ಈ ದಿನ ಸಂಪಾದಕೀಯ | ಆಪರೇಷನ್‌ ಹಸ್ತದ ಚರ್ಚೆ: ನಿರ್ಲಜ್ಜ ರಾಜಕೀಯ ನಡೆಗಳು

Date:

ʼಆಪರೇಷನ್‌ ಹಸ್ತʼದ ಬಗ್ಗೆ ಕಾಂಗ್ರೆಸ್ಸಿನ ನಾಯಕರು ಏನೇ ಸಬೂಬುಗಳನ್ನು ಹೇಳಿದರೂ ಈ ವಿದ್ಯಮಾನ ಅತ್ಯಂತ ಖಂಡನೀಯವಾದುದು. ತಾವು ಅಧಿಕಾರದಲ್ಲಿದ್ದಾಗ ನಡೆಸುವ ಇಂತಹ ಆಪರೇಷನ್‌ ಗಳು ಮುಂದೆ ಬಿಜೆಪಿ ನಡೆಸುವ ಕಾರ್ಯಾಚರಣೆಗಳಿಗೆ ಸಮರ್ಥನೆ ಒದಗಿಸುತ್ತದೆ.

ಈ ದೇಶದಲ್ಲಿ ʼಆಪರೇಷನ್‌ ಕಮಲʼದ ಅತಿ ದೊಡ್ಡ ಬಲಿಪಶುವಾದ ಕಾಂಗ್ರೆಸ್‌ ಪಕ್ಷದ ಕೆಲವು ನಾಯಕರು ʼಆಪರೇಷನ್‌ ಹಸ್ತʼದ ಕುರಿತು ಮಾತನಾಡುತ್ತಿದ್ದಾರೆ. ಈ ರಾಜಕೀಯ ನಿರ್ಲಜ್ಜತೆಯು ಖಂಡನೀಯವಾದುದು. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇದರ ಕುರಿತು ಮಾತನಾಡಿಲ್ಲ. ಕೆಪಿಸಿಸಿ ಅಧ್ಯಕ್ಷರೂ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ನಿರಾಕರಣೆಯ ಮಾತನಾಡಿದ್ದರೂ ʼರಾಜಕೀಯದಲ್ಲಿ ಏನು ಬೇಕಾದರೂ ಆಗಬಹುದುʼ ಎಂದಿದ್ದಾರೆ. ಸಚಿವರಾದ ಚಲುವರಾಯಸ್ವಾಮಿ ಮತ್ತು ಬೋಸರಾಜು ಅವರು ಇಂತಹ ಸಾಧ್ಯತೆಯ ಸುಳಿವು ನೀಡಿದ್ದಾರೆ.

135 ಸೀಟುಗಳ ದೊಡ್ಡ ಬಹುಮತ ಪಡೆದುಕೊಂಡ ಪಕ್ಷವೊಂದು ಅದರ ಬಲದಿಂದ ಹಳಿತಪ್ಪಿದ್ದ ಆಡಳಿತವನ್ನು ಸರಿದಾರಿಗೆ ತರುವ ಕೆಲಸದ ಮೇಲೆ ತನ್ನ ಗಮನ ಕೇಂದ್ರೀಕರಿಸಬೇಕಿತ್ತು. ಸಾಂಸ್ಥೀಕರಣಗೊಳ್ಳುತ್ತಿರುವ ಭ್ರಷ್ಟಾಚಾರವನ್ನು ತಡೆಗಟ್ಟುವ ನಿಟ್ಟಿನಲ್ಲಿ ನಿರ್ದಿಷ್ಟ ಕ್ರಮಗಳಿಗೆ ಮುಂದಾಗಬೇಕಿತ್ತು. ಸುಳ್ಳು ಸುದ್ದಿ, ದ್ವೇಷ ಭಾಷಣ, ಕೋಮು ದ್ವೇಷ ಹರಡುವ ಪ್ರಯತ್ನಗಳಿಗೆ ಕಡಿವಾಣ ಹಾಕಲು ಬೇಕಾದ ಸಮಗ್ರ ಕ್ರಮಗಳನ್ನು ಕೈಗೊಳ್ಳಬೇಕಿತ್ತು. ಮೂರ್ನಾಲ್ಕು ಸಚಿವರು ಮಾತ್ರ ತಮ್ಮ ತಮ್ಮ ವ್ಯಾಪ್ತಿಯಲ್ಲಿ ಅಂತಹದ್ದನ್ನು ಮಾಡುತ್ತಿರುವ ಲಕ್ಷಣಗಳು ಕಾಣುತ್ತಿವೆ. ಉಳಿದವರೆಲ್ಲರೂ ಮಾಮೂಲಾಗಿ ನಡೆಯುವ ವಿದ್ಯಮಾನಗಳನ್ನೇ ಮುಂದುವರೆಸಿಕೊಂಡು ಹೋಗುತ್ತಿರುವಂತಿದೆ.

ಅದಕ್ಕೆ ಕಲಶವಿಟ್ಟಂತೆ ಈಗ ಆಪರೇಷನ್‌ ಹಸ್ತದ ಮಾತು. ಎಲ್ಲಾ ಪಕ್ಷಾಂತರಗಳು ಎಲ್ಲಾ ಕಾಲದಲ್ಲೂ ತಪ್ಪು ಎಂದಲ್ಲ. ಆದರೆ, ಒಂದು ಪಕ್ಷದಿಂದ ಗೆದ್ದ ಯಾವುದೇ ಶಾಸಕ, ಹೊಸ ಸರ್ಕಾರ ರಚನೆಯಾದ ಕೂಡಲೇ ʼತನ್ನ ಪಕ್ಷವು ಸರಿಯಿಲ್ಲ, ಆಡಳಿತ ಪಕ್ಷಕ್ಕೆ ಹೋಗುವುದೇ ಸರಿʼ ಎಂಬ ಅಭಿಪ್ರಾಯಕ್ಕೆ ಬರುವುದೇ ಹಾಸ್ಯಾಸ್ಪದ. ಆಮಿಷ, ಅಧಿಕಾರದ ದಾಹ ಅಥವಾ ಬೆದರಿಕೆ ಅಲ್ಲದೇ ಇನ್ನೇನು ಕಾರಣ ಇರಲು ಸಾಧ್ಯ? ಒಂದು ವೇಳೆ ಏನೇ ಕಾರಣಗಳಿದ್ದರೂ, ಚುನಾವಣೆಯಲ್ಲಿ ಸ್ಪರ್ಧಿಸಿದಾಗ ಇರದ ಸಮಸ್ಯೆ ಈಗ ಇದ್ದಕ್ಕಿದ್ದಂತೆ ಉದ್ಭವಿಸಿತೇ? ಇಡೀ ದೇಶದಲ್ಲಿ ಬಿಜೆಪಿ ನಡೆಸಿದ ಇಂತಹ ಅಸಹ್ಯದ ಕ್ರಮಗಳಿಂದ ಹಲವಾರು ರಾಜ್ಯಗಳಲ್ಲಿ ಅಧಿಕಾರವನ್ನು ಕಳೆದುಕೊಂಡ ಕಾಂಗ್ರೆಸ್‌ ನಾಯಕತ್ವ ಇದಕ್ಕೆ ಮೌನ ಸಮ್ಮತಿ ನೀಡಿದೆಯೇ?

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಬಿಲ್ಕಿಸ್‌ ಕಾನೂನು ಸಮರ – ನ್ಯಾಯವ್ಯವಸ್ಥೆಯ ಅಣಕ

ಈ ವಿಚಾರದಲ್ಲಿ ಕಾಂಗ್ರೆಸ್ಸಿನ ನಾಯಕರು ಏನೇ ಸಬೂಬುಗಳನ್ನು ಹೇಳಿದರೂ ಈ ವಿದ್ಯಮಾನ ಅತ್ಯಂತ ಖಂಡನೀಯವಾದುದು. ತಾವು ಅಧಿಕಾರದಲ್ಲಿದ್ದಾಗ ನಡೆಸುವ ಇಂತಹ ಆಪರೇಷನ್‌ ಗಳು ಮುಂದೆ ಬಿಜೆಪಿ ನಡೆಸುವ ಕಾರ್ಯಾಚರಣೆಗಳಿಗೆ ಸಮರ್ಥನೆ ಒದಗಿಸುತ್ತದೆ. ಅಷ್ಟೇ ಅಲ್ಲ, ಬಿಜೆಪಿಗೂ ಕಾಂಗ್ರೆಸ್ಸಿಗೂ ರಾಜಕೀಯ ಮೌಲ್ಯಗಳ ದೃಷ್ಟಿಯಿಂದ ಯಾವ ವ್ಯತ್ಯಾಸವೂ ಇಲ್ಲವೆಂಬುದನ್ನೇ ಸಾರುತ್ತದೆ. ಪಕ್ಷಾಂತರದ ದೃಷ್ಟಿಯಲ್ಲಿ ಅಲ್ಪ ಸ್ವಲ್ಪ ಮರ್ಯಾದೆ ಇಟ್ಟುಕೊಂಡಿರುವುದು ಎಡಪಕ್ಷಗಳು ಮಾತ್ರವೇ ಆಗಿವೆ. ಉಳಿದ ಎಲ್ಲಾ ಪಕ್ಷಗಳಲ್ಲೂ ಆಯಾರಾಂ ಗಯಾರಾಂ ಇದ್ದದ್ದೇ.

ಆದರೆ ಬಿಜೆಪಿಯು ಅದನ್ನು ಇನ್ನೊಂದು ಮಟ್ಟಕ್ಕೆ ಕೆಳಕ್ಕಿಳಿಸಿತು. ಪಕ್ಷಾಂತರ ನಿಷೇಧ ಕಾಯ್ದೆಯಿಂದ ತಪ್ಪಿಸಿಕೊಳ್ಳಲು ಗೆದ್ದವರಿಂದ ರಾಜೀನಾಮೆ ಕೊಡಿಸಿ ಮತ್ತೆ ಅವರನ್ನೇ ಕಣಕ್ಕಿಳಿಸುವ ದಾರಿಯದು. ಅದನ್ನೇ ʼಆಪರೇಷನ್‌ ಕಮಲʼ ಎಂದು ಕರೆಯಲಾಯಿತು ಮತ್ತು ಅದನ್ನು ಯಥೇಚ್ಛವಾಗಿ ಬಳಸಿದ್ದು ಕರ್ನಾಟಕದಲ್ಲೇ. ಅಕ್ರಮ ಗಣಿಗಾರಿಕೆಯ ಹಣದಿಂದ ರೆಡ್ಡಿ-ರಾಮುಲುಗಳು ನಡೆಸಿದ ಅಕ್ರಮ ರಾಜಕೀಯ ಕಾರ್ಯಾಚರಣೆಯದಾಗಿತ್ತು. ಮೋದಿ ಅಮಿತ್‌ ಶಾ ಹಾಗೂ ಆರೆಸೆಸ್ಸಿನ ಅಖಂಡ ಬೆಂಬಲದೊಂದಿಗೆ ಬಿಜೆಪಿಯು ಅದನ್ನು ರಾಜ್ಯದಲ್ಲೂ 2019ರಲ್ಲಿ ಪುನರಾವರ್ತನೆ ಮಾಡಿತು ಮತ್ತು ಇಡೀ ದೇಶದಲ್ಲೂ ನಡೆಸಿತು.

ದೇಶದ ಬಹುತೇಕ ಪ್ರಜ್ಞಾವಂತರು ಬಿಜೆಪಿಯ ಈ ಕ್ರಮಗಳನ್ನು ಖಂಡಿಸಿದರು; ಅಸಹ್ಯ ಪಟ್ಟುಕೊಂಡರು ಮತ್ತು ಪ್ರಜಾಪ್ರಭುತ್ವದ ಮೇಲೆಯೇ ವಿಶ್ವಾಸ ಹೋಗುವ ಕ್ರಮಗಳೆಂದು ಟೀಕಿಸಿದರು. ಹೀಗಿರುವಾಗ ಕಾಂಗ್ರೆಸ್ಸಿನ ಯಾವುದೇ ನಾಯಕರು ಇಂತಹ ಕೆಲಸ ಮಾಡುವುದಿರಲಿ, ಆಪರೇಷನ್ನಿನ ಮಾತುಗಳನ್ನಾಡುವುದೇ ಲಜ್ಜೆಗೇಡಿನ ಕೆಲಸವಾಗಿದೆ.

ಪದೇ ಪದೇ ನಡೆಯುವ ಇಂತಹ ಸಾರ್ವಜನಿಕ ಚರ್ಚೆಗಳು ತಪ್ಪು ನಡೆಗಳಿಗೆ ಮಾನ್ಯತೆ ತಂದುಕೊಡುತ್ತಾ ಹೋಗುತ್ತವೆ. ʼಸಾರ್ವಜನಿಕವಾಗಿ ಇಂತಹ ಮಾತುಗಳನ್ನು ಆಡಲೂಬಾರದು, ಗುಟ್ಟಾಗಿ ಒಪ್ಪಂದಗಳೂ ಆಗಬಾರದುʼ ಎಂಬ ತಿಳಿವಳಿಕೆಯನ್ನು ಕಾಂಗ್ರೆಸ್‌ ನಾಯಕರು ತಮ್ಮವರಿಗೆ ನೀಡದೇ ಇದ್ದಲ್ಲಿ, ಈ ಚುನಾವಣೆಯಲ್ಲಿ ಅವರಿಗೆ ಸಿಕ್ಕ ಬಹುಮತವನ್ನೇ ಅವಮಾನಿಸಿದಂತೆ.

WhatsApp Image 2025 11 17 at 3.23.18 PM
ಈ ದಿನ ಸಂಪಾದಕೀಯ
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ|ಗುಜರಾತಿನ ದಲಿತರಿಗೆ ಗಗನ ಕುಸುಮವಾಗೇ ಉಳಿದ ನ್ಯಾಯ

ಗುಜರಾತಿನ ಜನಸಂಖ್ಯೆಯಲ್ಲಿ ದಲಿತರ ಪ್ರಮಾಣ ಕಡಿಮೆ. ಶೇ.6.34 ಮಾತ್ರ. ಇಲ್ಲಿ ದಲಿತರಿಗಿಂತ...

ಈ ದಿನ ಸಂಪಾದಕೀಯ | ಮೋದಿಯ ಸಣ್ಣತನವನ್ನು ದೊಡ್ಡತನದಿಂದ ಸೋಲಿಸಿದ ಇರಾನ್‌!

ಇಂಧನ ಭದ್ರತೆಯನ್ನು ಕಾಪಾಡಿಕೊಳ್ಳಲು ಭಾರತದ ಹಡಗುಗಳು ಹಾರ್ಮುಜ್ ಜಲಸಂಧಿಯಿಂದ ಹಾದುಹೋಗಲು ಅವಕಾಶ...

ಈ ದಿನ ಸಂಪಾದಕೀಯ | SIR ಹೆಸರಲ್ಲಿ ಮಹಿಳೆಯರ ಮತದಾನದ ಹಕ್ಕಿನ ಹರಣ ಅಕ್ಷಮ್ಯ

ಕರ್ನಾಟಕದಲ್ಲಿ ಮಹಿಳೆಯರ ಹಕ್ಕುಗಳನ್ನು ರಕ್ಷಿಸುವ ಕೆಲಸ ಆಗಬೇಕಿದೆ. ಎಸ್‌ಐಆರ್‌ ನಡೆಯುವ ಸಮಯದಲ್ಲಿ...

ಈ ದಿನ ಸಂಪಾದಕೀಯ | ಕಾಂಗ್ರೆಸ್ಸಿಗರಿಗೆ ಇಂದಿರಾ ಬೇಕು, ಬಡವರ ಕ್ಯಾಂಟೀನ್ ಬೇಡ

ಶಾಸಕರು, ಸಚಿವರು, ಅಧಿಕಾರಿಗಳು ವಾರಕ್ಕೊಂದು ಸಲವಾದರೂ ಇಂದಿರಾ ಕ್ಯಾಂಟೀನ್‌ನಲ್ಲಿ ಊಟ-ತಿಂಡಿ ಮಾಡಬೇಕಿದೆ....