ಈ ದಿನ ಸಂಪಾದಕೀಯ | ಮಹಾ ಕುಂಭಮೇಳ ಯಾರಿಗಾಗಿ, ಯಾತಕ್ಕಾಗಿ?

Date:

ಮಹಾ ಕುಂಭಮೇಳ ಅಸಹಾಯಕರಿಗೆ ಆಶಾಕಿರಣದಂತೆ, ಅಲ್ಪರಿಗೆ ಆತ್ಮವಿಶ್ವಾಸದಂತೆ, ಕುತಂತ್ರಿಗಳಿಗೆ ಶೋಷಣೆಯ ಅಸ್ತ್ರದಂತೆ ಬಳಕೆಯಾಗುವುದರಲ್ಲಿ ಅನುಮಾನವೇ ಇಲ್ಲ. ಹಾಗೆಯೇ ಹಿಂದುತ್ವವಾದಿಗಳಾದ ಯೋಗಿ ಆದಿತ್ಯನಾಥ್ ಮತ್ತು ನರೇಂದ್ರ ಮೋದಿಗಳಿಗೆ ಅಧಿಕಾರ ಗಳಿಸುವ ಸಾಧನವೇ ಹೊರತು ಬೇರೇನೂ ಅಲ್ಲ.

ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಿನ್ನೆಯಿಂದ ವಿಧ್ಯುಕ್ತವಾಗಿ ಆರಂಭವಾಗಿರುವ ಮಹಾ ಕುಂಭಮೇಳ ದೇಶದಾದ್ಯಂತ ಸುದ್ದಿಯಲ್ಲಿದೆ. ಯಾವ ಪತ್ರಿಕೆ, ಟಿವಿ, ಯೂ ಟ್ಯೂಬ್ ತೆರೆದರೂ ಕುಂಭಮೇಳದ ಭಾರೀ ಜಾಹೀರಾತು ಕಣ್ಣಿಗೆ ಬೀಳುತ್ತದೆ. ಪುರಾಣ ಕಾಲದ ಕತೆ ಹೇಳುವ ವಿಶೇಷ ಪುರವಣಿಗಳು, ಸಾಧು-ಸಂತರ ಚಿತ್ರಗಳು ಮೇಳದ ಮಹತ್ವವನ್ನು, ಪರಂಪರೆಯನ್ನು, ಸಂಪ್ರದಾಯವನ್ನು ಸಾರುತ್ತಿವೆ. ಇಡೀ ದೇಶವೇ ಮೇಳದಲ್ಲಿ ಮುಳುಗಿಹೋಗಿರುವಂತೆ ಭಾಸವಾಗುತ್ತಿದೆ.

ದೇಶದ ಪ್ರಮುಖ ಧಾರ್ಮಿಕ ವಿದ್ಯಮಾನವೆಂಬಂತೆ ಬಿಂಬಿತವಾಗಿರುವ ಮಹಾ ಕುಂಭಮೇಳದ ಉಸ್ತುವಾರಿಯನ್ನು ಉತ್ತರ ಪ್ರದೇಶದ ಮುಖ್ಯಮಂತ್ರಿ ಕಟ್ಟರ್ ಹಿಂದುತ್ವವಾದಿ ಯೋಗಿ ಆದಿತ್ಯನಾಥ್ ಸರ್ಕಾರ ಹೊತ್ತುಕೊಂಡಿದೆ. ಅದಕ್ಕೆ ನರೇಂದ್ರ ಮೋದಿಯವರ ಕೇಂದ್ರ ಸರ್ಕಾರ ಒತ್ತಾಸೆಯಾಗಿ ನಿಂತಿದೆ. ನಲವತ್ತೈದು ದಿನಗಳ ಕಾಲ ನಡೆಯುವ ಕುಂಭಮೇಳಕ್ಕೆ ದೇಶ-ವಿದೇಶಗಳಿಂದ ಸುಮಾರು ನಲವತ್ತು ಕೋಟಿ ಭಕ್ತರು ಆಗಮಿಸುವ ನಿರೀಕ್ಷೆಯಿದೆ. ಭಕ್ತರಿಗೆ ಯಾವುದೇ ಅಡೆತಡೆಗಳಾಗದಂತೆ ಸೂಕ್ತ-ಸಮರ್ಪಕ ವ್ಯವಸ್ಥೆ ಕಲ್ಪಿಸಲು ಉತ್ತರ ಪ್ರದೇಶದ ಆಡಳಿತ ವ್ಯವಸ್ಥೆ ಎರಡು ವರ್ಷಗಳ ಹಿಂದಿನಿಂದಲೇ ಸಿದ್ಧತೆ ಆರಂಭಿಸಿದೆ. ಅದಕ್ಕಾಗಿ ಎರಡೂ ಸರ್ಕಾರಗಳು ಸುಮಾರು ಏಳು ಸಾವಿರ ಕೋಟಿ ರೂಪಾಯಿಗಳನ್ನು ವೆಚ್ಚ ಮಾಡುತ್ತಿವೆ.

ಹನ್ನೆರಡು ವರ್ಷಗಳಿಗೊಮ್ಮೆ ನಡೆಯುವ ಮಹಾ ಕುಂಭಮೇಳವನ್ನು ಜಗತ್ತಿನ ಅತ್ಯಂತ ದೊಡ್ಡ ಧಾರ್ಮಿಕ ಸಮ್ಮಿಲನವನ್ನಾಗಿ ಮಾಡುವುದು, ಆಳುವ ಪಕ್ಷಕ್ಕೆ ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಅದಕ್ಕೆ ಪೂರಕವಾಗಿ ಪವಿತ್ರ ನದಿಗಳಾದ ಗಂಗಾ, ಯಮುನಾ ಮತ್ತು ಸರಸ್ವತಿ ಸಂಗಮವನ್ನೇ ಪ್ರಯೋಗಕ್ಕೊಡ್ಡಲಾಗಿದೆ. ಈ ಸಂಗಮದಲ್ಲಿ ಸ್ನಾನ ಮಾಡುವುದು ಹಿಂದೂಗಳಿಗೆ ಅತಿ ಪವಿತ್ರವೆಂದೂ, ಎಲ್ಲ ಪಾಪಗಳು ಪರಿಹಾರವಾಗುವುದೆಂದೂ, ಮೋಕ್ಷ ಪ್ರಾಪ್ತಿಯಾಗುತ್ತದೆಂದೂ ಪ್ರತೀತಿ ಇದೆ. ಆ ಪರಂಪರಾಗತ ನಂಬಿಕೆಯನ್ನು ಜನರಲ್ಲಿ ವ್ಯವಸ್ಥಿತವಾಗಿ ಬಿತ್ತಲಾಗಿದೆ. ಕುಂಭಮೇಳವು ಭಾರತದ ಧಾರ್ಮಿಕ ಮತ್ತು ಆಧ್ಯಾತ್ಮಿಕ ದೃಷ್ಟಿಯಿಂದ ಮಾತ್ರವಲ್ಲ; ಖಗೋಳ ಮತ್ತು ಜ್ಯೋತಿಷ್ಯಶಾಸ್ತ್ರದ ದೃಷ್ಟಿಯಿಂದಲೂ ಮಹತ್ವಪೂರ್ಣವೆಂದು ಸಾರಲಾಗುತ್ತಿದೆ. ಭಾರತದ ಧರ್ಮ, ಸಂಸ್ಕೃತಿ ಜಗತ್ತಿನಲ್ಲಿಯೇ ಶ್ರೇಷ್ಠ ಎನ್ನುವುದು ಮುನ್ನೆಲೆಗೆ ಬರುತ್ತಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಕುಂಭಮೇಳದಲ್ಲಿ ಪುರಾಣ, ಪರಂಪರೆ, ಪುಣ್ಯಕ್ಷೇತ್ರಗಳಿರುವ ಕಾರಣಕ್ಕೆ ಯೋಗಿ ಆದಿತ್ಯನಾಥ್ ಮತ್ತು ನರೇಂದ್ರ ಮೋದಿಯವರು ಅತ್ಯಾಸಕ್ತಿ ತಳೆದಿದ್ದಾರೆ. ತಮ್ಮ ಕಾಲದಲ್ಲಿ ಜರುಗುತ್ತಿರುವ ಮೇಳವನ್ನು ಮಹತ್ವದ್ದೆಂದು, ಧರ್ಮಕಾರ್ಯವೆಂದು, ಹಿಂದುತ್ವದ ಭಾಗವೆಂದು ಭಾವಿಸಿದ್ದಾರೆ. ಹಿಂದೂ ಏಕತೆ ಮತ್ತು ಶಕ್ತಿಯ ಸಂಕೇತವೆಂದು ಪರಿಗಣಿಸಿದ್ದಾರೆ. ಭಕ್ತರ ಭಾವಾವೇಶವನ್ನು ರಾಜಕೀಯಗೊಳಿಸಿ, ಮತಗಳನ್ನಾಗಿ ಪರಿವರ್ತಿಸುವ ಹವಣಿಕೆಯಲ್ಲಿದ್ದಾರೆ.

ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಕುಸಿತ ಕಂಡ ‘ಬಾಲಿವುಡ್’, ಭಿನ್ನ ಜಾಡು ಹಿಡಿದ ದಕ್ಷಿಣ ಭಾರತದ ಚಿತ್ರೋದ್ಯಮ

ಅಷ್ಟೇ ಅಲ್ಲ, ಮಹಾ ಕುಂಭಮೇಳಕ್ಕೆ 144 ವರ್ಷಗಳ ಪೌರಾಣಿಕ ಹಿನ್ನೆಲೆ ಮತ್ತು ಪರಂಪರೆಯಿದೆ ಎನ್ನುವವರೇ, ಕುಂಭಮೇಳ ಮೊಘಲರ ಆಡಳಿತದಲ್ಲೂ ನಡೆಯುತ್ತಿತ್ತು, ಅಕ್ಬರ್‌ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದ, ಬ್ರಿಟಿಷ್‌ ಆಡಳಿತ ಕೂಡ ಪ್ರೋತ್ಸಾಹ ನೀಡಿತ್ತು ಎಂದು ಹೇಳುತ್ತಾರೆ. ಸ್ವಾತಂತ್ರ್ಯಾನಂತರ ಚುನಾಯಿತ ಸರ್ಕಾರವೇ ಕುಂಭಮೇಳವನ್ನು ಆಯೋಜಿಸುತ್ತಿತ್ತು ಎಂಬುದನ್ನೂ ದಾಖಲಿಸುತ್ತಾರೆ. ಅಂದರೆ, ಉತ್ತರ ಪ್ರದೇಶವನ್ನಾಳಿದ ಕಾಂಗ್ರೆಸ್, ಎಸ್ಪಿ, ಬಿಎಸ್ಪಿ, ಬಿಜೆಪಿ ಇನ್ನಿತರ ಪಕ್ಷಗಳು ಕೂಡ ಕುಂಭಮೇಳವನ್ನು ಆಚರಿಸಿಕೊಂಡು ಬಂದಿವೆ. ಎಲ್ಲರನ್ನೂ ಒಳಗೊಳ್ಳುವ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿವೆ.

ಆದರೆ, ಈ ಬಾರಿಯ ಮಹಾ ಕುಂಭಮೇಳದಲ್ಲಿ ಕಟ್ಟರ್ ಹಿಂದುತ್ವವಾದಿ ಯೋಗಿ ಆದಿತ್ಯನಾಥ್ ಅವರ ಆಳ್ವಿಕೆಯಲ್ಲಿ ಮೊದಲ ಬಾರಿಗೆ ಮುಸ್ಲಿಮರಿಗೆ ಪ್ರವೇಶವನ್ನು ನಿರಾಕರಿಸಲಾಗಿದೆ. ಮುಸ್ಲಿಂ ವ್ಯಾಪಾರ ಮಳಿಗೆಗಳಿಗೆ ನಿರ್ಬಂಧ ಹೇರಲಾಗಿದೆ. ಮುಸ್ಲಿಮರು ಓಡಿಸುವ ಜಟಕಾ ಗಾಡಿ, ಆಟೋ, ಟ್ಯಾಕ್ಸಿ ಡ್ರೈವರ್‍‌ಗಳು ಹಿಂದೂ ಯಾತ್ರಿಕರಿಂದ ಬಾಡಿಗೆ ಪಡೆಯದಂತೆ ಫತ್ವಾ ಹೊರಡಿಸಲಾಗಿದೆ.

ಇದರ ಮುಂದುವರೆದ ಭಾಗವಾಗಿ, ಕುಂಭಮೇಳದಲ್ಲಿ ಇದೇ ಮೊದಲ ಬಾರಿಗೆ, ಹರಿದ್ವಾರ ಮೂಲದ ‘ದಿವ್ಯ ಪ್ರೇಮ ಸೇವಾ ಮಿಷನ್’ ಸಂಸ್ಥೆ ಉಪನ್ಯಾಸ ಏರ್ಪಡಿಸಿದೆ. ಅವುಗಳ ಪೈಕಿ ವಿವಾದಾತ್ಮಕವಾದ ‘ಒಂದು ರಾಷ್ಟ್ರ, ಒಂದು ಚುನಾವಣೆ’ಯೂ ಒಂದು ವಿಷಯವಾಗಿದೆ. ಕಾರ್ಯಕ್ರಮದಲ್ಲಿ ಪಾಲ್ಗೊಂಡು ಉಪನ್ಯಾಸ ನೀಡುವ ಜವಾಬ್ದಾರಿಯನ್ನು ಮಾಜಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಹೊತ್ತುಕೊಂಡಿದ್ದಾರೆ. ಇವರು ‘ಒಂದು ರಾಷ್ಟ್ರ, ಒಂದು ಚುನಾವಣೆ’ಯ ಬಗ್ಗೆ ಅಧ್ಯಯನ ಮಾಡಿ ವರದಿ ನೀಡಲು ಕೇಂದ್ರ ಸರ್ಕಾರ ನೇಮಿಸಿದ್ದ ಉನ್ನತ ಮಟ್ಟದ ಸಮಿತಿಯ ಅಧ್ಯಕ್ಷರಾಗಿದ್ದರು. 

ಇದನ್ನು ಕಂಡು ಖೇದಗೊಂಡ ಮೇಳದ ಅತ್ಯಂತ ಹಿರಿಯ ಪುರೋಹಿತರಲ್ಲಿ ಒಬ್ಬರಾದ ಮಹಂತ್ ದುರ್ಗಾನಂದ್ ಬ್ರಹ್ಮಚಾರಿ, ‘ಶಾಂತಿಯುತ ಸಹಬಾಳ್ವೆ ಇರಬೇಕು ಮತ್ತು ದ್ವೇಷಕ್ಕೆ ಇಲ್ಲಿ ಯಾವುದೇ ಸ್ಥಾನವಿಲ್ಲ. ಕೆಲವರು ಹಿಂದೂ-ಮುಸ್ಲಿಂ ಉದ್ವಿಗ್ನತೆಯನ್ನು ಸೃಷ್ಟಿಸಲು ಪ್ರಯತ್ನಿಸುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ಇದು ಸರಿಯಲ್ಲ’ ಎಂದು ತಿಳಿಸಿದ್ದಾರೆ.

ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ದೆಹಲಿ ಚುನಾವಣೆಯಲ್ಲಿ ಕಾಂಗ್ರೆಸ್‌ ಬಗ್ಗೆ ಕೇಜ್ರಿವಾಲ್‌ಗೆ ಇರಲಿ ಎಚ್ಚರ

ಮಹಾ ಕುಂಭಮೇಳಕ್ಕೆ ಕೋಟ್ಯಂತರ ಭಕ್ತರು, ಅಧ್ಯಾತ್ಮ ಸಾಧಕರು, ವಿದೇಶಿ ಪ್ರವಾಸಿಗರು ಈ ಜಾಗತಿಕ ಮತ್ತು ಐತಿಹಾಸಿಕ ಪವಿತ್ರ ಧಾರ್ಮಿಕ ಸಮಾವೇಶಕ್ಕೆ ಸಾಕ್ಷಿಯಾಗಲಿದ್ದಾರೆ. ಅದರಲ್ಲೂ ಪ್ರಯಾಗರಾಜ್ ಸಂಗಮದಲ್ಲಿ ಕೋಟ್ಯಂತರ ಜನ ಪವಿತ್ರ ಸ್ನಾನ ಮಾಡುತ್ತಾರೆಂಬ ಲೆಕ್ಕಾಚಾರವಿದೆ. ಜೊತೆಗೆ ಅದೆಷ್ಟೋ ವರ್ಷಗಳಿಂದ ಸ್ನಾನವನ್ನೇ ಮಾಡದ ನಾಗಾ ಸಾಧುಗಳು, ಸಂತರು, ಸನ್ಯಾಸಿಗಳು, ಅಘೋರಿಗಳು ಒಮ್ಮೆಲೆ ಮುಳುಗೇಳುವುದರಿಂದ ಗಂಗಾ, ಯಮುನಾ ನದಿಗಳ ನೀರು ಕಲುಷಿತಗೊಳ್ಳುವುದಿಲ್ಲವೇ ಎನ್ನುವ ಪ್ರಶ್ನೆ ಏಳುತ್ತದೆ. ಆ ನದಿಗಳ ನೀರು ಬಳಸಲು ಯೋಗ್ಯವಲ್ಲದ ನೀರಾಗಿ, ವಿಷವಾಗಿ ಬಿಹಾರ ಮತ್ತು ಪಶ್ಚಿಮ ಬಂಗಾಳದತ್ತ ಹರಿಯುವುದನ್ನು ಪರಿಸರ ತಜ್ಞರು ತಿಳಿಸಿರುವುದೂ ಇದೆ.

ಜೊತೆಗೆ, ಹಬ್ಬಗಳು, ಜಾತ್ರೆಗಳು, ಮೇಳಗಳು ಕಾಲಕಾಲಕ್ಕೆ ಜರುಗುವುದು ಜನರ ಆಚಾರ-ವಿಚಾರವನ್ನು ಉಳಿಸಿ ಬೆಳೆಸಬಹುದು. ಸಂಪ್ರದಾಯ, ಆಚರಣೆ, ನಂಬಿಕೆಗಳ ನೆಪದಲ್ಲಿ ಮಾನಸಿಕ ನೆಮ್ಮದಿ ಸಿಗಲಿದೆ ಎನ್ನಬಹುದು. ಆದರೆ, ದೇವರು – ದೆವ್ವ ಇರುವ ಪುರಾವೆ ಇಲ್ಲ, ಅದು ವ್ಯಕ್ತಿ – ಶಕ್ತಿಯೂ ಅಲ್ಲ. ಅದು ಭ್ರಮೆ ಬಿತ್ತುವ, ಮೌಢ್ಯವನ್ನು ಗಟ್ಟಿಗೊಳಿಸುವ ಸಾಧನ. ಅದು ಅಸಹಾಯಕರಿಗೆ ಆಶಾಕಿರಣದಂತೆ, ಅಲ್ಪರಿಗೆ ಆತ್ಮವಿಶ್ವಾಸದಂತೆ, ಕುತಂತ್ರಿಗಳಿಗೆ ಶೋಷಣೆಯ ಅಸ್ತ್ರದಂತೆ ಬಳಕೆಯಾಗುವುದರಲ್ಲಿ ಅನುಮಾನವೇ ಇಲ್ಲ. ಒಂದು ಧಾರ್ಮಿಕ ಮೇಳಕ್ಕಾಗಿ ಖರ್ಚು ಮಾಡುತ್ತಿರುವ ಏಳು ಸಾವಿರ ಕೋಟಿ ಹಣ, ಮೋದಿ-ಯೋಗಿಗಳ ಜೇಬಿನ ದುಡ್ಡಲ್ಲ. ಇದರಿಂದ ಉತ್ತರ ಪ್ರದೇಶದ ಬಡವರ ಕಲ್ಯಾಣವಾಗುವುದಿಲ್ಲ. ಮಹಾ ಕುಂಭಮೇಳ ಕೂಡ ಹಿಂದುತ್ವವಾದಿಗಳಾದ ಯೋಗಿ ಆದಿತ್ಯನಾಥ್ ಮತ್ತು ನರೇಂದ್ರ ಮೋದಿಗಳಿಗೆ ಅಧಿಕಾರ ಗಳಿಸುವ ಸಾಧನವೇ ಹೊರತು ಬೇರೇನೂ ಅಲ್ಲ.

WhatsApp Image 2025 11 17 at 3.23.18 PM
ಈ ದಿನ ಸಂಪಾದಕೀಯ
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ|ಗುಜರಾತಿನ ದಲಿತರಿಗೆ ಗಗನ ಕುಸುಮವಾಗೇ ಉಳಿದ ನ್ಯಾಯ

ಗುಜರಾತಿನ ಜನಸಂಖ್ಯೆಯಲ್ಲಿ ದಲಿತರ ಪ್ರಮಾಣ ಕಡಿಮೆ. ಶೇ.6.34 ಮಾತ್ರ. ಇಲ್ಲಿ ದಲಿತರಿಗಿಂತ...

ಈ ದಿನ ಸಂಪಾದಕೀಯ | ಮೋದಿಯ ಸಣ್ಣತನವನ್ನು ದೊಡ್ಡತನದಿಂದ ಸೋಲಿಸಿದ ಇರಾನ್‌!

ಇಂಧನ ಭದ್ರತೆಯನ್ನು ಕಾಪಾಡಿಕೊಳ್ಳಲು ಭಾರತದ ಹಡಗುಗಳು ಹಾರ್ಮುಜ್ ಜಲಸಂಧಿಯಿಂದ ಹಾದುಹೋಗಲು ಅವಕಾಶ...

ಈ ದಿನ ಸಂಪಾದಕೀಯ | SIR ಹೆಸರಲ್ಲಿ ಮಹಿಳೆಯರ ಮತದಾನದ ಹಕ್ಕಿನ ಹರಣ ಅಕ್ಷಮ್ಯ

ಕರ್ನಾಟಕದಲ್ಲಿ ಮಹಿಳೆಯರ ಹಕ್ಕುಗಳನ್ನು ರಕ್ಷಿಸುವ ಕೆಲಸ ಆಗಬೇಕಿದೆ. ಎಸ್‌ಐಆರ್‌ ನಡೆಯುವ ಸಮಯದಲ್ಲಿ...

ಈ ದಿನ ಸಂಪಾದಕೀಯ | ಕಾಂಗ್ರೆಸ್ಸಿಗರಿಗೆ ಇಂದಿರಾ ಬೇಕು, ಬಡವರ ಕ್ಯಾಂಟೀನ್ ಬೇಡ

ಶಾಸಕರು, ಸಚಿವರು, ಅಧಿಕಾರಿಗಳು ವಾರಕ್ಕೊಂದು ಸಲವಾದರೂ ಇಂದಿರಾ ಕ್ಯಾಂಟೀನ್‌ನಲ್ಲಿ ಊಟ-ತಿಂಡಿ ಮಾಡಬೇಕಿದೆ....