ಈ ದಿನ ಸಂಪಾದಕೀಯ | ಬಾಣಂತಿಯರ ಸಾವಿನ ಹೊಣೆಯಲ್ಲ, ಮುಂದೆ ಹೀಗಾಗದಂತೆ ‘ವ್ಯವಸ್ಥೆ’ಯಲ್ಲಿ ಬದಲಾವಣೆ ಬೇಕು

Date:

ಸರ್ಕಾರೀ ಆರೋಗ್ಯ ವ್ಯವಸ್ಥೆಯಲ್ಲಿ ಹತ್ತು ಹಲವು ಸಮಸ್ಯೆಗಳಿರುವಂತೆಯೇ, ಉತ್ತಮ ಚಿಕಿತ್ಸೆ ನೀಡಬಲ್ಲ ಖಾಸಗಿ ವಲಯವೂ ತೀರಾ ದುಬಾರಿಯಾಗುತ್ತಿದೆ. ಆರೋಗ್ಯ ಕ್ಷೇತ್ರದಲ್ಲಿರುವ ಅಸಮಾನತೆ ಗಾಬರಿ ಹುಟ್ಟಿಸುತ್ತದೆ. ಈಗಷ್ಟೇ ಆರಂಭವಾಗಿರುವ ವಿಧಾನಮಂಡಲ ಅಧಿವೇಶನದಲ್ಲಿ ಬಾಣಂತಿಯರ ಸಾವಿರ ಕುರಿತ ಸಮಗ್ರ ಚರ್ಚೆಯಾಗುವ ಅಗತ್ಯವಿದೆ. ಇದೊಂದು ರಾಜಕೀಯ ಆರೋಪ ಪ್ರತ್ಯಾರೋಪಗಳಲ್ಲಿ ಮುಗಿದು ಹೋಗದಂತೆ ಸರ್ಕಾರ ಮತ್ತು ವಿರೋಧ ಪಕ್ಷಗಳೆರಡೂ ನಡೆದುಕೊಳ್ಳಬೇಕಿದೆ.

ಮಕ್ಕಳಿಗೆ ಜನ್ಮ ನೀಡುವ ಸಂದರ್ಭದಲ್ಲಿ ಅಥವಾ ಅದರ ನಂತರ ಸಾಯುವ ಬಾಣಂತಿಯರ ಸಂಖ್ಯೆ ಇಡೀ ರಾಜ್ಯದಲ್ಲಿ ಹೆಚ್ಚಾಗಿದೆಯೆಂದು ಬಳ್ಳಾರಿ ಮೆಡಿಕಲ್‌ ಕಾಲೇಜು ಆಸ್ಪತ್ರೆಯಲ್ಲಿ ಅತ್ಯಂತ ಕಡಿಮೆ ಅವಧಿಯಲ್ಲಿ ಆರು ಬಾಣಂತಿಯರು ತೀರಿಕೊಂಡ ಸಂದರ್ಭದಲ್ಲಿ ಸುದ್ದಿಯಾಗಿದೆ. ಕರ್ನಾಟಕದಲ್ಲಿ ತಾಯಂದಿರ ಮರಣ ಪ್ರಮಾಣವು ಹಿಂದಿಗಿಂತ ಕಡಿಮೆಯಾಗುತ್ತಿರುವ ಹೊತ್ತಿನಲ್ಲಿ, ಈ ಬೆಳವಣಿಗೆಯು ಆಶ್ಚರ್ಯಕರವೂ, ಆತಂಕಕಾರಿಯೂ ಆಗಿದೆ. 2017-18ರಲ್ಲಿ ವಾರ್ಷಿಕ (ಲಕ್ಷಕ್ಕೆ) 83ರಷ್ಟಿದ್ದ ತಾಯಂದಿರ ಮರಣ ಪ್ರಮಾಣವು, 2018-20ರ ಹೊತ್ತಿಗೆ 69ಕ್ಕೆ ಇಳಿದಿತ್ತು. ಅದು 2023-24ರ ಹೊತ್ತಿಗೆ 64ಕ್ಕೆ ಇಳಿದಿದೆ. ಶಿಶು ಮರಣ ಪ್ರಮಾಣವು ಕರ್ನಾಟಕದಲ್ಲಿ 1971ರಲ್ಲಿ ಸಾವಿರಕ್ಕೆ 129 ಇತ್ತು. ಈಗ ಸಾವಿರ ಜನನಗಳಲ್ಲಿ 28ಕ್ಕೆ ಇಳಿದಿದೆ.

ಬಳ್ಳಾರಿ ಅಥವಾ ಹೈದ್ರಾಬಾದ್‌ ಕರ್ನಾಟಕಗಳು ಇಂತಹ (ಶಿಶು ಮರಣ ಪ್ರಮಾಣ, ತಾಯಿ ಮರಣ ಪ್ರಮಾಣ ಇತ್ಯಾದಿ) ಮಾನವ ಅಭಿವೃದ್ಧಿ ಸೂಚ್ಯಂಕಗಳಲ್ಲಿ ಬಹಳ ಕಡಿಮೆ ಇವೆಯೆಂಬ ಅನಿಸಿಕೆ ಕೆಲವರಲ್ಲಿದೆ. ಅದು ವಾಸ್ತವವಲ್ಲ. ಕರ್ನಾಟಕದಲ್ಲಿ ಅತ್ಯಂತ ಹೆಚ್ಚು ತಾಯಂದಿರ ಮರಣ ಪ್ರಮಾಣ ಇರುವ ಐದು ಜಿಲ್ಲೆಗಳ ಪೈಕಿ ಒಂದೂ ಹೈದ್ರಾಬಾದ್‌ ಕರ್ನಾಟಕದಲ್ಲಿಲ್ಲ. ಚಿಕ್ಕಬಳ್ಳಾಪುರ, ಧಾರವಾಡ, ಹಾವೇರಿ, ಬೆಂಗಳೂರು ಗ್ರಾಮಾಂತರ ಮತ್ತು ತುಮಕೂರು ಜಿಲ್ಲೆಗಳಲ್ಲಿ ಅತ್ಯಂತ ಹೆಚ್ಚು ತಾಯಂದಿರ ಮರಣಪ್ರಮಾಣ ಇದೆ.

ಅಂಕಿ-ಅಂಶಗಳು ಆಶಾದಾಯಕವಾಗಿರಬಹುದಾದರೂ, ತಪ್ಪಿಸಬಹುದಾಗಿದ್ದ ಒಂದೇ ಒಂದು ಸಾವು ಸಂಭವಿಸಿದರೂ ಅದು ಅಕ್ಷಮ್ಯ. ಹೀಗಾಗಿ ಬಳ್ಳಾರಿಯ ಈ ಸಾವುಗಳ ಕುರಿತು ಸಮಾಜ ಹಾಗೂ ಸರ್ಕಾರ ಬಹಳ ಗಂಭೀರವಾಗಿಯೇ ಕ್ರಮ ವಹಿಸಬೇಕಿದೆ. ಇವುಗಳಲ್ಲಿ ನಿರ್ಲಕ್ಷ್ಯದ ಕಾರಣ, ಭ್ರಷ್ಟಾಚಾರ ಇತ್ಯಾದಿಗಳೇನಾದರೂ ಕಂಡುಬಂದರೆ ಅದರ ಕುರಿತು ಕಠಿಣವಾದ ಕ್ರಮಗಳನ್ನೂ ಕೈಗೊಳ್ಳಬೇಕಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಇಲ್ಲಿಯವರೆಗೆ ಸರ್ಕಾರ ಮತ್ತು ಆರೋಗ್ಯ ಇಲಾಖೆಗಳು ಸದರಿ ವಿಚಾರದ ಕುರಿತು ಸೂಕ್ತವಾದ ಕ್ರಮ ವಹಿಸಿರುವುದು ಕಾಣುತ್ತದೆ. ತೀರಿಕೊಂಡ ಬಾಣಂತಿಯರೆಲ್ಲರಿಗೂ, ಒಂದು ನಿರ್ದಿಷ್ಟ ಸಂಸ್ಥೆಯಿಂದ ಪೂರೈಕೆಯಾಗಿದ್ದ ಒಂದು ನಿರ್ದಿಷ್ಟ ದ್ರಾವಣ (ರಿಂಗರ್‌ ಲ್ಯಾಕ್ಟೇಟ್‌)ವನ್ನು ನೀಡಲಾಗಿತ್ತು ಎಂಬುದರತ್ತ ಬೊಟ್ಟು ಮಾಡಿ ತೋರಿಸಲಾಗುತ್ತಿದೆ. ತನಿಖಾ ತಂಡ ನೇಮಕವಾಗಿದೆ; ಹಿರಿಯ ಔಷಧ ನಿಯಂತ್ರಕರೊಬ್ಬರನ್ನು ಅಮಾನತ್ತಿನಲ್ಲಿಡಲಾಗಿದೆ.

ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಅತಿಯಾದ ಮೊಬೈಲ್ ಬಳಕೆ ಚಟ ಮಾತ್ರವಲ್ಲ ಮಾರಕ ರೋಗ

ಆದರೆ, ಚಿಂತಿಸಬೇಕಿರುವುದು ಇಷ್ಟೇ ಅಲ್ಲ. ಇಡೀ ದೇಶದ ಸರಾಸರಿಗಿಂತ ಕರ್ನಾಟಕದ ಅಂಕಿ-ಅಂಶಗಳು ಉತ್ತಮವಾಗಿದ್ದರೂ, ದಕ್ಷಿಣದ ರಾಜ್ಯಗಳ ಪೈಕಿ ರಾಜ್ಯವು ನಾಲ್ಕನೇ ಸ್ಥಾನದಲ್ಲಿದೆ. ಸರ್ಕಾರೀ ಆರೋಗ್ಯ ವ್ಯವಸ್ಥೆಯಲ್ಲಿ ಹತ್ತು ಹಲವು ಸಮಸ್ಯೆಗಳಿರುವಂತೆಯೇ, ಉತ್ತಮ ಚಿಕಿತ್ಸೆ ನೀಡಬಲ್ಲ ಖಾಸಗಿ ವಲಯವೂ ತೀರಾ ದುಬಾರಿಯಾಗುತ್ತಿದೆ. ಆರೋಗ್ಯ ಕ್ಷೇತ್ರದಲ್ಲಿರುವ ಅಸಮಾನತೆ ಗಾಬರಿ ಹುಟ್ಟಿಸುತ್ತದೆ. ಸರ್ಕಾರೀ ವ್ಯವಸ್ಥೆಯಲ್ಲಿ ಗುಣಮಟ್ಟ ಖಾತರಿಗೆ ಯಂತ್ರಾಂಗವು ಇದೆಯಾದರೂ, ಇಲ್ಲಿನ ಗುಣಮಟ್ಟದ ಕುರಿತು ಸಾಮಾನ್ಯ ಜನರಿಗೆ ಖಾತರಿ ಆಗದೇ ಇರುವುದು ಏಕೆಂದು, ಇಡೀ ಇಲಾಖೆಯೇ ತಲೆ ಕೆಡಿಸಿಕೊಳ್ಳಬೇಕು. ಎಲ್ಲಿಯವರೆಗೆ ಸರ್ಕಾರೀ ವಲಯದಲ್ಲಿ ಅತ್ಯುತ್ತಮ ಆರೋಗ್ಯ ಸೇವೆ ಸಿಗುವುದು ಖಾತರಿಯಾಗುವುದಿಲ್ಲವೋ, ಅಲ್ಲಿಯವರೆಗೆ ಖಾಸಗಿಯವರ ನಿಯಂತ್ರಣವೂ ಅಸಾಧ್ಯ.

ಬಳ್ಳಾರಿ ಬಾಣಂತಿಯರ ಸಾವು – ತಪ್ಪಿಸಬಹುದಾದ ಒಂದು ಸಾವನ್ನೂ ತಪ್ಪಿಸುವ ಹಾಗೆ ವ್ಯವಸ್ಥೆಯಲ್ಲಿ ಮಾರ್ಪಾಡು ತರುವ ನಿಟ್ಟಿನಲ್ಲಿ ಖಚಿತ ಹೆಜ್ಜೆಯಿಡಲು ದಾರಿಯಾಗಬೇಕು. ಇಲ್ಲದಿದ್ದರೆ, ಆಯಾ ಸಂದರ್ಭದ ತಕ್ಷಣದ ಆರೋಪ-ಪ್ರತ್ಯಾರೋಪಗಳಲ್ಲಿ ‘ಪ್ರಕರಣ’ ಮುಕ್ತಾಯಗೊಳ್ಳುತ್ತದೆ. ತಮಿಳುನಾಡು, ಕೇರಳ, ದೆಹಲಿ ಸರ್ಕಾರಗಳು ತಮ್ಮದೇ ರೀತಿಯಲ್ಲಿ ಸರ್ಕಾರೀ ವ್ಯವಸ್ಥೆಯಲ್ಲಿ ಕೆಲವು ಮಾದರಿಗಳನ್ನು ನಿರ್ಮಿಸಿ ತೋರಿಸಿವೆ. ಕೇರಳ ಮತ್ತು ತಮಿಳುನಾಡುಗಳಲ್ಲಿ ಇದಕ್ಕೆ ಯಾವುದೇ ಒಂದು ಪಕ್ಷ ಅಥವಾ ಸರ್ಕಾರ ಕಾರಣವಾಗಿಲ್ಲ. ಯಾವುದೇ ಪಕ್ಷ ಅಧಿಕಾರಕ್ಕೆ ಬಂದರೂ, ಸುಸೂತ್ರವಾಗಿ ನಡೆದುಕೊಂಡು ಹೋಗುವ ‘ವ್ಯವಸ್ಥೆ’ಯನ್ನು ಅಲ್ಲಿ ನಿರ್ಮಿಸಲಾಗಿದೆ. ಇದಕ್ಕೆ ಅಗತ್ಯವಿರುವುದು ಪಕ್ಷಾತೀತವಾದ ಕಾಳಜಿ ಹಾಗೂ ಮುನ್ನೋಟ.

ಈಗಷ್ಟೇ ಆರಂಭವಾಗಿರುವ ವಿಧಾನಮಂಡಲ ಅಧಿವೇಶನದಲ್ಲಿ ಈ ಕುರಿತ ಸಮಗ್ರ ಚರ್ಚೆಯಾಗುವ ಅಗತ್ಯವಿದೆ. ಇದೊಂದು ರಾಜಕೀಯ ಆರೋಪ ಪ್ರತ್ಯಾರೋಪಗಳಲ್ಲಿ ಮುಗಿದು ಹೋಗದಂತೆ ಸರ್ಕಾರ ಮತ್ತು ವಿರೋಧ ಪಕ್ಷಗಳೆರಡೂ ನಡೆದುಕೊಳ್ಳಬೇಕು. ದೇಶದಲ್ಲಿ ನಂ.1 ಆಗುವ ಮಾತು ಆಗಾಗ ಬರುತ್ತಿರುತ್ತದೆ. ಆರೋಗ್ಯ ವ್ಯವಸ್ಥೆಯ ವಿಚಾರದಲ್ಲಿ ಕರ್ನಾಟಕಕ್ಕೆ ಅಂತಹ ಅವಕಾಶವೊಂದು ಮುಂದೆ ಬಂದು ನಿಂತಿದೆ. ಕರ್ನಾಟಕ ಸರ್ಕಾರವು ಈ ನಿಟ್ಟಿನಲ್ಲಿ ಮನಸ್ಸು ಮಾಡುವ ಅಗತ್ಯವಿದೆ.

WhatsApp Image 2025 11 17 at 3.23.18 PM
ಈ ದಿನ ಸಂಪಾದಕೀಯ
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ|ಗುಜರಾತಿನ ದಲಿತರಿಗೆ ಗಗನ ಕುಸುಮವಾಗೇ ಉಳಿದ ನ್ಯಾಯ

ಗುಜರಾತಿನ ಜನಸಂಖ್ಯೆಯಲ್ಲಿ ದಲಿತರ ಪ್ರಮಾಣ ಕಡಿಮೆ. ಶೇ.6.34 ಮಾತ್ರ. ಇಲ್ಲಿ ದಲಿತರಿಗಿಂತ...

ಈ ದಿನ ಸಂಪಾದಕೀಯ | ಮೋದಿಯ ಸಣ್ಣತನವನ್ನು ದೊಡ್ಡತನದಿಂದ ಸೋಲಿಸಿದ ಇರಾನ್‌!

ಇಂಧನ ಭದ್ರತೆಯನ್ನು ಕಾಪಾಡಿಕೊಳ್ಳಲು ಭಾರತದ ಹಡಗುಗಳು ಹಾರ್ಮುಜ್ ಜಲಸಂಧಿಯಿಂದ ಹಾದುಹೋಗಲು ಅವಕಾಶ...

ಈ ದಿನ ಸಂಪಾದಕೀಯ | SIR ಹೆಸರಲ್ಲಿ ಮಹಿಳೆಯರ ಮತದಾನದ ಹಕ್ಕಿನ ಹರಣ ಅಕ್ಷಮ್ಯ

ಕರ್ನಾಟಕದಲ್ಲಿ ಮಹಿಳೆಯರ ಹಕ್ಕುಗಳನ್ನು ರಕ್ಷಿಸುವ ಕೆಲಸ ಆಗಬೇಕಿದೆ. ಎಸ್‌ಐಆರ್‌ ನಡೆಯುವ ಸಮಯದಲ್ಲಿ...

ಈ ದಿನ ಸಂಪಾದಕೀಯ | ಕಾಂಗ್ರೆಸ್ಸಿಗರಿಗೆ ಇಂದಿರಾ ಬೇಕು, ಬಡವರ ಕ್ಯಾಂಟೀನ್ ಬೇಡ

ಶಾಸಕರು, ಸಚಿವರು, ಅಧಿಕಾರಿಗಳು ವಾರಕ್ಕೊಂದು ಸಲವಾದರೂ ಇಂದಿರಾ ಕ್ಯಾಂಟೀನ್‌ನಲ್ಲಿ ಊಟ-ತಿಂಡಿ ಮಾಡಬೇಕಿದೆ....