ಈ ದಿನ ಸಂಪಾದಕೀಯ | ಕರಾವಳಿಯ ಜನ ಹಿಂದುತ್ವದ ನಶೆಯಿಂದ ಹೊರಬರಲು ಇದು ʼಚೈತ್ರಕಾಲʼ

Date:

ಬಿಜೆಪಿ ತನ್ನ ಕೇಸರಿ ಪ್ರಯೋಗಶಾಲೆಯಲ್ಲಿ ಹಲವು ಉಗ್ರವಾದಿ ಭಾಷಣಕಾರರನ್ನು ತಯಾರಿಸಿ ಸಮಾಜಕ್ಕೆ ಕೋಮುವಾದಿ ವಿಷ ಹರಿಸಿದೆ. ತೆರೆಮರೆಯಲ್ಲಿ ಅದರ ಲಾಭ ಉಣ್ಣುತ್ತಿರುವ ಸಂಘಟನೆಗಳ ಮುಖಂಡರು, ರಾಜಕೀಯ ನಾಯಕರು ಮತ್ತು ಅವರ ಮಕ್ಕಳೂ ಮಜವಾಗಿದ್ದಾರೆ. ಜೈಲುಪಾಲಾಗುತ್ತಿರುವುದು ಬಡವರ ಮಕ್ಕಳು

ಕರ್ನಾಟಕದ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ- ಉಡುಪಿಯನ್ನು ದಕ್ಷಿಣ ಭಾರತದ ಹಿಂದುತ್ವದ ಪ್ರಯೋಗ ಶಾಲೆ ಎಂದು ಕರೆಯಲಾಗುತ್ತಿದೆ. ಬುದ್ದಿವಂತರ ಜಿಲ್ಲೆ ಎಂದು ಕರೆಯಲಾಗುವ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ಎರಡು ದಶಕಗಳಿಂದ ನಡೆಯುತ್ತಿರುವ ಕೋಮು ಧ್ರುವೀಕರಣ, ಹಿಂದುತ್ವವಾದಿಗಳ ಮೇಲಾಟ, ಬಿಜೆಪಿ ಪ್ರೇರಿತ ಕೋಮುಗಲಭೆ ಇದಕ್ಕೆ ಸಾಕ್ಷಿ.

ಉಗ್ರ ಹಿಂದುತ್ವವಾದಿ ಸಂಘಟನೆಗಳು ಕರಾವಳಿಯ ಕೋಮು ಸಾಮರಸ್ಯವನ್ನು ಕದಡಿವೆ. ಹಿಂದು ಮುಸ್ಲಿಮರ ಸೌಹಾರ್ದ ಬದುಕಿಗೆ ಕೊಳ್ಳಿ ಇಟ್ಟಿವೆ. ಅದರ ಲಾಭ ಪಡೆದ ಬಿಜೆಪಿ ತನ್ನ ಕೇಸರಿ ಪ್ರಯೋಗಶಾಲೆಯಲ್ಲಿ ಹಲವು ಉಗ್ರವಾದಿ ಭಾಷಣಕಾರರನ್ನು ತಯಾರಿಸಿ ಸಮಾಜಕ್ಕೆ ಕೋಮುವಾದಿ ವಿಷ ಹರಿಸಿದೆ. ತೆರೆಮರೆಯಲ್ಲಿ ಅದರ ಲಾಭ ಉಣ್ಣುತ್ತಿರುವ ಸಂಘಟನೆಗಳ ಮುಖಂಡರು, ರಾಜಕೀಯ ನಾಯಕರು ಮತ್ತು ಅವರ ಮಕ್ಕಳೂ  ಮಜವಾಗಿದ್ದಾರೆ.

ಸದ್ಯ ಬಹಳ ಸುದ್ದಿಯಲ್ಲಿರುವ ಕೇಸರಿ ಸಂಘಟನೆಗಳ ಫಯರ್‌ ಬ್ರಾಂಡ್‌ ಭಾಷಣಕಾರ್ತಿ ಎಂದು ಖ್ಯಾತಿ ಗಳಿಸಿದ್ದ ಕರ್ನಾಟಕದ ಉದ್ದಗಲಕ್ಕೂ ಸಂಚರಿಸಿ ಹಲವು ವೇದಿಕೆಗಳಲ್ಲಿ ಹಿಂದುತ್ವದ ಕುರಿತ ಪ್ರಚೋದನಕಾರಿ ಭಾಷಣ ಮಾಡುತ್ತಾ ರಾಜಕೀಯ ನಾಯಕರ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿದ್ದ ಚೈತ್ರಾ ಕುಂದಾಪುರಳನ್ನು ಸಿಸಿಬಿ ಬಂಧಿಸಿದೆ. ಕೇವಲ ಕೇಸರಿ ಶಾಲು ಹಾಕೊಂಡು ಭಾಷಣ ಮಾಡುತ್ತಾ ಊರೂರು ಸುತ್ತುತ್ತ ಇದ್ದಿದ್ದರೆ ಈ ಸ್ಥಿತಿ ಬರುತ್ತಿರಲಿಲ್ಲ. ಆದರೆ, ಆಕೆಯ ಮೇಲೆ ಉದ್ಯಮಿಯೊಬ್ಬರಿಗೆ ವಿಧಾನಸಭಾ ಚುನಾವಣೆಗೆ ಬೈಂದೂರಿನಿಂದ ಸ್ಪರ್ಧಿಸಲು ಟಿಕೆಟ್‌ ಕೊಡಿಸುವ ಆಮಿಷವೊಡ್ಡಿ ಸುಮಾರು ಏಳು ಕೋಟಿ ಹಣ ಲೂಟಿ ಮಾಡಿರುವ ಆರೋಪ ಇದೆ. ಅದಕ್ಕಾಗಿ ಆಕೆಯ ತಂಡ ಹೆಣೆದ ನಾಟಕ ಅಂತಿಂಥದ್ದಲ್ಲ. ಬಿಜೆಪಿಯ ಕೇಂದ್ರ ಟಿಕೆಟ್‌ ಆಯ್ಕೆ ಸಮಿತಿಯ ಸದಸ್ಯ ಎಂದು ನಕಲಿ ಪಾತ್ರ ಸೃಷ್ಟಿಸಿ ನಂಬಿಸಲಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಕುಂದಾಪುರದ ಬಡ ಕಟುಂಬದಿಂದ ಬಂದು, ಬಾಲ್ಯದಲ್ಲಿಯೇ ಮುಂಬೈಗೆ ಹೋಗಿ ಹೊಟೇಲಿನಲ್ಲಿ ಕಾರ್ಮಿಕನಾಗಿ ದುಡಿದು ಈಗ ಹಲವು ಹೊಟೇಲುಗಳ ಮಾಲೀಕನಾಗಿರುವ ಗೋವಿಂದ ಬಾಬು ಪೂಜಾರಿ ವಂಚನೆಗೆ ಒಳಗಾದ ವ್ಯಕ್ತಿ.  ಉದ್ಯಮ ಮತ್ತು ಚಾರಿಟಬಲ್‌ ಟ್ರಸ್ಟ್‌ ಮೂಲಕ ಸಮಾಜ ಸೇವೆಯಲ್ಲಿ ತೊಡಗಿಕೊಂಡಿದ್ದ ವ್ಯಕ್ತಿಯನ್ನು ಹಲವು ಸಭೆ ಸಮಾರಂಭಗಳಲ್ಲಿ ಹೊಗಳಿ ಅಟ್ಟಕ್ಕೇರಿಸಿ ನಂತರ ಪ್ರಪಾತಕ್ಕೆ ತಳ್ಳಲಾಗಿದೆ. ಅವರ ಟ್ರಸ್ಟ್‌ ಕಾರ್ಯಕ್ರಮಗಳಿಗೆ ಮುಖ್ಯ ಅತಿಥಿಯಾಗಿ ಹೋಗಿ ಸ್ನೇಹ ಗಳಿಸಿದ್ದ ಚೈತ್ರಳನ್ನು ಆಕೆಯ ಚಾಲಾಕಿತನದ ಮಾತಿನಿಂದಲೇ ನಂಬಿ ಮೋಸ ಹೋಗಿದ್ದಾರೆ.

ಪದೇ ಪದೇ ಹಿಂದುತ್ವದ ಸಂಘಟನೆಗಳ ಮುಖಂಡರು, ಉಗ್ರ ಭಾಷಣಕಾರರು, ಜೊತೆಗೆ ಕಾವಿಧಾರಿಗಳು ಅಕ್ರಮ ವ್ಯವಹಾರ, ಅನೈತಿಕ  ಚಟುವಟಿಕೆ, ಲೈಂಗಿಕ ಹಗರಣ, ವಂಚನೆಯ ಪ್ರಕರಣಗಳಲ್ಲಿ ಸಿಲುಕಿ ಅವರ ನಿಜ ಬಣ್ಣ ಬಯಲಾಗುತ್ತಿದೆ. ಆದರೂ ಜನ ಇಂತಹ ಸಂಘಟನೆ, ಮುಖಂಡರಿಂದ ದೂರ ಸರಿಯುತ್ತಿಲ್ಲ ಎಂಬುದು ಆತಂಕಕಾರಿ. ಕಾಳಿಮಠದ ಋಷಿಕುಮಾರ ಸ್ವಾಮಿ, ರಾಷ್ಟ್ರ ರಕ್ಷಣಾ ಪಡೆಯ ಪುನೀತ್‌ ಕೆರೆಹಳ್ಳಿ, ದುರ್ಗಾವಾಹಿನಿಯ ಚೈತ್ರಾ ಕುಂದಾಪುರ, ಯುವ ಬ್ರಿಗೇಡ್‌ನ ಚಕ್ರವರ್ತಿ ಸೂಲಿಬೆಲೆ ಮುಂತಾದವರ ಹಿನ್ನೆಲೆ, ಅವರ ಜೀವನ ಶೈಲಿ ಗಮನಿಸಿದರೆ ಇವರಿಗೆಲ್ಲ ʼಹಿಂದುತ್ವʼ ಎಂಬುದು ದುಡಿಯದೇ ಬದುಕುವ ದಾರಿ ಎಂಬುದು ತಿಳಿಯುತ್ತದೆ. ಹಿಂದುತ್ವದ  ಹೆಸರಿನಲ್ಲಿ ಬೀದಿ ಹೆಣವಾಗುವವರು ಪ್ರವೀಣ್‌ ನೆಟ್ಟಾರು, ಪ್ರಶಾಂತ್‌ ಪೂಜಾರಿ, ಹರ್ಷ ತರಹದ ಬಡ ಕುಟುಂಬದ ಯುವಕರು.

ಈ ಚೈತ್ರಾ ಕುಂದಾಪುರ ಹಿಂದುತ್ವದ ಫೈಯರ್‌ ಬ್ರಾಂಡ್‌ ಆಗುವುದಕ್ಕೂ ಮುನ್ನ ಪತ್ರಕರ್ತೆಯಾಗಿ ಕೆಲಸ ಮಾಡಿದಾಕೆ.  ಕುಂದಾಪುರದ ಬಡ ರಾಮಕ್ಷತ್ರಿಯ ಕುಟುಂಬದ ಯುವತಿ. ಮಂಗಳೂರು ಯುನಿವರ್ಸಿಟಿಯಿಂದ ಪತ್ರಿಕೋದ್ಯಮದಲ್ಲಿ ಎಂ ಎ ಮಾಡಿ ನಂತರ ʼಸಮಯ ಟಿವಿʼಯಲ್ಲಿ ಕೆಲಸ ಮಾಡಿದ್ದಾಳೆ. ಮಣಿಪಾಲದ ಪತ್ರಿಕೆಯೊಂದರಲ್ಲೂ ದುಡಿದಾಕೆ.  ಆಕರ್ಷಕ ಮಾತುಗಾರ್ತಿಯಾಗಿದ್ದ ಈಕೆಯನ್ನು ಹಿಂದುತ್ವ ಸಂಘಟನೆಗಳು ಬಳಸಿಕೊಂಡವು. 2018ರಲ್ಲಿ ಉಡುಪಿಯಲ್ಲಿ ರಮೇಶ್ ಕಾಂಚನ್ ನೇತೃತ್ವದಲ್ಲಿ ಕಾಂಗ್ರೆಸ್‌ ನಡೆಸಿದ ಪ್ರತಿಭಟನಾ ಮೆರವಣಿಗೆಯ ನಡುವೆ ಹೋಗಿ ʼಮೋದಿ ಮೋದಿ..ʼ ಎಂದು ಕಿರುಚಾಡಿ ಸುದ್ದಿಯಾಗಿದ್ದಳು. ಚೈತ್ರಾಳ ಧೈರ್ಯದ ಬಗ್ಗೆ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌ ಟ್ವೀಟ್‌ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಅದಾದ ನಂತರ ಮುಸ್ಲಿಮರ ವಿರುದ್ಧ ಪ್ರಚೋದನಕಾರಿ ಭಾಷಣ ಮಾಡುತ್ತಾ ಖ್ಯಾತಿ ಗಳಿಸಿದ ಈಕೆಯನ್ನು ಉತ್ತರ ಕರ್ನಾಟಕದ ಹಿಂದುತ್ವವಾದಿ ಸಂಘಟನೆಗಳೂ ಕರೆಯಲಾರಂಭಿಸಿದವು. ಈಕೆಯ ಮೇಲೆ ಹತ್ತಾರು ಪ್ರಕರಣಗಳು ದಾಖಲಾಗಿವೆ. ಎರಡು ವರ್ಷಗಳ ಹಿಂದೆ ಕುಕ್ಕೆಸುಬ್ರಹ್ಮಣ್ಯ ಮಠ ಮತ್ತು ದೇವಸ್ಥಾನದ ನಡುವಿನ ವಿವಾದದಲ್ಲಿ ಈಕೆ ಯುವಕರೊಂದಿಗೆ ಹೋಗಿ ಗಲಾಟೆ ಮಾಡಿರುವುದು ಸುದ್ದಿಯಾಗಿತ್ತು. ಹಿಂದುತ್ವ, ಪ್ರಚೋದನಕಾರಿ ಭಾಷಣದಾಚೆಗೂ ಈಕೆಯ ವ್ಯಕ್ತಿತ್ವ ಹತ್ತು ಹಲವು ವಿವಾದಗಳಿಗೆ ಕಾರಣವಾಗಿತ್ತು. ಪ್ರಸಿದ್ಧಿ, ನಾಯಕರ ಸಂಪರ್ಕ, ಜನ ಬೆಂಬಲ ಏನೇ ಮಾಡಿದರೂ ದಕ್ಕಬಹುದು ಎಂಬ ಹುಚ್ಚು ಧೈರ್ಯ ಈ ತರಹದ ಅವಾಂತರಕ್ಕೆ ದೂಡಿದೆ. ಇನ್ನು ಹಿಂದುತ್ವ, ಸಂಸ್ಕೃತಿ ರಕ್ಷಣೆ, ರಾಷ್ಟ್ರೀಯತೆ, ದೇಶಪ್ರೇಮ ಇವೆಲ್ಲ ಜನರನ್ನು ಮರಳು ಮಾಡುವ ಪದಗಳು ಅಷ್ಟೇ ಎಂಬುದನ್ನು ಜನ ಅರಿಯಬೇಕಿದೆ.

ಮೋದಿ ಬೆಂಬಲಿಗರ ಪಾಲಿಗೆ ಅದ್ಭುತ ವಾಗ್ಮಿ ಎನಿಸಿಕೊಂಡಿರುವ ತನ್ನ ಆಕರ್ಷಕ ಶೈಲಿಯ ಸುಳ್ಳು ಭಾಷಣಗಳಿಂದಲೇ ಆಗಾಗ ಸುದ್ದಿಯಾಗುತ್ತಿರುವ ಚಕ್ರವರ್ತಿ ಸೂಲಿಬೆಲೆ ಅವರಂತವರಿಂದ ಪ್ರೇರಣೆ ಪಡೆದು ಅದೆಷ್ಟೋ ಯುವಕ/ ಯುವತಿಯರು ಹಿಂದುತ್ವದ ಕೊಚ್ಚೆಗೆ ಬೀಳುತ್ತಿದ್ದಾರೆ. ಇನ್ನೂ ಹೈಸ್ಕೂಲು ಓದುತ್ತಿರುವ ಹಾರಿಕಾ ಮಂಜುನಾಥ್‌ ಎಂಬ ಬಾಲಕಿ ಚೈತ್ರಾಳ ಮುಂದುವರಿದ ರೂಪಾಂತರಿ. ಈ ಬಾಲಕಿ ನಿರರ್ಗಳವಾಗಿ ಭಾಷಣ ಮಾಡುವ ಶೈಲಿ ಎಂತವರನ್ನೂ ಮೋಡಿ ಮಾಡುವಂತಿದೆ. ಕಳೆದ ಎರಡು ವರ್ಷಗಳಲ್ಲಿ ಈಕೆ ಹಲವು ಹಿಂದುತ್ವ ಸಂಘಟನೆಗಳ ಸಮಾರಂಭಗಳಲ್ಲಿ ʼದಿಕ್ಸೂಚಿ ಭಾಷಣʼ ಮಾಡುವಷ್ಟು ಬೆಳೆದಿದ್ದಾಳೆ. ಮಸೀದಿಯ ಆಜಾನ್‌ನಲ್ಲಿ “ಕಾಫೀರರನ್ನು, ಅಂದ್ರೆ ಹಿಂದೂಗಳನ್ನು ಕೊಲ್ಲಿ” ಎಂದು ಕೂಗಿ ಹೇಳಲಾಗುತ್ತಿದೆ ಎಂದು ಭಾಷಣ ಮಾಡಿದ ಕಾರಣಕ್ಕೆ ಪ್ರಕರಣವೊಂದು ದಾಖಲಾಗಿದೆ. ಚೈತ್ರಾ ಕುಂದಾಪುರಳಂತೆ ಈಕೆಯೂ ಕೇಸರಿ ಶಾಲು ಹಾಕಿಕೊಂಡು ದೊಡ್ಡ ದೊಡ್ಡ ವೇದಿಕೆಗಳಲ್ಲಿ ಕೋಮು ಪ್ರಚೋದನೆಯ ಭಾಷಣ ಮಾಡುತ್ತಾ ‌ʼಯುವವಾಗ್ಮಿʼ ಎಂಬ ಬಿರುದು ಪಡೆದಿದ್ದಾಳೆ.

ನಾಲ್ಕು ವರ್ಷಗಳ ಬಿಜೆಪಿ ಸರ್ಕಾರದ ಅವಧಿಯಲ್ಲಿ ಇಂತಹ ಹಲವು ಅಪಾಯಕಾರಿ ಪ್ರತಿಭೆಗಳು ಪ್ರಜ್ವಲಿಸಿವೆ. ವಯಸ್ಸು, ಅನುಭವಗಳಿಗೆ ಮೀರಿದ ವಿಚಾರಗಳನ್ನು ಯಾವುದೇ ಅಂಜಿಕೆಯಿಲ್ಲದೇ ನಿರರ್ಗಳವಾಗಿ ಮಾತನಾಡುವುದೇ ಇವರ ಬಂಡವಾಳ. ಇಂತಹ ಯುವಜನರ ಪ್ರತಿಭೆಯ ಲಾಭವನ್ನು ಸಮಾಜಘಾತಕ ಶಕ್ತಿಗಳು ಬಳಸಿಕೊಳ್ಳುತ್ತಿರುವುದು ವಿಪರ್ಯಾಸ. ಸಮಾಜಘಾತಕ ಸಂಘಟನೆಗಳ ಜಾಲಗಳಿಗೆ ಯುವ ಸಮೂಹ ಬೀಳದಂತೆ ತಡೆಯುವುದು ಕುಟುಂಬ ಮತ್ತು ಸಮಾಜದ ಕರ್ತವ್ಯ.

WhatsApp Image 2025 11 17 at 3.23.18 PM
ಈ ದಿನ ಸಂಪಾದಕೀಯ
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ|ಗುಜರಾತಿನ ದಲಿತರಿಗೆ ಗಗನ ಕುಸುಮವಾಗೇ ಉಳಿದ ನ್ಯಾಯ

ಗುಜರಾತಿನ ಜನಸಂಖ್ಯೆಯಲ್ಲಿ ದಲಿತರ ಪ್ರಮಾಣ ಕಡಿಮೆ. ಶೇ.6.34 ಮಾತ್ರ. ಇಲ್ಲಿ ದಲಿತರಿಗಿಂತ...

ಈ ದಿನ ಸಂಪಾದಕೀಯ | ಮೋದಿಯ ಸಣ್ಣತನವನ್ನು ದೊಡ್ಡತನದಿಂದ ಸೋಲಿಸಿದ ಇರಾನ್‌!

ಇಂಧನ ಭದ್ರತೆಯನ್ನು ಕಾಪಾಡಿಕೊಳ್ಳಲು ಭಾರತದ ಹಡಗುಗಳು ಹಾರ್ಮುಜ್ ಜಲಸಂಧಿಯಿಂದ ಹಾದುಹೋಗಲು ಅವಕಾಶ...

ಈ ದಿನ ಸಂಪಾದಕೀಯ | SIR ಹೆಸರಲ್ಲಿ ಮಹಿಳೆಯರ ಮತದಾನದ ಹಕ್ಕಿನ ಹರಣ ಅಕ್ಷಮ್ಯ

ಕರ್ನಾಟಕದಲ್ಲಿ ಮಹಿಳೆಯರ ಹಕ್ಕುಗಳನ್ನು ರಕ್ಷಿಸುವ ಕೆಲಸ ಆಗಬೇಕಿದೆ. ಎಸ್‌ಐಆರ್‌ ನಡೆಯುವ ಸಮಯದಲ್ಲಿ...

ಈ ದಿನ ಸಂಪಾದಕೀಯ | ಕಾಂಗ್ರೆಸ್ಸಿಗರಿಗೆ ಇಂದಿರಾ ಬೇಕು, ಬಡವರ ಕ್ಯಾಂಟೀನ್ ಬೇಡ

ಶಾಸಕರು, ಸಚಿವರು, ಅಧಿಕಾರಿಗಳು ವಾರಕ್ಕೊಂದು ಸಲವಾದರೂ ಇಂದಿರಾ ಕ್ಯಾಂಟೀನ್‌ನಲ್ಲಿ ಊಟ-ತಿಂಡಿ ಮಾಡಬೇಕಿದೆ....