ಈ ದಿನ ಸಂಪಾದಕೀಯ | ‘ಅಗ್ನಿವೀರ’ ಯೋಜನೆ ಟೊಳ್ಳೆಂದು ಸಾರಿದೆ ಇಸ್ರೇಲ್ ಯುದ್ಧ!

Date:

ಅಗ್ನಿವೀರರ ನೇಮಕ ಕುರಿತು ಮಿಲಿಟರಿ ತಜ್ಞರು ಈ ಕ್ರಮದ ಕುರಿತು ಆಶ್ಚರ್ಯಾಘಾತ ಪ್ರಕಟಿಸಿದ್ದರು. ಮಿಲಿಟರಿ ನೇಮಕಾತಿಯನ್ನು ಮಾತ್ರವಲ್ಲದೆ ಯೋಧನೊಬ್ಬ ಹೇಗಿರಬೇಕೆಂಬ ಮಿಲಿಟರಿ ಗೊತ್ತುಗುರಿಗಳನ್ನೇ ಈ ಯೋಜನೆ ಬುಡಮೇಲು ಮಾಡಲಿದೆ ಎಂಬುದು ಅವರ ಆತಂಕವಾಗಿತ್ತು.


‘ಹಾರೆಟ್ಜ್’
ಎಂಬುದು ನೂರು ವರ್ಷಗಳಿಗೂ ಹೆಚ್ಚು ಹಳೆಯದಾದ ಇಸ್ರೇಲಿ ಪತ್ರಿಕೆ. ಇಂಗ್ಲಿಷ್ ಮತ್ತು ಹೀಬ್ರೂ ಭಾಷೆಯಲ್ಲಿ ಪ್ರಕಟವಾಗುತ್ತದೆ. ಕೆಲ ದಿನಗಳ ಹಿಂದೆ ಈ ಪತ್ರಿಕೆ ವಿಶೇಷ ವರದಿಯೊಂದನ್ನು ಮುಖಪುಟದಲ್ಲಿ ಪ್ರಧಾನವಾಗಿ ಪ್ರಕಟಿಸಿತು. ತಲೆಬರೆಹದ ಕನ್ನಡ ಅನುವಾದ ಹೀಗಿದೆ- ಇಸ್ರೇಲು ಕಾವಲು ಬತೇರಿಯಲ್ಲಿ ವರ್ಷಗಟ್ಟಲೆ ಮಲಗಿ ನಿದ್ರಿಸುತ್ತಿತ್ತು; ಆಗ ಸ್ಫೋಟಿಸಿತು ಸಂಘರ್ಷ. ಇದೇ ಅಕ್ಟೋಬರ್ ಏಳರಂದು ಇಸ್ರೇಲ್ ಮೇಲೆ ಕ್ಷಿಪಣಿಗಳ ಮಳೆಗರೆದಿತ್ತು ಹಮಾಸ್. 1200ರಿಂದ 1500ರಷ್ಟು ಹಮಾಸ್ ಯೋಧರು ಗಾಝಾದಿಂದ ಹನ್ನೆರಡು ತಾವುಗಳಲ್ಲಿ ಇಸ್ರೇಲಿಗೆ ನುಗ್ಗಿ ತಾಸುಗಟ್ಟಲೆ ಅಲ್ಲಿ ದಾಳಿನಿರತರಾಗಿದ್ದರು. ಇಸ್ರೇಲ್ ಸೈನ್ಯ ಅಸಹಾಯಕವಾಗಿತ್ತು.

ಪ್ರಪಂಚದಲ್ಲೇ ಅತ್ಯಧಿಕ ಮಾನಸಮ್ಮಾನ ಗಳಿಸಿದ್ದ ಸೇನೆ ಇಸ್ರೇಲಿನದು. ಅದರ ಕಣ್ಗಾವಲು, ವಿಚಕ್ಷಣೆ, ಶಕ್ತಿ ಸಾಮರ್ಥ್ಯಗಳು ಬೆರಗು ಬಡಿಸುವ ಎಚ್ಚರ ಮತ್ತು ಕಾರ್ಯದಕ್ಷತೆಗೆ ಇತ್ತೀಚಿನ ತನಕ ಹೆಸರಾಗಿದ್ದವು. ನಿದ್ರಿಸುತ್ತಿದ್ದಾಗಲೂ ಎಚ್ಚರವಿರುತ್ತದೆಂದು ಎಂದು ಇಸ್ರೇಲಿ ಸೇನೆಯನ್ನು ಬಣ್ಣಿಸಲಾಗುತ್ತಿತ್ತು. ಇಸ್ರೇಲಿ ಬೇಹುಗಾರಿಕೆ ಸಂಸ್ಥೆ ಮೊಸಾದ್‌ ಗೂ ಇವೇ ಮಾತುಗಳು ಅನ್ವಯಿಸುತ್ತಿದ್ದವು. ಇತ್ತೀಚಿನ ಹಮಾಸ್ ದಾಳಿ ಈ ಮಿಥ್ಯೆಯ ಗುಳ್ಳೆಯನ್ನು ಒಡೆದಂತೆ ತೋರುತ್ತಿದೆ. ತನ್ನ ಮೇಲೆ ಪ್ರಯೋಗಿಸಲಾಗುವ ಶೇ.90ರಷ್ಟು ಕ್ಷಿಪಣಿಗಳು ಭೂಸ್ಪರ್ಶ ಮಾಡಲು ಬಿಡದೆ ಅಂತರಿಕ್ಷದಲ್ಲೇ ಹೊಡೆದು ನಿರಸ್ತಗೊಳಿಸುವ ತಂತ್ರಜ್ಞಾನ ಕೂಡ ಕೆಲಸಕ್ಕೆ ಬರಲಿಲ್ಲ. ಹಮಾಸ್ ಯೋಧರು ಗಾಝಾದ ಉದ್ದಕ್ಕೆ ನಿರ್ಮಿಸಿದ್ದ ತಡೆಗೋಡೆಗಳನ್ನು ಹತ್ತಿ ಇಸ್ರೇಲಿ ನೆಲಕ್ಕೆ ಇಳಿದರೂ ಆ ದೇಶದ ಎಚ್ಚರಿಕೆಯ ಗಂಟೆಗಳು ಮೊಳಗಲಿಲ್ಲ.

ಗಾಝಾ ಪಟ್ಟಿಯ ಉದ್ದಕ್ಕೆ ಮೂರು ಲಕ್ಷ ಸೈನಿಕರನ್ನು ಹೂಡಿ ಹದಿನೈದು ದಿನಗಳಾದರೂ ಹಮಾಸ್ ಮೇಲೆ ನಿಯಂತ್ರಣ ಸಾಧಿಸಲು ಅಸಮರ್ಥವಾಗಿದೆ ಇಸ್ರೇಲು. ಒತ್ತೆಯಾಳುಗಳನ್ನು ಈ ತನಕ ಹಮಾಸ್ ವಶದಿಂದ ಬಿಡಿಸಿ ತರುವುದೂ ಸಾಧ್ಯವಾಗಿಲ್ಲ ಮೊಸಾದ್ ಗೆ. ಇತ್ತೀಚಿನ ಯುದ್ಧದಲ್ಲಿ ಇಸ್ರೇಲ್ ಅವಲಂಬಿಸಿರುವ ಅರೆಕಾಲಿಕ ಮತ್ತು ತಾತ್ಕಾಲಿಕ ಸೇನಾ ನೀತಿಯೇ ಇಸ್ರೇಲಿಗೆ ಮುಳುವಾಗಿದೆ, ಮಾನವಸಂಪನ್ಮೂಲಗಳಿಗೆ ಬದಲಾಗಿ ತಂತ್ರಜ್ಞಾನಕ್ಕೆ ಒತ್ತು ನೀಡಲಾಗಿರುವುದು ದೊಡ್ಡ ಕಾರಣ ಎನ್ನುತ್ತಿದ್ದಾರೆ ರಕ್ಷಣಾ ತಜ್ಞರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ವಿಶ್ವದಲ್ಲಿ ಸೇನೆಯ ಮತ್ತು ಶಸ್ತ್ರಾಸ್ತ್ರಗಳ ಮೇಲೆ ಅತಿ ಹೆಚ್ಚು ವೆಚ್ಚ ಮಾಡುವ ದೇಶಗಳ ಪೈಕಿ ಎರಡನೆಯ ಸ್ಥಾನ ಇಸ್ರೇಲಿನದು. 1.70 ಲಕ್ಷ ಯೋಧರನ್ನು ಹೊಂದಿರುವ ಇಸ್ರೇಲಿ ಸೇನೆ ಅರೆವೃತ್ತಿಪರ ನಾಲ್ಕೂವರೆ ಲಕ್ಷ ಮೀಸಲು ಬಲವನ್ನು ಹೊಂದಿದೆ. ಹದಿನೆಂಟು ವರ್ಷ ತುಂಬಿದ ಇಸ್ರೇಲಿ ಯುವಕರು-ಯುವತಿಯರಿಗೆ ಅನುಕ್ರಮವಾಗಿ 32 ಮತ್ತು 24 ತಿಂಗಳುಗಳ ಸೇನಾ ತರಬೇತಿ ಕಡ್ಡಾಯ. ತರಬೇತಿಯ ನಂತರ ಕೆಲ ಕಾಲ ಸೇನೆಯಲ್ಲಿದ್ದು ತೊರೆದು ಹೋಗಿ ಬೇರೆ ಬೇರೆ ವೃತ್ತಿಗಳಲ್ಲಿ ತೊಡಗಿರುತ್ತಾರೆ. ಅವಶ್ಯಕತೆ ಬಿದ್ದ ಸಂದರ್ಭಗಳಲ್ಲಿ ಇವರನ್ನು ಸೇನೆಗೆ ಕರೆಯಿಸಿಕೊಳ್ಳಲಾಗುತ್ತದೆ. ಇಂತಹ ನಾಲ್ಕು ಲಕ್ಷ ಮಂದಿ ಇಸ್ರೇಲಿನಲ್ಲಿದ್ದಾರೆ. ವರ್ಷದ ಹಿಂದೆ ಭಾರತದಲ್ಲೂ ಅಗ್ನಿಪಥ ಯೋಜನೆಯ ಮೂಲಕ ಭಾರತೀಯ ರಕ್ಷಣಾ ಪಡೆಗಳಿಗೆ ಅಗ್ನಿವೀರರ ನೇಮಕ ಮೊದಲಾಯಿತು. ಅಗ್ನಿವೀರರಿಗೆ ಕೇವಲ ಆರು ತಿಂಗಳ ತರಬೇತಿ ನೀಡಿ ಮೂರೂವರೆ ವರ್ಷ ದುಡಿಸಿಕೊಂಡು ಮನೆಗೆ ಕಳಿಸಲಾಗುತ್ತದೆ.

ಮೋದಿಯವರು ಭಾರತೀಯ ಸೇನೆಗೆ ಅಗ್ನಿವೀರರ ನೇಮಕ ಶುರು ಮಾಡಿದ್ದು ಇಸ್ರೇಲಿನ ಸ್ಫೂರ್ತಿಯಿಂದಲೇ ಎನ್ನಲಾಗಿದೆ. 2030-32ರ ಹೊತ್ತಿಗೆ ಭಾರತದ 12 ಲಕ್ಷ ಸೇನೆಯ ಅರ್ಧದಷ್ಟು ಸಂಖ್ಯೆ ಅಗ್ನಿವೀರರದೇ ಆಗಿರುತ್ತದೆ ಎಂದು ಸೇನೆಯ ಉಪಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಬಿಎಸ್ ರಾಜು ಅವರ ಹೇಳಿಕೆ ಉಲ್ಲೇಖಾರ್ಹ.

ಅಗ್ನಿವೀರರ ನೇಮಕ ಕುರಿತು ಮಿಲಿಟರಿ ತಜ್ಞರು ಈ ಕ್ರಮದ ಕುರಿತು ಆಶ್ಚರ್ಯಾಘಾತ ಪ್ರಕಟಿಸಿದ್ದರು. ಮಿಲಿಟರಿ ನೇಮಕಾತಿಯನ್ನು ಮಾತ್ರವಲ್ಲದೆ ಯೋಧನೊಬ್ಬ ಹೇಗಿರಬೇಕೆಂಬ ಮಿಲಿಟರಿ ಗೊತ್ತುಗುರಿಗಳನ್ನೇ ಈ ಯೋಜನೆ ಬುಡಮೇಲು ಮಾಡಲಿದೆ ಎಂಬುದು ಅವರ ಆತಂಕವಾಗಿತ್ತು.

ಹದಿನೈದು ವರ್ಷಗಳ ಸೇವಾವಧಿ ಮತ್ತು ಬದುಕಿರುವ ತನಕ ನಿವೃತ್ತಿವೇತನ ಸೌಲಭ್ಯವನ್ನು ಒಳಗೊಂಡ ಸೇನಾ ನೌಕರಿ ಈಗ ಕೇವಲ ಕನಸು. ಸೇನೆಗೆ ಕಾಯಂ ಸಿಬ್ಬಂದಿಯ ನೇಮಕಾತಿ ಸದ್ಯಕ್ಕೆ ಸ್ಥಗಿತಗೊಂಡಿದೆ. ಆಕ್ರಮಣಕಾರಿ ಧೋರಣೆ ತಳೆದಿರುವ ಚೀನಾ ಭಾರತದ ಗಡಿಗಳ ಒತ್ತುವರಿ ಮಾಡುತ್ತಲೇ ನಡೆದಿರುವ ಮತ್ತು ಧರ್ಮಾಂಧ ತೀವ್ರವಾದಿಗಳನ್ನು ಭಾರತದೊಳಕ್ಕೆ ನುಗ್ಗಿಸಲು ಸದಾ ಹೊಂಚು ಹಾಕುತ್ತಿರುವ ಪಾಕಿಸ್ತಾನದ ಸನ್ನಾಹಗಳನ್ನು ತಡೆಯುವುದು ಈಗಲೇ ದುಸ್ತರವಾಗಿ ಪರಿಣಮಿಸಿದೆ. ಶತ್ರುದೇಶಗಳ ಹಂಚಿಕೆಗಳನ್ನು ವಿಫಲಗೊಳಿಸಲು ನಮ್ಮ ಸೇನೆ ಸದಾ ಸನ್ನದ್ಧವಾಗಿರಬೇಕಿದೆ.

ಹೀಗಿರುವಾಗ ಆರೇ ತಿಂಗಳ ಅವಸರದಲ್ಲಿ ಅರೆಬರೆ ತರಬೇತಿ ಪಡೆದ ನಾಲ್ಕು ವರ್ಷಗಳ ಸೇವಾವಧಿಯ, ಕಸುಬು ತಿಳಿಯದ ‘ಅಗ್ನಿವೀರ’ರ ಕೈಯಲ್ಲಿ ದೇಶದ ಗಡಿಗಳು ಅದೆಷ್ಟು ಸುರಕ್ಷಿತ? ದೀರ್ಘಾವಧಿಯ ಉದ್ಯೋಗಭದ್ರತೆ ಇಲ್ಲದೆ ಕೇವಲ ನಾಲ್ಕು ವರ್ಷಗಳ ಗುತ್ತಿಗೆಯ ಮೇರೆಗೆ ನೇಮಕಗೊಂಡವರಿಗೆ ದೇಶರಕ್ಷಣೆಯ ಪ್ರೇರಣೆ ಎಲ್ಲಿಂದ ಬಂದೀತು? ನಾಗರಿಕರಿಗೆ ಸೇನಾ ತರಬೇತಿ ನೀಡುವುದರಿಂದ ಆತ ಪೂರ್ಣಕಾಲಿಕ ಸೈನಿಕ ಆಗುವುದಿಲ್ಲ ಮತ್ತು ಪೂರ್ಣಕಾಲಿಕ ಸೈನಿಕರಿಗೆ ಅವರನ್ನು ಹೋಲಿಸಲಾಗುವುದಿಲ್ಲ.

ಯೋಧರ ಸಂಬಳ ಸಾರಿಗೆಯೇ ರಕ್ಷಣಾವೆಚ್ಚದ ಬಹುಪಾಲನ್ನು ನುಂಗುತ್ತಿದ್ದು, ಶಸ್ತ್ರಾಸ್ತ್ರ ಖರೀದಿಗೆ ಹಣ ಸಾಲುತ್ತಿಲ್ಲ. ಹೀಗಾಗಿ ಸಂಬಳ ಸಾರಿಗೆಯನ್ನು ದೊಡ್ಡ ಪ್ರಮಾಣದಲ್ಲಿ ತಗ್ಗಿಸಬೇಕೆಂಬುದೇ ಅಗ್ನಿಪಥದ ಹಿಂದಿನ ಅಸಲು ಉದ್ದೇಶ. ಆದರೆ ಅತ್ಯಾಧುನಿಕ ಬೇಹುಗಾರಿಕೆ ಉಪಕರಣಗಳು, ಶಸ್ತ್ರಾಸ್ತ್ರಗಳು ಹಮಾಸ್ ದಾಳಿಯನ್ನು ತಡೆಯುವಲ್ಲಿ ವಿಫಲವಾದವು.

ಅಗ್ನಿ ವೀರರು ಅಥವಾ ಇಸ್ರೇಲಿನ ಮೀಸಲು ಪಡೆಯವರ ಸೇನೆಯ ಸಮವಸ್ತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ. ಆದರೆ ಹೋರಾಡಲು ಅಗತ್ಯವಿರುವ ಮತ್ತು ಶಸ್ತ್ರಾಸ್ತ್ರ ಚಲಾಯಿಸಲು ಬೇಕಾದ ಪೂರ್ಣಪ್ರಮಾಣದ ತರಬೇತಿ ಅವರಿಗೆ ಇರುವುದಿಲ್ಲ. ಸೇನೆಯಲ್ಲಿ ಹೋರಾಡುವಷ್ಟು ದೇಹದಾರ್ಢ್ಯವನ್ನೂ ಹೊಂದಿರುವುದಿಲ್ಲ. ದೇಶದ ರಕ್ಷಣೆಯನ್ನು ಗುತ್ತಿಗೆ ತೆಗೆದುಕೊಂಡಿರುವ ಏಕೈಕ ಗುತ್ತಿಗೆದಾರರಂತೆ ದೊಡ್ಡ ದೊಡ್ಡ ಮಾತಾಡುವ ಮೋದಿ ಸರ್ಕಾರ ಅಗ್ನಿವೀರರ ನೇಮಕದ ಮೂಲಕ ದೇಶ ಹಿತವನ್ನು ಕಡೆಗಣಿಸಿತೇ ಎಂಬ ಅನುಮಾನವನ್ನು ಇಸ್ರೇಲ್ ಉದಾಹರಣೆ ಗಟ್ಟಿಗೊಳಿಸಿದೆ.

WhatsApp Image 2025 11 17 at 3.23.18 PM
ಈ ದಿನ ಸಂಪಾದಕೀಯ
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ|ಗುಜರಾತಿನ ದಲಿತರಿಗೆ ಗಗನ ಕುಸುಮವಾಗೇ ಉಳಿದ ನ್ಯಾಯ

ಗುಜರಾತಿನ ಜನಸಂಖ್ಯೆಯಲ್ಲಿ ದಲಿತರ ಪ್ರಮಾಣ ಕಡಿಮೆ. ಶೇ.6.34 ಮಾತ್ರ. ಇಲ್ಲಿ ದಲಿತರಿಗಿಂತ...

ಈ ದಿನ ಸಂಪಾದಕೀಯ | ಮೋದಿಯ ಸಣ್ಣತನವನ್ನು ದೊಡ್ಡತನದಿಂದ ಸೋಲಿಸಿದ ಇರಾನ್‌!

ಇಂಧನ ಭದ್ರತೆಯನ್ನು ಕಾಪಾಡಿಕೊಳ್ಳಲು ಭಾರತದ ಹಡಗುಗಳು ಹಾರ್ಮುಜ್ ಜಲಸಂಧಿಯಿಂದ ಹಾದುಹೋಗಲು ಅವಕಾಶ...

ಈ ದಿನ ಸಂಪಾದಕೀಯ | SIR ಹೆಸರಲ್ಲಿ ಮಹಿಳೆಯರ ಮತದಾನದ ಹಕ್ಕಿನ ಹರಣ ಅಕ್ಷಮ್ಯ

ಕರ್ನಾಟಕದಲ್ಲಿ ಮಹಿಳೆಯರ ಹಕ್ಕುಗಳನ್ನು ರಕ್ಷಿಸುವ ಕೆಲಸ ಆಗಬೇಕಿದೆ. ಎಸ್‌ಐಆರ್‌ ನಡೆಯುವ ಸಮಯದಲ್ಲಿ...

ಈ ದಿನ ಸಂಪಾದಕೀಯ | ಕಾಂಗ್ರೆಸ್ಸಿಗರಿಗೆ ಇಂದಿರಾ ಬೇಕು, ಬಡವರ ಕ್ಯಾಂಟೀನ್ ಬೇಡ

ಶಾಸಕರು, ಸಚಿವರು, ಅಧಿಕಾರಿಗಳು ವಾರಕ್ಕೊಂದು ಸಲವಾದರೂ ಇಂದಿರಾ ಕ್ಯಾಂಟೀನ್‌ನಲ್ಲಿ ಊಟ-ತಿಂಡಿ ಮಾಡಬೇಕಿದೆ....