವಿಸಿದ್ದರು. ಇಂತಹ ಹಾಸನ ಜಿಲ್ಲೆಗೆ ಗೌಡರು ಕೊಟ್ಟ ಕೊಡುಗೆ ಏನು?

ಹಾಸನದ ಸಂಸದ ಪ್ರಜ್ವಲ್ ರೇವಣ್ಣನವರ ಲೈಂಗಿಕ ಹಗರಣ, ದಿನ ಕಳೆದಂತೆ ದಾರಿ ತಪ್ಪುತ್ತಿದೆ. ರಾಜಕೀಯ ಪಕ್ಷಗಳು ಈ ಗಂಭೀರ ಪ್ರಕರಣವನ್ನು ಕೂಡ ಚುನಾವಣೆಯ ವಸ್ತುವನ್ನಾಗಿಸಿಕೊಂಡು, ಆರೋಪ-ಪ್ರತ್ಯಾರೋಪದಲ್ಲಿ ನಿರತವಾಗಿವೆ. ಕೊಚ್ಚೆಯಲ್ಲಿ ಮೀನು ಹಿಡಿಯುವ ಕೆಲಸ ಮಾಡುತ್ತಿವೆ.

ಲೈಂಗಿಕ ಪ್ರಕರಣದ ಮುಖ್ಯ ಆರೋಪಿ ಪ್ರಜ್ವಲ್ ರೇವಣ್ಣ ದೇಶದಿಂದ ಪಲಾಯನ ಮಾಡಿದ್ದಾರೆ. ಇದಕ್ಕೆ ಉತ್ತರಿಸಬೇಕಾದ ಹೊಳೆನರಸೀಪುರದ ಜೆಡಿಎಸ್ ಶಾಸಕ ಎಚ್.ಡಿ. ರೇವಣ್ಣ ಕೈಗೆ ಸಿಗುತ್ತಿಲ್ಲ. ಪ್ರಜ್ವಲ್ ಪ್ರಕರಣ ಕುರಿತು ಮಾತನಾಡಲು ಮಾಜಿ ಪ್ರಧಾನಿ ದೇವೇಗೌಡರ ಕುಟುಂಬದಿಂದ ಯಾರೊಬ್ಬರೂ ಮುಂದೆ ಬರುತ್ತಿಲ್ಲ, ತುಟಿಬಿಚ್ಚುತ್ತಿಲ್ಲ. ಚುನಾವಣಾ ಸಮಯವಾದ್ದರಿಂದ ಸಾರ್ವಜನಿಕವಾಗಿ ಕಾಣಿಸಿಕೊಳ್ಳಲೇಬೇಕಾದ ಅನಿವಾರ್ಯತೆಗೆ ಬಿದ್ದ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸಲಾಗದೆ ಮುಜುಗರಕ್ಕೆ ಒಳಗಾಗುತ್ತಿದ್ದಾರೆ. ಕೆಲವು ಸಲ ಸಿಟ್ಟಿನಿಂದ ವಿರೋಧ ಪಕ್ಷಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಪ್ರಜ್ವಲ್ ಲೈಂಗಿಕ ದೌರ್ಜನ್ಯ ಯಾರೂ ಒಪ್ಪದ, ಸಹಿಸದ, ಪರ ವಹಿಸಿ ಮಾತನಾಡಲಾಗದ ಕೊಳಕು ಕೃತ್ಯ. ಈ ಕೃತ್ಯ ಮಾಜಿ ಪ್ರಧಾನಿ ದೇವೇಗೌಡರ ಕುಟುಂಬಪ್ರೀತಿಯ ಫಲವಲ್ಲವೇ?

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಹರದನಹಳ್ಳಿಯ ಕಡು ಬಡತನದ ಕೃಷಿ ಕುಟುಂಬದಿಂದ ಬಂದ ಎಚ್.ಡಿ. ದೇವೇಗೌಡರನ್ನು, ಹಾಸನ ಜಿಲ್ಲೆಯ ಜನ ಆರಾಧಿಸಿದ್ದರು. ಆರು ಬಾರಿ ಶಾಸಕರನ್ನಾಗಿ, ಐದು ಬಾರಿ ಸಂಸದರನ್ನಾಗಿ ಆರಿಸಿ ಮೆರೆಸಿದ್ದರು. ರಾಷ್ಟ್ರದ ಅತ್ಯುನ್ನತ ಸ್ಥಾನವಾದ ಪ್ರಧಾನಿ ಹುದ್ದೆಯಲ್ಲಿ ಕೂರಿಸಿ, ಜಿಲ್ಲೆಯ ಹೆಮ್ಮೆ ಎಂದು ಭಾವಿಸಿದ್ದರು.

ಇಂತಹ ಹಾಸನ ಜಿಲ್ಲೆಗೆ ಗೌಡರು ಕೊಟ್ಟ ಕೊಡುಗೆ ಏನು?

1962ರಿಂದ 1985ರವರೆಗೆ, 6 ಸಲ ಶಾಸಕರಾಗಿ ಗೆದ್ದು ಪ್ರಭಾವಿ ನಾಯಕರಾಗಿ ಹೊರಹೊಮ್ಮಿದ್ದ ಗೌಡರು, ತಮ್ಮನ್ನು ನಿರಂತರವಾಗಿ ಗೆಲ್ಲಿಸಿದ ಕಾರ್ಯಕರ್ತರನ್ನು ಕಡೆಗಣಿಸಿದರು. ವಂಶಪಾರಂಪರ್ಯ ರಾಜಕಾರಣಕ್ಕೆ ಮಣೆ ಹಾಕಿ, ಎಸ್ಎಸ್ಎಲ್‌ಸಿ ಫೇಲಾದ ಪುತ್ರ ರೇವಣ್ಣನವರಿಗೆ ಹೊಳೆನರಸೀಪುರ ಕ್ಷೇತ್ರವನ್ನು 1994ರಲ್ಲಿ ಬಳುವಳಿಯಾಗಿ ಕೊಟ್ಟರು. ರೇವಣ್ಣ ಗೆದ್ದು ಶಾಸಕರಾಗಿ ವಿಧಾನಸೌಧದ ಮೆಟ್ಟಿಲು ಹತ್ತುತ್ತಿದ್ದಂತೆಯೇ, ಗೌಡರು ಮುಖ್ಯಮಂತ್ರಿ ಕುರ್ಚಿಯಲ್ಲಿ ಕೂತಿದ್ದರು. ರಾಜ್ಯದ ನೀತಿ ನಿರೂಪಣೆಯಲ್ಲಿ ನಿರ್ಣಾಯಕ ಪಾತ್ರ ವಹಿಸುವ ಐಎಎಸ್, ಐಪಿಎಸ್‌ಗಳಂಥ ಉನ್ನತ ಅಧಿಕಾರಿಗಳು ರೇವಣ್ಣರಿಗೆ ಎದ್ದು ನಿಂತು ನಮಸ್ಕರಿಸತೊಡಗಿದರು.

1996ರಲ್ಲಿ ದೇವೇಗೌಡರು ಪ್ರಧಾನಿಗಳಾಗುತ್ತಿದ್ದಂತೆ, ಅಧಿಕಾರ ತರುವ ಅವಕಾಶಗಳನ್ನು ಕಂಡ ರೇವಣ್ಣ, ನಾವು ಜನರನ್ನು ಆಳಲಿಕ್ಕೆ ಹುಟ್ಟಿರುವವರು ಎಂಬ ಅಹಂಕಾರಕ್ಕೆ ಒಳಗಾದರು. ಮೂರನೇ ಬಾರಿಗೆ ಶಾಸಕರಾಗಿ ಗೆಲ್ಲುತ್ತಿದ್ದಂತೆ, 2004ರಲ್ಲಿ ಲೋಕೋಪಯೋಗಿ ಸಚಿವರಾದರು. 2006ರಲ್ಲಿ ಸಹೋದರ ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾದಾಗ, ರೇವಣ್ಣನವರೇ ಅನಧಿಕೃತ ಸಿಎಂ ಆದರು. ಸಾವಿರಾರು ಕೋಟಿ ರೂಪಾಯಿಗಳ ಅನುದಾನವನ್ನು ಹಾಸನಕ್ಕೆ ಹರಿಸಿ, ಅಭಿವೃದ್ಧಿಯ ಹರಿಕಾರ ಎನಿಸಿಕೊಂಡರು. 1994ರಿಂದ 2024ರವರೆಗೆ, ಕೇವಲ 30 ವರ್ಷಗಳ ಅಂತರದಲ್ಲಿ ಪ್ರಭಾವಿ ರಾಜಕಾರಣಿಯಾಗಿ ಬೆಳೆದರು, ಭಾರೀ ಶ್ರೀಮಂತರ ಪಟ್ಟಿಗೆ ಸೇರಿಹೋದರು.

ಪ್ರಜೆಗಳು, ಪ್ರಜಾಪ್ರಭುತ್ವ, ಸಂವಿಧಾನ, ನೆಲದ ಕಾನೂನು, ಉತ್ತರದಾಯಿತ್ವದ ಬಗ್ಗೆ ಪುತ್ರ ರೇವಣ್ಣರಿಗೆ ತಿಳಿ ಹೇಳಬೇಕಾದ ದೇವೇಗೌಡರು, ಪುತ್ರನ ಬೆಳವಣಿಗೆ ಕಂಡು ಬೆರಗಾದರು. ರೇವಣ್ಣನವರ ಮಡದಿ ಭವಾನಿ, ಪುತ್ರ ಪ್ರಜ್ವಲ್ ಮತ್ತು ಸೂರಜ್ ರಾಜಕಾರಣಕ್ಕಿಳಿದು, ಹಾಸನ ಜಿಲ್ಲೆಯನ್ನು ಹಿಡಿತಕ್ಕೆ ತೆಗೆದುಕೊಂಡಾಗ, ಸರಿ ಎಂದರು. ವಿರೋಧ ಪಕ್ಷವಿಲ್ಲದಂತೆ ಮಾಡಿ, ವಿರುದ್ಧ ಮಾತನಾಡಿದವರನ್ನು ಮಟ್ಟಹಾಕಿ, ಕುಟುಂಬದವರಿಗೇ ಕುರ್ಚಿ ಕಲ್ಪಿಸಿಕೊಟ್ಟಾಗ, ಕಣ್ಮುಚ್ಚಿ ಕೂತರು.

ಇದನ್ನು ಓದಿದ್ದೀರಾ?: ಗುಜರಾತಿನ ವ್ಯಾಪಾರಿಗಳ ಕೈಗೆ ಕೋಲು: ಇದಲ್ಲವೇ ದೇವೇಗೌಡರ ದುರಂತ?

ರಾಜ್ಯದಲ್ಲಿ ಯಾವುದೇ ಪಕ್ಷ ಅಧಿಕಾರದಲ್ಲಿರಲಿ, ಹಾಸನ ಸಾಮ್ರಾಜ್ಯಕ್ಕೆ ರೇವಣ್ಣರೇ ಸಾಮಂತರಾದರು. ಅಪ್ಪ ಮತ್ತು ತಾತ ಕಟ್ಟಿದ್ದ ಹಾಸನವೆಂಬ ಭದ್ರಕೋಟೆಗೆ 2019ರಲ್ಲಿ, ಕೇವಲ 29ರ ಹರೆಯದ ಪ್ರಜ್ವಲ್ ಸಂಸದನಾಗಿ ಆಯ್ಕೆಯಾಗುವ ಮೂಲಕ ಮರಿ ಮಹಾರಾಜನಾದ.

ಹುಟ್ಟುತ್ತಲೇ ಬೆಳ್ಳಿ ಚಮಚ ಬಾಯಲ್ಲಿಟ್ಟುಕೊಂಡ ಬಂದ ಪ್ರಜ್ವಲ್‌ಗೆ ಹಸಿವು, ಅವಮಾನ, ಬಡತನದ ಬದುಕೇ ಗೊತ್ತಿಲ್ಲ. ಜೊತೆಗೆ ದೇಶದ ಶಾಸಕಾಂಗ, ನ್ಯಾಯಾಂಗ ಮತ್ತು ಕಾರ್ಯಾಂಗದ ಬಗ್ಗೆ ಭಯವಿಲ್ಲ. ಪತ್ರಿಕಾಂಗವೂ ಪ್ರಶ್ನಿಸುತ್ತಿಲ್ಲ. ಅಧಿಕಾರ, ಹಣ ಮತ್ತು ಜಾತಿ ಮದವೇರಿ, ಅಸಹಾಯಕ ಹೆಣ್ಣುಮಕ್ಕಳನ್ನು ದುರುಪಯೋಗಪಡಿಸಿಕೊಂಡರೂ, ಯಾರೂ ಕೇಳಲಿಲ್ಲ.

ಇದೆಲ್ಲವೂ ಗೊತ್ತಿದ್ದ ದೇವೇಗೌಡರು ಪ್ರಜ್ವಲ್ ಕರೆದು ಕಿವಿಹಿಂಡಲಿಲ್ಲ. ಅಭ್ಯರ್ಥಿಯಾಗಬೇಡ ಎಂದು ಹೇಳಲಿಲ್ಲ.

ರಾಷ್ಟ್ರಪಿತ ಮಹಾತ್ಮಾ ಗಾಂಧಿ, ‘ನಾನು ಹತಾಶನಾದಾಗಲೆಲ್ಲ ಒಂದನ್ನು ಜ್ಞಾಪಿಸಿಕೊಳ್ಳುತ್ತೇನೆ- ಈ ಜಗತ್ತಿನಲ್ಲಿ ಸತ್ಯ ಮತ್ತು ಪ್ರೀತಿ ಎರಡೇ ಗೆಲ್ಲುವುದು. ಕೊಲೆಗಡುಕರು, ಪಾಪಿಗಳು ಅಜೇಯರಂತೆ ಕಾಣಬಹುದು. ಕೊನೆಗೊಂದು ದಿನ ನಾಶವಾಗುತ್ತಾರೆ. ಈ ಬಗ್ಗೆ ಚಿಂತಿಸು’ ಎಂದಿದ್ದಾರೆ.

WhatsApp Image 2025 11 17 at 3.23.18 PM
ಈ ದಿನ ಸಂಪಾದಕೀಯ
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ|ಗುಜರಾತಿನ ದಲಿತರಿಗೆ ಗಗನ ಕುಸುಮವಾಗೇ ಉಳಿದ ನ್ಯಾಯ

ಗುಜರಾತಿನ ಜನಸಂಖ್ಯೆಯಲ್ಲಿ ದಲಿತರ ಪ್ರಮಾಣ ಕಡಿಮೆ. ಶೇ.6.34 ಮಾತ್ರ. ಇಲ್ಲಿ ದಲಿತರಿಗಿಂತ...

ಈ ದಿನ ಸಂಪಾದಕೀಯ | ಮೋದಿಯ ಸಣ್ಣತನವನ್ನು ದೊಡ್ಡತನದಿಂದ ಸೋಲಿಸಿದ ಇರಾನ್‌!

ಇಂಧನ ಭದ್ರತೆಯನ್ನು ಕಾಪಾಡಿಕೊಳ್ಳಲು ಭಾರತದ ಹಡಗುಗಳು ಹಾರ್ಮುಜ್ ಜಲಸಂಧಿಯಿಂದ ಹಾದುಹೋಗಲು ಅವಕಾಶ...

ಈ ದಿನ ಸಂಪಾದಕೀಯ | SIR ಹೆಸರಲ್ಲಿ ಮಹಿಳೆಯರ ಮತದಾನದ ಹಕ್ಕಿನ ಹರಣ ಅಕ್ಷಮ್ಯ

ಕರ್ನಾಟಕದಲ್ಲಿ ಮಹಿಳೆಯರ ಹಕ್ಕುಗಳನ್ನು ರಕ್ಷಿಸುವ ಕೆಲಸ ಆಗಬೇಕಿದೆ. ಎಸ್‌ಐಆರ್‌ ನಡೆಯುವ ಸಮಯದಲ್ಲಿ...

ಈ ದಿನ ಸಂಪಾದಕೀಯ | ಕಾಂಗ್ರೆಸ್ಸಿಗರಿಗೆ ಇಂದಿರಾ ಬೇಕು, ಬಡವರ ಕ್ಯಾಂಟೀನ್ ಬೇಡ

ಶಾಸಕರು, ಸಚಿವರು, ಅಧಿಕಾರಿಗಳು ವಾರಕ್ಕೊಂದು ಸಲವಾದರೂ ಇಂದಿರಾ ಕ್ಯಾಂಟೀನ್‌ನಲ್ಲಿ ಊಟ-ತಿಂಡಿ ಮಾಡಬೇಕಿದೆ....