ಈ ದಿನ ಸಂಪಾದಕೀಯ | ಪವನ್ – ಕಂಗನಾ ಎಂಬ ‘ಬುದ್ಧಿ’ವಂತರು ಮತ್ತು ಬಿಜೆಪಿ

Date:

ಅತ್ತ ಕಂಗನಾ ರಣಾವತ್ ಎಂಬ ಅಪ್ರಬುದ್ಧ ನಟಿ, ಸಂಸದೆ ದೇಶದ ಅನ್ನದಾತರ ಬಗ್ಗೆ ಕ್ಷುಲ್ಲಕವಾಗಿ ಮಾತನಾಡುತ್ತಾರೆ. ಇತ್ತ ಪವನ್ ಎಂಬ ಅಪ್ರಬುದ್ಧ ರಾಜಕಾರಣಿ ಜನ ಕೊಟ್ಟ ಅಧಿಕಾರ ಬಳಸಿ ಕ್ರಮ ಕೈಗೊಳ್ಳುವುದನ್ನು ಬಿಟ್ಟು ಕಲ್ಲಿಗೆ ಕುಂಕುಮ ಬಳಿಯುತ್ತ ಕೂರುತ್ತಾರೆ. ಈ ದೇಶ 'ವಿಶ್ವಗುರು'ವಾಗುವುದರಲ್ಲಿ ಅನುಮಾನವೇ ಇಲ್ಲ!

ಆಂಧ್ರಪ್ರದೇಶದ ಪ್ರಸಿದ್ಧ ತಿರುಮಲ ತಿರುಪತಿ ದೇವಸ್ಥಾನದ ಲಡ್ಡು ಪ್ರಸಾದದಲ್ಲಿ ದನದ ಕೊಬ್ಬು ಬಳಕೆ ಸುದ್ದಿ ಇಡೀ ದೇಶದ ಆಸ್ತಿಕರು-ಭಕ್ತರನ್ನು ಬೆಚ್ಚಿ ಬೀಳಿಸಿದೆ. ಕೇಂದ್ರದಲ್ಲಿ ಹಿಂದುತ್ವ ಪ್ರತಿಪಾದಿಸುವ ಬಿಜೆಪಿ ಸರ್ಕಾರ, ಆಂಧ್ರದಲ್ಲಿ ಅದರ ಮೈತ್ರಿ ಸರ್ಕಾರ ಆಡಳಿತದಲ್ಲಿರುವ ಸಂದರ್ಭದಲ್ಲಿಯೇ ಹಿಂದೂ ದೇವಾಲಯದಲ್ಲಿ ಈ ಅವ್ಯವಹಾರ, ಅಕ್ರಮ ಬಯಲಾಗಿದೆ.

ಕುತೂಹಲಕರ ಸಂಗತಿ ಎಂದರೆ, ಲಡ್ಡು ಪ್ರಸಾದದಲ್ಲಿ ದನದ ಕೊಬ್ಬು ಬಳಸಲಾಗಿದೆ ಎಂದು ಬಹಿರಂಗಗೊಳಿಸಿದವರು ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು. ಅವರ ಆರೋಪವಿದ್ದದ್ದು ಮಾಜಿ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿಯವರ ಮೇಲೆ. ಅದು ನೇರವಾಗಿ ಹಣಕಾಸಿನ ಅವ್ಯವಹಾರ ಕುರಿತದ್ದಾಗಿತ್ತು. ಆರೋಪ ಮಾಡುತ್ತಿರುವವರೇ ಈಗ ಮುಖ್ಯಮಂತ್ರಿಯಾಗಿರುವಾಗ, ಅವ್ಯವಹಾರ ಕುರಿತು ತನಿಖೆ ಮಾಡಿ, ತಪ್ಪಿತಸ್ಥರ ಮೇಲೆ ಕಾನೂನು ಕ್ರಮ ಕೈಗೊಳ್ಳಬಹುದಾಗಿತ್ತು.

ಆದರೆ, ಆಂಧ್ರ ಸರ್ಕಾರ ಅನಗತ್ಯವಾಗಿ ಜಾತಿ, ಧರ್ಮವನ್ನು ಎಳೆದು ತಂದು ರಾಡಿ ಎಬ್ಬಿಸುತ್ತಿದೆ. ಚಿಲ್ಲರೆ ರಾಜಕಾರಣದಲ್ಲಿ ಮುಳುಗಿದೆ. ಅವರು ಪ್ರಸಾದದಲ್ಲಿ ದನದ ಕೊಬ್ಬು ಬಳಸಿ ಮುಗ್ಧ ಭಕ್ತರ ನಂಬಿಕೆಗೆ ದ್ರೋಹ ಬಗೆದರೆ; ಇವರು ಅದನ್ನು ಬಹಿರಂಗಗೊಳಿಸಿ ಭಕ್ತರ ಮನಸ್ಸನ್ನು ಘಾಸಿಗೊಳಿಸುತ್ತಿದ್ದಾರೆ. ಇಬ್ಬರೂ ಭಕ್ತರ ಭಾವನೆಗಳೊಂದಿಗೆ ಚೆಲ್ಲಾಟವಾಡುತ್ತಿದ್ದಾರೆ.  

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ನಡೆಯಲ್ಲಿ ಹತ್ತಾರು ಆಲೋಚನೆಗಳಿರಬಹುದು. ಆದರೆ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್‌ಗೆ ಬಡಿದಿರುವ ರೋಗವಾದರೂ ಏನು ಎನ್ನುವುದು ಸದ್ಯಕ್ಕೆ ಅವರ ಅಭಿಮಾನಿಗಳ ಪ್ರಶ್ನೆಯಾಗಿದೆ.

‘ವೈಯಕ್ತಿಕ ನೆಲೆಯಲ್ಲಿ ಈ ಘಟನೆ ನನ್ನನ್ನು ಘಾಸಿಗೊಳಿಸಿದೆ. ಸಂಸ್ಕೃತಿ, ನಂಬಿಕೆ ಮತ್ತು ಶ್ರದ್ಧೆಯ ಪವಿತ್ರ ಕೇಂದ್ರವಾಗಿರುವ ತಿರುಪತಿ ಬಾಲಾಜಿ ಧಾಮದ ಪ್ರಸಾದದಲ್ಲಿ ಕಲಬೆರಕೆ ಮಾಡಿರುವುದು ತೀವ್ರ ನೋವುಂಟು ಮಾಡಿದೆ. ಮೋಸ ಹೋದ ಭಾವನೆ ಉಂಟಾಗುತ್ತಿದೆ. ಹೀಗಾಗಿ ನಾನು ಬಾಲಾಜಿಯಲ್ಲಿ ಕ್ಷಮಿಸುವಂತೆ ಬೇಡಿಕೊಂಡು, 11 ದಿನಗಳ ಕಾಲ ಉಪವಾಸ ವ್ರತಾಚರಣೆ ಕೈಗೊಳ್ಳುತ್ತಿದ್ದೇನೆ’ ಎಂದಿದ್ದಾರೆ.

ಅಷ್ಟೇ ಅಲ್ಲ, ಸನಾತನ ಧರ್ಮವನ್ನು ನಂಬುವ ಪ್ರತಿಯೊಬ್ಬ ವ್ಯಕ್ತಿಯೂ ಕಲಿಯುಗದ ದೇವರಾದ ಬಾಲಾಜಿಗೆ ಮಾಡಿರುವ ಘೋರ ಅನ್ಯಾಯಕ್ಕೆ ಪ್ರಾಯಶ್ಚಿತ್ತ ಮಾಡಿಕೊಳ್ಳಬೇಕಿದೆ ಎಂಬ ಫರ್ಮಾನು ಹೊರಡಿಸಿದ್ದಾರೆ. ಅಷ್ಟಕ್ಕೇ ಸುಮ್ಮನಿರದೆ, ಗುಂಟೂರು ಜಿಲ್ಲೆಯ ನಂಬೂರಿನ ದಶಾವತಾರ ದೇಗುಲದ ಮೆಟ್ಟಿಲುಗಳಿಗೆ ಹರಿಶಿನ-ಕುಂಕುಮ ಬಳಿದು ಭಕ್ತಿಯನ್ನು ಬಹಿರಂಗಗೊಳಿಸಿದ್ದಾರೆ. ಮುಂದುವರೆದು ಅಕ್ಟೋಬರ್ 1 ಅಥವಾ 2ರಂದು ತಿರುಪತಿ ತಲುಪಿ ಪ್ರಾಯಶ್ಚಿತ್ತ ವ್ರತ ಕೊನೆಗೊಳಿಸುವುದಾಗಿ ತಿಳಿಸಿದ್ದಾರೆ.  

ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಹೆಣ್ಣನ್ನು ದೇವಿಯೆಂದು ಪೂಜಿಸುವ ದೇಶದಲ್ಲಿ ದುಡಿಯವ ಹೆಣ್ಣಿನ ಡಬಲ್ ಶಿಫ್ಟ್!

ಪವನ್ ಕಲ್ಯಾಣ್ ಹೇಳಿ ಕೇಳಿ ಸಿನೆಮಾನಟ. ಚಿತ್ರಗಳ ನಟನೆಯಿಂದ ಜನಪ್ರಿಯತೆ ಗಳಿಸಿದವರು. ಆ ಜನಪ್ರಿಯತೆಯನ್ನೇ ಬಂಡವಾಳವನ್ನಾಗಿ ಬಳಸಿ ‘ಜನಸೇನಾ’ ಎಂಬ ಪಕ್ಷ ಕಟ್ಟಿ ರಾಜಕೀಯ ಕ್ಷೇತ್ರಕ್ಕೆ ಕಾಲಿಟ್ಟವರು. ಜಗನ್ ಮೋಹನ್ ರೆಡ್ಡಿಯನ್ನು ಎದುರು ಹಾಕಿಕೊಂಡು, ಅತಿರೇಕದ ಸಿನಿಮೀಯ ಡೈಲಾಗ್‌ಗಳ ಮೂಲಕ ಅಭಿಮಾನಿಗಳನ್ನು ಉದ್ರೇಕಿಸಿ, ಹುಚ್ಚೆಬ್ಬಿಸಿ ಮತ ಬೆಳೆ ತೆಗೆದವರು. ಗೆದ್ದು ಆಂಧ್ರಪ್ರದೇಶದ ಉಪ ಮುಖ್ಯಮಂತ್ರಿ ಕುರ್ಚಿಯನ್ನು ಅಲಂಕರಿಸಿದವರು.

ಸಿನೆಮಾ ನಟರಾದ ಪವನ್ ಕಲ್ಯಾಣ್ ಹಿಂದು-ಮುಸ್ಲಿಂ-ಕ್ರೈಸ್ತರ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಹಾಗೆಯೇ ರಾಜಕಾರಣಕ್ಕಿಳಿದು ಎಡ-ಬಲ-ನಡು ಪಂಥಗಳಲ್ಲೂ ಗುರುತಿಸಿಕೊಂಡಿದ್ದಾರೆ. ವಿವೇಕಾನಂದ, ಅಂಬೇಡ್ಕರ್, ಗಾಂಧಿವಾದಿಯಾಗಿ ವಕಾಲತ್ತು ವಹಿಸಿ ಮಾತನಾಡಿದ್ದಾರೆ. ಗೋಮಾಂಸ ತಿನ್ನುವುದು ತಪ್ಪಲ್ಲ ಎಂದು ಕೂಡ ಹೇಳಿದ್ದಾರೆ. ಸನಾತನ ಧರ್ಮ, ಸಂಸ್ಕೃತಿ, ಪರಂಪರೆ ಬಗ್ಗೆ ಮಾತನಾಡುತ್ತ, ಹಿಂದೂ ನಂಬಿಕೆಗಳನ್ನು ಗೌರವಿಸುವಂತೆ ಜನರನ್ನು ಒತ್ತಾಯಿಸುತ್ತಾರೆ. ಯೇಸು ಅಥವಾ ಇಸ್ಲಾಂ ಬಗ್ಗೆ ಏಕೆ ಅಪಹಾಸ್ಯ ಮಾಡಲ್ಲ ಎಂದು ಪ್ರಶ್ನಿಸಿದ್ದಾರೆ. ನಿಜಜೀವನದಲ್ಲಿ ಮೂವರನ್ನು- ನಂದಿನಿ, ರೇಣು, ಆನ- ಇಬ್ಬರು ಹಿಂದು, ಒಬ್ಬರು ಕ್ರಿಶ್ಚಿಯನ್- ಮದುವೆಯಾಗಿ, ನಾಲ್ಕು ಮಕ್ಕಳನ್ನು ಹೊಂದಿದ್ದಾರೆ.

ಅಸಲಿಗೆ ಕ್ರಿಶ್ಚಿಯನ್ ಧರ್ಮ ಆಚರಣೆ ಮಾಡುತ್ತಿರುವ ಪವನ್ ಕಲ್ಯಾಣ್ ಈಗ ಹಿಂದೂ ಧರ್ಮದ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ನೆಟ್ಟಿಗರು ಕಾಲೆಳೆಯುತ್ತಿದ್ದಾರೆ. ಅದಕ್ಕೆ ಪೂರಕವಾಗಿ ‘ನಾನು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ಆಗಿದ್ದೇನೆ’ ಎಂದು ಹೇಳಿರುವ ವಿಡಿಯೊ ವೈರಲ್ ಆಗುತ್ತಿದೆ. ಇವರ ಬಣ್ಣವಿಲ್ಲದ ಬೀದಿ ನಾಟಕ ನೋಡಿ ಕುಪಿತಗೊಂಡ ನಟ ಪ್ರಕಾಶ್ ರಾಜ್, ‘ನೀವು ಡಿಸಿಎಂ ಆಗಿದ್ದೀರಿ, ನಿಮ್ಮ ಮೂಗಿನ ಕೆಳಗೇ ಇದು ನಡೆದಿದೆ. ದಯವಿಟ್ಟು ತನಿಖೆ ನಡೆಸಿ, ತಪ್ಪಿತಸ್ಥರನ್ನು ಪತ್ತೆ ಮಾಡಿ ಕಠಿಣ ಕ್ರಮ ಕೈಗೊಳ್ಳಿ. ಅದು ಬಿಟ್ಟು ನೀವೇ ಏಕೆ ಆತಂಕಗಳನ್ನು ಸೃಷ್ಟಿಸುತ್ತಿದ್ದೀರಿ ಮತ್ತು ರಾಷ್ಟ್ರಮಟ್ಟದಲ್ಲಿ ಈ ವಿಷಯವನ್ನು ಎತ್ತುತ್ತಿದ್ದೀರಿ. ನಮ್ಮ ದೇಶದಲ್ಲಿ ಈಗಾಗಲೇ ಸಾಕಷ್ಟು ಕೋಮು ಉದ್ವಿಗ್ನತೆ ಇದೆ’ ಎಂದಿರುವುದು ಸರಿಯಾಗಿಯೇ ಇದೆ.

ಪವನ್ ಕಲ್ಯಾಣ್ ಮೂಲತಃ ನಟ. ಯಾವ ವೇಷವನ್ನಾದರೂ ಹಾಕಬಲ್ಲ, ಅಭಿನಯಿಸಬಲ್ಲ, ಎಂತಹ ಸಂದರ್ಭವನ್ನಾದರೂ ನಿಭಾಯಿಸಬಲ್ಲ. ಸಿನೆಮಾದಲ್ಲಿ ಒಂದು ಸೆಟ್, ಒಂದು ಕ್ಯಾಮರಾ ಇದ್ದರೆ, ರಾಜಕಾರಣದಲ್ಲಿ ನೂರಾರು ವೇದಿಕೆಗಳು, ಸಾವಿರಾರು ಕ್ಯಾಮರಾಗಳನ್ನು ಪ್ರತಿದಿನ ಎದುರಿಸಬೇಕಾಗಿದೆ. ನೂರಾರು ವೇಷಗಳಲ್ಲಿ ವಿಕ್ಷಿಪ್ತವಾಗಿ ವರ್ತಿಸುವ ಪವನ್ ಕಲ್ಯಾಣ್, ಮೊದಲಿನಿಂದಲೂ ಮೋದಿ ಭಕ್ತ. ಮೋದಿಗೆ ಪವನ್ ಬೆಳೆದು ಆಂಧ್ರದ ಮುಖ್ಯಮಂತ್ರಿಯಾಗಬೇಕೆಂಬ ಆಸೆ. ಪವನ್‌ಗೆ ಮೋದಿ ನಿರಂತರವಾಗಿ ಪ್ರಧಾನಿ ಹುದ್ದೆಯಲ್ಲಿರಬೇಕೆಂಬ ಬಯಕೆ. ಆದರೆ ಚಂದ್ರಬಾಬು ನಾಯ್ಡುವಿನ ನಡೆಯೇ ಬೇರೆ. ಮೈತ್ರಿಕೂಟದ ಮೂಲಕ ನಾಯ್ಡು ಮೋದಿಯನ್ನು ನಿಯಂತ್ರಿಸಿದರೆ; ಪವನ್ ಮೂಲಕ ಮೋದಿ ನಾಯ್ಡುವನ್ನು ಕೆಳಗಿಳಿಸಲು ಹವಣಿಸುತ್ತಿದ್ದಾರೆ. ಇವರ ರಾಜಕೀಯ ಚದುರಂಗದಾಟದಲ್ಲಿ ತಿರುಪತಿ ತಿಮ್ಮಪ್ಪನ ಭಕ್ತರಿಗೆ ನಾಮ ಬಿಟ್ಟು ಬೇರೇನು ಸಿಗುತ್ತಿದೆ?  

ಅತ್ತ ಕಂಗನಾ ರಣಾವತ್ ಎಂಬ ಅಪ್ರಬುದ್ಧ ನಟಿ, ಸಂಸದೆ ದೇಶದ ಅನ್ನದಾತರ ಬಗ್ಗೆ ಕ್ಷುಲ್ಲಕವಾಗಿ ಮಾತನಾಡುತ್ತಾರೆ. ಇತ್ತ ಪವನ್ ಎಂಬ ಅಪ್ರಬುದ್ಧ ರಾಜಕಾರಣಿ ಜನ ಕೊಟ್ಟ ಅಧಿಕಾರ ಬಳಸಿ ಕ್ರಮ ಕೈಗೊಳ್ಳುವುದನ್ನು ಬಿಟ್ಟು ಕಲ್ಲಿಗೆ ಕುಂಕುಮ ಬಳಿಯುತ್ತ ಕೂರುತ್ತಾರೆ. ಒಬ್ಬರು ಬಿಜೆಪಿಯಾದರೆ, ಮತ್ತೊಬ್ಬರು ಬಿಜೆಪಿ ಬೆಂಬಲಿತರು. ಇಂತಹ ನಕಲಿಗಳನ್ನು ಆಯ್ಕೆ ಮಾಡಿಕೊಂಡಿರುವ, ಅವರಿಂದ ಆಳಿಸಿಕೊಳ್ಳುತ್ತಿರುವ ನಾವು ನಿಜಕ್ಕೂ ‘ಭಾಗ್ಯವಂತರು’. ಈ ದೇಶ ‘ವಿಶ್ವಗುರು’ವಾಗುವುದರಲ್ಲಿ ಅನುಮಾನವೇ ಇಲ್ಲ!

WhatsApp Image 2025 11 17 at 3.23.18 PM
ಈ ದಿನ ಸಂಪಾದಕೀಯ
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ|ಗುಜರಾತಿನ ದಲಿತರಿಗೆ ಗಗನ ಕುಸುಮವಾಗೇ ಉಳಿದ ನ್ಯಾಯ

ಗುಜರಾತಿನ ಜನಸಂಖ್ಯೆಯಲ್ಲಿ ದಲಿತರ ಪ್ರಮಾಣ ಕಡಿಮೆ. ಶೇ.6.34 ಮಾತ್ರ. ಇಲ್ಲಿ ದಲಿತರಿಗಿಂತ...

ಈ ದಿನ ಸಂಪಾದಕೀಯ | ಮೋದಿಯ ಸಣ್ಣತನವನ್ನು ದೊಡ್ಡತನದಿಂದ ಸೋಲಿಸಿದ ಇರಾನ್‌!

ಇಂಧನ ಭದ್ರತೆಯನ್ನು ಕಾಪಾಡಿಕೊಳ್ಳಲು ಭಾರತದ ಹಡಗುಗಳು ಹಾರ್ಮುಜ್ ಜಲಸಂಧಿಯಿಂದ ಹಾದುಹೋಗಲು ಅವಕಾಶ...

ಈ ದಿನ ಸಂಪಾದಕೀಯ | SIR ಹೆಸರಲ್ಲಿ ಮಹಿಳೆಯರ ಮತದಾನದ ಹಕ್ಕಿನ ಹರಣ ಅಕ್ಷಮ್ಯ

ಕರ್ನಾಟಕದಲ್ಲಿ ಮಹಿಳೆಯರ ಹಕ್ಕುಗಳನ್ನು ರಕ್ಷಿಸುವ ಕೆಲಸ ಆಗಬೇಕಿದೆ. ಎಸ್‌ಐಆರ್‌ ನಡೆಯುವ ಸಮಯದಲ್ಲಿ...

ಈ ದಿನ ಸಂಪಾದಕೀಯ | ಕಾಂಗ್ರೆಸ್ಸಿಗರಿಗೆ ಇಂದಿರಾ ಬೇಕು, ಬಡವರ ಕ್ಯಾಂಟೀನ್ ಬೇಡ

ಶಾಸಕರು, ಸಚಿವರು, ಅಧಿಕಾರಿಗಳು ವಾರಕ್ಕೊಂದು ಸಲವಾದರೂ ಇಂದಿರಾ ಕ್ಯಾಂಟೀನ್‌ನಲ್ಲಿ ಊಟ-ತಿಂಡಿ ಮಾಡಬೇಕಿದೆ....