ಈ ದಿನ ಸಂಪಾದಕೀಯ | ಪ್ಲಾನ್ ಬಿ ಬಗೆಗಿನ ಮಾತು ಮತ್ತು ನಾಯಕನ ಹಿಂದಿನ ನಾಯಕ

Date:

ಹತ್ತು ವರ್ಷಗಳ ಕಾಲ ಮೋದಿಯನ್ನು ಮೆರೆಯಲು ಬಿಟ್ಟ ಅಮಿತ್ ಶಾ, ಬಿಜೆಪಿಯನ್ನು ಸಂಪದ್ಭರಿತ ಪಕ್ಷವನ್ನಾಗಿ ಮಾಡಿದ್ದಾರೆ. ಅದಾನಿ-ಅಂಬಾನಿಗಳೆಂಬ ಕಾರ್ಪೊರೇಟ್ ಕುಳಗಳನ್ನು ಅಕ್ಕ-ಪಕ್ಕ ನಿಲ್ಲಿಸಿಕೊಂಡು ಶಕ್ತಿ ಪ್ರದರ್ಶಿಸುತ್ತಿದ್ದಾರೆ. ಪ್ಲಾನ್ ಬಿ ಬಗ್ಗೆ ಮಾತನಾಡುತ್ತಿದ್ದಾರೆ. ಕಳೆದ 40 ವರ್ಷಗಳ ಕಾಲ ನಾಯಕನ ಹಿಂದೆ ನಿಂತಿದ್ದ ನಾಯಕ ಈಗ ಮುನ್ನೆಲೆಗೆ ಬರುತ್ತಿದ್ದಾರೆ.

ಎನ್‌ಡಿಟಿವಿ ಸಂದರ್ಶನದಲ್ಲಿ ಗೃಹ ಮಂತ್ರಿ ಅಮಿತ್ ಶಾ, ‘ಪ್ಲಾನ್ ಬಿ ಬಗ್ಗೆ ನಾವು ಯೋಚಿಸಿಲ್ಲ. 272 ಸರಳ ಬಹುಮತ ಬರುವುದರಲ್ಲಿ ಅನುಮಾನವಿಲ್ಲ. ಬರದಿದ್ದರೆ, ನೋಡೋಣ’ ಎಂದಿದ್ದಾರೆ.

ಚುನಾವಣೆ ಆರಂಭವಾದ ದಿನದಿಂದಲೂ ಚಾರ್ ಸವ್ ಪಾರ್ ಬಗ್ಗೆ ಆತ್ಮವಿಶ್ವಾಸದಿಂದ ಮಾತನಾಡುತ್ತಿದ್ದ ಮೋದಿ ಮತ್ತು ಅಮಿತ್ ಶಾ, ಈಗ ಇದ್ದಕ್ಕಿದ್ದಂತೆ ಪ್ಲಾನ್ ಬಿ ಬಗ್ಗೆ ಮಾತನಾಡುತ್ತಿದ್ದಾರೆಂದರೆ, ವಾಸ್ತವಸ್ಥಿತಿ ಅರಿವಿಗೆ ಬಂದಿದೆ, ಅಧಿಕಾರ ಕೈ ತಪ್ಪುವ ಸೂಚನೆ ಸಿಕ್ಕಿದೆ ಎಂದೇ ಅರ್ಥ.

ಇದಕ್ಕೆ ಪೂರಕವಾಗಿ ಆಮ್ ಆದ್ಮಿ ಮುಖಂಡ ಅರವಿಂದ ಕೇಜ್ರಿವಾಲ್, ‘ಗೃಹ ಸಚಿವ ಅಮಿತ್ ಶಾಗೆ ಭವಿಷ್ಯದಲ್ಲಿ ಪ್ರಧಾನಿ ಸ್ಥಾನಕ್ಕೆ ಏರಲು ಪ್ರಧಾನಿ ನರೇಂದ್ರ ಮೋದಿ ಮಾರ್ಗವನ್ನು ತೆರವುಗೊಳಿಸುತ್ತಿದ್ದಾರೆ, ಅವರ ಪರವಾಗಿ ಮತಯಾಚನೆ ಮಾಡುತ್ತಿದ್ದಾರೆ’ ಎಂದಿರುವುದು ಭವಿಷ್ಯವನ್ನು ಕಣ್ಮುಂದೆ ತಂದು ನಿಲ್ಲಿಸಿ, ಮೋಶಾಗಳಿಗೆ ಗರಬಡಿಸಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಇದರಿಂದ ಇನ್ನಷ್ಟು ವಿಚಲಿತರಾಗಿರುವ ಮೋದಿ ಮತ್ತು ಅಮಿತ್ ಶಾ- ಮುಸ್ಲಿಮರು, ಮಂಗಳಸೂತ್ರ, ಮೀಸಲಾತಿ, ಆಸ್ತಿ ಹಂಚಿಕೆ, ರಾಮಮಂದಿರಕ್ಕೆ ಬುಲ್ಡೋಜರ್, ದೇವಾಲಯಗಳ ಚಿನ್ನದ ಬಗ್ಗೆ ಮಾತನಾಡುತ್ತಿದ್ದಾರೆ. ಈ ಮಾತುಗಳನ್ನು ಸೂಕ್ಷ್ಮವಾಗಿ ಅವಲೋಕಿಸಿದರೆ, ಬಿಜೆಪಿಯ ಬಂಡವಾಳ ಬಯಲಾಗುತ್ತದೆ. ಹತ್ತು ವರ್ಷಗಳ ಆಡಳಿತ, ಅಭಿವೃದ್ಧಿ ಮತ್ತು ಪ್ರಣಾಳಿಕೆಯ ಬಗ್ಗೆ ಮಾತನಾಡದ ಪ್ರಧಾನಿ ಮೋದಿಯವರು, ಎಷ್ಟೂಂತ ಸುಳ್ಳುಗಳನ್ನು ಹೇಳುತ್ತಾರೆ? ದೇಶದ ಜನ ಎಷ್ಟು ದಿನ ಸಹಿಸಿಕೊಳ್ಳುತ್ತಾರೆ?

ನಾಲ್ಕನೇ ಹಂತದ ಮತದಾನದ ನಂತರ ಮೋದಿ ಮತ್ತು ಅಮಿತ್ ಶಾಗೆ ವಾಸ್ತವಸ್ಥಿತಿ ಅರಿವಾಗತೊಡಗಿದೆ. ಹಾಗಾಗಿಯೇ ಅಮಿತ್ ಶಾ ಪ್ಲಾನ್ ಬಿ ಬಗ್ಗೆ ಮಾತನಾಡುತ್ತಿದ್ದಾರೆ. ನಾಯಕನ ಹಿಂದೆ ನಿಂತಿರುವ ನಾಯಕ ಮುನ್ನೆಲೆಗೆ ಬರುತ್ತಿದ್ದಾನೆ.

ಭಾರತೀಯ ಜನತಾ ಪಕ್ಷದ ಹಿಂದೆ ನಾಗಪುರದ ರಾಷ್ಟ್ರೀಯ ಸ್ವಯಂಸೇವಕ ಸಂಘವಿದೆ ಎನ್ನುವುದು ಜನಜನಿತ. ಸಂಘದ ಸಹವಾಸಕ್ಕೆ ಬಿದ್ದ, ಚೆಡ್ಡಿ ತೊಡುವ ಕಾಲದಲ್ಲಿಯೇ ಒಂದಾದ ಮೋದಿ ಮತ್ತು ಅಮಿತ್ ಶಾರ ಗೆಳೆತನಕ್ಕೆ ಈಗ 40 ವರ್ಷ. ಈ ಸುದೀರ್ಘ ಸಹವಾಸ ಸಂಘದ ಶಾಖೆಗಳಲ್ಲಿ ಸೇವೆ ಸಲ್ಲಿಸುವುದಕ್ಕಷ್ಟೇ ಸೀಮಿತವಾಗಲಿಲ್ಲ. ರಾಜಕಾರಣಕ್ಕೆ ಮೆಟ್ಟಿಲಾಯಿತು, ಅಧಿಕಾರದ ಸ್ಥಾನಗಳನ್ನು ಕರುಣಿಸಿತು. ಪ್ರಚಾರ, ಪ್ರಭಾವಳಿಗಳನ್ನು ಸೃಷ್ಟಿಸಿ ದೇಶದ ಅತ್ಯಂತ ಪ್ರಭಾವಿ ವ್ಯಕ್ತಿಗಳನ್ನಾಗಿಸಿತು. ಇಡೀ ದೇಶವೇ ಈ ಇಬ್ಬರ ಕೈವಶವಾಯಿತು.

1982ರಲ್ಲಿ, ಆರೆಸೆಸ್ ಶಾಖಾ ಸರ್ಕಲ್‌ನಲ್ಲಿ ನರೇಂದ್ರ ಮೋದಿಯನ್ನು ಮೊದಲ ಬಾರಿಗೆ ಭೇಟಿಯಾದ ಅಮಿತ್ ಶಾ, ಆತ್ಮೀಯರಾದರು. 1986ರಲ್ಲಿ ಅಧಿಕೃತವಾಗಿ ಬಿಜೆಪಿ ಸೇರಿ ಯುವಮೋರ್ಚಾದ ಕಟ್ಟಾಳುಗಳಾದರು. 1991ರ ಲೋಕಸಭಾ ಚುನಾವಣೆಯಲ್ಲಿ ಅಡ್ವಾಣಿಯವರ ಪರ ಪ್ರಚಾರಕಾರ್ಯದಲ್ಲಿ ತೊಡಗಿ, ನಾಯಕರ ಕಣ್ಣಿಗೆ ಬಿದ್ದರು. 1995ರಲ್ಲಿ ಗುಜರಾತಿನಲ್ಲಿ ಪಕ್ಷವನ್ನು ಬೇರುಮಟ್ಟದಿಂದ ಸಂಘಟಿಸಿ ಬಿಜೆಪಿಯನ್ನು ಅಧಿಕಾರಕ್ಕೆ ತಂದರು. ಪಂಚಾಯ್ತಿ, ಸಹಕಾರ, ಕ್ರೀಡಾ ಕ್ಷೇತಗಳಲ್ಲಿ ನೆಲೆಯೂರಿದ್ದ ಬಲಾಢ್ಯ ಪಟೇಲ್, ಗದೇರಿಯ, ಕ್ಷತ್ರಿಯ ಸಮುದಾಯಗಳನ್ನು ಹೊರದಬ್ಬಿದರು. ಕೇವಲ ಎರಡು ವರ್ಷಗಳ ಅವಧಿಯಲ್ಲಿ, 1997ರಲ್ಲಿ ಗುಜರಾತನ್ನು ಕೈವಶ ಮಾಡಿಕೊಂಡರು. 2001ರಲ್ಲಿ ಕೇಶುಭಾಯ್ ಪಟೇಲರನ್ನು ಕೆಳಗಿಳಿಸಿ ಮೋದಿ ಮುಖ್ಯಮಂತ್ರಿಯಾದರು. ಮೋದಿಯನ್ನು ಮುಖ್ಯಮಂತ್ರಿಯಾಗಿಸುವಲ್ಲಿ ಅಮಿತ್ ಶಾರ ಅವಿರತ ಶ್ರಮವಿತ್ತು. ಅದಕ್ಕೆ ಪ್ರತಿಯಾಗಿ ಮೋದಿಯವರು, 2002ರಲ್ಲಿ ಮೊದಲ ಬಾರಿಗೆ ಶಾಸಕರಾಗಿ ಗೆದ್ದ 33ರ ವಯಸ್ಸಿನ ಅಮಿತ್ ಶಾಗೆ, 12 ಖಾತೆಗಳ ಜವಾಬ್ದಾರಿ ವಹಿಸಿದ್ದು ಸಾಲದೆಂದು, ಗುಜರಾತಿನ ಗೃಹ ಖಾತೆಯನ್ನೂ ದಯಪಾಲಿಸಿದ್ದರು.

ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ರಾಜ್ಯವನ್ನು ತಲ್ಲಣಿಸಿದ ಹೆಣ್ಣುಮಕ್ಕಳ ಸರಣಿ ಹತ್ಯೆಗಳು ಕೊಡುತ್ತಿರುವ ಸಂದೇಶವೇನು? 

1964ರಲ್ಲಿ ಮುಂಬೈನ ಮಧ್ಯಮವರ್ಗದ ವ್ಯಾಪಾರಿ ಕುಟುಂಬದಲ್ಲಿ ಜನಿಸಿದ ಅಮಿತ್ ಶಾ, ಗುಜರಾತಿ ಬನಿಯಾ-ಜೈನ್ ಸಮುದಾಯಕ್ಕೆ ಸೇರಿದವರು. ಬಯೋಕೆಮಿಸ್ಟ್ರಿ ಪದವೀಧರರು. ಕೆಲ ಕಾಲ ಶೇರ್ ಬ್ರೋಕರ್ ಆಗಿದ್ದರು. ಅಪ್ಪನ ಪಿವಿಸಿ ಪೈಪ್ ವ್ಯವಹಾರದಲ್ಲೂ ಕೈಯಾಡಿಸಿದ್ದರು. ಇಂತಹ ಹಿನ್ನೆಲೆಯಿಂದ ಬಂದ ಅಮಿತ್ ಶಾ, ರಾಜಕಾರಣಕ್ಕೆ ಅಡಿ ಇಡುತ್ತಿದ್ದಂತೆ, ಹಣ ಹರಿದಾಡುವ ಸಹಕಾರ, ಕ್ರೀಡೆ ಮತ್ತು ಬ್ಯಾಂಕಿಂಗ್ ಕ್ಷೇತ್ರಗಳನ್ನು ಕಬ್ಜಾ ಮಾಡಿಕೊಂಡರು. ಶಾಸಕರಾಗಿ ಗೆದ್ದಾಗ ಗುಜರಾತನ್ನೇ ಆಟದ ಮೈದಾನವನ್ನಾಗಿಸಿಕೊಂಡರು.

ಆನಂತರದ 10 ವರ್ಷಗಳಲ್ಲಿ ಗುಜರಾತಿನಲ್ಲಿ ಮೋದಿ ಮತ್ತು ಅಮಿತ್ ಶಾ ಮಾಡಿದ ಅವಾಂತರಗಳು, ನರಮೇಧಗಳು, ಹತ್ಯಾಕಾಂಡಗಳು ದೇಶವನ್ನು ತಲ್ಲಣಗೊಳಿಸಿದವು. ಪ್ರಪಂಚದಾದ್ಯಂತ ಸುದ್ದಿಯಾಗಿ ಪ್ರಜಾಪ್ರಭುತ್ವವನ್ನು ಅಣಕಿಸಿದವು. ವಾಜಪೇಯಿ ರಾಜಧರ್ಮ ಪಾಲಿಸಿ ಎಂದು ಬುದ್ಧಿವಾದ ಹೇಳಿದ್ದೂ ಆಯಿತು. ಆದರೆ ಈ ಇಬ್ಬರನ್ನು ಪೊರೆದ, ಪೋಷಿಸಿದ ಆರೆಸೆಸ್‌ಗೆ, ಇವರಿಬ್ಬರು ದೇಶದ ಪ್ರಧಾನಿ ಮತ್ತು ಗೃಹಮಂತ್ರಿಯ ಕುರ್ಚಿಯಲ್ಲಿ ಕೂರುವ ಆಸೆ ಇತ್ತು. ಅದು ನೆರವೇರಿ, ಅದಕ್ಕೂ ಈಗ ಹತ್ತು ವರ್ಷಗಳಾಯಿತು.

ಹತ್ತು ವರ್ಷಗಳ ಕಾಲ ಮೋದಿಯನ್ನು ಮೆರೆಯಲು ಬಿಟ್ಟ ಅಮಿತ್ ಶಾ, ಬಿಜೆಪಿಯನ್ನು ಸಂಪದ್ಭರಿತ ಪಕ್ಷವನ್ನಾಗಿ ಮಾಡಿದ್ದಾರೆ. ಅದಾನಿಅಂಬಾನಿಗಳೆಂಬ ಕಾರ್ಪೊರೇಟ್ ಕುಳಗಳನ್ನು ಅಕ್ಕ-ಪಕ್ಕ ನಿಲ್ಲಿಸಿಕೊಂಡು ಶಕ್ತಿ ಪ್ರದರ್ಶಿಸುತ್ತಿದ್ದಾರೆ. ಪ್ಲಾನ್ ಬಿ ಬಗ್ಗೆ ಮಾತನಾಡುತ್ತಿದ್ದಾರೆ. ಕಳೆದ 40 ವರ್ಷಗಳ ಕಾಲ ನಾಯಕನ ಹಿಂದೆ ನಿಂತಿದ್ದ ನಾಯಕ ಈಗ ಮುನ್ನೆಲೆಗೆ ಬರುತ್ತಿದ್ದಾರೆ.

ರಾಜಕಾರಣದಲ್ಲಿ ನುರಿತ ಕಸುಬುದಾರ ಎಂದೇ ಕುಖ್ಯಾತಿ ಗಳಿಸಿರುವ ಅಮಿತ್ ಶಾರನ್ನು ಮಾರಿಕೊಂಡ ಮಾಧ್ಯಮಗಳು ಮಾಸ್ಟರ್ ಮೈಂಡ್, ಚಾಣಕ್ಯ, ಟ್ರಬಲ್ ಶೂಟರ್ ಎಂದು ಹಾಡಿ ಹೊಗಳುತ್ತಿವೆ. ಈ ತಂತ್ರ-ಕುತಂತ್ರಗಳೇ ಮೋದಿಯವರನ್ನು ಕೆಳಗಿಳಿಸಿ, ಅಮಿತ್ ಶಾರನ್ನು ಮೇಲೆ ಕೂರಿಸುವ ಕೆಲಸ ಮಾಡುತ್ತವೆಯೇ? ಕೇಜ್ರಿವಾಲ್ ಮಾತು ನಿಜವಾಗುತ್ತದೆಯೇ?

WhatsApp Image 2025 11 17 at 3.23.18 PM
ಈ ದಿನ ಸಂಪಾದಕೀಯ
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ|ಗುಜರಾತಿನ ದಲಿತರಿಗೆ ಗಗನ ಕುಸುಮವಾಗೇ ಉಳಿದ ನ್ಯಾಯ

ಗುಜರಾತಿನ ಜನಸಂಖ್ಯೆಯಲ್ಲಿ ದಲಿತರ ಪ್ರಮಾಣ ಕಡಿಮೆ. ಶೇ.6.34 ಮಾತ್ರ. ಇಲ್ಲಿ ದಲಿತರಿಗಿಂತ...

ಈ ದಿನ ಸಂಪಾದಕೀಯ | ಮೋದಿಯ ಸಣ್ಣತನವನ್ನು ದೊಡ್ಡತನದಿಂದ ಸೋಲಿಸಿದ ಇರಾನ್‌!

ಇಂಧನ ಭದ್ರತೆಯನ್ನು ಕಾಪಾಡಿಕೊಳ್ಳಲು ಭಾರತದ ಹಡಗುಗಳು ಹಾರ್ಮುಜ್ ಜಲಸಂಧಿಯಿಂದ ಹಾದುಹೋಗಲು ಅವಕಾಶ...

ಈ ದಿನ ಸಂಪಾದಕೀಯ | SIR ಹೆಸರಲ್ಲಿ ಮಹಿಳೆಯರ ಮತದಾನದ ಹಕ್ಕಿನ ಹರಣ ಅಕ್ಷಮ್ಯ

ಕರ್ನಾಟಕದಲ್ಲಿ ಮಹಿಳೆಯರ ಹಕ್ಕುಗಳನ್ನು ರಕ್ಷಿಸುವ ಕೆಲಸ ಆಗಬೇಕಿದೆ. ಎಸ್‌ಐಆರ್‌ ನಡೆಯುವ ಸಮಯದಲ್ಲಿ...

ಈ ದಿನ ಸಂಪಾದಕೀಯ | ಕಾಂಗ್ರೆಸ್ಸಿಗರಿಗೆ ಇಂದಿರಾ ಬೇಕು, ಬಡವರ ಕ್ಯಾಂಟೀನ್ ಬೇಡ

ಶಾಸಕರು, ಸಚಿವರು, ಅಧಿಕಾರಿಗಳು ವಾರಕ್ಕೊಂದು ಸಲವಾದರೂ ಇಂದಿರಾ ಕ್ಯಾಂಟೀನ್‌ನಲ್ಲಿ ಊಟ-ತಿಂಡಿ ಮಾಡಬೇಕಿದೆ....