ಈ ದಿನ ಸಂಪಾದಕೀಯ | ಮಣಿಪುರದ ಬೆಂಕಿಯಲ್ಲಿ ಕೈ ಕಾಯಿಸಿಕೊಳ್ಳುತ್ತಿರುವ ಶಕ್ತಿಗಳು ಯಾವುವು?

Date:

ಮುಖ್ಯಮಂತ್ರಿ ಬೀರೇನ್ ಸಿಂಗ್ ಕಳೆದ ಕೆಲವು ತಿಂಗಳುಗಳಿಂದ ಕುಕಿಗಳನ್ನು ವಿದೇಶೀಯರು, ಅಕ್ರಮ ವಲಸಿಗರು, ನೆರೆಯ ಬರ್ಮಾದಿಂದ ಅಕ್ರಮ ವಲಸೆಗೆ ಕುಮ್ಮಕ್ಕು ನೀಡುತ್ತಿರುವವರು ಎಂದೆಲ್ಲ ಟೀಕಿಸಿದ್ದಾರೆ. ಅರಣ್ಯ ಭೂಮಿಯನ್ನು ಅತಿಕ್ರಮಿಸಿರುವವರು, ಅಫೀಮು ಕೃಷಿಯಲ್ಲಿ ತೊಡಗಿರುವವರು ಎಂದೆಲ್ಲ ಕುಕಿಗಳನ್ನು ನಿಂದಿಸಿದ್ದಾರೆ.

ಈಶಾನ್ಯದ ಸಪ್ತಸೋದರಿಯರು ಎಂದೇ ಕರೆಯಲಾಗುವ ರಾಜ್ಯಗಳಲ್ಲೊಂದು ಮಣಿಪುರ. ನೆರೆಯ ದೇಶ ಮಯನ್ಮಾರ್ ಜೊತೆಗೆ ಸರಹದ್ದು ಹಂಚಿಕೊಂಡಿರುವ ಈ ಸೀಮೆ ಇತ್ತೀಚೆಗೆ ಹೊತ್ತಿ ಉರಿಯುತ್ತಿದೆ. ಹಿಂಸಾಚಾರ ಭುಗಿಲೆದ್ದಿದೆ. ಪ್ರತಿಭಟನೆಗಳು, ಅಗ್ನಿಸ್ಪರ್ಶಗಳು, ಲೂಟಿಗಳು, ಹತ್ಯೆಗಳು ಜರುಗಿವೆ. ಎಂಟು ಜಿಲ್ಲೆಗಳಲ್ಲಿ ಕರ್ಫ್ಯೂ ಹೇರಲಾಗಿದೆ. ಇಂಟರ್ನೆಟ್ ಸಂಪರ್ಕವನ್ನು ಕಡಿದು ಹಾಕಲಾಗಿದೆ. ಸೇನೆ ನಿಯುಕ್ತಿಗೊಂಡಿದೆ. ಹಲವೆಡೆಗಳಲ್ಲಿ ಕಂಡಲ್ಲಿ ಗುಂಡು ಹಾರಿಸುವ ಆದೇಶ ಜಾರಿಯಲ್ಲಿದೆ. ಮುಷ್ಠಿಕಾಳಗದ ಅಂತಾರಾಷ್ಟ್ರೀಯ ಕ್ರೀಡಾಪಟು ಮತ್ತು ರಾಜ್ಯಸಭಾ ಸದಸ್ಯೆ ಮೇರಿ ಕೋಮ್ ನೆರವಿಗಾಗಿ ಪ್ರಧಾನಿ ಮೋದಿಯವರಲ್ಲಿ ಮೊರೆ ಇಟ್ಟಿದ್ದಾರೆ.

ಸಾವಿರಾರು ಕುಕಿ ಬುಡಕಟ್ಟು ಕುಟುಂಬಗಳು ಛಿದ್ರಗೊಂಡಿವೆ. ಆಶ್ರಯ ಅರಸಿ ಪಲಾಯನ ಮಾಡಿವೆ. 23 ಸಾವಿರ ಜನರನ್ನು ಹಿಂಸಾಚಾರ ಪೀಡಿತ ಪ್ರದೇಶಗಳಿಂದ ಸುರಕ್ಷಿತ ಪ್ರದೇಶಗಳಿಗೆ ಒಯ್ದಿದೆ ಅಸ್ಸಾಮ್ ರೈಫಲ್ಸ್. ಮಣಿಪುರ ಹೈಕೋರ್ಟಿನ ಏಪ್ರಿಲ್ 19ರ ಆದೇಶ ಕಿಡಿ ಹಾರಿಸಿತ್ತು. ಮೀತೀ ಸಮುದಾಯವನ್ನು ಪರಿಶಿಷ್ಟ ಪಂಗಡಗಳ ಪಟ್ಟಿಗೆ ಸೇರ್ಪಡೆಯ ಶಿಫಾರಸನ್ನು ತ್ವರಿತವಾಗಿ ಸಾಧ್ಯವಾದರೆ ನಾಲ್ಕು ವಾರಗಳೊಳಗೆ ಕೇಂದ್ರಕ್ಕೆ ಕಳಿಸುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿತ್ತು. ಮೀತೀಗಳು ಮತ್ತು ಕುಕಿ ಬುಡಕಟ್ಟುಗಳ ನಡುವೆ ದಶಕಗಳಿಂದ ಬೆಳೆದು ಬಂದಿದ್ದ ಮನಸ್ತಾಪದ ಸಿಡಿಮದ್ದಿಗೆ ನ್ಯಾಯಾಲಯದ ಆದೇಶ ಕಿಡಿ ತಗುಲಿಸಿದಂತಾಗಿದೆ.

ವೈಷ್ಣವ ಸಂಪ್ರದಾಯದ ಹಿಂದೂಗಳು. ಕೇಂದ್ರೀಯ ಕಣಿವೆ ಪ್ರದೇಶ ಅವರ ವಸತಿಸೀಮೆ. ಮಣಿಪುರದ ಜನಸಂಖ್ಯೆಯಲ್ಲಿ ಮೀತೀಗಳ ಪ್ರಮಾಣ ಶೇ.53ರಷ್ಟು. ಮೀತೀ ಸಮುದಾಯದಲ್ಲಿ ಹಿಂದೂ ಅಸ್ಮಿತೆಯನ್ನು ಬಡಿದೆಬ್ಬಿಸುವ ಕೆಲಸ ನಡೆದಿದೆ. ಬಿಜೆಪಿಗೆ ದೊಡ್ಡ ರೀತಿಯಲ್ಲಿ ಬೆಂಬಲ ನೀಡಿರುವ ಸಮುದಾಯವಿದು. ಆದರೆ ಕುಕಿಗಳ ಪೈಕಿ ಬಿಜೆಪಿಗೆ ದೊರೆತಿದ್ದ ಅಷ್ಟಿಷ್ಟು ಬೆಂಬಲ ಕೂಡ ಮುಖ್ಯಮಂತ್ರಿ ಬಿರೇನ್ ಸಿಂಗ್ ಸರ್ಕಾರದ ಕುಕಿ ವಿರೋಧಿ ನೀತಿಯಿಂದ ಅಳಿದು ಹೋಗಿದೆ.

ಕಳೆದ ವರ್ಷ ಮರಳಿ ಆರಿಸಿ ಬಂದು ಅಧಿಕಾರ ಹಿಡಿದಿರುವ ಬಿರೇನ್ ಸಿಂಗ್, ಅಫೀಮು ಕೃಷಿ ಮತ್ತು ಮಾದಕ ದ್ರವ್ಯಗಳನ್ನು ಹತ್ತಿಕ್ಕುವ ನೆವದಲ್ಲಿ ಕುಕಿಗಳ ವಿರುದ್ಧ ಯುದ್ಧ ಸಾರಿದ್ದಾರೆ. ಸಂರಕ್ಷಿತ ಅರಣ್ಯಗಳ ಅತಿಕ್ರಮಣವನ್ನು ತೆರವುಗೊಳಿಸುವ ಹೆಸರಿನಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಂದ ದೌರ್ಜನ್ಯಗಳು ಜರುಗಿವೆ.

ಮಣಿಪುರದಲ್ಲಿನ ಒಟ್ಟು ಜಮೀನಿನ ಶೇ.10 ಮಾತ್ರ ಮೀತೀಗಳು ವಾಸಿಸುವ ಕಣಿವೆ ಪ್ರದೇಶದಲ್ಲಿದೆ. ಉಳಿದ ಜಮೀನು ಗುಡ್ಡಗಾಡುಗಳಲ್ಲಿದೆ. ರಾಜ್ಯದ ಜನಸಂಖ್ಯೆಯ ಶೇ.35.4ರಷ್ಟಿರುವ ಕುಕಿ ಬುಡಕಟ್ಟು ಜನರು ಮತ್ತು ನಾಗಾಗಳು ಅಲ್ಲಿದ್ದಾರೆ. ಕುಕಿಗಳು ಮತ್ತು ನಾಗಾಗಳು ಅಧಿಕಾಂಶ ಕ್ರೈಸ್ತರು. ಬುಡಕಟ್ಟು ಜನರ ಸಂರಕ್ಷಣೆಗೆ ಸಂವಿಧಾನದಲ್ಲಿ ಕೈಗೊಂಡಿರುವ ಕ್ರಮಗಳ ಪ್ರಕಾರ ಬುಡಕಟ್ಟು ಜನರ ಜಮೀನನ್ನು ಇತರರು ಖರೀದಿಸುವಂತಿಲ್ಲ. ಜಮೀನಿಗಾಗಿ ಹಸಿದಿರುವ ಮಣಿಪುರದ ಮೀತೀ ಹಿಂದೂಗಳು, ಗುಡ್ಡಗಾಡಿನಲ್ಲಿರುವ ಕುಕಿ ಕ್ರೈಸ್ತರ ಜಮೀನನ್ನು ಖರೀದಿಸುವಂತಿಲ್ಲ. ಕುಕಿಗಳು ಬೇಕಾದರೆ ಮೀತೀಗಳ ಜಮೀನನ್ನು ಖರೀದಿಸಬಹುದು. ಹೀಗಾಗಿ ಮೀತೀಗಳು ಮತ್ತು ಕುಕಿಗಳ ನಡುವಣ ಜಮೀನು ಹಂಚಿಕೆಯ ಅಸಮತೋಲನ ಬಹುಕಾಲದ ಬೇಗುದಿಗೆ ಕಾರಣ.

ರಾಜ್ಯದ 60 ವಿಧಾನಸಭಾ ಕ್ಷೇತ್ರಗಳ ಪೈಕಿ 40 ಕ್ಷೇತ್ರಗಳು ಮೀತೀಗಳು ವಾಸಿಸುವ ಕಣಿವೆ ಪ್ರದೇಶದಲ್ಲಿವೆ. ಬುಡಕಟ್ಟು ಜನರು ವಾಸಿಸುವ ಗುಡ್ಡಗಾಡು ಪ್ರದೇಶದ ಹತ್ತು ಜಿಲ್ಲೆಗಳು ಉಳಿದ 20 ಶಾಸಕರನ್ನು ಆರಿಸಿ ಕಳಿಸುತ್ತವೆ. ಜನಸಂಖ್ಯೆ ಮತ್ತು ಜನಪ್ರತಿನಿಧಿಗಳ ಸಂಖ್ಯೆ ಎರಡರಲ್ಲೂ ಸಿಂಹಪಾಲನ್ನು ಹೊಂದಿರುವ ಮೀತೀ ಸಮುದಾಯವನ್ನು ಪರಿಶಿಷ್ಟ ಪಂಗಡಗಳಿಗೆ ಸೇರಿಸಿಬಿಟ್ಟರೆ ತನ್ನ ಅಸ್ತಿತ್ವಕ್ಕೇ ಸಂಚಕಾರ ಬಂದೀತು ಎಂಬುದು ಕುಕಿಗಳ ಕಳವಳ.

1949ರಲ್ಲಿ ಮಣಿಪುರ ಭಾರತದಲ್ಲಿ ವಿಲೀನಗೊಂಡ ಸಮಯದಲ್ಲಿ ತಾವು ಕೂಡ ಪರಿಶಿಷ್ಟರಾಗಿದ್ದೆವು ಎಂಬುದು ಮೀತೀಗಳ ಅಹವಾಲು. ಕೇವಲ ನಾಗಾ ಮತ್ತು ಕುಕಿಗಳಿಗೆ ಮಾತ್ರವೇ ಪರಿಶಿಷ್ಟ ಸ್ಥಾನಮಾನ ನೀಡಲಾಯಿತು ಎಂಬುದು ಅವರ ದೂರು. ಆದರೆ ಮೀತೀಗಳು ಅರಸರಾಗಿ ಮಣಿಪುರವನ್ನು ಆಳಿದವರು. ಮುಂದುವರೆದವರು. ಅವರಿಗೆ ಪರಿಶಿಷ್ಟ ಪಂಗಡಗಳ ಸ್ಥಾನಮಾನ ನೀಡುವ ಮಾನದಂಡಗಳನ್ನು ಅನ್ವಯಿಸಲು ಬರುವುದಿಲ್ಲ. ಮಿಗಿಲಾಗಿ ಮೀತೀಗಳಿಗೆ ಒ.ಬಿ.ಸಿ. ಮತ್ತು ಪರಿಶಿಷ್ಟ ಜಾತಿಯ ಸ್ಥಾನಮಾನ ಈಗಾಗಲೇ ಸಿಕ್ಕಿದೆ ಎಂಬುದು ಕುಕಿಗಳ ವಾದ.

ಮುಖ್ಯಮಂತ್ರಿ ಬಿರೇನ್ ಸಿಂಗ್ ಕಳೆದ ಕೆಲವು ತಿಂಗಳುಗಳಿಂದ ಕುಕಿಗಳನ್ನು ವಿದೇಶೀಯರು, ಅಕ್ರಮ ವಲಸಿಗರು, ನೆರೆಯ ಬರ್ಮಾದಿಂದ ಅಕ್ರಮ ವಲಸೆಗೆ ಕುಮ್ಮಕ್ಕು ನೀಡುತ್ತಿರುವವರು ಎಂದೆಲ್ಲ ಟೀಕಿಸಿದ್ದಾರೆ. ಅರಣ್ಯ ಭೂಮಿಯನ್ನು ಅತಿಕ್ರಮಿಸಿರುವವರು, ಅಫೀಮು ಕೃಷಿಯಲ್ಲಿ ತೊಡಗಿರುವವರು ಎಂದೆಲ್ಲ ಕುಕಿಗಳನ್ನು ನಿಂದಿಸಿದ್ದಾರೆ.

ಇದನ್ನು ಓದಿ ಈಶಾನ್ಯ ರಾಜ್ಯಗಳಲ್ಲಿ ಬೆಂಕಿಯೊಂದಿಗೆ ಆಟವಾಡುವುದನ್ನು ಬಿಜೆಪಿ ನಿಲ್ಲಿಸುವುದೇ?

35 ಸಾವಿರಕ್ಕೂ ಹೆಚ್ಚು ಕುಕಿಗಳು ನಿರಾಶ್ರಿತರಾಗಿದ್ದಾರೆ. ಶಿಬಿರಗಳಲ್ಲಿ ಆಶ್ರಯ ಪಡೆದಿದ್ದಾರೆ. ಹಿಂಸಾಚಾರಕ್ಕೆ ಬಲಿಯಾಗಿರುವವರ ಅನಧಿಕೃತ ಸಂಖ್ಯೆ ನೂರರ ಹತ್ತಿರ ಎನ್ನಲಾಗಿದೆ. ಇಂಫಾಲ ಕಣಿವೆ ವಾಸಿಗಳಾಗಿದ್ದ ಎಲ್ಲ ಕುಕಿಗಳ ನಿವಾಸಗಳಿಗೆ ಬೆಂಕಿ ಇಡಲಾಗಿದೆ. ಕುಕಿ ಜನವಸತಿಗಳ ಹಳ್ಳಿಗಳನ್ನು ಸಾರಾಸಗಟಾಗಿ ಸುಟ್ಟು ಹಾಕಲಾಗಿದೆ. ಮೀತೀ ಉಗ್ರವಾದಿಗಳ ಗುಂಪುಗಳು ಕುಕಿಗಳ ಲೂಟಿ ಹಿಂಸಾಚಾರ ನಡೆಸಿದ್ದಾರೆ. ಮಣಿಪುರ ಪೊಲೀಸ್ ಕಮಾಂಡೋಗಳು ಈ ಉಗ್ರವಾದಿ ಗುಂಪುಗಳಿಗೆ ರಕ್ಷಣೆ ನೀಡಿದ್ದಾರೆಂದು ವರದಿಗಳು ಹೇಳಿವೆ. ಕುಕಿಗಳ ಇಗರ್ಜಿಗಳಿಗೆ ಮಾತ್ರ ಬೆಂಕಿ ಇಡಲಾಗುತ್ತಿದೆ. ನಾಗಾಗಳ ಚರ್ಚುಗಳನ್ನು ಬಿಡಲಾಗಿದೆ. ಕೇಂದ್ರ ಬಿಜೆಪಿ ಸರ್ಕಾರ ನಾಗಾಲ್ಯಾಂಡಿನ ನಾಗಾ ಸಂಘಟನೆಗಳೊಂದಿಗೆ ಶಾಂತಿ ಒಪ್ಪಂದಕ್ಕಾಗಿ ಪ್ರಯತ್ನ ನಡೆಸಿದೆ. ಈ ಹಿನ್ನೆಲೆಯಲ್ಲಿ ನಾಗಾಗಳ ಚರ್ಚುಗಳನ್ನು ಮುಟ್ಟಲಾಗುತ್ತಿಲ್ಲ ಎಂಬ ವ್ಯಾಖ್ಯಾನ ಉಂಟು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಕುಕಿ ಬುಡಕಟ್ಟು ಜನರಲ್ಲಿ ವಿಶ್ವಾಸ ಹುಟ್ಟಿಸಬೇಕಿದ್ದರೆ ಮೀತೀ ಬಹುಸಂಖ್ಯಾತ ಸರ್ಕಾರವನ್ನು ಅಮಾನತಿನಲ್ಲಿ ಇರಿಸಿ ಮಣಿಪುರದಲ್ಲಿ ರಾಷ್ಟ್ರಪತಿ ಆಳ್ವಿಕೆಯನ್ನು ಜಾರಿಗೊಳಿಸಬೇಕು. ಕೋಮುವಾದಿ ಹಣೆಪಟ್ಟಿ ಹಚ್ಚಿಕೊಂಡಿರುವ ರಾಜ್ಯ ಪೊಲೀಸ್ ವ್ಯವಸ್ಥೆ ನಿಷ್ಪಕ್ಷಪಾತಿಯಾಗಿ ವರ್ತಿಸುವುದೆಂದು ನಂಬಲಾಗದು. ಕೇಂದ್ರೀಯ ಸೇನೆಯ ನಿಯುಕ್ತಿ ಮುಂದುವರೆಯಬೇಕು. ಹೀಗೆ ನೆಲೆಗೊಳ್ಳುವ ಶಾಂತಿಯ ಅವಧಿಯಲ್ಲಿ ಮೀತೀ ಮತ್ತು ಕುಕಿಗಳ ನಡುವೆ ರಾಜೀ ಒಪ್ಪಂದದ ಮಾತುಕತೆಗಳನ್ನು ಜರುಗಿಸಬೇಕಿದೆ.

WhatsApp Image 2025 11 17 at 3.23.18 PM
ಈ ದಿನ ಸಂಪಾದಕೀಯ
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ|ಗುಜರಾತಿನ ದಲಿತರಿಗೆ ಗಗನ ಕುಸುಮವಾಗೇ ಉಳಿದ ನ್ಯಾಯ

ಗುಜರಾತಿನ ಜನಸಂಖ್ಯೆಯಲ್ಲಿ ದಲಿತರ ಪ್ರಮಾಣ ಕಡಿಮೆ. ಶೇ.6.34 ಮಾತ್ರ. ಇಲ್ಲಿ ದಲಿತರಿಗಿಂತ...

ಈ ದಿನ ಸಂಪಾದಕೀಯ | ಮೋದಿಯ ಸಣ್ಣತನವನ್ನು ದೊಡ್ಡತನದಿಂದ ಸೋಲಿಸಿದ ಇರಾನ್‌!

ಇಂಧನ ಭದ್ರತೆಯನ್ನು ಕಾಪಾಡಿಕೊಳ್ಳಲು ಭಾರತದ ಹಡಗುಗಳು ಹಾರ್ಮುಜ್ ಜಲಸಂಧಿಯಿಂದ ಹಾದುಹೋಗಲು ಅವಕಾಶ...

ಈ ದಿನ ಸಂಪಾದಕೀಯ | SIR ಹೆಸರಲ್ಲಿ ಮಹಿಳೆಯರ ಮತದಾನದ ಹಕ್ಕಿನ ಹರಣ ಅಕ್ಷಮ್ಯ

ಕರ್ನಾಟಕದಲ್ಲಿ ಮಹಿಳೆಯರ ಹಕ್ಕುಗಳನ್ನು ರಕ್ಷಿಸುವ ಕೆಲಸ ಆಗಬೇಕಿದೆ. ಎಸ್‌ಐಆರ್‌ ನಡೆಯುವ ಸಮಯದಲ್ಲಿ...

ಈ ದಿನ ಸಂಪಾದಕೀಯ | ಕಾಂಗ್ರೆಸ್ಸಿಗರಿಗೆ ಇಂದಿರಾ ಬೇಕು, ಬಡವರ ಕ್ಯಾಂಟೀನ್ ಬೇಡ

ಶಾಸಕರು, ಸಚಿವರು, ಅಧಿಕಾರಿಗಳು ವಾರಕ್ಕೊಂದು ಸಲವಾದರೂ ಇಂದಿರಾ ಕ್ಯಾಂಟೀನ್‌ನಲ್ಲಿ ಊಟ-ತಿಂಡಿ ಮಾಡಬೇಕಿದೆ....