ಈ ದಿನ ಸಂಪಾದಕೀಯ | ಇದು ಬಿಜೆಪಿ-ಜೆಡಿಎಸ್ ನಡುವಿನ ಬಿರುಕಲ್ಲ, ಬಿಕ್ಕಟ್ಟಲ್ಲ, ಆಟ

Date:

ಗೌಡರ ಕುಟುಂಬಕ್ಕೆ ಚುನಾವಣೆ ಎಂದರೆ ಖರ್ಚಿನ ಬಾಬತ್ತಲ್ಲ, ಲಾಭದ ಹೊಸ ಮಾರ್ಗ. ಹಾಗಾಗಿ ಟಿಕೆಟ್ ವಿಚಾರದಲ್ಲಿ ಅಪ್ಪ-ಮಕ್ಕಳು ಆಟ ಆಡಿದರು. ಆಟದಲ್ಲಿ ಗೆಲ್ಲುವುದು ಕಷ್ಟವಾದಾಗ ಬಿಕ್ಕಟ್ಟು ಸೃಷ್ಟಿಸಿದರು. ಬಿಜೆಪಿಯ ಅಪ್ಪ-ಮಕ್ಕಳು ಮುಲಾಮು ಹಚ್ಚಿ ಶಮನ ಮಾಡಿದರು. ಹಾಗಾಗಿ ಇದು ಬಿಜೆಪಿ-ಜೆಡಿಎಸ್ ನಡುವಿನ ಬಿರುಕಲ್ಲ, ಬಿಕ್ಕಟ್ಟಲ್ಲ, ಬದಲಿಗೆ ಅಪ್ಪ-ಮಕ್ಕಳ ಆಟ ಎನ್ನುವುದನ್ನು ಕರ್ನಾಟಕದ ಮತದಾರರು ಅರಿತರೆ, ಒಳ್ಳೆಯದು.

ಬಿಜೆಪಿ ಮತ್ತು ಜೆಡಿಎಸ್ ನಡುವೆ ಬಿಕ್ಕಟ್ಟು ಸೃಷ್ಟಿಯಾಗಿದೆ. ಮೈತ್ರಿ ಮುರಿದುಬೀಳುವ ಸೂಚನೆಗಳು ಕಾಣುತ್ತಿವೆ ಎಂದು ಬೊಬ್ಬೆ ಹಾಕುತ್ತಿವೆ ಸುದ್ದಿ ಮಾಧ್ಯಮಗಳು.

ಮಾ. 18ರಂದು ಲೋಕಸಭಾ ಚುನಾವಣೆ ಕುರಿತು ಜೆಡಿಎಸ್ ರಾಜ್ಯ ಘಟಕದ ಕಚೇರಿಯಲ್ಲಿ ಪಕ್ಷದ ಕೋರ್ ಕಮಿಟಿ ಸದಸ್ಯರು, ಚುನಾವಣಾ ಉಸ್ತುವಾರಿಗಳ ಸಭೆಯಲ್ಲಿ, ‘ಬಿಜೆಪಿಯವರು ನಮ್ಮನ್ನು ಎರಡನೇ ದರ್ಜೆ ಜನರಂತೆ ಕಾಣುತ್ತಿದ್ದಾರೆ’, ‘ಕಲಬುರ್ಗಿ ಮತ್ತು ಶಿವಮೊಗ್ಗಕ್ಕೆ ಮೋದಿ ಬಂದರೂ, ನಮ್ಮನ್ನು ಕರೆಯದೆ ಕಡೆಗಣಿಸಿದ್ದಾರೆ,’ ಎಂದು ಅಳಲು ತೋಡಿಕೊಂಡಿದ್ದಾರೆ. ಕೆಲವರಂತೂ ನೇರವಾಗಿ, ‘ನಾವು ಕೂಡ ರಾಜಕಾರಣಿಗಳೇ, ನಮಗೂ ಪಕ್ಷವಿದೆ, ರಾಜಕಾರಣ ಗೊತ್ತಿದೆ’ ಎಂದು ಪರೋಕ್ಷವಾಗಿ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಮತ್ತು ಎಚ್.ಡಿ. ಕುಮಾರಸ್ವಾಮಿ ಅವರ ಮರ್ಮಕ್ಕೆ ತಾಕುವಂತೆ ಮಾತನಾಡಿದ್ದಾರೆ. ಆ ಮೂಲಕ ತಮ್ಮ ಒಡಲಾಳದ ನೋವನ್ನು ಹೊರಹಾಕಿದ್ದಾರೆ.

ಸಭೆಯ ನಂತರ, ಸ್ವತಃ ಎಚ್.ಡಿ. ಕುಮಾರಸ್ವಾಮಿಯವರೇ, ‘ಬಿಜೆಪಿ ನಮ್ಮನ್ನು ಗೌರವಯುತವಾಗಿ ನಡೆಸಿಕೊಳ್ಳುತ್ತಿಲ್ಲ. ನಾವು ಬಿಜೆಪಿಯಿಂದ ಆರೇಳು ಕ್ಷೇತ್ರ ಕೇಳಿಲ್ಲ. ಕೇಳಿರುವುದೇ ಮೂರ್‍ನಾಲ್ಕು. ನಮ್ಮ ಶಕ್ತಿ ಅವರಿಗೂ ಗೊತ್ತು. ಮೂರರಿಂದ ನಾಲ್ಕು ಕ್ಷೇತ್ರ ಕೊಡುತ್ತಾರೆ ಎಂಬ ನಂಬಿಕೆ ಇದೆ. ಕೇವಲ ಎರಡು ಕ್ಷೇತ್ರ ತೆಗೆದುಕೊಳ್ಳಲು ನಾನು ಇಷ್ಟು ಪ್ರಯತ್ನಪಡಬೇಕಿತ್ತಾ, ಈ ಹೊಂದಾಣಿಕೆ ಬೇಕಿತ್ತಾ’ ಎಂದು ಅಸಮಾಧಾನವನ್ನು ಹೊರಹಾಕಿದ್ದಾರೆ. ಅಷ್ಟೇ ಅಲ್ಲ, ಆ ಪತ್ರಿಕಾ ಹೇಳಿಕೆಯನ್ನು, ಫೋಟೋಗಳನ್ನು, ವಿಡಿಯೋ ತುಣುಕನ್ನು ತಾವೇ ಖುದ್ದು ಸುದ್ದಿ ಮಾಧ್ಯಮಗಳಿಗೆ ಹಂಚಿ, ಎಲ್ಲಿಗೆ ಮುಟ್ಟಬೇಕೋ ಅಲ್ಲಿಗೆ ಮುಟ್ಟುವಂತೆ ನೋಡಿಕೊಂಡಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಇದು ಮೇಲ್ನೋಟಕ್ಕೇ, ಬಿಜೆಪಿ ಮತ್ತು ಜೆಡಿಎಸ್ ನಡುವಿನ ಮೈತ್ರಿ ಮುರಿದುಬೀಳಬಹುದೆಂದು ಕಂಡರೂ, ಇದರ ಹಿಂದೆ ಬೆದರಿಸುವ ತಂತ್ರ ಮತ್ತು ವಶೀಲಿಬಾಜಿ ಅಡಗಿದೆ ಎಂಬ ಸತ್ಯವನ್ನು ಜೆಡಿಎಸ್ ಕಾರ್ಯಕರ್ತರೇ ಹೊರಹಾಕಿದ್ದಾರೆ.

2019ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದವು. ಆಗ ಕಾಂಗ್ರೆಸ್, 8 ಕ್ಷೇತ್ರಗಳನ್ನು ಜೆಡಿಎಸ್‌ಗೆ ಬಿಟ್ಟುಕೊಟ್ಟಿತ್ತು. ಆಗ ಅವರದೇ ಸರ್ಕಾರವಿತ್ತು, ಹಣದ ಹರಿವಿತ್ತು ಮತ್ತು ಆಡಳಿತ ಯಂತ್ರಾಂಗ ಅವರ ಪರವಾಗಿ ಕೆಲಸ ಮಾಡಿತ್ತು. ಆದರೂ ಜೆಡಿಎಸ್ ಗೆದ್ದದ್ದು ಒಂದೇ ಒಂದು ಸ್ಥಾನ, ಅದೂ ಹಾಸನ ಮಾತ್ರ. ವರಿಷ್ಠ ದೇವೇಗೌಡರೇ ತುಮಕೂರಿನಲ್ಲಿ ಸೋತು ಶಾಕ್‌ಗೆ ಒಳಗಾಗಿದ್ದರು. ಅಷ್ಟಾದರೂ ದೇವೇಗೌಡರನ್ನು ರಾಜ್ಯಸಭೆಯಲ್ಲಿರಬೇಕಾದ ರಾಜಕಾರಣಿ ಎಂದು ದೆಹಲಿಗೆ ಕಳುಹಿಸಿಕೊಡಲಾಗಿತ್ತು.

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಳ್ಳಲು ಇಷ್ಟವಿಲ್ಲದಿದ್ದರೆ, ಜೆಡಿಎಸ್ ಸ್ವತಂತ್ರವಾಗಿಯೇ ಸ್ಪರ್ಧಿಸಬಹುದಿತ್ತು. ಸ್ಪರ್ಧಿಸುವ ಮೂಲಕ ಪ್ರಾದೇಶಿಕ ಪಕ್ಷಗಳ ಪಾತ್ರವನ್ನು; ನಾಡಿನ ಅಸ್ಮಿತೆಯನ್ನು ಗಟ್ಟಿಗೊಳಿಸಬಹುದಿತ್ತು. ದೊಡ್ಡ ಪಕ್ಷಗಳಿಗೆ ಸವಾಲು ಹಾಕಬಹುದಿತ್ತು. ಎರಡೇ ಎರಡು ಕ್ಷೇತ್ರ ಗೆದ್ದರೂ, ಇದು ಜೆಡಿಎಸ್ ಎಂದು ತೊಡೆ ತಟ್ಟಬಹುದಿತ್ತು.

ಅದಕ್ಕೆ ಪೂರಕವಾಗಿ, 1960ರಲ್ಲಿಯೇ ತಾಲೂಕ್ ಬೋರ್ಡ್ ಮೆಂಬರ್ ಆಗಿ ರಾಜಕಾರಣಕ್ಕೆ ಅಡಿಯಿಟ್ಟ ಹರದನಹಳ್ಳಿಯ ದೇವೇಗೌಡರು, ಶಾಸಕ, ಸಚಿವ, ಮುಖ್ಯಮಂತ್ರಿ, ಪ್ರಧಾನಮಂತ್ರಿಯಾಗುವ ಮೂಲಕ ಪ್ರಜಾಪ್ರಭುತ್ವದ ಸೊಗಸನ್ನು ಸಾರಿದ ಇತಿಹಾಸವಿತ್ತು. ಶೂದ್ರ ವರ್ಗದ ಪ್ರತಿನಿಧಿಯಂತಿದ್ದು ಪ್ರಾದೇಶಿಕ ಪೈಲ್ವಾನ್ ಎಂಬ ಹಿರಿಮೆ ಇತ್ತು. ಹಳ್ಳಿಯಿಂದ ದಿಲ್ಲಿಯವರೆಗಿನ ನಾಯಕರು, ಪಕ್ಷಗಳು ಮತ್ತು ರಾಜಕಾರಣದ ಒಳ-ಹೊರಗನ್ನು ಅರಗಿಸಿಕೊಂಡ ಅರವತ್ತಕ್ಕೂ ಹೆಚ್ಚು ವರ್ಷಗಳ ಅಪಾರ ಅನುಭವವಿತ್ತು.

ಇಂತಹ ಹಿರಿತನದ ಗೌಡರು, 2001ರಲ್ಲಿ ರಾಜಕಾರಣಕ್ಕೆ ಬಂದ, ಅಧಿಕಾರಕ್ಕಾಗಿ ಹತ್ಯಾಕಾಂಡ ಮಾಡಿದ, ದೇಶದಲ್ಲಿ ಭಯಭೀತ ವಾತಾವರಣ ಸೃಷ್ಟಿಸಿದ ‘ಮೋಶಾ’ಗಳ ಮೊರೆ ಹೋದರು, ಬಾಯ್ತುಂಬ ಹೊಗಳಿದರು. ಪಕ್ಷದ ಕಾರ್ಯಕರ್ತರನ್ನು ಕೇಳದೆ ಪಕ್ಷವನ್ನು ಅವರ ಮಡಿಲಿಗೆ ಹಾಕಿ ಶರಣಾದರು. ಇದು ಶತಮಾನದ ಸೋಜಿಗದಂತೆ, ಶತಮೂರ್ಖ ನಡೆಯಂತೆ ಕಂಡರೆ, ಅದು ದೇವೇಗೌಡರ ತಪ್ಪಲ್ಲ. ಅವರು ತಪ್ಪು ಮಾಡಿಯೇ ಇಲ್ಲ.

ಗೌಡರು ತಪ್ಪು ಮಾಡಿಲ್ಲ ಎನ್ನುವುದು ಈಗ ಜೆಡಿಎಸ್ ಕಾರ್ಯಕರ್ತರಿಗೆ ಅರ್ಥವಾಗುತ್ತಿದೆ. ಅವರಾಗಿಯೇ, ‘ಬಿಜೆಪಿಯೊಂದಿಗೆ ಮೈತ್ರಿಗೆ ಒಪ್ಪಿದ್ದು, ನಮ್ ಕುಟುಂಬ ಎಸ್.ಎಂ. ಕೃಷ್ಣರ ಕುಟುಂಬದಂತಾಗಬಾರದೆಂಬ ಕಾರಣಕ್ಕಾಗಿ ಹಾಗೂ ಪ್ರಜ್ವಲ್, ನಿಖಿಲ್ ಅಥವಾ ಕುಮಾರಸ್ವಾಮಿ, ಡಾ. ಮಂಜುನಾಥ್ ಗೆಲ್ಲುವುದು, ಒಬ್ಬರು ಕೇಂದ್ರದಲ್ಲಿ ಮಂತ್ರಿಯಾಗುವುದು ಕೂಡ ಕುಟುಂಬಕ್ಕಾಗಿ’ ಎಂಬ ಸತ್ಯವನ್ನು ಬಿಚ್ಚಿಟ್ಟಿದ್ದಾರೆ.

ಇಷ್ಟೇ ಆಗಿದ್ದರೆ ಕಾರ್ಯಕರ್ತರು ಸಹಿಸಿಕೊಂಡು ಸುಮ್ಮನಾಗುತ್ತಿದ್ದರು. ಆದರೆ ಗೌಡರ ಕುಟುಂಬಕ್ಕೆ ಚುನಾವಣೆ ಎಂದರೆ ಖರ್ಚಿನ ಬಾಬತ್ತಲ್ಲ, ಲಾಭದ ಹೊಸ ಮಾರ್ಗ. ಅದನ್ನು ಕರಗತ ಮಾಡಿಕೊಂಡಿರುವ ಅವರ ಕುಟುಂಬ ಈ ಚುನಾವಣೆಯಲ್ಲಿಯೂ ಅದನ್ನು ಚಾಲ್ತಿಗೆ ತಂದಿತ್ತು.

ಬಿಜೆಪಿಯ ಟಿಕೆಟ್‌ಗಾಗಿ ಬಾಯಿ ಬಿಡುತ್ತಿದ್ದ ವಿ. ಸೋಮಣ್ಣ, ಡಾ. ಸುಧಾಕರ್, ಸಿಟಿ ರವಿ, ಪ್ರತಾಪ್ ಸಿಂಹರನ್ನು ಕಾಲಿಗೆ ಬೀಳಿಸಿಕೊಂಡ ಅಪ್ಪ-ಮಕ್ಕಳು ‘ಟಿಕೆಟ್ ಕೊಡಿಸುವ’ ಆಟ ಆಡತೊಡಗಿದರು. ಬಿಜೆಪಿಯ ಅಪ್ಪ-ಮಕ್ಕಳು ತಮ್ಮ ವಿರುದ್ಧವಿರುವ ರವಿ-ಸಿಂಹಗಳಿಗೆ ಟಿಕೆಟ್ ಸಿಗದಂತೆ ನೋಡಿಕೊಂಡರು. ಗೌಡರು ಹಿರಿತನ ಮುಂದೆ ಮಾಡಿ ಸೋಮಣ್ಣರಿಗೆ ಟಿಕೆಟ್ ಕೊಡಿಸಿಯೂಬಿಟ್ಟರು. ಇದರಿಂದ ಬಿಜೆಪಿಯ ಅಪ್ಪ-ಮಕ್ಕಳು ಕೆರಳಿ ಕೆಂಡವಾದರು. ಪ್ರಧಾನಿ ಕಾರ್ಯಕ್ರಮಕ್ಕೆ ಆಹ್ವಾನವಿಲ್ಲದಂತೆ ನೋಡಿಕೊಂಡರು. ಸುಮಲತಾಗೆ ಚಿಕ್ಕಬಳ್ಳಾಪುರ ಟಿಕೆಟ್ ಕೊಡಿಸಲು ಮುಂದಾದರು. ಕೋಲಾರಕ್ಕೆ ನೋಡೋಣ ಇರಿ ಎಂದರು.

ಇದು ಎಚ್.ಡಿ. ಕುಮಾರಸ್ವಾಮಿಯವರು ಕೆರಳಲು ಕಾರಣವಾಯಿತು. ‘ಇದು ಬೇಕಿತ್ತಾ ನನಗೆ’ ಎಂದು ರೆಬೆಲ್ ರಾಗ ಹಾಡತೊಡಗಿದರು. ಅತ್ತ ಕಡೆಯಿಂದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ‘ಮೈತ್ರಿಯಲ್ಲಿನ ಸಣ್ಣಪುಟ್ಟ ವ್ಯತ್ಯಾಸ, ಸುಖಾಂತ್ಯ ಕಾಣಲಿದೆ’ ಎಂಬ ಮುಲಾಮು ಹಚ್ಚಿದರು.

ಹಾಗಾಗಿ ಇದು ಬಿಜೆಪಿ-ಜೆಡಿಎಸ್ ನಡುವಿನ ಬಿರುಕಲ್ಲ, ಬಿಕ್ಕಟ್ಟಲ್ಲ, ಬದಲಿಗೆ ಅಪ್ಪ-ಮಕ್ಕಳ ಆಟ ಎನ್ನುವುದನ್ನು ಕರ್ನಾಟಕದ ಮತದಾರರು ಅರಿತರೆ, ಒಳ್ಳೆಯದು.

WhatsApp Image 2025 11 17 at 3.23.18 PM
ಈ ದಿನ ಸಂಪಾದಕೀಯ
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ|ಗುಜರಾತಿನ ದಲಿತರಿಗೆ ಗಗನ ಕುಸುಮವಾಗೇ ಉಳಿದ ನ್ಯಾಯ

ಗುಜರಾತಿನ ಜನಸಂಖ್ಯೆಯಲ್ಲಿ ದಲಿತರ ಪ್ರಮಾಣ ಕಡಿಮೆ. ಶೇ.6.34 ಮಾತ್ರ. ಇಲ್ಲಿ ದಲಿತರಿಗಿಂತ...

ಈ ದಿನ ಸಂಪಾದಕೀಯ | ಮೋದಿಯ ಸಣ್ಣತನವನ್ನು ದೊಡ್ಡತನದಿಂದ ಸೋಲಿಸಿದ ಇರಾನ್‌!

ಇಂಧನ ಭದ್ರತೆಯನ್ನು ಕಾಪಾಡಿಕೊಳ್ಳಲು ಭಾರತದ ಹಡಗುಗಳು ಹಾರ್ಮುಜ್ ಜಲಸಂಧಿಯಿಂದ ಹಾದುಹೋಗಲು ಅವಕಾಶ...

ಈ ದಿನ ಸಂಪಾದಕೀಯ | SIR ಹೆಸರಲ್ಲಿ ಮಹಿಳೆಯರ ಮತದಾನದ ಹಕ್ಕಿನ ಹರಣ ಅಕ್ಷಮ್ಯ

ಕರ್ನಾಟಕದಲ್ಲಿ ಮಹಿಳೆಯರ ಹಕ್ಕುಗಳನ್ನು ರಕ್ಷಿಸುವ ಕೆಲಸ ಆಗಬೇಕಿದೆ. ಎಸ್‌ಐಆರ್‌ ನಡೆಯುವ ಸಮಯದಲ್ಲಿ...

ಈ ದಿನ ಸಂಪಾದಕೀಯ | ಕಾಂಗ್ರೆಸ್ಸಿಗರಿಗೆ ಇಂದಿರಾ ಬೇಕು, ಬಡವರ ಕ್ಯಾಂಟೀನ್ ಬೇಡ

ಶಾಸಕರು, ಸಚಿವರು, ಅಧಿಕಾರಿಗಳು ವಾರಕ್ಕೊಂದು ಸಲವಾದರೂ ಇಂದಿರಾ ಕ್ಯಾಂಟೀನ್‌ನಲ್ಲಿ ಊಟ-ತಿಂಡಿ ಮಾಡಬೇಕಿದೆ....